ಸ್ಮಶಾನದೊಳಗೊಂದು ಲವ್‌ ಸ್ಟೋರಿ: ನ್ಯೂ ವರ್ಶನ್‌ನಲ್ಲಿ ಗುರು


Team Udayavani, Apr 28, 2017, 10:23 AM IST

28-SUCHI-6.jpg

ಸಿನಿಮಾದಿಂದ ಸಿನಿಮಾಕ್ಕೆ ನಾನು ಬದಲಾಗುತ್ತಾ ಹೋಗುತ್ತಿದ್ದೇನೆ …’ – ಹೀಗೆಂದರು ಗುರುಪ್ರಸಾದ್‌. ಅದಕ್ಕೆ ಸಾಕ್ಷಿ ಎಂಬಂತೆ
ಸುತ್ತಲಿನ ವಾತಾವರಣ ಹಾಗೂ ವ್ಯವಸ್ಥೆ ಇತ್ತು. ಸಾಮಾನ್ಯ ವಾಗಿ ಗುರುಪ್ರಸಾದ್‌ ಸಿನಿಮಾಗಳ ಮುಹೂರ್ತ ಸಿಂಪಲ್ಲಾಗಿ ಆಗುತ್ತಿತ್ತು. ಆದರೆ, ಈ ಬಾರಿ ಅವರ ಹೊಸ ಚಿತ್ರ “ಅದೇಮಾ’ ಮುಹೂರ್ತವನ್ನು ಅದ್ಧೂರಿಯಾಗಿ ಮಾಡಿ ದ್ದರು. ಕಂಠೀರವ ಸ್ಟುಡಿಯೋದ ಹೊಸ ಫ್ಲೋರ್‌ ಅನ್ನು ಮದುವೆ ಛತ್ರದಂತೆ ಸಿಂಗರಿಸಿದ್ದರು. ಹೊಸದಾಗಿ ಬಂದವರಿಗೆ ಯಾವುದೋ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ರಿಸೆಪ್ಷನ್‌ಗೆ ಬಂದಂತೆ ಭಾಸವಾಗು ವಂತಿತ್ತು. ಅಲ್ಲಿಗೆ ಗುರು ಅವರ “ಬದಲಾದ’ ಮಾತಿನಲ್ಲಿ ಸತ್ಯ ಕಾಣುತ್ತಿತ್ತು. ಗುರುಪ್ರಸಾದ್‌ “ಅದೇಮಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲಿ ಬಾರದಿರುವಂತಹ ಒಂದು ವಿಭಿನ್ನ ಕಥೆಯನ್ನು ಹೇಳಲಿದ್ದಾರಂತೆ.

ಅವರ ಈ ವಿಭಿನ್ನ ಕಥೆಗೆ ಅನೂಪ್‌ ಸಾ.ರಾ.ಗೋವಿಂದು ನಾಯಕ. “ಕಥೆ ತುಂಬಾ ಭಿನ್ನವಾಗಿದೆ. ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲೇ ಇಂತಹ ಸಿನಿಮಾ ಬಂದಿಲ್ಲ. ಈ ತರಹದ್ದೊಂದು ಕಥೆಯನ್ನು ಯಾರೂ ಟಚ್‌ ಮಾಡಿಲ್ಲ. ಆ ಪ್ರಯತ್ನವನ್ನು ನಾನೀಗ ಮಾಡುತ್ತಿದ್ದೇನೆ’ ಎಂದು ವಿಶ್ವಾಸದಿಂದ ಹೇಳಿಕೊಂಡರು ಗುರುಪ್ರಸಾದ್‌. ಒಂಭತ್ತು ವರ್ಷಗಳ ಹಿಂದೆ ಗುರುಪ್ರಸಾದ್‌ ಮಾಡಿಕೊಂಡಿರುವ ಕಥೆ ಇದಂತೆ. ಹಾಗಂತ ಕಥೆ ಒಂಭತ್ತು ವರ್ಷ ಹಳೆಯದಾಗಿಲ್ಲ. ಅದನ್ನು ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಮಾಡಿಕೊಂಡು ಬಂದಿದ್ದಾರಂತೆ. ಒಂಭತ್ತು ವರ್ಷಗಳ ಕಥೆ ಯಾಕೆ ಈಗ ಸಿನಿಮಾವಾಗುತ್ತಿದೆ ಎಂದರೆ, “ನಿರ್ಮಾಪಕರು ಧೈರ್ಯ
ಮಾಡಲಿಲ್ಲ’ ಎಂಬ ಉತ್ತರ ಗುರುವಿನಿಂದ ಬರುತ್ತದೆ. ಈ ಹಿಂದೆ ಈ ತರಹದ ಒಂದು ಲೈನ್‌ ಇದೆ, ಸಿನಿಮಾ ಮಾಡುವ ಎಂದು ಕೆಲವು ನಿರ್ಮಾಪಕರಿಗೆ ಹೇಳಿದಾಗ “ಇದು ವಕೌìಟ್‌ ಆಗುತ್ತಾ, ಜನ ಇದನ್ನು ಸ್ವೀಕರಿಸು ತ್ತಾರಾ’ ಎಂದು ಸಂದೇಹ ವ್ಯಕ್ತಪಡಿಸಿದರಂತೆ. ಹಾಗಾಗಿ, ಒಂಭತ್ತು ವರ್ಷ ಗುರು ತಲೆಯ ಲಾಕರ್‌ನಲ್ಲೇ ಇತ್ತು “ಅದೇಮಾ’. ಈಗ ನಿರ್ಮಾಪಕ ಶ್ರೀಧರ್‌ ರೆಡ್ಡಿ ಸಿನಿಮಾ ಮಾಡಲು
ಮುಂದೆ ಬಂದಿದ್ದಾಗಿ ಹೇಳಿಕೊಂಡರು ಗುರು. “ಅದೇಮಾ’ ಟೈಟಲ್‌ನ ಅರ್ಥವೇನು, ಆ ಟೈಟಲ್‌ ಏನು ಸೂಚಿಸುತ್ತದೆ ಎಂಬುದನ್ನು ಈಗಲೇ ಬಿಟ್ಟುಕೊಡಲು ಗುರುಪ್ರಸಾದ್‌ ರೆಡಿಯಿಲ್ಲ. ಮುಂದಿನ ದಿನಗಳಲ್ಲಿ “ಅದೇಮಾ’ ಅಂದ ರೇನು, ಅದರ ಹಿಂದಿನ ಅರ್ಥವೇನು ಎಂಬುದನ್ನು ಹೇಳುತ್ತಾರಂತೆ.

ಚಿತ್ರದ ಬಹುತೇಕ ಚಿತ್ರೀಕರಣ ಸ್ಮಶಾನದಲ್ಲೇ ನಡೆಯುತ್ತದೆಯಂತೆ. ಹಾಗಾಗಿ, ಸ್ಮಶಾನಗಳಿಗಾಗಿ ಗುರುಪ್ರಸಾದ್‌ ಹುಡುಕಾಟ ನಡೆಸುತ್ತಿದ್ದಾರೆ. ಮೊದಲೇ ಹೇಳಿದಂತೆ ಗುರುಪ್ರಸಾದ್‌ ಈ ಸಿನಿಮಾ ಮೂಲಕ ಸಾಕಷ್ಟು ಬದಲಾಗುತ್ತಿದ್ದಾರೆ. “ನಾನು ಸಿನಿಮಾದಿಂದ ಸಿನಿಮಾಕ್ಕೆ ಬದಲಾಗುತ್ತಾ ಹೋಗುತ್ತೇನೆ. ಈ ಹಿಂದೆ ಒಂದು ಮನೆ ಅಥವಾ ಇನ್ಯಾವುದೋ ಒಂದು ಲೊಕೇಶನ್‌ನಲ್ಲಿ ಸಿನಿಮಾ
ಮುಗಿಸುತ್ತಿದ್ದ ನಾನು ಈ ಸಿನಿಮಾವನ್ನು ಸಂಪೂರ್ಣ ಔಟ್‌ಡೋರ್‌ನಲ್ಲಿ ಮಾಡುತ್ತಿ ದ್ದೇನೆ. ಈ ಹಿಂದೆ ನೋಡಿರದಂತಹ ಕರ್ನಾಟಕದ
ಲೊಕೇಶನ್‌ ಗಳಲ್ಲಿ ಚಿತ್ರೀಕರಣ ಮಾಡುತ್ತೇನೆ. ಜೊತೆಗೆ ತಾರಾಬಳಗವೂ ದೊಡ್ಡದಿರುತ್ತದೆ. ಈ ಹಿಂದೆ ಲಕ್ಷದಲ್ಲಿ ಸಿನಿಮಾ ಮುಗಿಸುತ್ತಿದ್ದ ನಾನು ಈಗ ಕೋಟಿಯಲ್ಲಿ ಸಿನಿಮಾ ಮಾಡುತ್ತಿದ್ದೇನೆ’ ಎನ್ನುವ ಗುರು, ಕ್ಲೋಸಪ್‌ ಶಾಟ್‌ನಿಂದ ವೈಡ್‌ಗೆ
ಬಂದಿರುವುದಾಗಿ ಹೇಳಲು ಮರೆಯಲಿಲ್ಲ. ನಾಯಕಿ ಗಾಗಿ ಹುಡುಕಾಟ ನಡೆಸುತ್ತಿದ್ದು, ಆಡಿ ಷನ್‌ ಮೂಲಕ ಆಯ್ಕೆ ಮಾಡಲಾಗುತ್ತದೆಯಂತೆ.  ಇನ್ನು, ನಾಯಕ ಅನೂಪ್‌ ಅವರನ್ನು ಗುರು “ಡವ್‌’ ಸಿನಿಮಾ ಸಮಯದಿಂದಲೇ ಗಮನಿಸು
ತ್ತಿದ್ದರಂತೆ. ಆ ಚಿತ್ರದ ನಿರ್ದೇಶಕ ಸಂತುವಿನಲ್ಲೂ ಅನೂಪ್‌ ಬಗ್ಗೆ ವಿಚಾರಿಸಿದ್ದರಂತೆ ಗುರು. ಎಲ್ಲಾ ಕಡೆಯಿಂದ ಪಾಸಿಟಿವ್‌ ರಿಪೋರ್ಟ್‌. ಹಾಗಾಗಿ, “ಅದೇಮಾ’ಕ್ಕೆ ಅನೂಪ್‌ ಆಯ್ಕೆಯಾಗಿದ್ದಾಗಿ ಹೇಳುವ ಗುರು, ಈ ಸಿನಿಮಾ ಮೂಲಕ ಅನೂಪ್‌
ಅವರನ್ನು ಇನ್ನೊಂದು ರೇಂಜ್‌ಗೆ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಾರೆ. ಗುರುಪ್ರಸಾದ್‌ ನಿರ್ದೇಶನದಲ್ಲಿ ನಟಿಸುತ್ತಿರುವ ಅನೂಪ್‌ಗೆ ಒಳ್ಳೆಯ ಗರಡಿ ಸೇರಿದ ಖುಷಿ. ಯಾವುದೇ ಸಿನಿಮಾಕ್ಕೂ ಹೋಲಿಸಲಾಗದ ಲವ್‌ಸ್ಟೋರಿಯನ್ನು ಗುರು ಮಾಡಿಕೊಂಡಿರುವು ದಾಗಿ ಖುಷಿಯಿಂದ ಹೇಳಿದರು ಅನೂಪ್‌.

ನಿರ್ಮಾಪಕ ಶ್ರೀಧರ್‌ ರೆಡ್ಡಿ ಚೆನ್ನಾಗಿ ಸಿನಿಮಾ ಮಾಡಿ ಗೆಲ್ಲಿಸಿಕೊಟ್ಟರೆ ಮುಂದೆ ಸಿನಿಮಾ ಮಾಡುತ್ತೇನೆ, ಇಲ್ಲವಾದರೆ ಚಿತ್ರರಂಗ ಬಿಟ್ಟು ಓಡುತ್ತೇನೆ ಎಂಬ ಎಚ್ಚರಿಕೆಯನ್ನು ಗುರುಗೆ ಮೊದಲೇ ಕೊಟ್ಟಿದ್ದಾರಂತೆ. ಮಗ ನಾಯಕನಾ ಗಿರುವ ಚಿತ್ರಕ್ಕೆ ಶುಭ ಕೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಕೂಡಾ ಬಂದಿದ್ದರು. ಯಾವತ್ತಿಗೂ ನಿರ್ಮಾಪಕರ ಪರ
ವಾಗಿ ನಿಲ್ಲುವಂತೆ ತಮ್ಮ ಮಗನಿಗೆ ಕಿವಿಮಾತು ಹೇಳಿದರು. ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತವಿದೆ. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.