![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ನೀವು ಸರ್ಕಲ್ ಇನ್ಸ್ಪೆಕ್ಟ್ರಾ?
Team Udayavani, Jan 7, 2020, 5:45 AM IST
![small-1](https://www.udayavani.com/wp-content/uploads/2020/01/small-1-620x394.jpg)
ಇದೇನು ಸ್ವಾಮೀ ಹೀಗೆ ಕೇಳ್ತೀರ? ಅಂದು ಕೊಂಡ್ರಾ? ನಿಮ್ಮ ಕಣ್ಣಿನ ಸುತ್ತ ವೃತ್ತಾಕಾರದಲ್ಲಿ ಕಪ್ಪು ಕಲೆಗಳಿದ್ದರೆ, ನಿಮ್ಮನ್ನು ಹಿಂದೆಯಿಂದ ಈ ರೀತಿ ಆಡಿಕೊಂಡರೂ ಆಶ್ಚರ್ಯಪಡಬೇಡಿ. ಕಣ್ಣಿನ ಸುತ್ತ ಕಪ್ಪು, ಕಂದು ಬಣ್ಣದ ವೃತ್ತಾಕಾರ ಶುರುವಾದರೆ, ಎಷ್ಟೇ ಸೌಂದರ್ಯವಂತನಾದರೂ ಎಲ್ಲರ ನೋಟ ಕಣ್ಣಿನ ಕಡೆಗೆ ತಿರುಗುತ್ತದೆ. ಇದೊಂಥರ ದೃಷ್ಟಿ ಚುಕ್ಕೆ ಇದ್ದಹಾಗೆ. ಹಾಗಂತ, ದೊಡ್ಡ ವಿಚಾರ ಅಲ್ಲ ಬಿಡಿ. ಆದರೆ, ಬ್ಲಾಕ್ ಸರ್ಕಲ್ ಏಕೆ ನಮ್ಮ ಕಣ್ಣ ಸುತ್ತಲೇ ಅಡ‚ರಿಕೊಳ್ಳುತ್ತದೆ ಅನ್ನೋದೇನಾದರು ಗೊತ್ತಾ?
ನಿದ್ದೆ ಇಲ್ಲ. ರಾತ್ರಿ ಇಡೀ ಕೆಲಸ ಮಾಡಿ, ಬೆಳಗ್ಗೆ ಎದ್ದು ಮತ್ತೆ ಕೆಲಸ ಶುರು ಮಾಡಿದರೆ ಇನ್ನೇನಾಗುತ್ತೆ? ನೈಟ್ಶಿಫ್ಟ್ ಮಾಡೋರಿಗೆ ಕಣ್ಣಿನ ಸುತ್ತ ಸರ್ಕಲ್ ಬಂದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ. ಇವರಿಗೆ ಕಣ್ಣಿನ ಮೇಲೆ ಒತ್ತಡ ಹೆಚ್ಚು. ಸದಾ ಕಂಪ್ಯೂಟರ್ ಮುಂದೆ ಕೂತಿರೋರಿಗೆ ಇದರ ಕಾಟ ತಪ್ಪಿದ್ದಲ್ಲ. ದೇಹ, ಮನಸ್ಸು ಆರೋಗ್ಯವಾಗಿರಲು ಕನಿಷ್ಠ 7 ಗಂಟೆ ಒತ್ತಡ ರಹಿತ ನಿದ್ದೆ ಬೇಕು. ಇದರಲ್ಲಿ ಮೂರು ಗಂಟೆ ಡೀಪ್ ಸ್ಲಿàಪ್ ಇರಬೇಕು. ನಿದ್ದೆ ಇಲ್ಲದೇ ಇದ್ದರೆ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡ ಶುರುವಾಗುತ್ತದೆ. ಕಣ್ಣ ಸುತ್ತ ಕಪ್ಪು ವೃತ್ತ ಶುರುವಾಗುವುದೇ ಆಗ. ನೀವು ಆಫೀಸಲ್ಲಿ ಕೆಲಸಗಳನ್ನು ಹೇಗೆ ಮ್ಯಾನೇಜ್ ಮಾಡುತ್ತಿರೋ ಹಾಗೆ, ಒತ್ತಡಗಳನ್ನು ನಿಭಾಯಿಸುವ ಕಲೆಯೂ ನಿಮಗೆ ತಿಳಿದಿರಬೇಕು.
ನಿದ್ದೆಗೆಟ್ಟರೆ ದೇಹದಲ್ಲಿ ಪೌಷ್ಠಿಕಾಂಶಗಳು ಕಡಿಮೆಯಾಗುತ್ತವೆ. ಸಿರಿಧಾನ್ಯಗಳನ್ನು ತಿಂದರೆ ಬ್ಯಾಲೆನ್ಸ್ ಆಗುತ್ತದೆ. ಆಫೀಸಲ್ಲಿ ಕೆಲಸ ಮಾಡುತ್ತಿರುವಾಗಲೇ, ಕಣ್ಣಿನ ಮೇಲೆ ಒತ್ತಡ ಎನಿಸಿತು ಅನ್ನಿ. ಆಗ ಬ್ಯಾಗಲ್ಲಿ ಸೌತೇಕಾಯಿ ಇಟ್ಟುಕೊಂಡಿರಿ. ಅದನ್ನು ಹೋಳು ಮಾಡಿ ಕಣ್ಣು ಮುಚ್ಚಿ, ಅದರ ಮೇಲೆ ಇಟ್ಟು ಹತ್ತು ನಿಮಿಷ ಸುಮ್ಮನಿರಿ. ಆಮೇಲೆ ನೋಡಿ ಕಣ್ಣು ತಂಪು ತಂಪಾಗುತ್ತದೆ. ಆಲೂಗಡ್ಡೆಯನ್ನು ಒಪ್ಪು ಮಾಡಿ ಪದೇ ಪದೇ ಹೀಗೆ ಮಾಡುವುದರಿಂದಲೂ ಕಣ್ಣಿನ ಸುತ್ತಲಿನ ಸರ್ಕಲ್ ಕಡಿಮೆಯಾಗುತ್ತದೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.