ಸಂಭ್ರಮಕ್ಕೆ ಮುತ್ತು ಸಾಕ್ಷಿ


Team Udayavani, Jan 10, 2020, 4:32 AM IST

18

“ನಿರ್ದೇಶಕರು ಕಥೆ ಮತ್ತು ಪಾತ್ರ ವಿವರಿಸಿದಾಗ ಅದೇಕೋ ಓವರ್‌ ಆಗಿದೆಯಲ್ಲಾ ಅನಿಸಿತು. ಕೊನೆಗೆ ಈಗಿನ ಯೂಥ್‌ಗೆ ಬೇಕಾದ ವಿಷಯ ಇದೆಯಲ್ವಾ ಅಂದುಕೊಂಡು ಚಳಿ ಬಿಟ್ಟು ನಟಿಸೋಕೆ ಮುಂದಾದೆ. ಹಾಗಾಗಿ ಈ ಚಿತ್ರ ಬೋಲ್ಡ್‌ ಆಗಿ ಕಾಣುತ್ತಿದೆ..’

– ಹೀಗೆ ಹೇಳಿದ್ದು ರಾಜ್‌ ಸೂರ್ಯನ್‌. ಅವರು ಹೇಳಿಕೊಂಡಿದ್ದು, “ಮೈ ನೇಮ್‌ ಈಸ್‌ ರಾಜಾ’ ಚಿತ್ರದ ಬಗ್ಗೆ. ಚಿತ್ರದ ಟೀಸರ್‌ ಹಾಗು ಸಾಂಗ್‌ ನೋಡಿದವರಿಗೆ ಅಷ್ಟೊಂದು ರೊಮ್ಯಾನ್ಸ್‌ ಸೀನ್‌ ಬೇಕಿತ್ತಾ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಸ್ವತಃ ರಾಜ್‌ ಸೂರ್ಯನ್‌, ಯಾಕೆ ಹಾಗೆ ನಟಿಸಿದ್ದು ಎಂಬುದಕ್ಕೆ ಕಾರಣ ಕೊಡಲು ಮುಂದಾದರು. “ಚಿತ್ರದ ಕಥೆ ಆಗಿತ್ತು. ಪಾತ್ರ ಕೂಡ ಹಾಗೆಯೇ ಇರಬೇಕಿತ್ತು. ಹಾಗಾಗಿ ಮಾಡಿದ್ದೇನೆ. ಅದು ಬಿಟ್ಟರೆ ಬೇರೇನೂ ಇಲ್ಲ. ನಮಗೂ “ಎ’ ಪ್ರಮಾಣ ಪತ್ರ ಬೇಕಿರಲಿಲ್ಲ. ಯು/ಎ ಪ್ರಮಾಣ ಪತ್ರಕ್ಕೆ ಪ್ರಯತ್ನ ಪಟ್ಟೆವು. ಆದರೆ, ಸಿಕ್ಕಾಪಟ್ಟೆ ಮ್ಯೂಟ್‌, ಕಟ್‌ ಅಂದಾಗ, ಕೊನೆಗೆ “ಎ’ ಪ್ರಮಾಣ ಪತ್ರಕ್ಕೆ ತೃಪ್ತಿಪಡಬೇಕಾಯಿತು. ಟೀಸರ್‌, ಸಾಂಗ್‌ ಓವರ್‌ ಆಗಿದ್ದರೂ, ಇಲ್ಲಿ ಸಂದೇಶವಿದೆ. ನನ್ನ ಹಿಂದಿನ ಎರಡು ಚಿತ್ರಗಳಲ್ಲೂ ಹೆಣ್ಣಿಗೆ ಗೌರವ ಕೊಡಲಾಗಿದೆ. ಇಲ್ಲಿ ಅದಕ್ಕಿಂತ ಜಾಸ್ತಿ ಗೌರವ ಕೊಡಲಾಗಿದೆ. ಸಿನಿಮಾ ನೋಡಿದವರಿಗೆ ಇಲ್ಲಿ ಗಂಡ, ಹೆಂಡತಿಯ ಬಾಂಧವ್ಯ ಹೇಗಿದೆ ಅನ್ನೋದು ಗೊತ್ತಾಗುತ್ತೆ’ ಎಂದರು ರಾಜ್‌ ಸೂರ್ಯನ್‌.

ನಿರ್ದೇಶಕ ಅಶ್ವಿ‌ನ್‌ ಮಾತನಾಡಿ, “ಇದು ಮನರಂಜನೆಯ ಸಿನಿಮಾ. ಇಲ್ಲಿ ಗಂಡ, ಹೆಂಡತಿ ಎನ್‌ಆರ್‌ಐ ಕಪಲ್ಸ್‌. ಅವರು ಮುತ್ತಿನ ಮೂಲಕವೇ ಸಂಭ್ರಮದ ಕ್ಷಣವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಆ ರೀತಿಯ ದೃಶ್ಯಗಳು ಇಲ್ಲಿವೆ. ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದೆಯಷ್ಟೇ’ ಎಂಬುದು ಅವರ ಮಾತು.

ನಿರ್ಮಾಪಕ ಪ್ರಭುಸೂರ್ಯ ಅವರಿಗೆ ಒಳ್ಳೆಯ ಚಿತ್ರ ಮಾಡಿದ ಖುಷಿ. ನಮಗೂ ಟೀಸರ್‌, ಸಾಂಗ್‌ ಬಗ್ಗೆ ಕಾಮೆಂಟ್ಸ್‌ ಬಂತು. ಆದರೆ, ಪೂರ್ಣ ಚಿತ್ರ ನೋಡಿದರೆ ಆ ಸೀನ್‌ ಯಾಕೆ ಅನ್ನೋದು ಗೊತ್ತಾಗುತ್ತೆ. ಎಂದಿನಂತೆ ನಿಮ್ಮ ಸಹಕಾರ ಇರಲಿ’ ಎಂದರು ಪ್ರಭು ಸೂರ್ಯ. ಸಂಗೀತ ನಿರ್ದೇಶಕ ಎಲ್ವಿನ್‌ ಜೋಶ್ವ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರೆ.

ಟಾಪ್ ನ್ಯೂಸ್

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.