ಡೆಮೋ ಪೀಸ್ ನಿಂದ ಮಾಸ್ಟರ್ ಪೀಸ್ ವರೆಗೆ


Team Udayavani, Feb 14, 2020, 5:30 AM IST

demo

“ನಾನಿಲ್ಲಿಗೆ ನಿರ್ದೇಶಕಿ ಆಗಬೇಕು ಅಂತ ಬಂದೆ. ಆದರೆ, ನಿರ್ಮಾಪಕಿಯಾದೆ…’
– ಇದು “ಸ್ಪರ್ಶ’ ರೇಖಾ ಮಾತು. ಹೌದು, ರೇಖಾ “ಡೆಮೊ ಪೀಸ್‌’ ಮೂಲಕ ನಿರ್ದೇಶಕಿ ಆಗಿರೋದು ಗೊತ್ತೇ ಇದೆ. ಆ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಹೇಳಲೆಂದೇ ತಮ್ಮ ತಂಡದ ಜೊತೆ ಆಗಮಿಸಿದ್ದರು ರೇಖಾ. ಮೊದಲು ಮಾತು ಶುರು ಮಾಡಿದ ಅವರು ಹೇಳಿದ್ದಿಷ್ಟು.

“ನನ್ನ ಮೊದಲ ನಿರ್ಮಾಣದ ಚಿತ್ರವಿದು. ಕೆಲವರನ್ನು ಹೊರತುಪಡಿಸಿದರೆ, ಇಲ್ಲಿರೋದು ಹೊಸಬರು. ನಿರ್ಮಾಣಕ್ಕೆ ಬಂದಿದ್ದು ಆಕಸ್ಮಿಕ. ನಾನು ಕಥೆ ಕೇಳಿದಾಗ ಈ ಸಿನಿಮಾ ಮಾಡಬೇಕು ಎನಿಸಿತು. ಅಂದುಕೊಂಡಿದ್ದಕ್ಕಿಂತ ಬಜೆಟ್‌ ಹೆಚ್ಚಾಯ್ತು. ಹಾಗಾಗಿ ನಿರ್ದೇಶಕರೂ ನಿರ್ಮಾಣಕ್ಕೆ ಸಾಥ್‌ ಕೊಟ್ಟಿದ್ದಾರೆ. ಸಿನಿಮಾ ಗೆಲ್ಲುವ ನಂಬಿಕೆ ಇದೆ. ಈಗಾಗಲೇ ಸ್ಯಾಟ್‌ಲೆçಟ್‌ ಹಕ್ಕು ಮಾರಾಟವಾಗಿದೆ. ಎಲ್ಲರೂ ಕಷ್ಟಪಟ್ಟು, ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಡಲ್ಲ ಎಂಬ ವಿಶ್ವಾಸವಿದೆ’ ಎಂಬುದು ರೇಖಾ ಮಾತು.

ನಿರ್ದೇಶಕ ವಿವೇಕ್‌ ಅವರಿಗೆ ಇದು ಮೊದಲ ಚಿತ್ರ. ಸಿನಿಮಾ ಕುರಿತು ಹೇಳಿಕೊಂಡ ವಿವೇಕ್‌, “ಇಲ್ಲಿ ಡೆಮೊ ಪೀಸ್‌ ಯಾಕೆ ಅಂದರೆ, ಏನೇ ಪ್ರಯೋಗ ಮಾಡುವ ಮುನ್ನ ಡೆಮೊ ಪೀಸ್‌ ಮೇಲೆಯೇ ಪ್ರಯೋಗ ಆಗುತ್ತೆ. ಅದು ಸಕ್ಸಸ್‌ ಆದರೆ ಮಾತ್ರ ಮಾಸ್ಟರ್‌ ಪೀಸ್‌. ಇಲ್ಲೊಂದು ಕಥೆ ಅದೇ ರೀತಿ ಸಾಗುತ್ತೆ. ಕಥೆಗೆ ಅನುಗುಣವಾಗಿ ಶೀರ್ಷಿಕೆ ಇದೆ. ಚಿತ್ರದಲ್ಲಿ ನಾಯಕ ಕಾಲೇಜ್‌ ಹುಡುಗ.

ಅವನಿಗೆ ದುಡ್ಡು ಮಾಡಬೇಕು, ದುಡ್ಡು ಇದ್ದರೆ ಎಲ್ಲವೂ ಸಿಗುತ್ತೆ ಅಂದುಕೊಂಡು ಮೋಜು-ಮಸ್ತಿಗೆ ಇಳಿಯುತ್ತಾನೆ. ಇಲ್ಲಿ ಅಪ್ಪ, ಅಮ್ಮನ ಸಂಬಂಧಗಳೂ ಇದೆ. ಪ್ರತಿ ಸ್ಟೂಡೆಂಟ್ಸ್‌ ಈ ಚಿತ್ರ ನೋಡಿದರೆ, ಅವರವರ ಅಪ್ಪ, ಅಮ್ಮ ಖಂಡಿತ ನೆನಪಾಗುತ್ತಾರೆ’ ಎಂದರು ವಿವೇಕ್‌.

ನಾಯಕ ಭರತ್‌ ಬೋಪಣ್ಣ ಅವರಿಗೆ ಇದು ಮೊದಲ ಸಿನಿಮಾ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಭರತ್‌ ಬೋಪಣ್ಣ, “ಚಿತ್ರದಲ್ಲಿ ಹರ್ಷ ಎಂಬ ಪಾತ್ರ ಮಾಡಿದ್ದಾರಂತೆ. ಈಗಿನ ಯುವಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರ ಮಾಡಲಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು, ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಇದೊಂದು ಪಕ್ಕಾ ಮನ­ರಂಜನೆಯ ಚಿತ್ರ’ ಎಂಬುದು ಭರತ್‌ ಹೇಳಿಕೆ.

ನಾಯಕಿ ಸೋನಾಲ್‌ ಮೊಂತೆರೋ ಅವರಿಗೆ ರೇಖಾ ಅವರು ಮಾಡಿದ ಒನ್‌ ಕಾಲ್‌ ಅಷ್ಟೇ ಸಾಕಾ­ಯ್ತಂತೆ. ಕಥೆ, ಪಾತ್ರ ಏನನ್ನೂ ಕೇಳದೆ, ಸಿನಿಮಾ ಮಾಡುವುದಾಗಿ ಒಪ್ಪಿದರಂತೆ. ಅವರಿಲ್ಲಿ ತುಂಬಾ ಜೋರು ಹುಡುಗಿಯ ಪಾತ್ರ ಮಾಡಿ­ದ್ದಾರಂತೆ.

ಇನ್ನು, ಚಕ್ರವರ್ತಿ ಚಂದ್ರ­ಚೂಡ್‌ ಕೂಡ ಇಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರಂತೆ. “ಇದು ಯಾವುದೇ ಬಿಲ್ಡಪ್‌ ಇರದ ಚಿತ್ರ. ಮುಗ್ಧರೆಲ್ಲರೂ ಸೇರಿ ಪ್ರೀತಿಯಿಂದ ಮಾಡಿರುವ “ಡೆಮೊ ಪೀಸ್‌’ ಇದು. ರೇಖಾ ಮೇಡಮ್‌ ನಟಿಯಾಗಿ ಹಣ ಹಾಕಿ ಸಿನಿಮಾ ಮಾಡಿದ್ದು ಹೆಮ್ಮೆ. ನಾನಿಲ್ಲಿ ಯುವಕ­ರನ್ನು ಹಾದಿ ತಪ್ಪಿಸುವ ಪಾತ್ರ ಮಾಡಿದರೆ, ನಾಯಕ ಭರತ್‌, ನನ್ನ ಹಾದಿಯನ್ನೇ ತಪ್ಪಿಸುವ ಪಾತ್ರ ಮಾಡಿದ್ದಾನೆ. ಒಳ್ಳೆಯ ತಂಡ, ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎಂದರು ಚಕ್ರವರ್ತಿ ಚಂದ್ರಚೂಡ್‌.

ಅರ್ಜುನ್‌ ರಾಮ್‌ ಸಂಗೀತವಿದ್ದು, ಮೂರು ಹಾಡುಗಳನ್ನು ಕೊಟ್ಟಿದ್ದಾರಂತೆ. ರಾಜೇಶ್‌ ಕೃಷ್ಣ, ಸಂಚಿತ್‌ ಹೆಗ್ಡೆ , ಚಂದನ್‌ಶೆಟ್ಟಿ ಹಾಡಿದ್ದು ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂಬುದು ಅವರ ಮಾತು.

ಟಾಪ್ ನ್ಯೂಸ್

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.