ರಾಮಾಯಣ, ರಾಮಚರಿತೆಯ ಮಧುರ ಕಾವ್ಯ


Team Udayavani, Nov 3, 2018, 3:25 AM IST

88.jpg

ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ ಮುದವನ್ನು ನೀಡುವ ಜೊತೆಗೆ ಒಂದು ಜ್ಞಾನವನ್ನೋ ಅರಿವನ್ನೂ ನೀಡಬೇಕಂತೆ. ಅಂತಹ ಓದಿಗೆ ಹೇಳಿಮಾಡಿಸಿದ್ದು ಈ ರಾಮಾಯಣ. 

ರಾಮಾಯಣವೆಂಬ ಮಹಾನ್‌ ಕಾವ್ಯದ ಪಿತಾಮಹರಾದ ವಾಲ್ಮೀಕಿ ಮಹರ್ಷಿಗಳು ಸದಾ ವಂದನಾರ್ಹರು. ಯುಗಯುಗಗಳೇ ಉರುಳಿದರೂ, ರಾಮಾಯಣ ಜೀವಂತವಾಗಿದೆ. ಅಂತೆಯೇ, ವಾಲ್ಮೀಕಿ ಮಹರ್ಷಿಗಳೂ ಜನಮಾನಸದಲ್ಲಿ ಜೀವಂತವಾಗಿರುವ ಕವಿಶ್ರೇಷ್ಠರು. ಅವರೊಬ್ಬ ಕಾವ್ಯದ ಶಕ್ತಿ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸೇನನ ಮಗ. ಇವರು ಹಲವು ವರ್ಷಗಳ ಕಾಲ ತಪಸ್ಸು ಆಚರಿಸಿದ್ದರು. ಆ ಸಮಯದಲ್ಲಿ ಇವರ ದೇಹದ ಸುತ್ತಲೂ ಹುತ್ತ ಬೆಳೆದುಕೊಂಡಿತ್ತು. ನಂತರ ಆ ಹುತ್ತವನ್ನು ಒಡೆದುಕೊಂಡು ಹೊರಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂತು. ಸಂಸ್ಕೃತದಲ್ಲಿ ವಾಲ್ಮೀಕಿ ಎಂದರೆ ಹುತ್ತ ಎಂಬರ್ಥವಿದೆ.

ವಾಲ್ಮೀಕಿ ಮಹರ್ಷಿಗಳ ಬಗ್ಗೆ ದಂತಕಥೆಯೊಂದಿದೆ. ಅವರು ಮೊದಲು ದಾರಿಹೋಕರನ್ನು ದರೋಡೆ ಮಾಡಿಕೊಂಡು ಬದುಕುತ್ತಿದ್ದರಂತೆ. ಒಮ್ಮೆ ನಾರದರನ್ನು ದರೋಡೆ ಮಾಡಲು ಮುಂದಾದಾಗ-“ನೋಡು, ಆ ಮರವನ್ನು ನೋಡಿಕೊಂಡು ಆಮರ.. ಆಮರ..ಆಮರ ಎಂದು ಹೇಳುತ್ತಲೇ ಇರು, ಆಗ ನಿನಗೆ ಸಕಲೈಶ್ವರ್ಯ ದೊರೆಯುತ್ತದೆ ಎಂದು ಹೇಳಿ ಅಲ್ಲಿಂದ ಮಾಯವಾದವರಂತೆ. ಆ ಮರುಕ್ಷಣದಿಂದ ಆ ದರೋಡೆಕೋರ ಆಮರ..ಆಮರ..ಆಮರ ಎಂದು ಜಪಿಸುತ್ತ ಅದು ಆಮರದಿಂದ ರಾಮ, ರಾಮ, ರಾಮ ಎಂದು- ರಾಮಜಪವಾಗಿ ಪರಿವರ್ತಿತವಾಗಿ ರಾಮಾಯಣವನ್ನು ಬರೆದ ಮಹಾನ್‌ ಕವಿ, ಆದಿಕವಿಯಾದರು ಎಂದು ಈ ಕಥೆ ಹೇಳುತ್ತದೆ.

ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ರಚಿಸಿದ ರಾಮಯಾಣ ಕಾವ್ಯವು,  ಹಿಂದೂಧರ್ಮದ ಮಹಾಕಾವ್ಯವಾಗಿ ಪರಿಗಣಿಸಲ್ಪಟ್ಟಿದೆ. ಇಡೀ ರಾಮಾಯಣ ಕಾವ್ಯವು ಜೀವನದ ಸನ್ಮಾರ್ಗವನ್ನು ತೋರಿಸಿಕೊಟ್ಟಿದೆ. ಬಾಲಕರಿಂದ ಹಿಡಿದು ಹಿರಿಯರತನಕ ಅಳವಡಿಸಿಕೊಳ್ಳಬೇಕಾದ ವಿವೇಕ, ಸಾಧನೆ, ಸತ್ಯ, ಸನ್ನಡತೆಗಳನ್ನು ಎಳೆಎಳೆಯಾಗಿ ಪ್ರತಿಯೊಂದು ಪಾತ್ರದ ಮೂಲಕ ಇದರಲ್ಲಿ ಹೇಳಿ¨ªಾರೆ. ವಾಲ್ಮೀಕಿ ರಾಮಾಯಣವು ರಾಮಚರಿತ್ರೆಯನ್ನು ಮಧುರವಾಗಿ ಬಿಡಿಸಿಟ್ಟ ಮುತ್ತಿನ ಕಾವ್ಯ. ಇದು ಎÇÉಾ ಕವಿಗಳಿಗೆ ಸ್ಫೂರ್ತಿಯೂ ಮಾದರಿಯೂ ಆಗಿದೆ. ರಾಮಾಯಣದ ಪ್ರತಿಯೊಂದು ಸನ್ನಿವೇಶವೂ ರೋಚಕ ಮತ್ತು ಕುತೂಹಲಕಾರಿಯಾಗಿದೆ. ಓದಲು ಬರೆಯಲು ಬಾರದ ನಮ್ಮ ಪೂರ್ವಜರಿಗೂ ರಾಮಾಯಣ ಸಂಪೂರ್ಣವಾಗಿ ಗೊತ್ತಿತ್ತು. ವಾಲ್ಮೀಕಿಯ ಬಗ್ಗೆ ಗೊತ್ತಿತ್ತು. ಸಣ್ಣ ಮಕ್ಕಳನ್ನು ಸಂತಸವಾಗಿಡುವ ಹಲವು ಸಂಗತಿಗಳಲ್ಲಿ ರಾಮಾಯಣದ ಕಥೆಗಳೂ ಸೇರಿದ್ದುವು. ಇದು ಕೇವಲ ಕಥೆಯಾಗಿರದೆ ಮಕ್ಕಳ ಮನಸ್ಸಿನಲ್ಲಿ ಸುಸಂಸ್ಕಾರವನ್ನು ಬೆಳೆಸಲು ಸಹಾಯಕವಾಗಿರುವುದು ವಿಶೇಷ.

ಇಂತಹ ವಿಶೇಷ ಕಾವ್ಯವನ್ನು ನಮ್ಮೆಲ್ಲರಿಗೂ ಒದಗಿಸಿಕೊಟ್ಟ ಮಹಾನ್‌ ಚೇತನ ವಾಲ್ಮೀಕಿ ಮಹರ್ಷಿಗಳನ್ನು ನೆನೆದು ವಂದಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ ಮುದವನ್ನು ನೀಡುವ ಜೊತೆಗೆ ಒಂದು ಜ್ಞಾನವನ್ನೋ ಅರಿವನ್ನೂ ನೀಡಬೇಕಂತೆ. ಅಂತಹ ಓದಿಗೆ ಹೇಳಿಮಾಡಿಸಿದ್ದು ಈ ರಾಮಾಯಣ. ಇಂತಹ ರಾಮಾಯಾಣದ ಜನಕನನ್ನು ಮರೆಯುದು ಸಾಧ್ಯವೇ? ಸರಿಯೇ?

ವಾಲ್ಮೀಕಿ ಮಹರ್ಷಿಗಳನ್ನು ಸ್ಮರಿಸುತ್ತ, ಅವರು ರಾಮಾಯಣದ ಮೂಲಕ ಹೇಳಿದ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಆದಿಕವಿಯ ಚರಣಗಳಿಗೆ ವಂದಿಸಿ, ಸನ್ನಡತೆಯ ದಾರಿಯಲ್ಲಿ ನಡೆಯೋಣ.

ಟಾಪ್ ನ್ಯೂಸ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.