ಪುರಾಣ ಕತೆ: ದೇವವ್ರತ, ಭೀಷ್ಮನಾದ ಕಥೆ!


Team Udayavani, Nov 9, 2017, 12:21 PM IST

09-21.jpg

ಶಂತನು ಹಸ್ತಿನಾವತಿಯ ರಾಜ. ಅವನಿಗೆ ದೇವವ್ರತನೆಂಬ ಮಗ ಇದ್ದನು. ಒಂದು ದಿನ ಮಹಾರಾಜ ಶಂತನು ಯಮುನಾ
ನದಿಯ ದಡದಲ್ಲಿ ಸಂಚರಿಸುತ್ತಿದ್ದಾಗ, ಮೈ ಮರೆಸುವಂಥ ಸುಗಂಧದ ಅನುಭವವಾಯಿತು. ಅದು ಎಲ್ಲಿಂದ ಬಂದಿತು ಎಂದು ಹುಡುಕಿಕೊಂಡು ಹೋದಾಗ ಒಬ್ಬ ಬೆಸ್ತರ ಹುಡುಗಿಯನ್ನು ಕಂಡ. 

ಅವಳ ಹೆಸರು ಸತ್ಯವತಿ. ಅವಳು ಬಹು ಸುಂದರಿ. ಶಂತನು ಅವಳನ್ನು ಕುತೂಹಲದಿಂದ ಪ್ರಶ್ನಿಸಿದಾಗ ಅವಳು ಬೆಸ್ತರ ರಾಜನ ಮಗಳು, ಧರ್ಮಾರ್ಥವಾಗಿ ದೋಣಿಯನ್ನು ನಡೆಸುತ್ತಾಳೆ ಎಂದು ತಿಳಿಯಿತು. ರಾಜನು ಮೊದಲ ನೋಟದಲ್ಲೇ ಆಕೆಗೆ ಮರುಳಾದನು. “ಸುಂದರೀ ನಾನು ನಿನ್ನ ತಂದೆಯೊಡನೆ ಮಾತಾಡಬೇಕು. ನಿನ್ನ ಮನೆಗೆ ದಾರಿ ತೋರು…’ ಎಂದನು. ನಂತರ ಶಂತನುವು ಬೆಸ್ತರ ರಾಜನನ್ನು ಕಂಡು ಅವನ ಮಗಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕೇಳಿದ. 

ಬೆಸ್ತರ ರಾಜನು ಒಂದು ಷರತ್ತನ್ನು ವಿಧಿಸಿದ. ಶಂತನುವಿನ ನಂತರ ಸತ್ಯವತಿಯ ಮಗನೇ ರಾಜನಾಗಬೇಕು. ಸದ್ಗುಣಿಯಾದ, ಬೆಳೆದ ಮಗನಿರುವಾಗ ಶಂತನು ಈ ಷರತ್ತನ್ನು ಒಪ್ಪಲು ಸಾಧ್ಯವಿಲ್ಲ ಎಂದ. ಊರಿಗೆ ಬಂದ ಮೇಲೂ ಅವನು ಕೊರಗುತ್ತಲೇ ಇದ್ದ. ದೇವವ್ರತನು ಇದನ್ನು ಕಂಡು, ರಾಜನ ವೃದ್ಧ ಮಂತ್ರಿಯಿಂದ ಇದರ ಕಾರಣವನ್ನು ತಿಳಿದುಕೊಂಡ.

ಹಿರಿಯ ಕ್ಷತ್ರಿಯರೊಡನೆ ಬೆಸ್ತರ ರಾಜನ ಬಳಿಗೆ ಹೋಗಿ ಸತ್ಯವತಿಯನ್ನು ತನ್ನ ತಂದೆಗೆ ಕೊಟ್ಟು ಮದುವೆ ಮಾಡಬೇಕೆಂದು ಕೋರಿದ. ಬೆಸ್ತರ ರಾಜನು ಶಂತನುವಿಗೆ ಹೇಳಿದ್ದ ಮಾತನ್ನೇ ಈಗ ದೇವವ್ರತನಿಗೆ ಹೇಳಿದ. ದೇವವ್ರತನು “ನೀನು ಹೇಳಿದಂತೆಯೇ ಆಗಲಿ, ಈಕೆಯ ಮಗನೇ ಮುಂದೆ ರಾಜನಾಗುತ್ತಾನೆ. ನಾನು ಸಿಂಹಾಸನವನ್ನು ಬಯಸುವುದಿಲ್ಲ’ ಎಂದ. ಸತ್ಯವತಿಯ ತಂದೆ, “ನಿನ್ನ ಮಗ ಮುಂದೆ ಸಿಂಹಾಸನವನ್ನು ಕೇಳಬಹುದು’ ಎಂದ. ಆಗ ದೇವವ್ರತನು, “ನಾನು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ’ ಎಂದು
ಪ್ರತಿಜ್ಞೆ ಮಾಡಿದ. ಇಂಥ ಕಠಿಣವಾದ ಪ್ರತಿಜ್ಞೆಗಳನ್ನು ಮಾಡಿದುದರಿಂದ ದೇವವ್ರತನಿಗೆ ಭೀಷ್ಮ ಎಂದು ಹೆಸರು
ಬಂದಿತು.

ಸತ್ಯವತಿಯನ್ನು ಹಸ್ತಿನಾವತಿಗೆ ಕರೆದುಕೊಂಡು ಬಂದು ತಂದೆಗೆ ಒಪ್ಪಿಸಿದ. ಶಂತನುವು, ‘ನೀನು ಬಯಸಿದಾಗ ಮಾತ್ರ ಸಾವು ನಿನಗೆ ಬರಲಿ’ ಎಂದು ವರವನ್ನು ಕೊಟ್ಟ. ಶಂತನು- ಸತ್ಯವತಿಯರ ಮದುವೆಯಾಯಿತು. ಅವರಿಗೆ ಇಬ್ಬರು ಮಕ್ಕಳಾದರು. ಅವರೇ, ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ.

ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ
“ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.