ಛೇ! ಅದೆಂಥ ಪರೀಕ್ಷೆ


Team Udayavani, Apr 17, 2018, 5:58 PM IST

abba.jpg

ಅದು ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆ ಟೈಮು. ಪರೀಕ್ಷೆ ಬರೆಯಬೇಕಿದ್ದ ನಾನು ಅಂದು ತಡವಾಗಿ ಎದ್ದು, ಯಡವಟ್ಟು ಮಾಡಿಕೊಂಡೆ. ಬೆಳಗ್ಗಿನ ನಿತ್ಯ ಕರ್ಮಗಳನ್ನು ಮುಗಿಸಿ, ಬಸ್ಸು ಹಿಡಿಯಬೇಕು ಎನ್ನುವಷ್ಟರಲ್ಲಿ ನನ್ನ ದುರಾದೃಷ್ಟಕ್ಕೆ ಆ ಬಸ್ಸೂ ಕೈಕೊಟ್ಟಿತು. ನನ್ನೂರು ಮೊದಲೇ ಕುಗ್ರಾಮ. ಸರಿಯಾಗಿ ರೋಡು, ಕರೆಂಟು, ಕುಡಿವ ನೀರು ಕಾಣದೇ, ಆಧುನಿಕ ಸೌಲಭ್ಯಗಳಿಂದ ಅನಾಥವಾಗಿದ್ದಂಥ ಹಳ್ಳಿ. 

ನನ್ನೂರಿನಿಂದ ಪರೀಕ್ಷಾ ಕೇಂದ್ರಕ್ಕೆ 12 ಕಿ.ಮೀ. ದೂರವಿತ್ತು. ನನ್ನಲ್ಲಿ ಸೈಕಲ್‌ ಬಿಟ್ಟು ಬೇರೆ ವಾಹನ ಇದ್ದಿರಲಿಲ್ಲ. ಮೊದಲೇ ಪರೀಕ್ಷೆಗೆ ಲೇಟಾಗಿತ್ತು, “ಏನಪ್ಪಾ ಮಾಡೋದು?’ ಎಂದು ಅತ್ತಿಂದಿತ್ತಾ ನೋಡುತ್ತಾ ತಲೆಯ ಮೇಲೆ ಕೈಹೊತ್ತು ಕುಳಿತೆ. ಪರೀಕ್ಷೆ ಆರಂಭಕ್ಕೆ ಉಳಿದಿರುವುದು ಇನ್ನು ಇಪ್ಪತ್ತೇ ನಿಮಿಷಗಳು ಮಾತ್ರ. ಎದೆಯಲ್ಲಿ ಹೃದಯ ಚಂಡೆ ಬಾರಿಸುತ್ತಿತ್ತು. ಮೈಯೆಲ್ಲ ಬೆವರುತ್ತಿತ್ತು.

ಅಷ್ಟು ಹೊತ್ತು ಕಾದು ಕುಳಿತರೂ ಯಾವ ವಾಹನಗಳೂ ಅಲ್ಲಿಗೆ ಸುಳಿಯಲಿಲ್ಲ. ಮುಗೀತು ಕತೆ ಅಂತಂದುಕೊಂಡು, ಸೈಕಲ್‌ ಸ್ಟಾಂಡ್‌ ತೆಗೆಯಲು ಹೊರಟಿದ್ದಷ್ಟೇ… ಅತ್ತಲಿಂದ ಒಂದು ಬೈಕ್‌ ಬಂತು. ಅವನ ಕಾಲಿಗೆ ಬಿದ್ದಾದರೂ ಸೈ, ಎಕ್ಸಾಮ್‌ ಹಾಲ್‌ಗೆ ಡ್ರಾಪ್‌ ಕೇಳಬೇಕು ಅಂತ ನಿರ್ಧರಿಸಿ, ಕೈ ಅಡ್ಡಹಾಕಿದೆ. “ಸರ್‌ ಸರ್‌ ಪ್ಲೀಸ್‌ ಸರ್‌, ದಯವಿಟ್ಟು ಸಹಾಯ ಮಾಡಿ ಸರ್‌… ಎಕ್ಸಾಂ ಬರೆಯೋಕೆ ಹೋಗ್ತಾ ಇದ್ದೀನಿ,

ಬಸ್‌ ತಪ್ಪಿದೆ ಸರ್‌’ ಎಂದು ಗೋಗರೆದಾಗ, ತಾನು ಬೇರೆ ಮಾರ್ಗದಲ್ಲಿ ಹೋಗುತ್ತಿರುವುದಾಗಿ ತಿಳಿಸಿದ. ಮತ್ತಷ್ಟು ವಿನಂತಿಸಿಕೊಂಡಾಗ, ಮೇನ್‌ ರೋಡ್‌ನ‌ವರೆಗೆ ಮಾತ್ರ ಬಿಡುವುದಾಗಿ ಹೇಳಿ ಬೈಕ್‌ ಏರಲು ಅನುಮತಿ ಕೊಟ್ಟ. ಪಯಣದಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಬೈಕ್‌ ಅನ್ನು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತಂದು ನಿಲ್ಲಿಸಿದ.

ಆಗ ಪರೀಕ್ಷೆ ಆರಂಭಕ್ಕೆ ಉಳಿದಿದ್ದು ಕೇವಲ ಮೂರು ನಿಮಿಷಗಳು ಮಾತ್ರ! ಆತನಿಗೆ ಕೃತಜ್ಞತೆ ಹೇಳುವ ಮೊದಲೇ, ಆತ “ಚೆನ್ನಾಗಿ ಪರೀಕ್ಷೆ ಬರಿ… ಬೆಸ್ಟ್‌ ಆಫ್ ಲಕ್‌’ ಎಂದು ಕೈ ಕುಲುಕಿ ಹೊರಟು ಹೋಗಿದ್ದ. ನನ್ನ ಕಂಗಳು ಹನಿಗೂಡಿದವು. ಹತ್ತನೇ ತರಗತಿ ಪಾಸ್‌ ಆಗುವಂತೆ ಮಾಡಿದ ಆ ಪುಣ್ಯಾತ್ಮನನ್ನು ಎಂದಿಗೂ ಮರೆಯುವುದಿಲ್ಲ.

* ಮಾಲತೇಶ ಖ. ಅಗಸರ

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.