ಸೆಕೆಂಡ್‌ ಹಾಫ್ ಸ್ಟ್ರಾಂಗ್‌ ಗುರು


Team Udayavani, Jul 27, 2018, 6:00 AM IST

31.jpg

ನೀವು ಸಿನಿಮಾ ವಿಮರ್ಶೆ ಓದುವವರಾಗಿದ್ದರೆ ನಿಮಗೆ ಇಂತಹ ಸಾಲುಗಳು ಬಹುತೇಕ ಸಿನಿಮಾ ವಿಮರ್ಶೆಗಳಲ್ಲಿ ಸಿಗುತ್ತವೆ. ಅಷ್ಟೇ ಅಲ್ಲ, ನೀವು ಸಿನಿ ಪ್ರಿಯರಾಗಿದ್ದರೆ ನಿಮಗೂ ಇಂತಹ ಅನುಭವ ಆಗಿರುತ್ತದೆ. ಇತ್ತೀಚಿನ ಕೆಲವು ಚಿತ್ರಗಳನ್ನು ಗಮನಿಸಿದರೆ, ಚಿತ್ರ ಆರಂಭವಾಗಿ ಇಂಟರ್‌ವಲ್‌
ಬರುವವರೆಗೂ ಏನೂ ನಡೆದಿರುವುದಿಲ್ಲ. ಹೀರೋ ಬಿಲ್ಡಪ್‌, ಸಾಂಗ್‌, ಫೈಟ್‌, ಕಾಮಿಡಿ … ಬಹುತೇಕ ಇಂತಹ ದೃಶ್ಯಗಳಲ್ಲೇ ಮೊದಲಾರ್ಧವನ್ನು ಮುಗಿಸಿಬಿಟ್ಟಿರುತ್ತಾರೆ. ಸಿನಿಮಾ ಏನಿದ್ದರೂ ಸೆಕೆಂಡ್‌ಹಾಫ್ನಲ್ಲಿ ಬಿಚ್ಚಿಕೊಳ್ಳುತ್ತದೆ ಮತ್ತು ಇಡೀ ಸಿನಿಮಾದ ಜೀವಾಳ ಕೂಡಾ ಅದೇ. ಅಲ್ಲಿಗೆ ಒಂದಂಶ ಸ್ಪಷ್ಟ. ಇತ್ತೀಚಿನ ಸಿನಿಮಾಗಳನ್ನು ಕೈ ಹಿಡಿಯುತ್ತಿರೋದು ಸೆಕೆಂಡ್‌ ಹಾಫ್. ಹಾಗಾಗಿ, ಸೆಕೆಂಡ್‌ ಹಾಫ್ ಸ್ಟ್ರಾಂಗ್‌ ಗುರು ಎನ್ನುವಂತಾಗಿದೆ.

ನಿರ್ದೇಶಕರು ಕಥೆ ಮಾಡಿಕೊಂಡಿರೋದಿಲ್ಲವೋ ಅಥವಾ ಇದ್ದ ಕಥೆಯನ್ನು ನಿರೂಪಿಸುವಲ್ಲಿ ಎಡವುತ್ತಿದ್ದಾರೋ, ಒಟ್ಟಿನಲ್ಲಿ ಬಹುತೇಕ ಸಿನಿಮಾಗಳ
ಮೊದಲರ್ಧ ಜಾಳು ಜಾಳು. ಒಂದಿಷ್ಟು ಕಥೆ ಪ್ರೇಕ್ಷಕರಿಗೆ ಸಿಕ್ಕರೆ ಅದು ದ್ವಿತೀಯಾರ್ಧದಲ್ಲಿ. ಹಾಗಂತ ಕೆಲವೊಮ್ಮೆ ಸೆಕೆಂಡ್‌ಹಾಫ್ ಕೂಡಾ
ಕೈ ಕೊಡುತ್ತದೆ. ನಿರ್ದೇಶಕರು ಸೆಕೆಂಡ್‌ ಹಾಫ್ ನಲ್ಲೂ ಫ‌ಸ್ಟ್‌ ಹಾಫ್ ಕಾಮಿಡಿ ಶೋಗಳನ್ನೇ ರಿಪೀಟ್‌ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಇಡೀ ಪಿಕ್ಚರ್‌ ತೋರಿಸಿಬಿಡುತ್ತಾರೆ. ಅದೇನೇ ಆದರೂ ಸದ್ಯ ಸಿನಿ ಪ್ರೇಮಿಗಳ ಹಾಗೂ ಸಿನಿಮಂದಿಯ ನಂಬಿಕೆ ಎಂದರೆ ಕೊನೆಪಕ್ಷ ಸೆಕೆಂಡ್‌ಹಾಫ್ ಚೆನ್ನಾಗಿರಬಹುದು ಮತ್ತು ಸೆಕೆಂಡ್‌ಹಾಫ್ ಚೆನ್ನಾಗಿದ್ದರೂ ಸಿನಿಮಾ ಓಡಬಹುದೆಂಬುದು.

ಎಲ್ಲಾ ಓಕೆ, ಸೆಕೆಂಡ್‌ ಹಾಫ್ನಲ್ಲೇ ಕಥೆ ಅಡಗಿರಲು ಮತ್ತು ಫ‌ಸ್ಟ್‌ ಹಾಫ್ ಖಾಲಿ ಇರಲು ಕಾರಣವೇನು ಎಂದು ನೀವು ಕೇಳಬಹುದು. ಇಲ್ಲಿ ನಿರ್ದಿಷ್ಟ
ಕಾರಣಗಳು ಇರದೇ ಹೋದರೂ ಸಿನಿಮಾದ ಅವಧಿ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಎರಡು ಗಂಟೆ ಇಪ್ಪತ್ತು ನಿಮಿಷ ಇರಬೇಕೆಂಬ ಅಲಿಖೀತ ನಿಯಮದಂತೆ ಬಹುತೇಕ ಎಲ್ಲಾ ಸಿನಿಮಾಗಳು ಅದೇ ಅವಧಿಯೊಂದಿಗೆ ಬರುತ್ತಿವೆ. ಅದಕ್ಕೆ ಕಾರಣ ಚಿತ್ರಮಂದಿರಗಳಲ್ಲಿನ ಶೋ ಅವಧಿ. ಬೆಳಗ್ಗಿನ ಶೋಗೂ ಮಧ್ಯಾಹ್ನದ ಶೋಗೂ ಸಮಯ ಹೊಂದಾಣಿಕೆಯಾಗಬೇಕೆಂಬ ಕಾರಣಕ್ಕೆ ಚಿತ್ರಮಂದಿರಗಳು ಕೂಡಾ ಸಿನಿಮಾದ ಅವಧಿಯ ಬಗ್ಗೆ ಗಮನಹರಿಸುತ್ತವೆ. ನೀವು 90 ನಿಮಿಷದ ಸಿನಿಮಾ ಮಾಡಿದರೆ ಅದು ಬೇಗನೇ ಮುಗಿದು ಹೋಗುತ್ತದೆ. ಇನ್ನೊಂದು ಶೋ ಆರಂಭವಾಗುವ ಮಧ್ಯೆ ಸಾಕಷ್ಟು ಸಮಯವಿರುತ್ತದೆ. ಈ ಕಾರಣದಿಂದ ಚಿತ್ರಮಂದಿರದ ಆಶಯದ ಜೊತೆಗೆ ಅಲಿಖೀತ
ನಿಯಮದಂತೆ ಬಹುತೇಕ ಸಿನಿಮಾಗಳು ಎರಡು ಗಂಟೆ 20 ನಿಮಿಷ ಅಥವಾ ಎರಡು ಗಂಟೆ 10 ನಿಮಿಷದ ಅವಧಿಯಲ್ಲೇ ತಯಾರಾಗುತ್ತಿವೆ. ಹಾಗೆ ನೋಡಿದರೆ ಎರಡು ಗಂಟೆ ಒಂದು ಸಿನಿಮಾಕ್ಕೆ ಬೋರ್‌ ಹೊಡೆಸುವ ಅವಧಿಯಲ್ಲ. ಆದರೆ, ಇಲ್ಲಿ ಮುಖ್ಯವಾಗುವುದು ಚಿತ್ರಕಥೆ ಮತ್ತು ನಿರ್ದೇಶಕನ ಜಾಣ್ಮೆ. ಆತ ಎರಡು ಗಂಟೆ ಅವಧಿಯಲ್ಲಿ ಇಡೀ ಸಿನಿಮಾವನ್ನು ಹೇಗೆ ಕಟ್ಟಿಕೊಡುತ್ತಾನೆಂಬುದರ ಮೇಲೆ ಇಡೀ ಸಿನಿಮಾದ ಭವಿಷ್ಯ ನಿಂತಿರುತ್ತದೆ.

ಮೊದಲೇ ಹೇಳಿದಂತೆ ಅನೇಕ ನಿರ್ದೇಶಕರಲ್ಲಿ ಕಥೆಯೇ ಇರೋದಿಲ್ಲ. ಇರೋ ಒನ್‌ಲೈನ್‌ನಲ್ಲಿ ಇಡೀ ಸಿನಿಮಾವನ್ನು ಬೆಳೆಸುತ್ತಾ ಹೋಗಬೇಕಾದ ಹಾಗೂ ಎರಡು ಗಂಟೆ ಅವಧಿಗೆ ಸಿನಿಮಾ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಇದೇ ಕಾರಣದಿಂದ ಎಡಿಟಿಂಗ್‌ ಟೇಬಲ್‌ನಲ್ಲಿ ಕುಳಿತ 
ನಿರ್ದೇಶಕರು, ಮೊದಲರ್ಧದಲ್ಲಿ ಕಾಮಿಡಿ, ಫೈಟ್‌, ಹೀರೋ ಬಿಲ್ಡಪ್‌ … 

ಈ ತರಹದ ದೃಶ್ಯಗಳನ್ನು ತುಂಬಿಸುತ್ತಾ ಹೋಗಿ, ಇಂಟರ್‌ವಲ್‌ ಪಾಯಿಂಟ್‌ಗೆ ಸಿನಿಮಾದ ಒಂದು ಕುತೂಹಲಭರಿತ ಅಂಶವನ್ನಿಟ್ಟು ಬ್ರೇಕ್‌ ಕೊಡುತ್ತಾರೆ. ಇಲ್ಲಿ ಗಮನಿಸಬೇಕಾದ ಒಂದಂಶವೆಂದರೆ ಬಹುತೇಕ ಎಲ್ಲಾ ಸಿನಿಮಾಗಳು ಪ್ರದರ್ಶನ ಆರಂಭವಾಗಿ ಒಂದು ಗಂಟೆಗೆ ಇಂಟರ್‌ವಲ್‌ ಇಡುತ್ತವೆ. ಹಾಗಾಗಿ, ಮೊದಲರ್ಧದ ಒಂದು ಗಂಟೆಯಲ್ಲಿ ಏನೂ ನಡೆಯದಿರುವುದರಿಂದ ಒಂದು ಗಂಟೆ ಅನಾವಶ್ಯಕವಾಗಿ ಕಳೆದು ಹೋಯಿತು ಎಂಬ ಭಾವ ಮೂಡದೇ ಪ್ರೇಕ್ಷಕರಲ್ಲಿ ಇರದು.  ಇಂಟರ್‌ವಲ್‌ನಲ್ಲಿ ಸಿನಿಮಾಕ್ಕೊಂದು ಟ್ವಿಸ್ಟ್‌ ಕೊಟ್ಟು, ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದೊಳಗೆ ಬರಮಾಡಿಕೊಳ್ಳುವ ಸಿನಿಮಾಗಳು, ಕೆಲವೊಮ್ಮೆ ಆಶಾಭಾವನೆ ಮೂಡಿಸಿದರೆ, ಇನ್ನು ಕೆಲವೊಮ್ಮೆ ತರಾತುರಿಯಲ್ಲಿ ಎಲ್ಲವನ್ನು ಹೇಳಿಬಿಟ್ಟಿರುತ್ತವೆ. ಸಿನಿಮಾಗಳು ಸೆಕೆಂಡ್‌ ಹಾಫ್ನಿಂದಲೇ ಗೆದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಫ‌ಸ್ಟ್‌ಹಾಫ್ ಜಾಳು ಜಾಳು ಎನಿಸಿದರೂ ಸೆಕೆಂಡ್‌ಹಾಫ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟು ಸಿನಿಮಾಗಳನ್ನು ಗೆಲ್ಲಿಸಿದ ಅನೇಕ ನಿರ್ದೇಶಕರಿದ್ದಾರೆ. ಇನ್ನು ಕೆಲವು ನಿರ್ದೇಶಕರು ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆಕೆಂಡ್‌ಹಾಫ್ನಲ್ಲೇ ತೋರಿಸಬೇಕೆಂದು ದೃಶ್ಯಗಳನ್ನು “ಗುಡ್ಡೆ’ ಹಾಕಿಕೊಂಡು, ಕೊನೆಗೆ ತರಾತುರಿಯಲ್ಲಿ ಯಾವುದನ್ನು ಸರಿಯಾಗಿ ತೋರಿಸದೇ ಪ್ರೇಕ್ಷಕರಿಗೆ ನಿರಾಸೆ ಮಾಡುತ್ತಾರೆ. ಅದರಲ್ಲೂ ಹಾರರ್‌ ಸಿನಿಮಾಗಳಂತೂ ಮೊದಲರ್ಧ ಭಯಬೀಳಿಸುವ ರೀರೆಕಾರ್ಡಿಂಗ್‌, ಅತ್ತಿಂದಿತ್ತ ಓಡಾಡೋ ಆಕೃತಿ, ಏಕಾಏಕಿ ಸಂಚರಿಸುವ ಪಾತ್ರೆ-ಪಗಡಿ, ಜೀವ ಬಂದಂತಾಡುವ ಆರಾಮ್‌ ಚೇರ್‌ … ಇಂತಹ ದೃಶ್ಯಗಳಲ್ಲೇ ಫ‌ಸ್ಟ್‌ ಹಾಫ್ ಮುಗಿಸಿಬಿಡುತ್ತಾರೆ. ಹೊಸ ನಾಯಕನ ಇಂಟ್ರೋಡಕ್ಷನ್‌ ಸಿನಿಮಾವಾದರೆ, ಇಂಟ್ರೋಡಕ್ಷನ್‌ ಫೈಟ್‌, ಆತನ ಅಡ್ಡ, ಲವ್‌, ಸಾಂಗ್‌ ಅಷ್ಟೇ ಇಲ್ಲಿ ಸೀಮಿತ. 

ಕೆಲವು ಸಿನಿಮಾಗಳ ಫ‌ಸ್ಟ್‌ ಹಾಫ್ನಲ್ಲಿ ಏನೂ ಇಲ್ಲದಿದ್ದರೂ ಕಡೆಪಕ್ಷ ಸೆಕೆಂಡ್‌ ಹಾಫ್ನಲ್ಲಾದರೂ ಪ್ರೇಕ್ಷಕರನ್ನು ಸಂತುಷ್ಟನನ್ನಾಗಿಸುತ್ತವೆ. ಆದರೆ, ಒಂದಷ್ಟು ಸಿನಿಮಾಗಳು ಇಡೀ ಸಿನಿಮಾದಲ್ಲಿ ಏನನ್ನೂ ಹೇಳದೇ ಕೊನೆಗೆ “ಪಾರ್ಟ್‌-2′ ಎಂದು ಹೇಳುತ್ತಾ, ಮುಂದುವರೆದ ಭಾಗದಲ್ಲಿ ಹೇಳುವ ಸೂಚನೆ ನೀಡುತ್ತದೆ. ಅಲ್ಲಿಗೆ ಎರಡನೇ ಭಾಗದಲ್ಲಿ ಹೇಳಲು ಇಡೀ ಒಂದು ಸಿನಿಮಾವನ್ನೇ ಪೀಠಿಕೆಯನ್ನಾಗಿಸಿದಂತಾಗುತ್ತದೆ. ಇಂತಹ ಸಿನಿಮಾಗಳಿಂದ ಪ್ರೇಕ್ಷಕ ಏನನ್ನೂ ನಿರೀಕ್ಷಿಸಲಾಗುವುದಿಲ್ಲ.

ಚಿತ್ರಮಂದಿರದೊಳಗೆ ಬರುವ ಪ್ರೇಕ್ಷಕ ಬಯಸೋದು ಒಳ್ಳೆಯ ಸಿನಿಮಾ ಹಾಗೂ ನೋಡಿಸಿಕೊಂಡು ಹೋಗುವ ಗುಣವನ್ನಷ್ಟೇ. ಆತ ನಿಮ್ಮ ಸಿನಿಮಾದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದೆಷ್ಟೋ ಸಿನಿಮಾಗಳ ಕ್ಲೈಮ್ಯಾಕ್ಸ್‌ ಅನ್ನು ಪ್ರೇಕ್ಷಕರು ಇವತ್ತಿಗೂ ನೆನಪಿನಲ್ಲಿಟ್ಟಿದ್ದಾರೆಂದರೆ ಅದಕ್ಕೆ ಕಾರಣ ಆ ದೃಶ್ಯಗಳು ಮೂಡಿಬಂದ ರೀತಿ. ಅದರಂತೆ, ಮೊದಲರ್ಧ, ದ್ವಿತೀಯಾರ್ಧ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಒಳ್ಳೆಯ ಸಿನಿಮಾವನ್ನಷ್ಟೇ ಕಟ್ಟಿಕೊಡಬೇಕೆಂಬ ಉದ್ದೇಶದೊಂದಿಗೆ ಸಿನಿಮಾ ಮಾಡಿದರೆ, ಆಗ “ಹಾಫ್’ಗಳ ಮಾತೇ ಬರೋದಿಲ್ಲ. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.