ಚಂದ್ರು ನೈಸ್‌ ಸೆಂಟಿಮೆಂಟ್‌ ವಿಜಿ ಹೊಡೆದಾಟದ ಸುತ್ತಮುತ್ತ..


Team Udayavani, Aug 18, 2017, 6:00 AM IST

nice-centiment.jpg

ನಿರ್ದೇಶಕ ಆರ್‌.ಚಂದ್ರುಗೆ ನೈಸ್‌ ರಸ್ತೆ ಮೇಲೆ ಏನೋ ವಿಪರೀತ ಪ್ರೀತಿ. ಅವರ ಪ್ರತಿ ಸಿನಿಮಾದ ಒಂದಲ್ಲ, ಒಂದು ದೃಶ್ಯವನ್ನು ನೈಸ್‌ ರಸ್ತೆಯಲ್ಲಿ ಚಿತ್ರೀಕರಣ ಮಾಡಿಯೇ ಮಾಡುತ್ತಾರೆ. ಈ ಬಾರಿ “ಕನಕ’ದಲ್ಲೂ ಅದು ಮುಂದುವರೆದಿದ್ದು, ಚಿತ್ರದ ಫೈಟಿಂಗ್‌ ದೃಶ್ಯಗಳನ್ನು ಚಂದ್ರು ನೈಸ್‌ ರಸ್ತೆಯಲ್ಲಿ ಚಿತ್ರೀಕರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಆಟೋ ಚೇಸಿಂಗ್‌ ದೃಶ್ಯವನ್ನು ನೈಸ್‌ ರಸ್ತೆಯಲ್ಲಿ ಚಿತ್ರೀಕರಿಸಿಕೊಂಡಿದ್ದ ಚಂದ್ರು, ಈ ಬಾರಿ ಜಾತ್ರೆಯ ಹಿನ್ನೆಲೆಯಲ್ಲಿ ನಡೆಯುವ ಫೈಟ್‌ ಸನ್ನಿವೇಶವನ್ನೂ ನೈಸ್‌ ರಸ್ತೆಯಲ್ಲೇ ಚಿತ್ರೀಕರಿಸಿದ್ದಾರೆ ಚಂದ್ರು. ದೇಸಿ ಗೆಟಪ್‌ನಲ್ಲಿದ್ದ ವಿಜಯ್‌, ದಢೂತಿ ರೌಡಿಗಳನ್ನು ಹೊಡೆದುರುಳಿಸಿಕೊಂಡು ಮುಂದೆ ಸಾಗುತ್ತಿದ್ದರು. ಊಟದ ಬ್ರೇಕ್‌ನಲ್ಲಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಹಾಗೆ ನೋಡಿದರೆ ಚಿತ್ರತಂಡಕ್ಕೆ ಹೇಳಿಕೊಳ್ಳಲು ಹೆಚ್ಚೇನು ವಿಷಯವಿರಲಿಲ್ಲ. 

ನಿರ್ದೇಶಕ ಚಂದ್ರುಗೆ ಅಂದುಕೊಂಡಂತೆ ಸಿನಿಮಾ ಮಾಡಿದ ಖುಷಿ. ಇಲ್ಲಿವರೆಗೆ ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಇನ್ನೂ ಸುಮಾರು 20 ದಿನಗಳ ಕಾಲ ಚಿತ್ರೀಕರಣ ಬಾಕಿ ಇದೆಯಂತೆ. ಕ್ಲೈಮ್ಯಾಕ್ಸ್‌ ಅನ್ನು ಕೇರಳದಲ್ಲಿ ಮಾಡುವ ಉದ್ದೇಶವಿದೆಯಂತೆ. ಚಿತ್ರದ ಸಾಹಸ ದೃಶ್ಯವನ್ನು ವಿನೋದ್‌ ಸಂಯೋಜಿಸಿದ್ದಾರೆ. ಅವರು ವಿಜಿಯ ಸ್ನೇಹಿತ. ಚಿಕ್ಕ ಒಂದು ಇಂಟ್ರೋಡಕ್ಷನ್‌ ಬಿಟ್‌ ಅನ್ನು ಕಂಫೋಸ್‌ ಮಾಡೋಕೆ ವಿನೋದ್‌ಗೆ ಕೊಟ್ಟರಂತೆ.

ಅದನ್ನು ಅವರು ಕಟ್ಟಿಕೊಟ್ಟ ರೀತಿಯಿಂದ ಖುಷಿಯಾದ ಚಂದ್ರು, ಚಿತ್ರದ ಎಲ್ಲಾ ಫೈಟ್‌ ಅನ್ನು ಅವರಿಗೆ ಕೊಟ್ಟಿದ್ದಾಗಿ ಹೇಳುತ್ತಾರೆ. ಉಳಿದಂತೆ ಚಿತ್ರ ಅಂದುಕೊಂಡಂತೆ ಮೂಡಿಬರುತ್ತಿರುವ ಖುಷಿ ವ್ಯಕ್ತಪಡಿಸಿದರು. ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಈಗ ನಾಯಕಿ ಹರಿಪ್ರಿಯಾ ಚಿತ್ರತಂಡ ಸೇರಿಕೊಂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದನ್ನು “ಯುಗ’ ಚಂದ್ರು ಮಾಡುತ್ತಿದ್ದಾರೆ. ಅವರು ಕೂಡಾ ಈ ಪಾತ್ರ ಮಾಡಲು ವಿಜಯ್‌ ಕಾರಣವಂತೆ. ಅವರಲ್ಲಿನ ಖಡಕ್‌ ಲುಕ್‌ ನೋಡಿ, ಚಿತ್ರದಲ್ಲಿ ವಿಲನ್‌ ಪಾತ್ರ ಕೊಟ್ಟಿದ್ದಾರೆ. ರವಿಶಂಕರ್‌ ಜೊತೆ ಜೊತೆಗೆ ಸಾಗಿಬರುವ ಪಾತ್ರವಂತೆ. 

ನಾಯಕ ವಿಜಯ್‌ ಹೆಚ್ಚೇನು ಮಾತನಾಡಲಿಲ್ಲ. “ಪ್ರತಿ ಸಿನಿಮಾದಲ್ಲೂ ಏನೋ ಹೊಸತನ ನೀಡಲು ಪ್ರಯತ್ನಿಸುತ್ತಿದ್ದೇವೆ. ಅದರಂತೆ ಇಲ್ಲೂ ಮಾಡುತ್ತಿದ್ದೇವೆ. ಖರ್ಚು ವಿಚಾರದಲ್ಲಿ ಚಂದ್ರು ತಲೆಕೆಡಿಸಿಕೊಳ್ಳುವುದಿಲ್ಲ.

ಸಿನಿಮಾಕ್ಕೇನು ಬೇಕೋ ಅದನ್ನು ಕೊಡುತ್ತಾರೆ. ಆ ವಿಚಾರದಲ್ಲಿ ಚಂದ್ರು ಅವರನ್ನು ಮೆಚ್ಚಬೇಕು’ ಎಂಬುದು ವಿಜಯ್‌ ಮಾತು. ಛಾಯಾಗ್ರಾಹಕ ಸತ್ಯ ಹೆಗಡೆ ಕೂಡಾ ವಿಜಿ ಮಾತನ್ನೇ ಪುನರುತ್ಛರಿಸಿದರು. ಸಾಹಸ ನಿರ್ದೇಶಕ ವಿನೋದ್‌ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.

ಟಾಪ್ ನ್ಯೂಸ್

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.