ಹೆಮ್ಮಿಂಚುಳ್ಳಿ


Team Udayavani, Apr 8, 2017, 3:27 PM IST

49.jpg

ಕೆಂಪು ಕಂದುಬಣ್ಣದ ಹೊಳೆವ ಬಣ್ಣ ಹಾರುವಾಗ ಬಣ್ಣದ ಮಿಂಚು ಹೊಳೆದಂತೆ ಕಾಣುವುದು.Stork  Billed  Kingfisher- Halcyon  capensis – R  Pigeon +  ಹಾಗಾಗಿ ಇದಕ್ಕೆ ಮಿಂಚುಳ್ಳಿ ಎಂಬ ಹೆಸರು ಬಂದಿರಬಹುದು. ಇದು 38 ಸೆಂಮೀ ದೊಡ್ಡದಾಗಿದೆ. ಹಾರುವಾಗ ಬಣ್ಣದ ಬೀಸಣಿಗೆಯಂತೆ ಕಾಣುವುದನ್ನು ಸೆರೆ ಹಿಡಿಯುವುದು ಹಕ್ಕಿ ಪ್ರಿಯರಿಗೆ ಸವಾಲು. ಗೆದ್ದರೆ ಸಂತಸದ ಸುಂದರ ದೃಶ್ಯಾವಳಿಯ ಚಲುವಿನ ಚಿತ್ತಾರದ ಹಕ್ಕಿ ಫೋಟೊ ಸೆರೆಹಿಡಿದ ತೃಪ್ತಿ.

ಮೀನು ತಿನ್ನುವ ಹಕ್ಕಿಗಳಲ್ಲಿಯೇ ದೊಡ್ಡದಾದ ಹಕ್ಕಿ ಇದು. ಹಳ್ಳದ ದಂಡೆಯಲ್ಲಿರುವ ಮರಗಳ ಮೇಲೆ ಕುಳಿತು ನೀರಿನಲ್ಲಿ ಕಾಣುವ ಮೀನನ್ನು ಬೇಟೆ ಆಡುವುದು. ಕ್ರೇಹೆ ಕ್ರರೇ ಕ್ರೇಹ ಎಂದು ನಕ್ಕಂತೆ ಕೂಗುವುದು.  ಕುಳಿತಾಗ ಬಾಲದ ಪುಕ್ಕವನ್ನು ಮೇಲೆ-ಕೆಳಗೆ ಕುಣಿಸುತ್ತದೆ. ಇದು ಕೂಗುತ್ತಿರುವಾಗ ಕೂಗಿಗೊಮ್ಮೆ ಬಾಲದ ಪುಕ್ಕ ಕುಣಿಸುತ್ತಿರುವುದು. ಬೆನ್ನು, ರೆಕ್ಕೆ, ಪುಕ್ಕ ಎಲ್ಲವೂ ನೀಲಿ ಹಸುರು ಬಣ್ಣ. ಕೆ,ಕೇ, ಕೇ,ಕೆ,ಕೆ,ಕೇ ಎಂದೂ, ಕೆಲವೊಮ್ಮೆ ಪೀರ-ಪೇರ, ಪರ್‌ ಎಂದೂ ಮರದ ನೆರಳಿನಲ್ಲಿ ಕುಳಿತು ಕೂಗುತ್ತದೆ. ಇದರ ವಿಭಿನ್ನ ಕೂಗು ಭಯದಲ್ಲಿ ಹೇಗೆ? ವೈರಿಗಳು ತನ್ನ ಮರಿಗಳ ಹತ್ತಿರ ಬಂದಾಗ ಮಾಡುವ ಕೂಗು ಹೇಗೆ? ಗಂಡು ಹೆಣ್ಣಿನ ಜೊತೆ ಸಂಭಾಷಿಸುವಾಗ ಹೇಗೆ? ಬೇಟೆಯಾಡಿ ಸಂತಸದ ಉದ್ಗಾರ ಹೇಗೆ? ಈ ಕುರಿತು ಅಧ್ಯಯನ ಮಾಡಬೇಕು.

ಕೆಂಪು ಕಂದುಬಣ್ಣದ ಹೊಳೆವ ಬಣ್ಣ ಹಾರುವಾಗ ಬಣ್ಣದ ಮಿಂಚು ಹೊಳೆದಂತೆ ಕಾಣುವುದು. ಹಾಗಾಗಿ ಇದಕ್ಕೆ ಮಿಂಚುಳ್ಳಿ ಎಂಬ ಹೆಸರು ಬಂದಿರಬಹುದು. ಇದು 38 ಸೆಂಮೀ ದೊಡ್ಡದಾಗಿದೆ. ಇತರ ಮಿಂಚುಳ್ಳಿಗಳಂತೆ ಕೆಂಪು ಬಣ್ಣದ ಕಾಲಿದ್ದು ಹಿಂದಿನ ಬೆರಳು ದಪ್ಪ ಹಾಗೂ ಸಣ್ಣಗಿದೆ. ಮುಂದಿನ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಉದ್ದವಾಗಿದೆ. ಬೆರಳುಗಳ ತುದಿಗಳು ಕಂದು ಬಣ್ಣ. ಇದರ ಕೆಂಪು ಬಣ್ಣದ ದೊಡ್ಡ ಚುಂಚು ಎದ್ದು ಕಾಣುತ್ತದೆ. ಇದರಿಂದ ಇದನ್ನು ಗುರುತಿಸುವುದು ಸುಲಭ. ದೊಡ್ಡ ತಲೆ ಕೆಂಪು ಮಿಶ್ರಿತ ಕಂದುಬಣ್ಣ ಇದೆ. ಎದೆಯ ಹಿಡಿಯುವಲ್ಲಿ  ನಿಪುಣ ಹಕ್ಕಿ. ಇದೇ ಇದರ ಬೇಟೆಯ ವೈಖರಿ. 

ಹೊಳೆವ ತಿಳಿ ನೀಲಿಬಣ್ಣದ ರೆಕ್ಕೆ, ಪುಕ್ಕ ಇದರ ಚಲುವನ್ನು ಹೆಚ್ಚಿಸಿದೆ. ಜಲಾವೃತ ಪ್ರದೇಶ, ಕಾಡಿನಲ್ಲಿ ನೀರಿರುವ ಜಾಗದಲ್ಲಿ ಇದು ಟೆಲಿಫೋನ್‌ ತಂತಿ ಅಥವಾ ಮರದ ಟೊಂಗೆಗಳಲ್ಲಿ ಕುಳಿತು ಕೂಗುವುದರಿಂದ ಇದರ ಇರುವನ್ನು ಸುಲಭವಾಗಿ ತಿಳಿಯಬಹುದು. ಹಾರುವಾಗ ಬಣ್ಣದ ಬೀಸಣಿಗೆಯಂತೆ ಕಾಣುವುದನ್ನು ಸೆರೆ ಹಿಡಿಯುವುದು ಹಕ್ಕಿ ಪ್ರಿಯರಿಗೆ ಸವಾಲು. ಗೆದ್ದರೆ ಸಂತಸದ ಸುಂದರ ದೃಶ್ಯಾವಳಿಯ ಚಲುವಿನ ಚಿತ್ತಾರದ ಹಕ್ಕಿ ಫೋಟೊ ಸೆರೆಹಿಡಿದ ತೃಪ್ತಿ.

ಇದು ಎಷ್ಟು ಸುಲಭವೋ ಅಷ್ಟೇ ಕ್ಲಿಷ್ಟ.  ಹಕ್ಕಿ ಪ್ರಿಯರ, ಛಾಯಾಗ್ರಾಹಕರ ಪರಿಣತಿ, ಕುಶಲತೆ, ಕ್ಯಾಮರಾದ ಮೇಲಿನ ಹಿಡಿತಕ್ಕೆ, ಪರೀಕ್ಷೆಗೆ ಒಂದು ಸವಾಲು. ರಾಜಸ್ಥಾನ ಒಂದನ್ನು ಬಿಟ್ಟು ಭಾರತದ ತುಂಬೆಲ್ಲಾ ಇದೆ.  ಕುಮಟಾ, ಮೂರೂರು, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಗುಡವಿ, ಮಾಸೂರು, ತದಡಿ, ಬಾಡ, ಹೆಗಡೆ, ಬಡಾಳ ಈ ಭಾಗದಲ್ಲಿ ನೀರು ಹರಿವ ಅಘನಾಶಿನಿ ನದಿಯ ಗುಂಟ ಹೆಚ್ಚುಚ್ಚು ಕಾಣಬಹುದು. 
ಮೀನು, ಏಡಿ, ಕಪ್ಪೆ$ ಹಾವು, ಕೆಲವೊಮ್ಮೆ ಹಕ್ಕಿಗಳ ಮೊಟ್ಟೆ  ಮರಿಗಳನ್ನೂ ಕಬಳಿಸುತ್ತದೆ. ಬೆಳ್ಳಕ್ಕಿ, ಐಬೀಸ್‌, ಬಕ, ಕೊಕ್ಕರೆಗಳಿರುವ ಭತ್ತದ ಗದ್ದೆಗಳ ಸಮೀಪದ ನೀರಿನ ಹರಿವಿನ ಹತ್ತಿರ ಇದು ಇದ್ದೇ ಇರುತ್ತದೆ.  ಜನವರಿಯಿಂದ ಜುಲೈ ಇದು ಮರಿಮಾಡುವ ಸಮಯ. ನದಿಗಳ ಅಂಚಿನ ಗೋಡೆಗಳಲ್ಲಿ ಭೂಮಿಗೆ ಸಮಾನಾಂತರದಲ್ಲಿ ಬಿಲ ಕೊರೆದು ಗೂಡು ಮಾಡುತ್ತದೆ. ನನಗೆ ಸಿಕ್ಕ ಗೂಡು ಭೂಮಿಯಿಂದ ಒಂದೂವರೆ ಫ‌ೂಟ್‌ ಎತ್ತರದದಲ್ಲಿತ್ತು. ಗೂಡಿನ ಆಳ 12 ಇಂಚು ಇತ್ತು, ಮುಂದೆ ಹೋದಂತೆ ಮೇಲ್ಮುಖವಾಗಿತ್ತು. ಇದು ಇಂಗ್ಲೀಷಿನ ಟಿ ಅಕ್ಷರದ ಆಕಾರದಲ್ಲಿತ್ತು. ತಲೆ ಅಗಲ 10 ಇಂಚು ಇತ್ತು. 4-5 ಬಿಳಿ ಹೊಳೆವ ಅಂಡ ವರ್ತುಲಾಕಾರದ ಮೊಟ್ಟೆ ಇಡುತ್ತದೆ. ನನಗೆ ಸಿಕ್ಕ ಗೂಡಿನಲ್ಲಿ 3 ಮೊಟ್ಟೆ ಇತ್ತು. ಮೂರೂ ಮರಿಯಾದಾಗ ಆ ಗೂಡಿನಲ್ಲಿ ಇರುವೆ ಹಾಗೂ ಇರುವೆಯ ಮೊಟ್ಟೆಗಳಿರುವುದು ಕಂಡುಬರುತ್ತದೆ. 

ಹೆಣ್ಣು-ಮರಿಗಳಿಗೆ ಹೆಚ್ಚು ಸಮಯ ಆಹಾರ ಪೂರೈಸುತ್ತಿರುವುದು ಗಮನಕ್ಕೆ ಬಂದಿದೆ. ಗಂಡು ಮರಿಗಳ ರಕ್ಷಣೆಗೆ ದೂರದಲ್ಲಿ ಕುಳಿತು ಕಾವಲು ಕಾಯುವುದು. ಯಾರಾದರೂ ಗೂಡಿನ ಸಮೀಪ ಬಂದರೆ ಇತರ  ಪಕ್ಷಿಗಳು ಬಂದರೆ ತನ್ನ ಕೂಗಿನಿಂದ ಹೆಣ್ಣಿಗೆ ಸೂಚನೆ ನೀಡುತ್ತದೆ. ಹೀಗೆ  ಮರಿಗಳ ರಕ್ಷಣೆ ಜವಾಬ್ದಾರಿ ಗಂಡಿನದು. ಗಂಡು ಹೆಣ್ಣು ಎರಡೂ ಮರಿಗಳ ಪೋಷಣೆ ಪಾಲನೆಯಲ್ಲಿ ಭಾಗಿಯಾದರೂ ಹೆಚ್ಚು ಮರಿಗಳಿಗೆ  ಆಹಾರ, ಗುಟುಕು ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಹೆಣ್ಣು ಹಕ್ಕಿಯೇ. 
ಭಾರತ ಹಾಗೂ ವಿದೇಶದಲ್ಲೂ ಇದರ ಬೇರೆ ಬೇರೆ ತಳಿಗಳಿವೆ. ಇದರ ಬಣ್ಣ ಹಾಗೂ ಆಕಾರಗಳು ಆಹಾರ ವೈವಿಧ್ಯತೆಯಿಂದ ಬೇರೆ ಬೇರೆ ಗುಂಪಾಗಿ ವಿಂಗಡಿಸಲಾಗಿದೆ. ಆದರೆ ಸ್ವಭಾವದಲ್ಲಿ ಏಕಸೂತ್ರತೆ ಇದೆ.  ಇಂಥ ಚಲುವಿನ ಬಣ್ಣದ ಹಕ್ಕಿಗಳ ಅಧ್ಯಯನ ಅವಶ್ಯ ಹಾಗೂ ಸಂತಸ ನೀಡುವಂತದ್ದು. ಅದರ ಜೀವನ ಕ್ರಮ, ಸ್ವಭಾವ, ಮರಿಗಳ ಕುರಿತು ಕಾಳಜಿ, ವೈರಿಗಳಿಂದ ಮರಿಗಳ ರಕ್ಷಣೆಗೆ ಅವು ಕೈಗೊಳ್ಳುವ ಕ್ರಮ. ಈ ಹಕ್ಕಿ ವಯಸ್ಸಾದಂತೆ ಚುಂಚು ರೆಕ್ಕೆಗಳ ಬಣ್ಣ ಮಾಸುವುದು. ಇದಕ್ಕೆ ಕಾರಣ ತಿಳಿದಿಲ್ಲ. ಚಿಕ್ಕ ಕೀಟಾಣುಗಳ ಉಪಟಳವೋ ಎಂಬುದು ತಿಳಿಯಬೇಕಾಗಿದೆ. 

ಪಿ. ವಿ. ಭಟ್‌ ಮೂರೂರು 

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.