ಕತ್ತೆಯ ಋಣ


Team Udayavani, Jun 29, 2017, 3:45 AM IST

katte.jpg

ಒಂದೂರಿನಲ್ಲಿ ಒಬ್ಬ ಅಗಸನಿದ್ದನು. ಅಗಸನ ಬಳಿ ದಷ್ಟಪುಷ್ಟವಾದ ಎರಡು ಕತ್ತೆಗಳಿದ್ದವು. ತನ್ನೆಲ್ಲಾ ಕೆಲಸಗಳಿಗೆ ಅವನು ಕತ್ತೆಯನ್ನೇ ಅವಲಂಬಿಸಿದ್ದನು. ಕತ್ತೆಗಳು ಮಾಲೀಕನ ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದವು. ಕತ್ತೆಯು ಮಣಭಾರದ ಬಟ್ಟೆಗಳನ್ನು ಹೊತ್ತು ಊರಾಚೆಯ ಹೊಳೆಗೆ ಹೋಗಿ ಬರುತ್ತಿದ್ದವು. ಕತ್ತೆಯ ಮೇಲೆ ಬಟ್ಟೆ ಹಾಕಿ ಅಗಸ ಹಿಂದೆ ಬರುತ್ತಿದ್ದ. ಊರು ದಿನದಿಂದ ದಿನಕ್ಕೆ ಬೆಳೆಯತೊಡಗಿತು. 

ಹೀಗೆ ದಿನದಿಂದ ದಿನಕ್ಕೆ ಬೆಳೆದ ಅಗಸ ತನ್ನ ಮನೆಯಲ್ಲೆ ಬಟ್ಟೆ ಇಸಿŒ ಮಾಡುತ್ತಿದ್ದವನು ಈಗ ಮಳಿಗೆಯಲ್ಲಿ ಲಾಂಡ್ರಿ ತಗೆದನು. ಅವನ ಅದೃಷ್ಟ ಖುಲಾಯಿಸಿತು. ಅಗಸ ಶ್ರೀಮಂತನಾದನು. ಮದುವೆಯೂ ಆಯಿತು. ಅಗಸನ ಪತ್ನಿ “ಈ ಹಾಳಾದ್‌ ಕತ್ತೆ ನಿಮಗೇಕೆ ಬೇಕು ಕಾಡಿಗೆ ಬಿಡಿ’ ಎಂದಳು.  ಲಾಂಡ್ರಿಯಲ್ಲೆ ಬಟ್ಟೆ ಒಗೆಯುವುದರಿಂದ ಕತ್ತೆ ತನಗೆ ಉಪಯೋಗವಿಲ್ಲ ಎಂದು ಅಗಸ ಕತ್ತೆಯನ್ನು ಕಾಡಿಗೆ ಬಿಡಲು ಮುಂದಾದನು. ಆದರೆ ಅಗಸನ ತಾಯಿ “ಕತ್ತೆಗಳು ಅನಾದಿ ಕಾಲದಿಂದಲೂ ನಿಮ್ಮ ಅಪ್ಪ, ಅಜ್ಜಂದಿರ ಕಾಲದಿಂದಲೂ ನಮ್ಮಲ್ಲಿ ದುಡಿಯುತ್ತಿವೆ. ಕತ್ತೆಯನ್ನು ದುಡಿಸಿಕೊಂಡ ನಾವು ಈಗ ಈ ರೀತಿ ಮಾಡುವುದು ಸರಿಯಲ್ಲ. ಯಾವಾಗಲೂ ಹತ್ತಿದ ಏಣಿಯನ್ನು ಒದೆಯಬಾರದು. ಕತ್ತೆಗಳನ್ನು ಕಾಡಿಗೆ ಬಿಡುವ ಬದಲು ಕತ್ತೆಗಳ ಅವಶ್ಯಕತೆ ಇರೋ ಅಗಸನಿಗೆ ಹಸ್ತಾಂತರಿಸು’ ಎಂದಳು. “ಆಗಲಿ ಅಮ್ಮ’ ಎಂದ ಅಗಸ. 

ನಗರದಲ್ಲಿ ಯಾವೊಬ್ಬ ಅಗಸನೂ ಈಗ ಕತ್ತೆ ಉಪಯೋಗಿಸುತ್ತಿರಲಿಲ್ಲ. ಹೀಗಾಗಿ ಅದನ್ನು ತೆಗೆದುಕೊಳ್ಳುವವರೇ ಇರಲಿಲ್ಲ. ಕಾಡಿಗೆ ಬಿಟ್ಟರೆ ತಾಯಿ ಗದರಿಸುತ್ತಾಳೆ, ಬಿಡದಿದ್ದರೆ ಹೆಂಡತಿ ಸಿಡುಕುತ್ತಾಳೆ. ಅಗಸನಿಗೆ ಎನು ಮಾಡುವುದು ತಿಳಿಯದಾಯಿತು. ಒಂದು ದಿನ ಅಗಸನ ತಾಯಿ ತೀರಿಕೊಂಡಳು. ಅಗಸ ತಾಯಿಯ ಅಂತಿಮ ಕಾರ್ಯ ಮುಗಿಸಿದ. ಇದಾಗಿ ಕೆಲದಿನಗಳಲ್ಲೇ ಕತ್ತೆಯನ್ನು ಹೊಡೆದು ಹೊಡೆದು ಕಾಡಿನತ್ತ ಓಡಿಸಿದ. ಕಾಡಿಗೆ ಹೋದ ಕತ್ತೆಗಳನ್ನು ತಿರುಗಿಯೂ ನೋಡಲಿಲ್ಲ. ಕತ್ತೆಗಳು ಮಾತ್ರ ಅಗಸ ಕಾಣುವವರೆಗೂ ತಿರುಗಿ ನೋಡುತ್ತಿದ್ದವು. 

ಅಗಸ ಹೋದ ಸ್ವಲ್ಪ ಹೊತ್ತಿನಲ್ಲೇ ಕತ್ತೆಗಳು ಕಾಡಿನಿಂದ ಅಗಸನ ಮನೆಯ ಜಾಡು ಹಿಡಿದು ವಾಪಸ್‌ ಬಂದವು. ಅಷ್ಟರಲ್ಲಿ ಕತ್ತಲಾಗಿತ್ತು. ಮನೆಯ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದ ಎರಡು ಕತ್ತೆಗಳು ಜೋರಾಗಿ ಕೂಗಲು ಪ್ರಾರಂಭಿಸಿದವು. ಕತ್ತೆಗಳ ಕೂಗಿನಿಂದ ಅಕ್ಕ ಪಕ್ಕದವರು ನಿದ್ದೆಯಿಂದೆದ್ದು ಹೊರಗಡೆ ಬಂದರು. ರಾತ್ರಿ ನಿದ್ದೆಗೆಡಿಸಿದ ಕೋಪದಿಂದ ಕತ್ತೆಗಳನ್ನು ಬಯ್ಯುತ್ತಾ ಅಗಸನಿಗೆ ಛೀಮಾರಿ ಹಾಕಲು ಹೋದಾಗ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದರು. ಕಳ್ಳರು ಅಗಸನ ಕುತ್ತಿಗೆಗೆ ಚಾಕು ಹಿಡಿದು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದರು. 

ಅಕ್ಕಪಕ್ಕದ ಮನೆಯವರು ಒಮ್ಮೆಲೇ ಒಳಗಡೆ ನುಗ್ಗಿ ಅಗಸನನ್ನು ರಕ್ಷಿಸಿದಲ್ಲದೆ, ಕಳ್ಳನನ್ನು ಹಿಡಿದರು. “ನಾನು ಕತ್ತೆಯನ್ನು ಹೊಡೆದು ಕಾಡಿಗೆ ಅಟ್ಟಿದ್ದೆ. ಆದರೆ ಕತ್ತೆಗಳು ನಮ್ಮ ಮನೆಗೆ ಬಂದು ಕಾಪಾಡಿವೆ. ಕತ್ತೆಯ ಋಣ ಇದು’ ಎನ್ನುತ್ತಾ ಕಣ್ಣೀರಾದನು. ಕತ್ತೆಯ ಮೈ ಸವರುತ್ತಾ ಒಳಗಡೆ ಕರೆದೊಯ್ದನು. 

– ನಾಗರಾಜ ನಾಯಕ ಡಿ. ಡೊಳ್ಳಿನ, ಕೊಪ್ಪಳ 

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.