ಸಮಸ್ಯೆಗಳ ಧೂಳೀಪಟ; ಹಾಡುಗಳ ಚಿಟಪಟ


Team Udayavani, Nov 10, 2017, 6:20 AM IST

chitapata.jpg

“ಸಾರಿ ಕಣೇ’ ಎಂಬ ಚಿತ್ರ ಮಾಡಿದ್ದ ರೂಪೇಶ್‌ ಕುಮಾರ್‌, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರ ಮಾಡಿ ಮುಗಿಸಿದ್ದಾರೆ. “ಸಾರಿ ಕಣೇ’ ಚಿತ್ರದಲ್ಲಿ ಹೀರೋ ಆಗಿ ನಟಿಸುವುದರ ಜೊತೆಗೆ ಅವರೇ ನಿರ್ದೇಶನ ಮಾಡಿದ್ದರು. ಈ ಬಾರಿ ಅವರು ನಿರ್ದೇಶನದ ಜವಾಬ್ದಾರಿಯನ್ನು ರಶ್ಮಿ ಎನ್ನುವವರಿಗೆ ವಹಿಸಿಕೊಟ್ಟಿದ್ದು, ಚಿತ್ರದ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಅಂದು ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ವಿಶೇಷ ಅತಿಥಿಗಳಾÂರೂ ಇರಲಿಲ್ಲ. ಚಿತ್ರದ ಹಾಡುಗಳನ್ನು ಹೊರತಂದಿರುವ ಲಹರಿ ವೇಲು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು. ಕಳೆದ ಎರಡೂ¾ರು ತಿಂಗಳುಗಳಿಂದ ಯಾವುದೇ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಳ್ಳದ ವೇಲುಗೆ ಆ ಕುರಿತು ಕೇಳಲಾಯಿತು. ರಾಜಕೀಯಕ್ಕೆ ಸೇರಿದ ನಂತರ, ಚಿತ್ರರಂಗ ಎಲ್ಲಾದರೂ ಮರೆತು ಹೋಯಿತಾ ಎಂಬ ಪ್ರಶ್ನೆಗೆ, “ಯಾವುದೇ ಕಾರಣಕ್ಕೂ ಚಿತ್ರರಂಗದಿಂದ ದೂರವಾಗುವುದಿಲ್ಲ’ ಎಂದು ಶಪಥ ಮಾಡುತ್ತಾ ಮಾತಾಡಿದರು. “ನಾನು ಪಕ್ಷಕ್ಕೆ ಸೇರಿದ ಸಂದರ್ಭದಲ್ಲಿ, ಒಳ್ಳೆಯ ಸ್ವಾಗತ ಸಿಕ್ಕಿತು. ರಾಜಕೀಯದಲ್ಲಿ ಮುಂದೆ ಹೇಗೋ ಗೊತ್ತಿಲ್ಲ, ಚಿತ್ರರಂಗವನ್ನು ಮಾತ್ರ ಬಿಡುವುದಿಲ್ಲ’ ಎಂದು ಹೇಳಿದರು.

ಅದಕ್ಕೂ ಮುನ್ನ ಚಿತ್ರತಂಡದವರೆಲ್ಲರೂ ನಾಲ್ಕಾ°ಲ್ಕು ಮಾತುಗಳನ್ನಾಡಿದರು. ಮೊದಲಿಗೆ ಮಾತನಾಡಿದ್ದು ನಿರ್ದೇಶಕಿ ರಶ್ಮಿ. ಅವರು ಎಂ.ಎಸ್‌.ಸಿ, ಎಂಟೆಕ್‌ ಮಾಡಿ ಸದ್ಯಕ್ಕೆ ಪಿಎಚ್‌ಡಿ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಕಥೆ, ಕವಿತೆ ಬರೆಯುತ್ತಿದ್ದರಂತೆ. “ಸಾರಿ ಕಣೇ’ಗೆ ಸಹಾಯಕರಾಗಿಯೂ ಕೆಲಸ ಮಾಡಿದ್ದರಂತೆ. ಈಗ ಮೊದಲ ಬಾರಿಗೆ ಅವರು ನಿರ್ದೇಶನ ಮಾಡಿದ್ದಾರೆ. ಹಾಗೆ ಭಡ್ತಿ ಪಡೆಯುವುದಕ್ಕೆ ಕಾರಣರಾದ ನಾಯಕ ರೂಪೇಶ್‌ಗೆ ಥ್ಯಾಂಕ್ಸ್‌ ಹೇಳುತ್ತಲೇ ಅವರು ಮಾತು ಶುರು ಮಾಡಿದರು. ಇಷ್ಟಕ್ಕೂ ಈ ಚಿತ್ರದ ಕಥೆಯೇನು ಎಂದು ಕೇಳಿದಾಗ, “ಒಬ್ಬ ಮನುಷ್ಯನ ಜೀವನದಲ್ಲಿ ನಡೆಯುವ ಹಲವು ಘಟನೆಗಳೇ ಈ ಚಿತ್ರದ ಕಥೆ. ಚಿತ್ರ ನೋಡುವ ಪ್ರೇಕ್ಷಕರು, ಚಿತ್ರದ ಕಥೆ ತಮ್ಮ ಜೀವನವನ್ನು ಹೋಲುತ್ತದೆ ಅಂದುಕೊಳ್ಳುವಷ್ಟರ ಮಟ್ಟಿಗೆ ನೈಜವಾಗಿದೆ’ ಎಂದರು.

ಇನ್ನು ನಾಯಕ ರೂಪೇಶ್‌ ಹೇಳುವಂತೆ, ಅವರ ಪಾತ್ರವು ಚಿತ್ರದ ಹೆಸರಿಗೆ ತಕ್ಕ ಹಾಗೆ ಇದೆಯಂತೆ. “ಹೀರೋಗೆ ಚಿತ್ರದಲ್ಲಿ ನಾನಾ ಕಷ್ಟಗಳು ಬರುತ್ತವೆ. ಅವನ್ನೆಲ್ಲಾ ಆತ ಹೇಗೆ ಧೂಳೀಪಟ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಹೊಟ್ಟೆಯ ಮೇಲೆ ಸಿಕ್ಸ್‌ ಪ್ಯಾಕ್‌ ಇರುವ ಬದಲು, ತಲೆಯೊಳಗಿದ್ದರೆ ಕಷ್ಟಗಳನ್ನು ಹೇಗೆ ಬಗೆಹರಿಸಬಹುದು ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ರೂಪೇಶ್‌. ಚಿತ್ರದಲ್ಲಿ ಅವರೆದುರು ಅರ್ಚನಾ, ಮುಕ್ತ ಮತ್ತು ಐಶ್ವರ್ಯ ನಾಯಕಿಯರಾಗಿ ನಟಿಸಿದ್ದಾರಂತೆ.

ಈ ಚಿತ್ರವನ್ನು ಬಾಗಲಕೋಟೆಯ ಸಿರಿಗಣ್ಣನವರ್‌ ನಿರ್ಮಾಣ ಮಾಡಿದರೆ, ಅವರಿಗೆ ಗಿರೀಶ್‌ ಮತ್ತು ನಿಂಗರಾಜ್‌ ಕೈಜೋಡಿಸಿದ್ದಾರೆ. ಇನ್ನು ಎ.ಟಿ. ರವೀಶ್‌ ಅವರ ಶಿಷ್ಯ ಅರುಣ್‌ ಶೆಟ್ಟಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.