ಸ್ಕೂಟಿ ನೋಡಿ ನನ್ನ ಬುಲೆಟ್ಟು ಮಗುವಾಗಿತ್ತು!


Team Udayavani, Apr 11, 2017, 3:50 AM IST

10-josh-6.jpg

ನಿನ್ನ ಸ್ಕೂಟಿಯ ಹಿಂದೆ ನನ್ನ ಹೆಡ್ಡಂಬಡ್ಡ ಬಾಯಿ ಬಡುಕ ಒರಟು ಬುಲೆಟ್ಟು. ಒಂದಕ್ಕೂಂದು ತಾಳೆಯಾಗುತ್ತಲೇ ಇಲ್ಲವಲ್ಲ ಅಂತ ನಂಗೆ ನಗು ಬರುತ್ತಿತ್ತು. ನೀ ನಿಧಾನಿಸಿದಷ್ಟೂ ಬುಲೆಟ್ಟು ತಂತಾನೆ ಆಗತಾನೆ ನಡಿಗೆ ಕಲಿತ ಮಗುವಿನಂತೆ ಮುಗ್ಧತೆಯಿಂದ ನಟಿಸುತ್ತಿತ್ತು…

ಅರೆ! ಅದೆಲಿದ್ದೆ ಇಷ್ಟು ದಿನ? ನಿತ್ಯ ಓಡಾಡುವ ರಸ್ತೆಯ ತುದಿಯ ಮನೆಯ ಹುಡುಗಿ ನೀನು ಅಂತ ಗೊತ್ತಾದಾಗ, ನನ್ನ ಹೃದಯ ಏಕೆ ನಿನ್ನನ್ನು ಹುಡುಕಲಿಕ್ಕೆ ಇಷ್ಟೊಂದು ದಿನ ನುಂಗಿ ಹಾಕಿತು ಅನ್ನಿಸಿ ಆಶ್ಚರ್ಯವಾಯ್ತು. ಅದೆಷ್ಟೋ ತಂಪನೆಯ ಮುಂಜಾನೆಗಳು ನಿನ್ನ ನೋಡುವ ಭಾಗ್ಯ ಕಳೆದುಕೊಂಡೆ ನಾನು ಅಂತ ಶಪಿಸಿಕೊಂಡೆ. 

ನಿನ್ನ ನೋಡಿದ ಮೊದಲ ದಿನವೇ, ನನ್ನ ಬದುಕಿನೊಳಕ್ಕೆ ಸಂಭ್ರಮವೊಂದು ಕಳ್ಳ ಹಜ್ಜೆ ಇಟ್ಟು ನಡೆದು ಬಂತು. ರಾತ್ರಿ ಓದುತ್ತಾ ಯಾವುದೋ ಜಾವದಲ್ಲಿ ನಿದಿರೆಗೆ ಜಾರಿದಾಗ, ಓದುತ್ತಿದ್ದ ಪುಸ್ತಕ ಎದೆಯಪ್ಪಿಕೊಂಡು ನನ್ನೊಂದಿಗೇ ಕನಸು ಕಾಣುತ್ತಾ ಉಳಿಯುತ್ತಿತ್ತು. ಮುಂಜಾನೆ ಎಚ್ಚರಾದಾಗ ಎದೆಯಪ್ಪಿಕೊಂಡ ಪುಸ್ತಕ ನೀನೇ ಅನಿಸುತ್ತಿತ್ತು.ಅದಕ್ಕೊಂದು ಮುತ್ತನ್ನಿಟ್ಟು ಪುಸ್ತಕದ ಘಮ ಆಘ್ರಾಣಿಸುತ್ತಿದ್ದೆ. ಅಲ್ಲಿಂದ ಹದಿನೈದನೇ ನಿಮಿಷಕ್ಕೆ ನೀ ಬರುವ ಹಾದಿಯ ಕಾಯುತ್ತಾ ನಿಲ್ಲುತ್ತಿದ್ದೆ. ನಿಜಕ್ಕೂ ನೀನು ನನ್ನ ಮುಂಜಾವುಗಳಿಗೆ ಹೊಸ ರಂಗು ತುಂಬಿದ್ದೆ. 

ಗಾಳಿಗೆ ಹಾರುವ ಹಕ್ಕಿರೆಕ್ಕೆಯ ಸೊಂಪು ಕೂದಲು. ಆ ನಗು ನಿನ್ನ ನಿಲುವಿಗೆ ಚೆಲುವು ತುಂಬುತ್ತಾ, ಸಂಭ್ರಮದ ತೇರಂತೆ ಹೊತ್ತು ಹೊರಟ ನಿನ್ನ ಆಜ್ಞಾಪಾಲಕ ಮೆದು ಭಾಷೆಯ ಸ್ಕೂಟಿ. ನಿನ್ನ ಸ್ಕೂಟಿಯ ಹಿಂದೆ ನನ್ನ ಹೆಡ್ಡಂಬಡ್ಡ ಬಾಯಿ ಬಡುಕ ಒರಟು ಬುಲೆಟ್ಟು. ಒಂದಕ್ಕೂಂದು ತಾಳೆಯಾಗುತ್ತಲೇ ಇಲ್ಲವಲ್ಲ ಅಂತ ನಂಗೆ ನಗು ಬರುತ್ತಿತ್ತು. ನೀ ನಿಧಾನಿಸಿದಷ್ಟೂ ಬುಲೆಟ್ಟು ತಂತಾನೆ ಆಗತಾನೆ ನಡಿಗೆ ಕಲಿತ ಮಗುವಿನಂತೆ ಮುಗ್ಧತೆಯಿಂದ ನಟಿಸುತ್ತಿತ್ತು. 

ಮನೆಯಿಂದ ನಿನ್ನ ಕಾಲೇಜಿನ ವರೆಗಿನ ಆ ಹದಿನೈದು ನಿಮಿಷಗಳ ಪಯಣ, ನನ್ನೊಳಗೆ ಸಾವಿರ ತಂತಿಗಳ ಮೀಟಿದಂಥ ನಾದವೊಂದು ಆವರಿಸಿದಂತೆ ಪುಳಕಗೊಳ್ಳುತ್ತಿದ್ದೆ. ನಿತ್ಯದ ಚಿರಪರಿಚಿತ ಹಾದಿ  ಕೂಡ, ನಿನ್ನಿಂದ ನಿತ್ಯವೂ ಹೊಸ ಗಮ್ಯವೊಂದಕ್ಕೆ ಹೊರಟಂಥ ಉತ್ಸಾಹವೊಂದು ಉಕ್ಕುತ್ತಿತ್ತು. ಮುಂಜಾನೆಯ ಸಕ್ಕರೆ ನಿದ್ದೆಯನ್ನು ಕಳೆದುಕೊಳ್ಳದ ನನ್ನನ್ನು, ಹೊಸ ಮುಂಜಾವುಗಳಿಗೆ ಪರಿಚಯಿಸಿಕೊಟ್ಟ ಹುಡುಗಿ ನೀನು. ನನ್ನ ರಾತ್ರಿಯ ಖಾಲಿ ಕನಸುಗಳ ದರ್ಬಾರಿಗೆ ಹಾಜರಾಗಿ ಹೊಸ ಸಂಭ್ರಮ ತುಂಬಿದವಳು ನೀನು. ನನಗೆ ಅನಿಸಿದಂತೆ ನಿನಗೂ ಅನ್ನಿಸಲಿ ಅಂತ ಮನಸಾರೆ ಶಪಿಸುತ್ತೇನೆ. ನನ್ನ ಬುಲೆಟ್ಟು ನೀನೊಬ್ಬನನ್ನೇ ಎಷ್ಟು ದಿನ ಅಂತ ಹೊತ್ತೂಯ್ಯಲಿ ಮಾರಾಯ. ನೀನೊಬ್ಬ ಮಹಾ ಬೋರು ಮಾರಾಯ.  ಜೋಡಿಯಾಗಿ ಯಾವತ್ತೂ ನನ್ನ ಬೆನ್ನೇರುತ್ತೀರಿ ಅಂತ ಮುಖ ತಿರುಗಿಸಿಕೊಂಡು ವಾರೇ ಗಣ್ಣಲ್ಲೇ ಗುರಾಯಿಸುತ್ತದೆ. ಅದಕ್ಕೆ ಏನೂಂತ ಉತ್ತರಿಸಲಿ? ಸ್ಕೂಟಿಯೂ ನಿನ್ನ ಮೇಲೆ ಇದೇ ವಿಷಯಕ್ಕೆ ಮುನಿಸಿಕೊಂಡಿದೆಯಂತೆ ನಿಜವಾ..? ಮುಂಜಾನೆ ನಿನ್ನ ಉತ್ತರಕ್ಕಾಗಿ ಕಾದಿರುತ್ತೇನೆ.

ನಿನ್ನ ಅನಾಮಿಕ ಹುಡುಗ
ಜೀವ ಮುಳ್ಳೂರು

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.