ಮೇಧಾವಿ ಮಂತ್ರಿ


Team Udayavani, Dec 19, 2019, 4:10 AM IST

xc-6

ರಾಜ ಧೀರಸೇನ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದ. ಅವನಿಗೆ ಇಬ್ಬರು ರಾಣಿಯರು, ಹಿರಿಯವಳು ಸೂರ್ಯವತಿ, ಕಿರಿಯವಳು ಚಂದ್ರವತಿ. ಸೂರ್ಯವತಿಯ ಹೊಟ್ಟೆಯಲ್ಲಿ ಸೂರ್ಯಸೇನ ಎಂಬ ಮಗ, ಚಂದ್ರವತಿಯ ಹೊಟ್ಟೆಯಲ್ಲಿ ಚಂದ್ರಸೇನ ಎಂಬ ಮಗ ಜನಿಸಿದ್ದರು. ಇವರಿಬ್ಬರೂ ಮಹಾರಾಜ ಧೀರಸೇನನಿಗೆ ಪ್ರೀತಿ ಪಾತ್ರ ಸುಪುತ್ರರಾಗಿದ್ದರು. ದುರದೃಷ್ಟವೆಂದರೆ ಇವರಿಬ್ಬರೂ ಅಂಗವಿಕಲರು. ಹಿರಿಯ ಮಗ ಸೂರ್ಯಸೇನ ಹುಟ್ಟು ಕುರುಡ. ಅವನಿಗೆ ಎರಡು ಕಣ್ಣುಗಳೂ ಕಾಣುವುದಿಲ್ಲ. ಕಿರಿಯ ಮಗ ಕುಂಟನಾಗಿದ್ದ. ಸಾವಿನ ದಿನಗಳನ್ನು ಎಣಿಸುತ್ತಿದ್ದ ಮಹಾರಾಜ ಧೀರಸೇನನಿಗೆ ತಾನು ಸಾಯುತ್ತೇನೆಂಬುದರ ಬಗ್ಗೆ ಒಂದು ಚೂರೂ ಚಿಂತೆ ಇರಲಿಲ್ಲ. ಆದರೆ ತನ್ನ ಉತ್ತರಾಧಿಕಾರಿಗಳಾಗಿ ರಾಜ್ಯವನ್ನು ಆಳಬೇಕಾಗಿರುವ ತನ್ನ ಮಕ್ಕಳ ಪರಿಸ್ಥಿತಿ ನೋಡಿ ಅವನು ಚಿಂತೆಗೀಡಾಗಿದ್ದ.

ಧೀರಸೇನನು ಪ್ರೀತಿ ಮತ್ತು ದುಃಖದಿಂದ ಮಕ್ಕಳಿಬ್ಬರ ತಲೆ ನೇವರಿಸುತ್ತಾ ಹೇಳಿದ “ಮಕ್ಕಳೇ ನೀವಿಬ್ಬರೂ ಅಣ್ಣತಮ್ಮಂದಿರು. ರಾಮಲಕ್ಷ್ಮಣರಂತೆ ಇರಬೇಕು. ಕಣ್ಣಿಲ್ಲದ ನಿನ್ನ ಅಣ್ಣ ಸೂರ್ಯಸೇನನಿಗೆ ನೀನೇ ಕಣ್ಣಾಗಿರಬೇಕು. ಕಾಲಿಲ್ಲದ ನಿನ್ನ ತಮ್ಮ ಚಂದ್ರಸೇನನಿಗೆ ನೀನೇ ಕಾಲುಗಳಾಗಬೇಕು. ಒಬ್ಬರಿಗೊಬ್ಬರು ಕಣ್ಣು-ಕಾಲುಗಳಾಗಿ ಪ್ರಜಾ ಪಾಲಕರಾಗಿ ಈ ರಾಜ್ಯವನ್ನು ಕಾಪಾಡಬೇಕು. ನಿಮ್ಮನ್ನು ಮೇಧಾವಿ ಮಂತ್ರಿಯೊಬ್ಬನ ಸುಪರ್ದಿಯಲ್ಲಿ ಬಿಟ್ಟು ಹೋಗುತ್ತೇನೆ. ಅದೇ ನಿಮಗೆ ಕೊಡುವ ಮಹಾ ಕಾಣಿಕೆ’ ಎಂದು ಮಕ್ಕಳಿಬ್ಬರಿಗೂ ಧೈರ್ಯತುಂಬಿದ. ಮಾರನೇ ದಿನವೇ ಮೇಧಾವಿ ಮಂತ್ರಿ ಬೇಕಾಗಿದ್ದಾರೆ ಎಂದು ರಾಜ್ಯದಲ್ಲಿ ಡಂಗುರ ಸಾರಲಾಯಿತು. ರಾಜ ಅವರಿಗೆ ಪರೀಕ್ಷೆ ವಿಧಿಸಿದ “ಇಲ್ಲೊಂದು ಕತ್ತಲೆ ಕೋಣೆಯಿದೆ. ಯಾವ ವಸ್ತುವಿನಿಂದಾದರೂ ಸರಿಯೇ, ಹತ್ತು ನಿಮಿಷಗಳಲ್ಲಿ ಆ ಕೋಣೆಯನ್ನು ತುಂಬಿಸಬೇಕು. ಈ ಸವಾಲನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದವರಿಗೆ ಮಂತ್ರಿ ಸ್ಥಾನ ದೊರೆಯುವುದು.’ ಎಂದ.

ಸಂದರ್ಶನಕ್ಕೆ ಬಂದಿದ್ದವರೆಲ್ಲ “ಇದೊಂದು ಹುಚ್ಚು ಪರೀಕ್ಷೆ. ಇಷ್ಟು ದೊಡ್ಡ ಕತ್ತಲೆಯ ಕೋಣೆಯನ್ನು ಯಾವುದೇ ವಸ್ತುವಿನಿಂದ ಹತ್ತು ನಿಮಿಷಗಳಲ್ಲಿ ತುಂಬಿಸುವುದು ಅಸಾಧ್ಯ’ ಎಂದು ತಮ್ಮಲ್ಲೇ ಮಾತಾಡಿಕೊಂಡರು. ಅವರಲ್ಲಿ ಒಬ್ಬ ಮಾತ್ರ ಮುಂದೆ ಬಂದು “ನಾನು ಸವಾಲನ್ನು ಸ್ವೀಕರಿಸುತ್ತೇನೆ. ನನಗೆ ಹತ್ತು ನಿಮಿಷ ಬೇಡ ಎರಡು ಮೂರು ಕ್ಷಣಗಳು ಸಾಕು’ ಎಂದ. ಅಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾಗಿ ಅವನತ್ತ ನೋಡಿದರು. ಅವನು ಕತ್ತಲೆಯ ಕೋಣೆಯ ಮಧ್ಯದಲ್ಲಿ ಒಂದು ದೀಪವನ್ನು ಇಟ್ಟು ಬೆಂಕಿ ಹಚ್ಚಿದ. ಒಂದು ಕ್ಷಣದಲ್ಲಿ ಇಡೀ ಕೋಣೆ ಬೆಳಕಿನಿಂದ ತುಂಬಿಕೊಂಡಿತು. ಅವನ ಬುದ್ದಿವಂತಿಕೆಯನ್ನು ಮೆಚ್ಚಿದ ಮಹಾರಾಜ ಧೀರಸೇನ ಅವನಿಗೆ ಮಂತ್ರಿ ಪಟ್ಟ ನೀಡಿದ.

– ಬನ್ನೂರು ರಾಜ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.