ಸಿನಿಮಾ ಮೂಡ್ಗೆ ಕ್ರೇಜಿಸ್ಟಾರ್
ಹೊಸ ಸಿನಿಮಾಕ್ಕೆ ಮುಹೂರ್ತ
Team Udayavani, Jun 21, 2019, 5:00 AM IST
ಮಗಳ ಮದುವೆ ಕಾರ್ಯದಲ್ಲಿ ಬಿಝಿಯಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಮತ್ತೆ ಸಿನಿಮಾ ಮೂಡ್ಗೆ ಬಂದಿದ್ದಾರೆ. ಅದರ ಮೊದಲ ಹಂತವಾಗಿ ಸದ್ದಿಲ್ಲದೇ ಅವರ ಹೊಸ ಸಿನಿಮಾ ಸೆಟ್ಟೆರಿದೆ. ಇತ್ತೀಚೆಗೆ ಕುಶಾಲನಗರದಲ್ಲಿ ರವಿಚಂದ್ರನ್ ಅವರ ಹೊಸ ಸಿನಿಮಾದ ಮುಹೂರ್ತ ನಡೆದಿದೆ. ಮ್ಯಾಥ್ಯೂ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಜಿತ್ ನಿರ್ದೇಶನವಿದೆ. ಎಲ್ಲಾ ಓಕೆ, ಹೊಸ ಚಿತ್ರದಲ್ಲಿ ಕ್ರೇಜಿಸ್ಟಾರ್ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ, ಅವರ ಗೆಟಪ್, ಪಾತ್ರ ಹೇಗಿರುತ್ತದೆ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಏಕೆಂದರೆ ಈಗಷ್ಟೇ ಚಿತ್ರೀಕರಣ ಮುಹೂರ್ತ ನಡೆದಿದೆ. ಚಿತ್ರತಂಡ ಇನ್ನೂ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಲಿಖೀತ್, ಶ್ರೀನಿವಾಸ ಪ್ರಭು, ಕೃಷ್ಣ ಮೋಹನ್, ಯತಿರಾಜ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಕೆ.ಡಿ.ವೆಂಕಟೇಶ್ ಸಾಹಸವಿದೆ.