ಸಿಟಿ ಮಾತು ಚಿತ್ರೀಕರಣ ಮುಗಿಸಿ ಬಂದವರ ಜೊತೆಗೊಂದು ಸಂಜೆ


Team Udayavani, Mar 10, 2017, 3:45 AM IST

Silicon-City-(4).jpg

ಶ್ರೀನಗರ ಕಿಟ್ಟಿ ಅಭಿನಯದ “ಸಿಲಿಕಾನ್‌ ಸಿಟಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದೇ ಹೋಗಿದೆ. ಕುಂಬಳಕಾಯಿ ಒಡೆದಿರುವ ಚಿತ್ರತಂಡದವರು, ಆಡಿಯೋ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಆಡಿಯೋ ಬಿಡುಗಡೆ 10ಕ್ಕಾದರೆ, ಚಿತ್ರ ಬಿಡುಗಡೆ ತಿಂಗಳ ಕೊನೆಗಂತೆ. ಈ ವಿಷಯಗಳನ್ನು ಹೇಳುವುದಕ್ಕೆ ಚಿತ್ರತಂಡದವರು ಅದೊಂದು ಸಂಜೆ ಸೇರಿದ್ದರು. ಜೊತೆಗೆ ಚಿತ್ರದ ತುಣುಕುಗಳನ್ನು, ಮೇಕಿಂಗ್‌ ವೀಡಿಯೋಗಳನ್ನೂ ತೋರಿಸಿದರು.

ಚಿತ್ರ ನಿರ್ದೇಶಿಸಬೇಕೆಂಬುದು ಮುರಳಿ ಅವರ ಹಲವು ವರ್ಷಗಳ ಕನಸ್ಸಾಗಿತ್ತಂತೆ. “1995ರಲ್ಲಿ ಕಂಡ ಕನಸು, ಇದೀಗ ನನಸಾಗಿದೆ. ಬೆಂಗಳೂರಿನಲ್ಲಿ ನಡೆಯಬಹುದಾದ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಬೆಂಗಳೂರು ಹೇಗೆ ಸಿಲಿಕಾನ್‌ ಸಿಟಿಯಾಗಿ ಬದಲಾಯಿತು ಎಂಬ ವಿಷಯಗಳೂ ಇವೆ. ಆರಂಭದಲ್ಲಿ ಬೆಂಗಳೂರು ಕೂಲ್‌ ಆಗಿತ್ತು. ಈಗ ಎಲ್ಲಿ ನೋಡಿದರೂ ಟ್ರಾಫಿಕ್‌, ರಶ್‌ ಆಗಿದೆ. ಇಂಥದ್ದೊಂದು ನಗರದಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಈಗಾಗಲೇ ಚಿತ್ರದ ಎಡಿಟಿಂಗ್‌ ಮುಗಿದಿದೆ. ಚಿತ್ರ ನೋಡಿ ವಿಶ್ವಾಸ ಬಂದಿದೆ. ಈ ತಿಂಗಳ ಕೊನೆಗೆ ಬಿಡುಗಡೆ ಮಾಡುವ ಯೋಚನೆ ಇದೆ. ಶ್ರೀನಗರ ಕಿಟ್ಟಿ ಇಲ್ಲದೆಯೇ ಈ ಸಿನಿಮಾ ಆಗುತ್ತಿರಲಿಲ್ಲ. ನಮ್ಮ ಇಡೀ ತಂಡಕ್ಕೆ ಅವರೊಬ್ಬ ಗಾಡ್‌ಫಾದರ್‌ ಇದ್ದಂತೆ’ ಎಂದರು. ಪಕ್ಕದಲ್ಲಿದ್ದ ಕಿಟ್ಟಿ, ಗುರಾಯಿಸಿದರು.

ತಮ್ಮ ಸರದಿ ಬಂದಾಗ ಕಿಟ್ಟಿ ಉತ್ತರ ಕೊಟ್ಟರು. “ನಾನು ಗಾಡೂ ಅಲ್ಲ, ಫಾದರೂ ಅಲ್ಲ. ನಮಗೆ ನಾವೇ ಗಾಡ್‌, ನಮಗೆ ನಾವೇ ಫಾದರ್‌. ಈ ತಂಡವೇ ಚೆನ್ನಾಗಿತ್ತು. ಅದರ ಜೊತೆಗೆ ಸೇರಿಕೊಂಡು ಇಷ್ಟು ದೂರ ಬಂದಿದ್ದಕ್ಕೆ ಖುಷಿಯಾಗಿದೆ. ಇವತ್ತು ನಡೆಯುವ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೀವಿ. ಮಾನವೀಯ ಮೌಲ್ಯಗಳು ಹೇಗೆ ಕಡಿಮೆ ಆಗ್ತಿದೆ, ಯುವಶಕ್ತಿ ಏನಾಗುತ್ತಿದೆ ಅಂತ ಈ ಚಿತ್ರ ಹೇಳುತ್ತಿದೆ. ಚಿತ್ರದ ಇಡೀ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ’ ಎಂದರು.

ಇನ್ನು ಈ ಚಿತ್ರದಲ್ಲಿ ಅವರ ಸಹೋದರನ ಪಾತ್ರಕ್ಕೆ ಕಿಟ್ಟಿ, ಸೂರಜ್‌ ಗೌಡರ ಹೆಸರನ್ನು ಸೂಚಿಸಿದ್ದರಂತೆ. ಕಿಟ್ಟಿಗೆ ಥ್ಯಾಂಕ್ಸ್‌ ಹೇಳುತ್ತಲೇ ಮಾತು ಪ್ರಾರಂಭಿಸಿದರು ಸೂರಜ್‌. “ನನ್ನ ಪಾತ್ರಕ್ಕೆ ಎರಡು ತರಹದ ಶೇಡ್‌ಗಳಿವೆ. ಬಹಳ ಚಾಲೆಂಜಿಂಗ್‌ ಪಾತ್ರ. ನನಗಂತೂ ಸಂಪೂರ್ಣ ಸಂತೋಷವಿದೆ’ ಎಂದರು. ಕಾವ್ಯಾ ಶೆಟ್ಟಿ ಈ ಚಿತ್ರದಲ್ಲಿ ಮಿಡ್ಲ್ ಕ್ಲಾಸ್‌ ಹುಡುಗಿಯ ಪಾತ್ರವನ್ನು ಮಾಡಿದ್ದಾರಂತೆ. “ಗ್ಲಾಮರ್‌ ಇಲ್ಲದ ಪಾತ್ರ ನನ್ನದು. ಬಹಳ ಚೆನ್ನಾಗಿತ್ತು’ ಎಂದು ಕಾವ್ಯ ಹೇಳಿಕೊಂಡರು. ಬಹಳ ದಿನಗಳ ನಂತರ ನಟಿಸಿರುವ ಕಡ್ಡಿ ವಿಶ್ವ, ಯಾವುದೇ ಒತ್ತಡವಿಲ್ಲದೆ ಚಿತ್ರದಲ್ಲಿ ನಟಿಸಿದ್ದಾಗಿ ಹೇಳಿಕೊಂಡರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.