ರಂಗಭೂಮಿ ಕಲಾವಿದರ ಹಿಕೋರಾ
ಸೈಕಲಾಜಿಕಲ್ ಥ್ರಿಲ್ಲರ್
Team Udayavani, Jan 3, 2020, 4:48 AM IST
ಅದೊಂದು ಪಾಳುಬಿದ್ದ ಕಟ್ಟಡ. ಅಲ್ಲಿನ ಸುತ್ತಮುತ್ತ ವಾತಾವರಣ ಕೂಡ ರಗಡ್ ಆಗಿಯೇ ಇತ್ತು. ಹಾಗೆ ಆ ಕಟ್ಟಡ ಸಮೀಪ ಹಾದುಹೋಗುತ್ತಿದ್ದಂತೆಯೇ, “ಏಳ್ಳೋ ಎದ್ದೇಳ್ಳೋ ಗುರಿ ಮುಟ್ಟುವ ತನಕ ನಿಲ್ಲದಿರೋ…’ ಎಂಬ ಹಾಡು ಕಿವಿಗಪ್ಪಳಿಸುತ್ತಿತ್ತು. ಮನೋಜ್ ಹಾಗೂ ಯಶವಂತ್ ಶೆಟ್ಟಿ ತಮ್ಮ ಸಹ ಕಲಾವಿದರ ಜೊತೆ ಹೆಜ್ಜೆ ಹಾಕುತ್ತಿದ್ದರು. ಮಾಸ್ಟರ್ ಅರವಿಂದ್ ಹೇಳಿದಂತೆ ಅವರೆಲ್ಲರೂ ಸ್ಟೆಪ್ ಹಾಕುತ್ತಿದ್ದರು. ಆ ಸೀನ್ ಓಕೆ ಆಗಿದ್ದೇ ತಡ, ಎಲ್ಲರಿಗೂ ಬ್ರೇಕ್ ಸಿಕ್ತು. ನಂತರ ಆ ಚಿತ್ರತಂಡ ಪತ್ರಕರ್ತರ ಮುಂದೆ ಮಾತುಕತೆಗೆ ಕುಳಿತುಕೊಂಡಿತು.
ಅಂದಹಾಗೆ, ಅದು “ಹಿಕೋರಾ’ ಚಿತ್ರತಂಡ. ಈ ಚಿತ್ರಕ್ಕೆ ಕೃಷ್ಣಪೂರ್ಣ ನಿರ್ದೇಶಕರು. ಪ್ರಮುಖ ಪಾತ್ರದಲ್ಲೂ ಅವರು ನಟಿಸುತ್ತಿದ್ದಾರೆ. ತಮ್ಮ ಚಿತ್ರದ ಬಗ್ಗೆ ಅವರು ಹೇಳಿದ್ದಿಷ್ಟು. “ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ. ಹಾಗಾಗಿ, ಸಿನಿಮಾ ಕಥೆ ಬಗ್ಗೆ ಸಣ್ಣದ್ದಾಗಿ ಹೇಳಿಕೊಂಡರೂ, ಚಿತ್ರದ ಕಥೆ ಬಿಟ್ಟುಕೊಟ್ಟಂತಾಗುತ್ತದೆ. ಕಥೆಯಲ್ಲಿ ನಿರ್ದೇಶಕ ಖನ್ನತೆಯಲ್ಲಿರುವ ಸಂದರ್ಭದಲ್ಲಿ ನಾಯಕರು ಉತ್ಸಾಹ ತುಂಬಲು ಸ್ವಾಮಿ ವಿವೇಕಾನಂದ ಅವರ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ..’ ಮಾತನ್ನು ಹಾಡಲ್ಲಿ ಕಟ್ಟಿಕೊಡಲಾಗಿದೆ. ಈಗಿನ ಯೂಥ್ಗೆ ಗುರಿಯಾಗಿರಿಸಿಕೊಂಡು ಬಳಸಿರುವ ಗೀತೆ ಅದು. ಸಾಗರ, ಜೋಗ, ಬೆಂಗಳೂರು ಸುತ್ತಮುತ್ತ ಈವರೆಗೆ ಶೇ. 97 ರಷ್ಟು ಚಿತ್ರೀಕರಣ ನಡೆದಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಕೃಷ್ಣ.
ಯಶ್ವಂತ್ ಶೆಟ್ಟಿ, “ಟಕ್ಕರ್’ ಹೀರೋ ಮನೋಜ್ ಗೀತೆಗೆ ಹೆಜ್ಜೆ ಹಾಕಿದ ಅನುಭವ ಹಂಚಿಕೊಂಡರು. ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ರಾಧಾಶ್ರೀ, ಸರ್ದಾರ್ ಸತ್ಯ, ಸ್ಪಂದನಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ರಮೇಶ್ಬಾಬು ಅವರ ಛಾಯಾಗ್ರಹಣವಿದೆ. ಈ ಹಿಂದೆ “ನೀನಾಸಂ’ನಲ್ಲಿ ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಊಟೋಪಚಾರ ನೋಡಿಕೊಳ್ಳುತ್ತಿದ್ದ ರತ್ನಾ ಶ್ರೀಧರ್ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ