ಕುಸ್ತಿ-ಮಸ್ತಿಯ ದೀಪ

ಪ್ರೇರಣೆ ಇಲ್ಲದೆ ಜಗತ್ತು ನಡೆಯದು...

Team Udayavani, Jul 19, 2019, 5:40 AM IST

t-20

“ಪೈಲ್ವಾನ್‌ ಪಾರ್ಟ್‌ -2 ಮಾಡಿದರೆ ನಾನು ಕೋಚ್‌ ಆಗಿರುತ್ತೇನೆ ಅಥವಾ ಹೊರಗೆ ನಿಂತು ಕಮಾನ್‌ ಎಂದು ಚಿಯರ್‌ ಮಾಡುವ ಪಾತ್ರ ಮಾಡುತ್ತೇನೆ …’

– ಹೀಗೆ ಹೇಳಿ ಸುದೀಪ್‌ ಪಕ್ಕದಲ್ಲಿದ್ದ ನಿರ್ದೇಶಕ ಕೃಷ್ಣ ಅವರ ಮುಖ ನೋಡಿದರು. ಸುದೀಪ್‌ ಹೀಗೆ ಹೇಳಲು ಕಾರಣ “ಪೈಲ್ವಾನ್‌’ ಚಿತ್ರ ಮತ್ತು ಅದಕ್ಕಾಗಿ ಅವರು ಮಾಡಿಕೊಂಡಿರುವ ತಯಾರಿ. ಜಿಮ್‌ನಿಂದ ದೂರವೇ ಉಳಿದಿದ್ದ ಸುದೀಪ್‌, ಈ ಸಿನಿಮಾಕ್ಕಾಗಿ ವರ್ಕೌಟ್‌ ಮಾಡಿ ತೂಕ ಇಳಿಸುವ ಜೊತೆಗೆ ಸಖತ್‌ ಫಿಟ್‌ ಆದರು. ಅಷ್ಟೇ ಅಲ್ಲ, ಚಿತ್ರದ ಕುಸ್ತಿ, ಬಾಕ್ಸಿಂಗ್‌ ಚಿತ್ರೀಕರಣ ವೇಳೆ ಸಾಕಷ್ಟು ನೋವು ಕೂಡಾ ಅನುಭವಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿಯೆ ಸುದೀಪ್‌ ನಗುತ್ತಲೇ, “ಇದೊಂದು ಬಾರಿ ಕುಸ್ತಿ ಮೂಲವಾಗಿರುವ ಚಿತ್ರದಲ್ಲಿ ನಟಿಸಿದ್ದೇನೆ ಅಷ್ಟೇ. ಮುಂದೆ ಕುಸ್ತಿ ಹಿನ್ನೆಲೆಯಲ್ಲಿ ನಟಿಸುವುದಿಲ್ಲ’ ಎನ್ನುತ್ತಲೇ “ಪೈಲ್ವಾನ್‌’ ಸಿನಿಮಾದ ಬಗ್ಗೆ ಹೇಳುತ್ತಾ ಹೋದರು. ಸುದೀಪ್‌ ಅವರಿಗೆ “ಪೈಲ್ವಾನ್‌’ ತುಂಬಾ ಸ್ಪೆಷಲ್‌ ಸಿನಿಮಾ. ಅದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಹೆಚ್ಚು ಶ್ರಮ ಬೇಡಿದ ಸಿನಿಮಾ. ಜೊತೆಗೆ ಸುದೀಪ್‌ ಅವರ ಲೈಫ್ಸ್ಟೈಲ್‌ ಬದಲಿಸಿದ ಸಿನಿಮಾ.

“ಆರಂಭದಲ್ಲಿ ಕೃಷ್ಣ ಬಂದು ಈ ತರಹದ ಒಂದು ಸಿನಿಮಾ ಮಾಡುವ ಎಂದಾಗ ನಾನು, “ಇಲ್ಲ ಮಾಡಲ್ಲ. ಸಾಧ್ಯವಿಲ್ಲ’ ಎಂದಿದ್ದೆ. ಏಕೆಂದರೆ ಇದು ಸುಖಾಸುಮ್ಮನೆ ಮಾಡಿಬಿಡುವ ಸಿನಿಮಾವಲ್ಲ. ಹೆಚ್ಚು ಶ್ರಮಬೇಕು, ಪ್ರೊಫೆಶನಲ್‌ ಆಗಿರಬೇಕು. ಪಾತ್ರ ಒಪ್ಪಿಕೊಂಡ ನಂತರ ಅದಕ್ಕೆ ನ್ಯಾಯ ಒದಗಿಸಬೇಕು. ಇವೆಲ್ಲವೂ ನನ್ನಿಂದ ಸಾಧ್ಯವೇ ಎಂದು ಯೋಚಿಸಿ ಆರಂಭದಲ್ಲಿ ಬೇಡ ಅಂದಿದ್ದೆ. ಆ ನಂತರ ಕೃಷ್ಣ ಹಾಗೂ ತಂಡದ ಜೊತೆ ಚರ್ಚಿಸಿದ ನಂತರ ಮಾಡಲು ಒಪ್ಪಿಕೊಂಡೆ. ಅಲ್ಲಿಂದ ಹೊಸ ಲೈಫ್ಸ್ಟೈಲ್‌ ಶುರುವಾಯಿತು. ಬೆಳಗ್ಗೆ ಬೇಗ ಎದ್ದೇಳ್ಳೋದು, ಜಿಮ್‌ಗೆ ಹೋಗೋದು, ಏನನ್ನು ಇಷ್ಟಪಟ್ಟು ತಿನ್ನುತ್ತಿದ್ದೆನೋ ಅದನ್ನು ಬಿಡಬೇಕಾದ ಅನಿವಾರ್ಯತೆ …. ಈ ತರಹದ ಶ್ರಮದೊಂದಿಗೆ “ಪೈಲ್ವಾನ್‌’ ತಯಾರಿ ಶುರುವಾಯಿತು’ ಎಂದು “ಪೈಲ್ವಾನ್‌’ ಅನುಭವ ಬಿಚ್ಚಿಡುತ್ತಾ ಹೋದರು. “ಪೈಲ್ವಾನ್‌’ ಚಿತ್ರಕ್ಕಾಗಿ ಪ್ರೊಫೆಶನಲ್‌ ಕುಸ್ತಿ ಹಾಗೂ ಬಾಕ್ಸಿಂಗ್‌ ಪಟುಗಳಿಂದ ಸುದೀಪ್‌ ತರಬೇತಿ ಪಡೆದಿದ್ದಾರೆ. ಕೆಲವು ದೃಶ್ಯಗಳಲ್ಲಿ ನಿರ್ದೇಶಕರು ಡ್ನೂಪ್‌ ಬಳಸುವ ಎಂದರೂ ಸುದೀಪ್‌ ಒಪ್ಪದೇ, ರಿಸ್ಕಿ ದೃಶ್ಯಗಳಲ್ಲೂ ಅವರೇ ಭಾಗವಹಿಸಿದ್ದಾರೆ. ಈ ಮೂಲಕ ತಮ್ಮ ಸಿನಿಮಾ ಪ್ರೀತಿ ಮೆರೆದಿದ್ದಾರೆ. ಈ ಬಗ್ಗೆ ಮಾತನಾಡುವ ಸುದೀಪ್‌, “ಕೃಷ್ಣ ಒಂದೆರಡು ಶಾಟ್‌ಗಳನ್ನು ಡ್ನೂಪ್‌ ಮಾಡಲು ಮುಂದಾಗಿದ್ದರು. ಆದರೆ, ನಾನು ಯಾವ ಕಾರಣಕ್ಕೂ ಬೇಡ ಎಂದೆ. ಒಂದಾ ಈ ತರಹದ ಸಿನಿಮಾಗಳನ್ನು ಒಪ್ಪಿಕೊಳ್ಳಬಾರದು, ಒಪ್ಪಿಕೊಂಡರೆ ಅದಕ್ಕೆ ನ್ಯಾಯ ಒದಗಿಸಬೇಕು’ ಎನ್ನುವುದು ಸುದೀಪ್‌ ಮಾತು.

ಒಳಗೊಳಗೆ ಮುಜುಗರ
ಹೇಳಿಕೇಳಿ “ಪೈಲ್ವಾನ್‌’ ಕುಸ್ತಿ ಹಿನ್ನೆಲೆಯ ಸಿನಿಮಾ. ಪಾತ್ರಕ್ಕಾಗಿ ಅಂಗಿ ಬಿಚ್ಚಿ, ಕುಸ್ತಿಪಟುವಾಗಿ ನಿಲ್ಲಬೇಕಾದ ಅನಿವಾರ್ಯತೆ ಸುದೀಪ್‌ ಅವರದು. ಇಷ್ಟು ವರ್ಷದ ತಮ್ಮ ಸಿನಿ ಕೆರಿಯರ್‌ನಲ್ಲಿ ಸುದೀಪ್‌ ಮೈ ತುಂಬಾ ಬಟ್ಟೆ ಹಾಕಿಕೊಂಡು ಸ್ಟೈಲಿಶ್‌ ಆಗಿ ಕಾಣಿಸಿಕೊಂಡವರು. ಆದರೆ, “ಪೈಲ್ವಾನ್‌’ನಲ್ಲಿ ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳಬೇಕೆಂದಾಗ ಆರಂಭದಲ್ಲಿ ತುಂಬಾ ಮುಜುಗರವಾಯಿತಂತೆ.

“ನಾನು ಈ ತರಹ ಯಾವತ್ತೂ ಕಾಣಿಸಿಕೊಂಡವನಲ್ಲ. ಒಳ್ಳೆಯ ಬಟ್ಟೆಹಾಕಿಕೊಂಡೇ ಇದ್ದವನು. ಆದರೆ, ಏಕಾಏಕಿ ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳಬೇಕೆಂದಾಗ ಮುಜುಗರವಾಗಿದ್ದು ಸುಳ್ಳಲ್ಲ. ಶಾಟ್‌ ರೆಡಿ ಎಂದಾಗ ವ್ಯಾನಿಟಿ ವ್ಯಾನ್‌ನಿಂದ ಇಳಿಯುವಾಗ ಒಂಥರಾ ಆಗುತ್ತಿತ್ತು. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ಕೊನೆಗೆ ಯಾರು ಏನಾದರೂ ಅಂದುಕೊಳ್ಳಲಿ ಎನ್ನುತ್ತಾ ಸೆಟ್‌ಗೆ ಹೋದೆ. ಆ ನಂತರ ಅದೇ ಒಂದು ಹೊಸ ಅನುಭವ ಕೊಟ್ಟಿತು’ ಎಂದರು ಸುದೀಪ್‌.

ಇನ್ನು, ಸುದೀಪ್‌ ಅವರಿಗೆ ಈ ಸಿನಿಮಾ ಮಾಡುವಾಗ ಆರಂಭದಲ್ಲಿ ಸಾಕಷ್ಟು ಮೂಡ್‌ಸ್ವಿಂಗ್‌ ಆಗುತ್ತಿತ್ತಂತೆ. ಸಣ್ಣ ಸಣ್ಣ ವಿಚಾರಗಳಿಗೂ ಇರಿಟೇಟ್‌ ಆಗುತ್ತಿದ್ದರಂತೆ. ಅದಕ್ಕೆ ಕಾರಣ, ಏಕಾಏಕಿ ಬದಲಾದ ಅವರ ಲೈಫ್ ಸ್ಟೈಲ್‌. ಆದರೆ, ಈಗ ಅದು ಹೊಸ ಲೈಫ್ಸ್ಟೈಲ್‌ ಅನ್ನು ಕೊಟ್ಟ ಖುಷಿಯೂ ಅವರಿಗಿದೆ. ಇನ್ನು ಚಿತ್ರದಲ್ಲಿ ನಟಿಸಿದ ಸುನೀಲ್‌ ಶೆಟ್ಟಿ, ನೃತ್ಯ ನಿರ್ದೇಶಕ ಗಣೇಶ್‌ ಆಚಾರ್ಯ ಅವರ ಸಹಕಾರವನ್ನು ಸುದೀಪ್‌ ನೆನೆಯುತ್ತಾರೆ. ಜೊತೆಗೆ ನಿರ್ದೇಶಕ ಕೃಷ್ಣ ಆವರ ಪ್ಲ್ರಾನಿಂಗ್‌, ದೊಡ್ಡ ಆಲೋಚನೆಗಳನ್ನು ಕೊಂಡಾಡಿದರು.

ಸಿನಿಮಾದ ವಕೌìಟ್‌ ಬಗ್ಗೆ ಮಾತನಾಡುವ ಸುದೀಪ್‌, “ನಾನು ಈ ಸಿನಿಮಾಕ್ಕಾಗಿ ಸಾಕಷ್ಟು ವಕೌìಟ್‌ ಮಾಡಿದ್ದೇನೆ ನಿಜ. ಆದರೆ, ನಾನೇ ಏನೇ ವಕೌìಟ್‌ ಮಾಡಲಿ ಅಥವಾ ಸಿಕ್ಸ್‌ಪ್ಯಾಕ್‌ನಲ್ಲಿ ಕಾಣಿಸಿಕೊಂಡರೂ ಮೂಲಕಥೆಯೇ ನಿಮಗೆ ಕನ್ವಿನ್ಸ್‌ ಆಗದಿದ್ದರೆ ಬೇರೆಲ್ಲವೂ ವ್ಯರ್ಥವಾಗುತ್ತದೆ. ಯಾವುದೇ ಸಿನಿಮಾವಾದರೂ ಕಥೆ ಜನರನ್ನು ಕನ್ವಿನ್ಸ್‌ ಮಾಡಬೇಕು. ಆಗ ಮಿಕ್ಕಿದ್ದೆಲ್ಲವೂ ಚೆನ್ನಾಗಿ ಕಾಣುತ್ತದೆ’ ಎನ್ನುವುದು ಸುದೀಪ್‌ ಮಾತು.

ನಿರ್ದೇಶಕ ಕೃಷ್ಣ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಈ ಸಿನಿಮಾ ಆರಂಭವಾದ ಬಗ್ಗೆ, ಸುದೀಪ್‌ ನೀಡಿದ ಸಹಕಾರದ ಬಗ್ಗೆ ಮಾತನಾಡಿದರು. ಇಷ್ಟೊಂದು ದೊಡ್ಡ ಮಟ್ಟದ ಸಿನಿಮಾವನ್ನು ಮಾಡುತ್ತೇವೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ, ಇವತ್ತು ಅದು ಸಾಧ್ಯವಾಗಿದ್ದು, ಸುದೀಪ್‌ ಅವರಿಂದ. ಅವರನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂಬುದು ಸ್ವಪ್ನ ಹಾಗೂ ಕೃಷ್ಣ ಅವರ ಮಾತು. ಚಿತ್ರದ ಆಡಿಯೋ ರೈಟ್ಸ್‌ ಅನ್ನು ಲಹರಿ ಸಂಸ್ಥೆ ಪಡೆದುಕೊಂಡಿದೆ. ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕೆಆರ್‌ಜಿ ಸ್ಟುಡಿಯೋ, ಹಿಂದಿಯಲ್ಲಿ ಝಿ ಸ್ಟುಡಿಯೋಸ್‌ ಹಾಗೂ ತೆಲುಗಿನಲ್ಲಿ ವರಾಹಿ ಫಿಲಂಸ್‌ ಬಿಡುಗಡೆ ಮಾಡುತ್ತಿದೆ. ಈ ಮೂವರು ಕೂಡಾ “ಪೈಲ್ವಾನ್‌’ ಬಗ್ಗೆ ಖುಷಿ ಹಂಚಿಕೊಂಡರು. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರ ಆಗಸ್ಟ್‌ 29ಕ್ಕೆ ಬಿಡುಗಡೆಯಾಗಲಿದೆ. ಜುಲೈ 27 ರಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

Kannada Actress; ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

Purushothamana Prasanga; ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡಚಿತ್ರ ಇಂದು ತೆರೆಗೆ

Purushothamana Prasanga; ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡಚಿತ್ರ ಇಂದು ತೆರೆಗೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.