ನೆನಪಿರಲಿ ಶಾಶ್ವತ!
Team Udayavani, Oct 9, 2018, 6:00 AM IST
ನಾವು ಕಳೆದ ದಿನಗಳು, ಓಡಾಡಿದ ಹೆಜ್ಜೆಗುರುತುಗಳು, ನಮ್ಮ ನಡುವಿನ ಸಂಭಾಷಣೆಗಳು, ಒಬ್ಬರಿಗೊಬ್ಬರು ನೀಡಿದ ಆಶ್ವಾಸನೆಗಳು, ಮಾಡಿದ ಆಣೆ- ಪ್ರಮಾಣಗಳು.. ಎಲ್ಲವೂ ನೆನಪಾಗುತ್ತಿದೆ.
ಅದು ಮುಸ್ಸಂಜೆಯ ತಿಳಿಕೆಂಪು. ಅಲ್ಲೆಲ್ಲೋ ನೀರಿನ ಜುಳುಜುಳು ಸದ್ದು. ಇನ್ನೊಂದೆಡೆ ಮೈಯನ್ನು ಸ್ಪರ್ಶಿಸುವ ತಂಗಾಳಿ. ಮತ್ತೂಂದೆಡೆ ಚಿಲಿಪಿಲಿ ಸದ್ದಿನೊಂದಿಗೆ ತಮ್ಮದೇ ಸಂಭಾಷಣೆಯಲ್ಲಿ ತೊಡಗಿ ಗೂಡಿನತ್ತ ಹಾರುತ್ತಿರುವ ಪಕ್ಷಿಗಳು. ಇವೆಲ್ಲವೂ ಪರಿಸರಕ್ಕೆ ಒಂದು ವಿಶಿಷ್ಟ ಸೌಂದರ್ಯವನ್ನು ನೀಡುತ್ತಿದೆ.
ಇತ್ತ, ನೆನಪಿನ ಮಂಪರಿನಲ್ಲಿ, ಕ್ಷಣಕ್ಷಣವೂ ಕನವರಿಸುವ ಕನಸು ಬದುಕಿಗೆ ನೆಲೆಯಾಗದೆ ಬಂಧಿಯಾದಂತೆ ತೋರುತ್ತಿದೆ. ನಾವು ಕಳೆದ ದಿನಗಳು, ಓಡಾಡಿದ ಹೆಜ್ಜೆಗುರುತುಗಳು, ನಮ್ಮ ನಡುವಿನ ಸಂಭಾಷಣೆಗಳು, ಒಬ್ಬರಿಗೊಬ್ಬರು ನೀಡಿದ ಆಶ್ವಾಸನೆಗಳು, ಮಾಡಿದ ಆಣೆ-ಪ್ರಮಾಣಗಳು.. ಎಲ್ಲವೂ ನೆನಪಾಗುತ್ತಿದೆ. ಆದರೆ, ಇಂದು ಇವ್ಯಾವುದೂ ನನ್ನ ಜೊತೆಗಿಲ್ಲ. ಭಾವಾಂತರಂಗದ ಪ್ರೀತಿ ಇಂದು ಮರೀಚಿಕೆಯಾಗಿದೆ.
ಹೆಸರಿಲ್ಲದ ಸಂಬಂಧವೊಂದು, ಹೆಸರಿಡುವ ಮೊದಲೇ ಅಳಿಯಿತು. ಆದರೂ, ನಿನ್ನ ಆಗಮನಕ್ಕೆ ಮನ ಹಾತೊರೆಯುತ್ತಿದೆ. ನೀನು ಮರಳಿ ಬರುವುದಿಲ್ಲ ಎಂದು ನನಗೆ ಖಚಿತವಾಗಿ ಗೊತ್ತು. ಇನ್ನು ನಿನ್ನ ಅಸ್ತಿತ್ವ ಕೇವಲ ನನ್ನ ನೆನಪುಗಳಲ್ಲಿ ಮಾತ್ರ. ಕಣ್ಣೀರು ಪ್ರೀತಿಯೇ? ಗೊತ್ತಿಲ್ಲ. ಆದರೂ ನಿನ್ನ ನೆನಪು ಮೂಡಿದಾಗೆಲ್ಲಾ ನನ್ನ ಕಣ್ಣು ತುಂಬಿ ಬರುತ್ತದೆ.
-ಸುಷ್ಮಾ ಹೆಗಡೆ, ನೇರ್ಲಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!