ಪಾರ್ಕ್‌ನಲ್ಲೇ ತಯಾರಾದ ಜಯಮಹಲ್‌!


Team Udayavani, Dec 29, 2017, 10:07 AM IST

29-5.jpg

ಸಾಮಾನ್ಯವಾಗಿ ಸಿನಿಮಾದ ಹಾಡುಗಳು ಹುಟ್ಟಿದ ಸಮಯದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ರೋಡಲ್ಲೋ, ಬಾತ್‌ರೂಮಲ್ಲೋ ಅಥವಾ ಇನ್ನಾವುದೋ ಸ್ಥಳದಲ್ಲೋ ಹಾಡು ಹುಟ್ಟಿದ ಬಗ್ಗೆ ಸ್ವತಃ ಗೀತರಚನೆಕಾರರೇ ಹೇಳಿಕೊಂಡಿರುವುದುಂಟು. ಇನ್ನು, ಕಥೆ, ಚಿತ್ರಕಥೆ ರೆಡಿ ಮಾಡೋಕೆ, ಒಂದು ಕಚೇರಿಯೋ, ಹೋಟೆಲ್‌ನ ಕೊಠಡಿಯೋ ಬಳಸುವುದುಂಟು. ಆದರೆ, ಒಂದು ಸಿನಿಮಾದ ಚಿತ್ರಕಥೆ, ಸಂಭಾಷಣೆ ಹುಟ್ಟಿದ್ದು ಎರಡು ಪಾರ್ಕ್‌ನಲ್ಲಿ ಅಂದರೆ ನಂಬಲೇಬೇಕು. ಹೌದು, ಅದು “ಜಯಮಹಲ್‌’ ಚಿತ್ರ. ಈ ಚಿತ್ರದ ಮೂಲಕ ಹೃದಯ ಶಿವ ನಿರ್ದೇಶಕರಾಗುತ್ತಿದ್ದಾರೆ. ಅವರು ತಮ್ಮ ಮೊದಲ ಚಿತ್ರ “ಜಯಮಹಲ್‌’ ಚಿತ್ರದ ಸಂಭಾಷಣೆ ಬರೆದಿದ್ದು ಕಬ್ಬನ್‌ಪಾರ್ಕ್‌ ನಲ್ಲಿ. ಅಷ್ಟೇ ಅಲ್ಲ, ಚಿತ್ರಕತೆ ಬರೆದಿದ್ದು ಲಾಲ್‌ಬಾಗ್‌ನಲ್ಲಿ. ಸಿನಿಮಾ ಕುರಿತಂತೆ ಸಾಕಷ್ಟು ಚರ್ಚೆಗಳನ್ನೆಲ್ಲ ನಡೆಸಿದ್ದು ಸಹ ಪಾರ್ಕ್‌ಗಳಲ್ಲಿ ಅನ್ನುವುದು ವಿಶೇಷ.

ನಿರ್ದೇಶಕ ಹೃದಯಶಿವ ಸುಮಾರು 100ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರೂ ಅವರಿಗೆ ಎಲ್ಲೋ ಒಂದು ಕಡೆ ನಿರ್ದೇಶನ ಮಾಡುವ ಆಸೆ ಇತ್ತು. ಆದರೆ, ಬರಹಗಾರರಿಗೆ ನಿರ್ದೇಶನ ಪಟ್ಟ ಕೊಟ್ಟರೆ ಹೇಗೋ, ಏನೋ ಅಂತ ಹಲವು ನಿರ್ಮಾಪಕರು ಕಥೆ ಕೇಳಿ ಸುಮ್ಮನಾಗಿದ್ದರಿಂದ ಅವರಿಗೆ ಬೇಸರವಾಗಿದ್ದೂ ನಿಜವಂತೆ. ಕೊನೆಗೆ  ಎರಡು ವರ್ಷಗಳ ಕಾಲ ಮುಂಬೈಗೆ ತೆರಳಿ ಅಲ್ಲಿನ ಗ್ರಂಥಾಲಯದಲ್ಲಿ ತಂತ್ರಜ್ಞಾನ ಕುರಿತಾದ ಒಂದು ಪುಸ್ತಕ ಓದಿ, ಅದರಿಂದ ಸಾಕಷ್ಟು ವಿಷಯ ತಿಳಿದಿದ್ದಾರೆ. ಕೊನೆಗೆ ಸಿನಿಮಾ ಮಾಡೋಕೆ ಸಾಕಷ್ಟು ಸೈಕಲ್‌ ತುಳಿದ ಬಳಿಕ ತನ್ನೂರಿಗೆ ಹಿಂದಿರುಗಿದ್ದಾರೆ. ಆಗ ಸಿಕ್ಕಿದ್ದು ಅವರ ಗೆಳೆಯ ಎಂ.ರೇಣುಕ ಸ್ವರೂಪ್‌. ಹೃದಯ ಶಿವ ಅವರ ಸಂಕಟ ನೋಡಿ, ತಾವೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆಗ ಶುರುವಾದ ಜರ್ನಿ ಈಗ “ಜಯಮಹಲ್‌’ ಮುಗಿದು ರಿಲೀಸ್‌ಗೆ ಅಣಿಯಾಗಿದೆ. ಹೃದಯಶಿವ ಅವರೇ ಚಿತ್ರಕ್ಕೆ ಸಾಹಿತ್ಯ, ಚಿತ್ರಕತೆ, ಸಂಭಾಷಣೆ ಜವಬ್ದಾರಿ ಹೊತ್ತು ನಿರ್ದೇಶನ ಮಾಡಿದ್ದಾರೆ.

ಇನ್ನು, ಚಿತ್ರದಲ್ಲಿ ನೀನಾಸಂ ಅಶ್ವತ್ಥ್ ಅವರು ಪ್ರಾಂಶುಪಾಲ ಪಾತ್ರದಲ್ಲಿ ನಟಿಸಿದ್ದು, ವಾಸ್ತವತೆಯನ್ನು ನಂಬುವ, ವಾದಿಸುವ ಮತ್ತು ಸಂಪ್ರದಾಯಸ್ಥ ನಾಗಿರುವ ಮೂರು ಶೇಡ್‌ಗಳಲ್ಲಿ ನಟಿಸಿದ್ದಾರೆ. ಅದೊಂಥರಾ ನಾಯಕನ ಪಾತ್ರ ಎನ್ನಬಹುದು. ಅದನ್ನೆಲ್ಲಾ ಹೇಳಿಕೊಂಡು ಖುಷಿಗೊಂಡರು ನೀನಾಸಂ ಅಶ್ವತ್ಥ್. ಶುಭಾ ಪೂಂಜಾ ಇಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರದು ವಿದೇಶದಿಂದ ಭಾರತಕ್ಕೆ ಮರಳುವ ಪಾತ್ರವಂತೆ. ಇದೊಂದು ಹಾರರ್‌  ಥ್ರಿಲ್ಲರ್‌ ಅಂಶಗಳನ್ನು ಹೊಂದಿರುವ ಈ ಚಿತ್ರ ಹೊಸ ತರಹದ್ದು ಎನುತ್ತಾರೆ ಅವರು.

ಕರಿಸುಬ್ಬು ಗ್ರಂಥಪಾಲಕರಾಗಿ ನಟಿಸಿದ್ದಾರಂತೆ. ಸಂಕಲನಕಾರ ಎನ್‌.ಎಂ.ವಿಶ್ವ ಅವರು ಛಾಯಾಗ್ರಾಹಕ ನಾಗಾರ್ಜುನ್‌ ಅವರ ಕ್ಯಾಮೆರಾ ಕೆಲಸವನ್ನು ಹೊಗಳಿದರು. ವಕೀಲರಾಗಿರುವ ಮೋಟಕಾನಹಳ್ಳಿ ಎಂ.ರೇಣುಕ ಸ್ವರೂಪ್‌ ಇಲ್ಲಿಯವರೆವಿಗೂ 1.75 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡರು. ಜ್ಯೂಡ ಸ್ಯಾಂಡಿ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇದು ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗಿರುವ ಚಿತ್ರ. ತಮಿಳಿನಲ್ಲಿ “ಮಾತಂಗಿ’ ಹೆಸರಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಇಷ್ಟೆಲ್ಲಾ ಹೇಳಿಕೊಂಡಿದ್ದು ಚಿತ್ರದ ಆಡಿಯೋ ಸಿಡಿ ಬಿಡುಗಡೆಯಲ್ಲಿ.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.