ತಾಯಂದಿರ ದಿನದ ಸ್ಥಾಪಕಿಯ ಅಳಲು


Team Udayavani, Nov 7, 2019, 3:05 AM IST

qq-4

ಪ್ರತಿ ವರ್ಷ ಮೇ 10ರಂದು ತಾಯಂದಿರ ದಿನವೆಂದು ಆಚರಿಸಲಾಗುತ್ತದೆ. ಆ ಪರಿಪಾಠವನ್ನು ಶುರುಮಾಡಿದ್ದು ಆ್ಯನ್ನಾ ಜಾರ್ವಿಸ್‌ ಎಂಬ ಮಹಿಳೆ. ಅಮೆರಿಕ ಪ್ರಜೆಯಾದ ಆ್ಯನ್ನಾ ಅಲ್ಲಿ ಸಮಾಜಸೇವಕಿಯಾಗಿ ಹೆಸರು ಮಾಡಿದಾಕೆ. ಅಲ್ಲದೆ ಅನ್ಯಾಯದ ವಿರುದ್ಧ ಪ್ರತಿಭಟನೆಗಳಲ್ಲೂ ಪಾಲ್ಗೊಳ್ಳುತ್ತಿದ್ದವಳು. ಅವರ ತಾಯಿಗೆ ಒಟ್ಟು 11 ಮಂದಿ ಮಕ್ಕಳು. ಅವರು 1905ರಲ್ಲಿ ತೀರಿಕೊಂಡರು. ಆ ಸಮಯದಲ್ಲಿಯೇ ಆ್ಯನ್ನಾ ಅವರಿಗೆ ತಮ್ಮ ತಾಯಿ ತೀರಿಕೊಂಡ ದಿನವನ್ನು ಅವರ ನೆನಪಿನಲ್ಲಿ “ತಾಯಂದಿರ ದಿನ’ವನ್ನಾಗಿ ಆಚರಿಸಬೇಕೆಂಬ ಯೋಚನೆ ಮೊಳೆತಿದ್ದು. ಅಲ್ಲಿಂದ ಮುಂದೆ ಸಿವಿಲ್‌ ಯುದ್ಧದಲ್ಲಿ ಮಡಿದ ಸೈನಿಕರ ತಾಯಂದಿರ ದಿನ ಎಂದು ಆಚರಿಸುವ ಬಗ್ಗೆ ಪ್ರಚಾರ ಮಾಡಿದಾಗಲೇ “ತಾಯಂದಿರ ದಿನ’ದ ಬಗ್ಗೆ ಸುದ್ದಿ ಹಬ್ಬಿದ್ದು. ನಂತರ 1914ರ ಸಮಯದಲ್ಲಾಗಲೇ ಮೇ 10ರಂದು ಅಮೆರಿಕವಾಸಿಗಳು ತಾಯಂದಿರ ಹಬ್ಬವನ್ನು ಆಚರಿಸಲು ಶುರುಮಾಡಿದ್ದರು.

ಬಹಳ ಬೇಗ ತಾಯಂದಿರ ದಿನ ಜನರ ನಡುವೆ ಪ್ರಚಾರ ಪಡೆಯಿತು. ಮಾರುಕಟ್ಟೆಯಲ್ಲಿ ಚಾಕಲೇಟ್‌ ಸಂಸ್ಥೆಗಳು, ಗ್ರೀಟಿಂಗ್ಸ್‌ ಮುಂತಾದ ಉಡುಗೊರೆ ತಯಾರಕ ಕಂಪನಿಗಳು ಈ ದಿನವನ್ನು ಚೆನ್ನಾಗಿಯೇ ಬಳಸಿಕೊಂಡವು. ಈ ಕಂಪನಿಗಳು ಚೆನ್ನಾಗಿ ಲಾಭ ಮಾಡಿಕೊಂಡವು. ಅದರಿಂದ ಪ್ರೇರಣೆ ಪಡೆದ ಇನ್ನಷ್ಟು ಸಂಸ್ಥೆಗಳು ಬೆಳೆದು ತಾಯಂದಿರ ದಿನವೆಂದರೆ ಲಾಭದಾಯಕ ಎನ್ನುವಂಥ ವಾತಾವರಣ ಸೃಷ್ಟಿಯಾಯಿತು. ಇದನ್ನು ಆ್ಯನ್ನಾ ನಿರೀಕ್ಷಿಸಿರಲಿಲ್ಲ. “ತಾಯಂದಿರ ದಿನ’ದ ಹಿಂದಿನ ನಿಜವಾದ ಉದ್ದೇಶವೇ ಮರೆಮಾಚಿದಂತಾಗಿ ಜನರನ್ನು ಕೊಳ್ಳುಬಾಕ ಸಂಸ್ಕೃತಿ ಆವರಿಸಿಕೊಳ್ಳುತ್ತಿರುವುದನ್ನು ಕಂಡು ಅವರಿಗೆ ಬೇಸರವಾಯಿತು. ಹೀಗಾಗಿ “ತಾಯಂದಿರ ದಿನ’ವನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದರು. ತಾಯಂದಿರ ದಿನವನ್ನು ಶುರುಮಾಡಿದಾಕೆಯೇ ಅದನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದ್ದು ಅಚ್ಚರಿಯ ಸಂಗತಿಯೇ ಸರಿ!

ಹವನ

ಟಾಪ್ ನ್ಯೂಸ್

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.