ರವಿ ಮಾಮ ಮತ್ತು ಮಕ್ಕಳ ಸೈನ್ಯ


Team Udayavani, Dec 1, 2017, 11:47 AM IST

01-28.jpg

ರವಿಚಂದ್ರನ್‌ ಅವರು ಈ ಹಿಂದೆ ಡ್ಯಾನ್ಸ್‌ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿದ್ದರೆ ಹೊರತು, ಸಂಗೀತ ಕಾರ್ಯಕ್ರಮದ ಕಡೆ
ಹೋಗಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ “ಉದಯ ಸಿಂಗರ್ ಜ್ಯೂನಿಯರ್‌’ ಎಂಬ ಮಕ್ಕಳ ಸ್ಪರ್ಧೆಗೆ ಜಡ್ಜ್ ಆಗಿದ್ದಾರೆ. ಅವರಿಗೆ ಬಲಗೈ ಮತ್ತು ಎಡಗೈ ಆಗಿ ಜನಪ್ರಿಯ ಗಾಯಕರಾದ ಮನೋ ಮತ್ತು ಅರ್ಚನಾ ಉಡುಪಾ ಅವರಿದ್ದಾರೆ.

ಈಗಾಗಲೇ ಕಾರ್ಯಕ್ರಮದ ಮೊದಲೆರೆಡು ಕಂತುಗಳು ಕಳೆದ ವಾರ ಪ್ರಸಾರವಾಗಿದೆ. ಈ ಮಧ್ಯೆ ಕಾರ್ಯಕ್ರಮ ನೋಡುವುದಕ್ಕೆ
ಅಭಿಮಾನ್‌ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್‌ಗೆ ಕರೆಯಲಾಗಿತ್ತು. ಮುಂದಿನ ಕಂತುಗಳ ಕೆಲ ಭಾಗದ ಚಿತ್ರೀಕರಣ ಮುಗಿಸಿ, ಮಕ್ಕಳನ್ನೂ ಕೂರಿಸಿಕೊಂಡು ಮಾತಿಗೆ ಕುಳಿತ ರವಿಚಂದ್ರನ್‌, ತೀರ್ಪು ಕೊಡುವುದು ಬಹಳ ಕಷ್ಟ ಎಂದರು. “ನನಗೆ ಸ್ವರದ ಬಗ್ಗೆ ಹೆಚ್ಚು ಗೊತ್ತಿಲ್ಲ. ಹಾಗಾಗಿ ಎಡ, ಬಲದಲ್ಲಿ ಸ್ವಲ್ಪ ಸ್ಟ್ರಾಂಗ್‌  ಆಗಿರುವವರು ಕೂತಿದ್ದಾರೆ. ನಿಜ, ಹೇಳಬೇಕೆಂದರೆ, ನಾನು ಅಲಂಕಾರ ಅಷ್ಟೇ. ಅವರು ನಿಜವಾದ ತೀರ್ಪು ಕೊಡುತ್ತಾರೆ. ನಾನು ಆಗಾಗ ಉಲ್ಲಾಸ, ಉತ್ಸಾಹ ಕೊಡುವುದರ ಜೊತೆಗೆ ಉದ್ದೇಶ ಹೇಳುತ್ತಾ, ಉಪದೇಶ ಕೊಡುತ್ತಿರುತ್ತೇನೆ’ ಎಂದರು ರವಿಚಂದ್ರನ್‌.

ಗಾಯಕ ಮನೋ ಈ ಹಿಂದೆ ತೆಲುಗಿನಲ್ಲಿ ಹಲವು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಈಗ ಮೊದಲ ಬಾರಿಗೆ
ಕನ್ನಡ ಕಿರುತೆರೆಗೆ ಬಂದಿದ್ದಾರೆ. “ಇಲ್ಲಿ ಮಕ್ಕಳು ಹಾಡುತ್ತಿರುವುದನ್ನು ನೋಡಿದರೆ, ಒಂದೊಳ್ಳೆಯ ತಂಡ ಸಿಗುತ್ತದೆ ಎಂಬ ನಂಬಿಕೆ  ದೆ. ಬೇರೆ ಬೇರೆ ಜಾನರ್‌ಗಳಲ್ಲಿ, ಒಂದಿಷ್ಟು ಒಳ್ಳೆಯ ಗಾಯಕರು ಹೊರಹೊಮ್ಮುತ್ತಾರೆ’ ಎಂದರು. ಅರ್ಚನಾ ಉಡುಪಾ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಹಲವು ವರ್ಷಗಳ ಹಿಂದೆ ಸ್ಪರ್ಧಿಯಾಗಿದ್ದ ಅವರು, ನಂತರ ಗಾಯಕಿಯಾಗಿ, ನಿರೂಪಕಿಯಾಗಿ, ಮೆಂಟರ್‌ ಆಗಿ, ಇದೀಗ ತೀರ್ಪುಗಾರರ ಸ್ಥಾನಕ್ಕೆ ಬಂದಿದ್ದಾರೆ. “ಮಕ್ಕಳಿಗೆ ಇದೊಂದು ಅದ್ಭುತ ವೇದಿಕೆ. ಇಂಥದ್ದೊಂದು 
ವೇದಿಕೆಯನ್ನು ಬಳಸಿಕೊಂಡು, ತುಂಬಾ ಕಲಿಯುವುದಕ್ಕೆ ಸಾಧ್ಯತೆ ಇದೆ’ ಎಂದರು. ಗಾಯನ ರಿಯಾಲಿಟಿ ಶೋಗಳೆಂದರೆ
ಮೊದಲಿಗೆ ನೆನಪಿಗೆ ಬರುವುದು ಜೀ ಟಿವಿಯಲ್ಲಿ ಪ್ರಸಾರವಾದ “ಸಾರೆಗಾಮ’. ಆ ಕಾರ್ಯಕ್ರಮವನ್ನು ರೂಪಿಸಿದ್ದ ಗಜೇಂದ್ರ
ಸಿಂಗ್‌, ಈಗ ಈ ಕಾರ್ಯಕ್ರಮವನ್ನು ಸಹ ರೂಪಿಸುತ್ತಿದ್ದಾರೆ. “ಆಗ ನಾನು ಹಿಂದಿಯಲ್ಲಿ ಕಾರ್ಯಕ್ರಮ ಶುರು ಮಾಡಿದೆ. ಆ ನಂತರ ಎಲ್ಲಾ  ಭಾಷೆಗಳಲ್ಲೂ ಆ ಕಾರ್ಯಕ್ರಮ ಬಂತು. ಈಗ ಈ ಕಾರ್ಯಕ್ರಮದಲ್ಲೂ ಏನೋ ಮಾಡಬಹುದು ಅಂತ ಬಂದಿದ್ದೇನೆ. ಸವಾಲಿನ ಕೆಲಸ’ ಎಂದು ಹೇಳಿ ಸುಮ್ಮನಾದರು ಗಜೇಂದ್ರ ಸಿಂಗ್‌.

ಈ ಕಾರ್ಯಕ್ರಮದಲ್ಲಿ ಸದ್ಯಕ್ಕೆ ಸಿನಿಮಾ ಹಾಡುಗಳನ್ನು ಹಾಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಶೈಲಿಯ ಗೀತೆಗಳನ್ನು ಹಾಡಿಸಲಾಗುತ್ತದಂತೆ. ಸಿನಿಮಾ ಗೀತೆಗಳಲ್ಲೇ ಜಾನಪದ, ಶಾಸ್ತ್ರೀಯ ಹೀಗೆ ವಿವಿಧ ಪ್ರಾಕಾರಗಳನ್ನು ಹಾಡಿಸಲಾಗುತ್ತಿದೆ. 30 ಕಂತುಗಳೊಂದಿಗೆ ಪ್ರಸಾರವಾಗುವ ಈ ಕಾರ್ಯಕ್ರಮ, ಗ್ರಾಂಡ್‌ಫಿನಾಲೆಯೊಂದಿಗೆ ಅಂತ್ಯವಾಗಲಿದೆ. 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.