ದಾಖಲೆ ಬರೆದ ಸಹಿಷ್ಣು


Team Udayavani, Feb 8, 2019, 12:30 AM IST

22.jpg

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ದಾಖಲೆ ಬರೆದ ಚಿತ್ರಗಳಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ ಕನ್ನಡದ “ಸಹಿಷ್ಣು’ ಚಿತ್ರ ಹೊಸದೊಂದು ದಾಖಲೆ ಬರೆದಿದೆ. ಹೌದು, ವಿಶ್ವದಲ್ಲೇ ಮೊದಲ ಬಾರಿಗೆ ಐ -ಫೋನ್‌ನಲ್ಲಿ 2.18 ಗಂಟೆ ಅವಧಿಯಲ್ಲಿ ಸಿಂಗಲ್‌ ಶಾಟ್‌ನಲ್ಲೇ ಚಿತ್ರೀಕರಣಗೊಂಡಿರುವ “ಸಹಿಷ್ಣು’ ಚಿತ್ರ “ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌’ಗೆ ಪಾತ್ರವಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಡಾ.ಸಂಪತ್‌ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣದ ಜೊತೆಗೆ ಚಿತ್ರದಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. ವಿಶೇಷವೆಂದರೆ, ಡಾ.ಸಂಪತ್‌ ಅವರ ಪ್ರಯತ್ನಕ್ಕೆ “ಇಂಡಿಯಾ ಬುಕ್‌ ಆಫ್ ರೆಕಾರ್ಡ್‌’ ದಾಖಲಾಗಿದ್ದಷ್ಟೇ ಅಲ್ಲ, “ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌’ನಲ್ಲೂ ದಾಖಲಾಗಿ ವಿಶ್ವದಾಖಲೆ ಬರೆದಿದೆ. ಅಂದಹಾಗೆ, ವಿದೇಶಕ್ಕೆ ಹೋಗಿ “ಗೋಲ್ಡನ್‌ ಬುಕ್‌ ಆಫ್ ವಲ್ಡ್‌ ರೆಕಾರ್ಡ್‌’ ದಾಖಲೆಯ ಪ್ರಮಾಣ ಪತ್ರ ಪಡೆಯಲು ಲಕ್ಷಾಂತರ ರುಪಾಯಿ ಖರ್ಚು ಆಗುತ್ತೆ ಎಂಬುದನ್ನು ಮನಗಂಡ ನಿರ್ದೇಶಕರು, ವಿದೇಶದಿಂದಲೇ ತಮ್ಮ ವಿಳಾಸಕ್ಕೆ ಬಂದಂತಹ ದಾಖಲೆ ಪ್ರಮಾಣ ಪತ್ರವನ್ನು ಖ್ಯಾತ ನಟ ರಜನಿಕಾಂತ್‌ ಮೂಲಕ ಪಡೆಯಬೇಕು ಎಂಬ ನಿರ್ಧಾರ ಮಾಡಿ, ಅವರನ್ನು ಭೇಟಿ ಮಾಡಿ ಕೊನೆಗೂ ಪ್ರಮಾಣ ಪತ್ರವನ್ನು ಅವರಿಂದ ಪಡೆದು ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ.

ಈ ಕುರಿತು ಹೇಳಿಕೊಳ್ಳುವ ನಿರ್ದೇಶಕ ಡಾ.ಸಂಪತ್‌, “ಚಿತ್ರದ ಪ್ರಯತ್ನ ಮೆಚ್ಚಿಕೊಂಡು ಅದಕ್ಕೆ ಅರ್ಹತೆ ಇದೆ ಎಂಬ ಕಾರಣಕ್ಕೆ ವಿಶ್ವದಾಖಲೆ ಪಟ್ಟ ದೊರೆತಿದೆ. ಆದರೆ, ಅಲ್ಲಿಗೆ ಹೋಗಿ ಪಡೆಯಲು ಸಾಧ್ಯವಾಗದಿದ್ದರಿಂದ, ವಿಳಾಸಕ್ಕೆ ಬಂದ ಪ್ರಮಾಣ ಪತ್ರವನ್ನು ರಜನಿಕಾಂತ್‌ ಅವರ ಮೂಲಕ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ, ಅವರ ಭೇಟಿ ಸುಲಭವಲ್ಲ. ವರ್ಷಕ್ಕೊಮ್ಮೆ ಅವರು ಮನ:ಶಾಂತಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆ ಎಂಬ ಮಾಹಿತಿ ತಿಳಿದು,  ಡೆಹರಾಡೂನ್‌ಗೆ ಹೋಗಿ, ಅಲ್ಲಿಂದ ಹೃಷಿಕೇಶ್‌ ತಲುಪಿದಾಗ ರಜನಿಕಾಂತ್‌ ಅವರು, ಮಿಲಿಟರಿ ಕ್ಯಾಂಪಸ್‌ ಕೇಂದ್ರಸ್ಥಾನವಾದ ರಾಣಿಕೇತು ಎಂಬ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದಾರೆಂದು ತಿಳಿದುಕೊಂಡೆ. ಹೇಗೋ, ಅವರ ಸ್ಥಳ ಪತ್ತೆ ಮಾಡಿ, ದೂರದ ಬೆಂಗಳೂರಿನಿಂದ ಭೇಟಿ ಮಾಡಲು ಬಂದಿದ್ದೇವೆ ಎಂದು ಅವರ ಆಪ್ತರಿಗೆ ವಿಷಯ ತಲುಪಿಸಿದಾಗ, ಕೊನೆಗೆ ರಜನಿಕಾಂತ್‌ ಅವರೇ, ಆತ್ಮೀಯವಾಗಿ ಬರಮಾಡಿಕೊಂಡು ಬಂದ ವಿಷಯವನ್ನೆಲ್ಲಾ ಕೇಳಿ, ಖುಷಿಗೊಂಡರು. ನಂತರ ಐದು ನಿಮಿಷಗಳ ಕಾಲ ಚಿತ್ರದ ತುಣುಕು ವೀಕ್ಷಿಸಿ, ವಿದೇಶದಿಂದ ಬಂದ ಕವರ್‌ ಅನ್ನು ಅವರೇ ತೆಗೆದು, ಅದರಲ್ಲಿದ್ದ ವಿಶ್ವದಾಖಲೆಯ ಪ್ರಮಾಣಪತ್ರವನ್ನು ನನಗೆ ನೀಡಿ, ಫ‌ಲಕವನ್ನು ಕೊರಳಿಗೆ ಹಾಕಿ ಸ್ವತಃ ಅವರ ಸಹಾಯಕನಿಗೆ ಚೆನ್ನಾಗಿ ಫೋಟೋ ತೆಗೆಯುವಂತೆ ಹೇಳಿದ್ದಲ್ಲದೇ, ಬಾಗಿಲುವರೆಗೂ ನಮ್ಮನ್ನು ಬೀಳ್ಕೊಟ್ಟು, ಇನ್ನೇನಾದರೂ ಬೇಕಿತ್ತಾ ಎಂಬ ಪ್ರೀತಿಯ ಅಭಿಮಾನ ತೋರಿಸಿದರು’ ಎಂದು ಸಂಪತ್‌ ಹೇಳಿಕೊಂಡರು.

ಅಂದಹಾಗೆ, ಪ್ರಸ್ತುತ ದೇಶದಲ್ಲಿ ನಡೆಯುವ ಸೂಕ್ಷ್ಮ ವಿದ್ಯಮಾನ ಕುರಿತ ಅಂಶಗಳು ಚಿತ್ರದ ಹೈಲೈಟ್‌. ಒಂದೇ ಟೇಕ್‌ನಲ್ಲಿ ಚಿತ್ರಿಸಿರುವ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು’ ಪ್ರಮಾಣ ಪತ್ರ ನೀಡಿದೆ. ಚಿತ್ರೀಕರಣಕ್ಕೂ ಮುನ್ನ, ಸಾಕಷ್ಟು ರಿಹರ್ಸಲ್‌ ಕೂಡ ಮಾಡಿದೆ ಚಿತ್ರತಂಡ.

ಅಂದಹಾಗೆ, ನಿರ್ದೇಶಕರು ಈ ನಡುವೆಯೇ “ಸಹಿಷ್ಣು’ ಚಿತ್ರವನ್ನು ಐ-ಫೋನ್‌ನಲ್ಲಿ ಚಿತ್ರೀಕರಿಸಿದ ಕುರಿತು ಮಂಡಿಸಿದ ಪ್ರಬಂಧಕ್ಕೆ ವಲ್ಡ್‌ ರೆಕಾರ್ಡ್‌ ಯೂನಿರ್ವಸಿಟಿ ಪ್ರಬಂಧ ಪರಿಗಣಿಸಿ, ಗೋಲ್ಡ್‌ಮೆಡಲ್‌ನೊಂದಿಗೆ ಪಿಎಚ್‌ಡಿ ಪದವಿಯನ್ನು ವಿಯಟ್ನಾಂ ದೇಶದ ಹೋಚಿಮನ್‌ ನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗಿದೆ. ಕನ್ನಡ ನಿರ್ದೇಶಕನೊಬ್ಬ ವಿಶ್ವದಲ್ಲಿ ಸಿನಿಮಾ ಕುರಿತು ಪ್ರಬಂಧ ಮಂಡಿಸಿ, ಗೋಲ್ಡ್‌ಮೆಡಲ್‌ ಹಾಗು ಪಿಎಚ್‌ಡಿ ಪದವಿ ಪಡೆದದ್ದು ಮೊದಲು. ಇಷ್ಟರಲ್ಲೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ನಿರ್ದೇಶಕರು ತಯಾರಿ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.