ನಗುವಾಗ ನಕ್ಕು: ಎರಡು ಕಾಲಘಟ್ಟಗಳ ನಡುವಿನ ಸಂಘರ್ಷ, ಹಪಹಪಿ


Team Udayavani, Aug 18, 2018, 5:10 PM IST

2566.jpg

ನಾಟಕದ ವಸ್ತು, ಆವರಣ, ಶೈಲಿ, ವಿನ್ಯಾಸ ಯಾವುದೇ ಕಾಲವನ್ನು ಬಿಂಬಿಸುತ್ತಿರಲಿ, ಅದರಲ್ಲಿ ಸಮಕಾಲೀನ ಸವಾಲುಗಳು ಮತ್ತು ಸಂದರ್ಭಗಳು ತುಂಬಾ ಸೂಚ್ಯವಾಗಿ ಅಡಕಗೊಂಡಿರುತ್ತವೆ. ಹೀಗೆ ಅಡಕಗೊಂಡಾಗ ಒಂದು ಕಾಲಘಟ್ಟವೊಂದರಲ್ಲಿ ಮತ್ತೂಂದು ಕಾಲದ ಮಿಡಿತಗಳು ಧ್ವನಿತಗೊಳ್ಳುವ ಬಗೆಯನ್ನು ಗ್ರಹಿಸುವ ಸವಾಲು ನಮ್ಮದಾಗಿರುತ್ತದೆ. ಪಾತ್ರಗಳ ಒಳತೋಟಿಯಲ್ಲಿ ಚಲಿಸುವ ಭಾವಗಳು ಇಂದಿನ ವಸ್ತುಸ್ಥಿತಿಗಳಿಗೆ ಮುಖಾಮುಖೀಯಾಗುತ್ತಲೇ ಸುಳಿ ತಿರುಗುತ್ತಿರುತ್ತವೆ. ಇಂಥವನ್ನ ಬಿಂಬಿಸುವ ಕೃತಿಗಳ ಲೋಕ ಬೇರೆ ಬಗೆಯದು. ಸೂಚ್ಯವಾಗಿ ಹೇಳುವ ಸವಾಲನ್ನು ಅವು ಎದುರಿಸುತ್ತಿರುತ್ತವೆ. ಇವುಗಳೆಲ್ಲ ಪ್ರಯೋಗಗಳು.
  ಆದರೆ, ಇಂಥವನ್ನು ಹೊರತುಪಡಿಸಿದ ಮತ್ತೂಂದು ಜಾಡು ಇದೆ. ಇಲ್ಲಿ ಸೂಚ್ಯವಾಗಿಯೇನೂ ಹೇಳುವ ಅಗತ್ಯ ಇಲ್ಲ. ಬೇರೆ ಲೋಕದ ಕಥಾನಕದಲ್ಲಿ ಮತ್ತೂಂದರ ಛಾಯೆ ಕಾಣಿಸಬೇಕಾದ ಪ್ರಮೇಯವೂ ಇಲ್ಲ. ಬದಲಿಗೆ ಸಮಕಾಲೀನ ಸಂದರ್ಭದ ತುಣುಕನ್ನು ನೇರ ನಿಕಷಕ್ಕೆ ಗುರಿಪಡಿಸಬಹುದು.

  ಈಚೆಗೆ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಕನ್ನಡ ಸಂಘ ಹಾಗೂ ಸಂವಹನ ವಿಭಾಗ ಜಂಟಿಯಾಗಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ನಗುವಾಗ ನಕ್ಕು ರಂಗಪ್ರಯೋಗ ಮೇಲಿನ ವಿಚಾರದ ಜೊತೆ ಮುಖಾಮುಖೀಯಾಗಿತ್ತು. ನಾಟಕ ರಚನಾಕಾರ ಹಾಗೂ ನಿರ್ದೇಶಕ ಶ್ರೀಕಾಂತ್‌ ರಾವ್‌ ಇಂದಿನ ಕಾರ್ಪೊರೇಟ್‌ ವಲಯದ ಹೆಣ್ಣೊಬ್ಬಳ ಭಾವನಾ ಲೋಕವನ್ನು ಅನಾವರಣಗೊಳಿಸಿದ್ದರು. ಗಂಡಿನ ರೂಢಿಗತ ಜಗತ್ತಿನ ವಿರುದ್ಧ ಬಂಡೇಳುವ ಹೆಣ್ಣು ಮಾತ್ರ ಫೆಮಿನಿಸ್ಟ್‌ ಆಗಬೇಕಿಲ್ಲ. ಹೆಣ್ಣಿನಲ್ಲೂ ಒಂದು ಗಂಡಿನ ರೂಢಿಗತ ಲೋಕವಿದ್ದಂತೆ, ಗಂಡಿನಲ್ಲೂ ಹೆಣ್ಣಿನ ಮನೋಲೋಕದ ಸೆಳೆತಗಳಿರುತ್ತವೆ ಎಂಬುದನ್ನು ಶ್ರೀಕಾಂತ್‌ ಇಲ್ಲಿ ಶೋಧಿಸಿದ್ದಾರೆ. ಅವರ ಶೋಧನೆಗಳ ವಿಸ್ತರಣೆಗಳ ಫ‌ಲಿತವೇ ನಾಟಕವಾಗಿ ರೂಪುತಳೆದಿದೆ.
  ಕಾಲದ ಹರಿವಿನಲ್ಲಿ ಒಂದು ಕಾಲದವರು ಸ್ಥಗಿತಗೊಳ್ಳಬಹುದು; ಆದರೆ, ಕಾಲದ ಹರಿವು ಮಾತ್ರ ನಿರಂತರ. ಪೋಷಾಕು ಮತ್ತು ಅದಕ್ಕೆ ತಕ್ಕಂಥ ಮನಃಸ್ಥಿತಿ ಬದಲಾಯಿಸಿಕೊಳ್ಳುವವರು ಬದಲಾಯಿಸಿಕೊಳ್ಳಬಹುದು. ಹಾಗೇ ಉಳಿಯುವವರು ಹಾಗೆಯೂ ಉಳಿದುಕೊಳ್ಳಬಹುದು.

  ಹಳೆಯ ಮತ್ತು ಹೊಸ ಬದುಕಿನ ಮುಖಾಮುಖೀಯಲ್ಲಿ ಒಂದಿಷ್ಟು ಹಾಸ್ಯ ಸು#ರಿಸುತ್ತದೆ. ಈ ನಾಟಕದಲ್ಲೂ ಹಾಸ್ಯದ ಇಂಥ ಝಲಕುಗಳಿವೆ. ಬದುಕು ಒಂದೇಯಾದರೂ ಬದುಕುವ ಬಗೆ ಮತ್ತು ನೋಟ ಬೇರೆ ಇರುತ್ತದೆ. ನಿಜವಾದ ಸಂಘರ್ಷಗಳಿರುವುದು ಇಲ್ಲಿ. ಒಂದು ಕಾಲದ ರೂಢಿಗತ ಬದುಕಿಗೇ ಒಗ್ಗಿರುವವರೂ ಜಾತಿ, ಕುಲ, ಗೋತ್ರ ದಾಟುವ ಹಂತಕ್ಕೆ ಬಂದಿರುತ್ತಾರೆ. ಆದರೆ, ಈ ಪ್ರಗತಿಪರತೆಗೂ ಮಿತಿ ಇದೆ. ಜಾತಿಯನ್ನೇ ದಾಟಲು ಮನಸ್ಸು ಮಾಡಿದವರಿಗೆ ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ ಆಘಾತಕಾರಿ ಅಂಶವಾಗುತ್ತದೆ.

  ಆದರೆ, ಇವತ್ತಿನ ಕಾರ್ಪೊರೇಟ್‌ ಹೆಣ್ಣಿಗೆ ಮದುವೆ ಒಂದು ಸಂಕೋಲೆ. ಲಿವಿಂಗ್‌ ಟುಗೆದರ್‌ ರಿಲೇಷನ್‌ಶಿಪ್‌ ಒಂದು ಜೀವನಕ್ರಮ. ಎರಡು ಕಾಲಘಟ್ಟಗಳನ್ನು ಬಿಂಬಿಸುವ ಪಾತ್ರಗಳ ಮನಸ್ಥಿತಿಗಳು ಪಲ್ಲಟಗೊಳ್ಳುವ ಬಗೆಯನ್ನು ನಾಟಕ ಕಟ್ಟಿಕೊಡುತ್ತದೆ. ಮದುವೆ ಬಂಧದಲ್ಲಿ ನಲುಗುವ ಹೆಣ್ಣು, ಶೋಷಣೆಗೆ ಒಳಗಾಗುವ ಹೆಣ್ಣು ಆತ್ಮಹತ್ಯೆಗೆ ಶರಣಾಗುವುದನ್ನು ಈ ನಾಟಕ ನಿರಾಕರಿಸುತ್ತದೆ. ಆದರೆ, ಇದನ್ನು ಶ್ರೀಕಾಂತ್‌ ಎಲ್ಲೂ ನೇರವಾಗಿ ಸಂದೇಶದ ಹಾಗೆ ಹೇಳಿಸದ ಕಾರಣ ಇದು ವಾಚ್ಯವಾಗಲಿಲ್ಲ.

   ಇದು ಸರಿ ಹೌದು; ವಾಚ್ಯಗೊಳಿಸದೆ ಎಲ್ಲವನ್ನೂ ಅಡಕವಾಗಿಯೇ ಹೇಳಬೇಕೆನ್ನುವ ಉಮೇದು ಇಲ್ಲಿ ಕೆಲವು ಚಿತ್ರಗಳನ್ನು ತುಂಬಾ ಕಾವ್ಯಾತ್ಮಕವಾಗಿ ಕಟ್ಟಲು ಪ್ರೇರೇಪಿಸಿದೆ. ಈ ಕಾವ್ಯಾತ್ಮಕತೆಗೆ ಆಧುನಿಕ ನೃತ್ಯ ಪ್ರಕಾರದ ಹೆಜ್ಜೆಗತಿಗಳನ್ನ ಅಳವಡಿಸಿಕೊಂಡಿದ್ದಾರೆ. ಇದು ಆಯಾ ಸಂದರ್ಭಕ್ಕೆ ತಕ್ಕುದಾದ ಸಂಗೀತ ಬಳಸಿಕೊಂಡದ್ದು ಸಮ್ಮೊàಹನಗೊಳಿಸಿತೇನೋ ನಿಜ.

  ಈ ತಂತ್ರಗಾರಿಕೆ ಹೆಣ್ಣೊಬ್ಬಳು ಬರೆಯುವ ಪದ್ಯದ ಗತಿಯನ್ನು ಮತ್ತು ಅದರಲ್ಲಿ ಅಡಕಗೊಂಡಿರುವ ಅವಳ ಮನಃಸ್ಥಿತಿಯನ್ನು ಬಿಂಬಿಸಲಿಕ್ಕೆ ಸರಿಹೊಂದಿತು ಸರಿ; ಆದರೆ, ಇದೇ ಸ್ಫೂರ್ತಿ ಮತ್ತೂ ಮುಂದುವರಿದು ಸಾವಿನ ಕಥಾನಕಕ್ಕೂ ಕಲಾತ್ಮಕ ನೃತ್ಯದ ಭಂಗಿ ಅಳವಡಿಸಿಕೊಂಡದ್ದು ಸಾವಿನ ತೀವ್ರತೆಯನ್ನು ಕುಗ್ಗಿಸಿತು. ಅಲ್ಲಿ ಕಲೆಗಾರಿಕೆ ವಿಜೃಂಭಿಸಿತು. ಭಾವ ಮುಕ್ಕಾದಂತೆ ಅನಿಸಿತು. 

  ಇಷ್ಟುಬಿಟ್ಟರೆ ಶ್ರೀಕಾಂತ್‌ರ ಸಮಕಾಲೀನ ಕಥನದಲ್ಲಿ ಬಿಗಿ ಇದೆ. ಕಾವ್ಯವೂ ಇದೆ. ಈ ಕಾವ್ಯವೇ ಕೆಲವೊಮ್ಮೆ ಸಂದರ್ಭದ ಗತಿಯನ್ನು ಗ್ರಹಿಸಲು ತೊಡಕುಮಾಡಿದ್ದೂ ಇದೆ. ವಿನ್ಯಾಸ ಸರಳವಾಗಿಯೇ ಇತ್ತು. ಹೆಚ್ಚು ಕಸರತ್ತುಗಳಿರಲಿಲ್ಲ. ರಂಗತಂತ್ರಗಾರಿಕೆಯಲ್ಲಿ ಪ್ರೌಢಿಮೆ ಇತ್ತು. ನೆರಳು ಬೆಳಕು ಅಚ್ಚುಕಟ್ಟು. ಲಕ್ಷೀಚಂದ್ರಶೇಖರ್‌ರ ಅಭಿನಯದಲ್ಲಿ ಸಹಜತೆ ಮತ್ತು ತೀವ್ರತೆ ಇದ್ದಂತೆಯೇ ಉಳಿದವರಲ್ಲಿ ತನ್ಮಯತೆ ಇತ್ತು.

– ಎನ್‌.ಸಿ. ಮಹೇಶ್‌

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.