ಏಕಕಾಲದಲ್ಲಿ ಮೂರು ಸಿನಿಮಾ: ಗಾಂಧಿ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ


Team Udayavani, Apr 28, 2017, 10:55 AM IST

28-SUCHI-9.jpg

ಒಬ್ಬೊಬ್ಬರಿಗೆ ಒಂದೊಂದು ಫೈಲು ಕೊಟ್ಟರು ಪೂಜಾ ಗಾಂಧಿ. ಮಿಸ್‌ ಮಾಡದೇ ಖಂಡಿತಾ ಬರಬೇಕು ಅಂತ ಹೇಳುತ್ತಲೇ ಆಹ್ವಾನವಿತ್ತರು. ಎಲ್ಲರೂ ಆಹ್ವಾನ ಪತ್ರಿಕೆ ಕೊಟ್ಟು ಕರೆಯುತ್ತಾರೆ, ಇದೇನು ಪೂಜಾ ಫೈಲ್‌ ಕೊಡುತ್ತಿದ್ದಾರಲ್ಲ ಎಂದರೆ ಆ ಫೈಲ್‌ನಲ್ಲಿದ್ದುದು ಆಹ್ವಾನ ಪತ್ರಿಕೆಯೇ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಆಹ್ವಾನ  ಪತ್ರಿಕೆಯನ್ನೂ ಫೈಲ್‌ನಂತೆಯೇ ಮಾಡಿಸಿ ಹಂಚಿದ್ದಾರೆ ಪೂಜಾ ಗಾಂಧಿ. ಅಂದಹಾಗೆ, ಪೂಜಾ ಗಾಂಧಿ ಆಹ್ವಾನ ಪತ್ರಿಕೆ ಕೊಟ್ಟಿದ್ದು ತಮ್ಮ ನಿರ್ಮಾಣದ ಹೊಸ ಚಿತ್ರಗಳ ಮುಹೂರ್ತ ಸಮಾರಂಭದ್ದು. ಪೂಜಾ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ ಎಂಬ ಪ್ರೊಡಕ್ಷನ್‌ ಹೌಸ್‌ ಹುಟ್ಟು ಹಾಕಿ 10 ಚಿತ್ರಗಳನ್ನು
ನಿರ್ಮಿಸುವುದಕ್ಕೆ ಯೋಚಿಸುತ್ತಿರುವುದು, ಆ ಪೈಕಿ ಮೂರು ಸದ್ಯದಲ್ಲೇ ಸೆಟ್ಟೇರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಪೂಜಾ ಆಹ್ವಾನ ಕೊಟ್ಟಿದ್ದು ಸಹ ಅದೇ ಮೂರು ಚಿತ್ರಗಳ ಮುಹೂರ್ತ ಸಮಾರಂಭದ್ದು. ಮೇ ಎರಡಕ್ಕೆ ಒಂದೇ ವೇದಿಕೆಯಲ್ಲಿ ಮೂರೂ
ಚಿತ್ರಗಳು ಪ್ರಾರಂಭವಾಗಲಿದ್ದು, ಆ ಕುರಿತು ಮಾಹಿತಿ ನೀಡುವುದಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಹ್ವಾನಿಸುವುದಕ್ಕೆ ಪತ್ರಿಕಾಗೋಷ್ಠಿ
ಕರೆದಿದ್ದರು ಪೂಜಾ. ಆಹ್ವಾನ ಪತ್ರಿಕೆಯನ್ನೇನೋ ಅವರು ತುಂಬು ಪ್ರೀತಿಯಿಂದ ಕೊಟ್ಟರು. ಆದರೆ, ಮಾಹಿತಿಯನ್ನು ಮಾತ್ರ
ಮುಂದೆ ಹೇಳ್ತೀನಿ ಎಂದು ತೇಲಿಸಿದರು.

“ಉತಾಹಿ’ ಅಂದರೇನು?
ನನಗೆ ಗೊತ್ತಿಲ್ಲ. ನಿರ್ದೇಶಕ ಜೆಡಿ ಅವರನ್ನ ಕೇಳಿ. ಅವರು ಮುಹೂರ್ತದಲ್ಲಿ ಸಿಗ್ತಾರಲ್ವಾ. ಆಗ ಕೇಳಿ.

ಏನು ಅಂತ ಗೊತ್ತಿಲ್ಲದೇ ಸಿನಿಮಾ ಮಾಡೋಕೆ ಒಪ್ಪಿದ್ರಾ?
ಜೆಡಿ ತುಂಬಾ ಸಬೆjಕ್ಟ್ಗಳನ್ನ ಹೇಳಿದ್ರು. ಇದು ಇಷ್ಟ ಆಯ್ತು. ಇದರ ಜೊತೆಗೆ ಇನ್ನೊಂದೆರೆಡು ಸಹ ಇಷ್ಟ ಆಯ್ತು. ಅದಕ್ಕೆ ಮಾಡ್ತಾ ಇದ್ದೀನಿ. ಇದಕ್ಕೂ ಮುನ್ನ ಶುರುವಾಗಬೇಕಿದ್ದ 

“ರಾವಣಿ’ ಏನಾಯ್ತು?
ಅದು ಕಾರಣಾಂತರಗಳಿಂದ ಆಗಲಿಲ್ಲ.

ಏನಾದರೂ ಸಮಸ್ಯೆನಾ?
ನಾನು ಮತ್ತು ಚಂದ್ರಚೂಡ್‌ ಇಬ್ಬರೂ ಒಳ್ಳೆಯ ಸ್ನೇಹಿತರು. ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ ಅಷ್ಟೇ. ಅದು ಬಿಟ್ಟರೆ
ನಮ್ಮಿಬ್ಬರ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ಸದ್ಯಕ್ಕೆ ಆ ಸಿನಿಮಾ ಆಗುತ್ತಿಲ್ಲ. ಮುಂದೆ ನೋಡೋಣ.

ಕಳಸಾ-ಬಂಡೂರಿ ಕುರಿತು ಸಾಕ್ಷ್ಯಚಿತ್ರ ಮಾಡೋಕೆ ಹೊರಟಿದ್ದಿರಿ?
ಅದನ್ನ ಇನ್ನೊಂದು ವೇದಿಕೇಲಿ ಮಾತಾಡ್ತೀನಿ. ಈಗ ಬರೀ ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ ಬಗ್ಗೆ ಮಾತಾಡೋಣ. 

“ದಂಡುಪಾಳ್ಯ 3’ನಲ್ಲಿ ಹುಡುಗಿ ಜೊತೆಗೆ ಕಿಸ್ಸಿಂಗ್‌ ಸೀನ್‌ ಇದೆಯಂತೆ?
ಹೌದು. ಆ ಬಗ್ಗೆ ನಿರ್ದೇಶಕರನ್ನ ಕೇಳಿ. ನನಗೆ ಕನ್ವಿನ್ಸ್‌ ಆಯಿತು. ಅದಕ್ಕೆ ಒಪ್ಪಿಕೊಂಡೆ. ಯಾಕೆ ಆ ಕಿಸ್ಸಿಂಗ್‌ ಸೀನ್‌ ಅಂತ ಗೊತ್ತಾಗಬೇಕಿದ್ದರೆ ಸಿನಿಮಾ ನೋಡಿ. 

ಎಲ್ಲಾ ಸರಿ, ಮದುವೆ ವಿಷಯ ಏನಾಯ್ತು?
ಸಿನಿಮಾ ಮುಹೂರ್ತಕ್ಕೇ ಪ್ರಸ್‌ ಮೀಟ್‌ ಮಾಡಿ ಆಹ್ವಾನ ಪತ್ರಿಕೆ ಕೊಡೋವಾಗ, ಮದುವೆಗೆ ಕರೆಯೋಲ್ವಾ? ಇದಕ್ಕಿಂತ 100 ಪರ್ಸೆಂಟ್‌ ದೊಡ್ಡದಾಗಿ ಮಾಡ್ತೀನಿ. ಮದುವೆ ಇನ್ವಿಟೇಷನ್‌ ದೇ ಒಂದು ಫೈಲ್‌ ಕೊಡುತ್ತೀನಿ. ಹೀಗೆ ಪೂಜಾ ಟಕ್‌ಟಕ್‌ ಅಂತ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಈ ಮಧ್ಯೆ ಗೊತ್ತಾದ ವಿಷಯವೆಂದರೆ, ಈ ಮೂರೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆಯೆಂದು. “ಉತಾಹಿ’ ಲವ್‌ಸ್ಟೋರಿ, “ಬ್ಲಾಕ್‌ ವರ್ಸಸ್‌ ವೈಟ್‌’ ಒಂದು ಸೋಷಿಯಲ್‌ ಡ್ರಾಮಾ ಮತ್ತು “ಭೂ’
ಹಾರರ್‌ ಚಿತ್ರವಂತೆ. ಈ ಪೈಕಿ ಬಹಳ ದಿನಗಳ ನಂತರ ಲವ್‌ಸ್ಟೋರಿಯಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ ಪೂಜಾ ಗಾಂಧಿ. “ಬಹಳ ದಿನಗಳಾಗಿತ್ತು ನಾನು ಲವ್‌ಸ್ಟೋರಿಯೊಂದರಲ್ಲಿ ಕಾಣಿಸಿಕೊಂಡು. ಇತ್ತೀಚೆಗೆಲ್ಲಾ ಬೇರೆ ತರಹದ ಸಿನಿಮಾಗಳಲ್ಲೇ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದೆ. “ಉತಾಹಿ’ಯಲ್ಲಿ ಆ ಚಾನ್ಸ್‌ ಸಿಕ್ಕಿದೆ. ಇನ್ನು “ಭೂ’ನಲ್ಲಿ ನಾನು ನಟಿಸುತ್ತಿಲ್ಲ. ಆ ಚಿತ್ರದಲ್ಲಿ ಹೊಸಬರನ್ನ ಪರಿಚಯ ಮಾಡ್ತಿದ್ದೀವಿ. “ಬ್ಲಾಕ್‌ ವರ್ಸಸ್‌ ವೈಟ್‌’ನಲ್ಲಿ ಇಬ್ಬರು ಹುಡುಗರು, ಹುಡುಗಿಯರು ಇರುತ್ತಾರೆ. “ಉತಾಹಿ’ಯಲ್ಲಿ 50 ಜನರನ್ನ ಪರಿಚಯ
ಮಾಡ್ತಿದ್ದೀನಿ. ನಾನು ಚಿತ್ರರಂಗಕ್ಕೆ ಬಂದಾಗ ಸ್ಟ್ರಗಲ್‌ ಮಾಡಿದ್ದೆ. ಕನ್ನಡದಲ್ಲಿ ನಟಿಸೋ ಮುಂಚೆ ಗುಜರಾತಿ ಮತ್ತು ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದೆ. ಈಗ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವರನ್ನೆಲ್ಲಾ ಪರಿಚಯಿಸುತ್ತಿದ್ದೀನಿ’ ಎನ್ನುತ್ತಾರೆ ಪೂಜಾ ಗಾಂಧಿ

ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.