ಕಳಸದ ಕಳಸೇಶ್ವರ


Team Udayavani, Feb 18, 2017, 12:39 PM IST

1004.jpg

    ಚಿಕ್ಕಮಗಳೂರಿನಿಂದ ಕೇವಲ 96 ಕಿ.ಮೀ ಅಂತರದಲ್ಲಿರುವ  ಈ ಪುಣ್ಯ ಕ್ಷೇತ್ರವೇ  ಕಳಸ.   ಭದ್ರಾ ನದಿಯ ತಟದಲ್ಲಿರುವ ಈ ಕ್ಷೇತ್ರ  ಶಿವ ನೆಲೆಸಿದ  ಪಾವನ ಭೂಮಿಯಾಗಿದೆ.ಇಲ್ಲಿ ಶಿವ ಕಳಸೇಶ್ವರನಾಗಿ  ನೆಲೆನಿಂತಿದ್ದಾನೆ.ಇದರ  ಹಿಂದೆ ಒಂದು  ಐತಿಹ್ಯವೇ ಇದೆ.

      ಹಿಂದೆ  ಶಿವ-ಪಾರ್ವತಿಯರ  ಕಲ್ಯಾಣೋತ್ಸವದ ಸಂದರ್ಭದಲ್ಲಿ  ಎಲ್ಲ  ಸುರರು, ಕಿಂಕರರು, ಗಣಗಳು, ಯಕ್ಷರು, ಸಾಧುಸಂತರು,ದೇವ ದೇವತೆಗಳು ಹಿಮಾಲಯದ ಕೈಲಾಸ  ಪರ್ವತ‌ದಲ್ಲಿ ನೆರೆದಿದ್ದರು. ಹೀಗೆ  ಸರ್ವರೂ  ಒಂದೆಡೆ  ಸಮ್ಮಿàಲಿತರಾದಾಗ ಭೂಲೋಕವೇ  ವಾಲತೊಡಗಿತು. ಇದರಿಂದ ಚಿಂತಿತನಾದ  ಶಿವ  ಅಗಸ್ತ್ಯ  ಮುನಿಗಳಿಗೆ ದಕ್ಷಿಣ  ದಿಕ್ಕಿನಲ್ಲಿರುವ ಎತ್ತರದ  ಸ್ಥಳವೊಂದಕ್ಕೆ ತೆರಳಿ  ಭೂಲೋಕದ  ಸಮತೋಲನ  ಕಾಪಾಡುವಂತೆ ಆಜಾnಪಿಸಿದನು. ಆತನ   ಆಜ್ಞೆಯನ್ನು   ಪಾಲಿಸಲೇಬೇಕು. ಆಗ  ಅಗಸ್ತ್ಯರು  ಗಿರಿಜಾ ಕಲ್ಯಾಣವನ್ನು   ನೋಡಬೇಕೆಂಬ ತಮ್ಮ  ಹೆಬ್ಬಯಕೆಯನ್ನು   ವ್ಯಕ್ತಪಡಿದಾಗ  ಇದಕ್ಕೆ  ಒಪ್ಪಿದ  ಶಿವ ಅಗಸ್ತ್ಯರಿಗೊಂದು  ವರ ಕರುಣಿಸುತ್ತಾನೆ.   ಅದೇನೆಂದರೆ  ಅಗಸ್ತ್ಯರು  ಎಲ್ಲೇ ಇದ್ದರೂ  ಗಿರಿಜಾಕಲ್ಯಾಣ ವೀಕ್ಷಿಸಬಹುದು ಎಂಬ ಜಾnನ  ದೃಷ್ಟಿಯನ್ನು  ಅನುಗ್ರಹಿಸುತ್ತಾನೆ.   ಇದರಿಂದ ಸಂತಸಗೊಂಡ ಮುನಿಗಳು ದಕ್ಷಿಣ  ದಿಕ್ಕಿಗಿರುವ ಪ್ರಸ್ತುತ  ಕಳಸ  ಕ್ಷೇತ್ರಕ್ಕೆ ಬಂದು ನೆಲೆಸುತ್ತಾರೆ. ಮಹಾಜಾnನಿಗಳಾದ  ಇವರ  ಆಗಮನದಿಂದ  ಭೂಲೋಕದಲ್ಲಿ  ಮತ್ತೆ ಮೊದಲಿನಂತೆ ಸಮತೋಲನ  ಉಂಟಾಗುತ‌¤ದೆ.  ಆಗ  ಮುನಿಗಳು  ಈ ಕ್ಷೇತ್ರದಲ್ಲೆ  ತಮ್ಮ   ಬಳಿ ಇದ್ದ  ಕಳಸದಿಂದಲೇ  ಗಿರಿಜಾಕಲ್ಯಾಣವನ್ನು  ವೀಕ್ಷಿಸುತ್ತಾರೆ.  ಅವರ  ಕಳಸದಿಂದ ಒಂದು ಶಿವಲಿಂಗ ಉದ್ಭವವಾಗುತ್ತದೆ  ಅದನ್ನು  ಈ ಕ್ಷೇತ್ರದಲ್ಲಿ  ಪ್ರತಿಷ್ಠಾಪಿಸುತ್ತಾರೆ.   ಆದ್ದರಿಂದ  ಕಳಸದಿಂದ  ಹುಟ್ಟಿದ  ಶಿವನು  ಇಲ್ಲಿ  ಕಳಸೇಶ್ವರನಾಗಿ  ಹೆಸರು ಪಡೆಯುತ್ತಾನೆ.   ಅಂತೆಯೇ ಈ  ಕ್ಷೇತ್ರ ಕಳಸ ಎಂದು  ಹೆಸರು ಪಡೆದುಕೊಂಡಿದೆ.     

  ಈ ಕಳಸೇಶ್ವರನ  ಜೊತೆಗೆ   ಪಾರ್ವತಿಯದೇ  ಸರ್ವಾಂಗ ಸುಂದರಿ ಅಮ್ಮನಾಗಿ  ಇಲ್ಲಿ  ನೆಲೆಸಿದ್ದಾಳೆ.  ಈ  ಕ್ಷೇತ್ರದ  ಇನ್ನೊಂದು ವೈಶಿಷ್ಟ್ಯತೆಯೆನೆಂದರೆ ಇಲ್ಲಿ  ಗಣಪತಿಯು ಗಂಡುರೂಪ ಹಾಗೂ ಹೆಣ್ಣುರೂಪದಲ್ಲಿ  ನೆಲೆಸಿದ್ದಾನೆ. ಇದಕ್ಕೂ ಕೂಡ ಒಂದು ಐತಿಹ್ಯವಿದೆ. ಹಿಂದೆ ಈ  ಪ್ರದೇಶದಲ್ಲಿದ್ದ  ತಾಳಕಾಸುರನೆಂಬ ರಾಕ್ಷಸನನ್ನು  ಗಣಪತಿ ಗಜ ಸ್ವರೂಪದಲ್ಲಿ  ಸಂಹರಿಸಿರುತ್ತಾನೆ.ಇದಕ್ಕೆ  ಒಂದು ಗಂಡು ಆನೆ ಕೂಡ ಸಹಕರಿಸಿರುತ್ತದೆ. ಆದ್ದರಿಂದ ಇಲ್ಲಿ  ಗಣಪತಿಯ  ಎರಡು ರೂಪಗಳ  ವಿಗ್ರಹಗಳನ್ನು   ಪ್ರತಿಷ್ಠಾಪಿಸಲಾಗಿದೆ.

ಹಚ್ಚ  ಹಸಿರಿನ ಸುಂದರವಾದ ಪ್ರಕೃತಿ ಮಡಿಲಿನಲ್ಲಿ ನೆಲೆನಿಂತಿರುವ ಈ  ಕಳಸೇಶ್ವರ ದೇವಸ್ಥಾನ ಸಾಕಷ್ಟು  ವಿಶಾಲವಾದ ಆವರಣ ಹೊಂದಿದ್ದು, ಒಳಭಾಗದಲ್ಲಿ  ಒಂದು ಗಂಡು ಗಣಪತಿ ಹಾಗೂ ಹೆಣ್ಣು ಗಣಪತಿಯ ಪ್ರತ್ಯೇಕ ಎರಡು ಚಿಕ್ಕ  ಮಂದಿರಗಳಿವೆ.  ಮುಂದೆ  ಹೊದಂತೆ  ಪ್ರದಕ್ಷಿಣೆಗಾಗಿ  ದೊಡ್ಡದಾದ ಪ್ರಾಕಾರವನ್ನು  ನಿರ್ಮಿಸಲಾಗಿದೆ.  ಒಳ ಭಾಗದ ಗರ್ಭಗುಡಿಯಲ್ಲಿ ಬೆಳ್ಳಿಯ  ಪ್ರಭಾವಳಿಯ ಮಧ್ಯದಲ್ಲಿ  ಕಳಸೇಶ್ವರ  ಲಿಂಗರೂಪದಲ್ಲಿ ನೆಲೆಸಿದ್ದಾನೆ.

ಇನ್ನು   ಈ ಕಳಸ ಕ್ಷೇತ್ರವು  5 ಕಿ.ಮೀ ವ್ಯಾಪ್ತಿಯಲ್ಲಿ ಐದು  ಅತ್ಯಮೂಲ್ಯವಾದ ತೀರ್ಥಹೊಂಡಗಳನ್ನು  ಹೊಂದಿದೆ. ಅವುಗಳೆಂದರೆ  ವಸಿಷ್ಠತೀರ್ಥ,  ನಾಗತೀರ್ಥ – ಇಲ್ಲಿ  ಸ್ನಾನ  ಮಾಡುವುದರಿಂದ ನಾಗದೋಷ ಪರಿಹಾರ, ಕೋಟಿ ತೀರ್ಥ – ಅಗಸ್ತ್ಯರ  ಕೋರಿಕೆಯಂತೆ ಕೋಟಿ  ದೇವತೆಗಳು ನೆಲೆಸಿದ  ತೀರ್ಥ,  ರುದ್ರತೀರ್ಥ, ಅಂಬುತೀರ್ಥ – ಪಾರ್ವತಿ ದೇವಿಗೆ ಅರ್ಪಿತವಾಗಿರುವ  ತೀರ್ಥಕುಂಡ. ಹೀಗೆ ಪಂಚ ತೀರ್ಥಗಳು  ಈ ಕ್ಷೇತ್ರದಲ್ಲಿರುವುದೇ ಇಲ್ಲಿನ  ಇನ್ನೊಂದು ವಿಶೇಷ ಎನ್ನಲಾಗುತ್ತಿದೆ.ಇನ್ನು  ಪ್ರತಿವರ್ಷ  ಶಿವರಾತ್ರಿ ಹಾಗೂ ಗಿರಿಜಾಕಲ್ಯಾಣವನ್ನು ಇಲ್ಲಿ  ಅದ್ದೂರಿಯಾಗಿ   ಆಚರಿಸಲಾಗುತ್ತದೆ.

ಆಶಾ. ಎಸ್‌.ಕುಲಕರ್ಣಿ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.