ವೈಟ್ನರ್‌ ಹಿಂದಿನ ಕಪ್ಪು ಕಥೆ!ಮಾದಕ ವ್ಯಸನದ ಸುತ್ತ ಕಿರುಚಿತ್ರ


Team Udayavani, Aug 25, 2017, 6:15 AM IST

as.jpg

ಮಾದಕ ವ್ಯಸನ ಕುರಿತು ಕಿರುಚಿತ್ರಗಳು ಬಂದಿರುವುದೇನೋ ನಿಜ. ಆದರೆ, ಚಿಕ್ಕವಯಸ್ಸಲ್ಲೇ ಸಾಮಾಜಿಕ ಸಮಸ್ಯೆ ಕುರಿತ ಕಿರುಚಿತ್ರವೊಂದನ್ನು ನಿರ್ದೇಶಿಸಿರುವುದು ಹೊಸದು. 

“ಹೆಬ್ಬುಲಿ’ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಘುನಾಥ್‌ ಅವರ ಪುತ್ರ  ವಾಗ್ಮಿ ಆರ್‌. ಯಜುರ್ವೇದಿ ಇದೇ ಮೊದಲ ಸಲ “ಘ್ರಾಣ’ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಆ ಕಿರುಚಿತ್ರದ ಪ್ರದರ್ಶನ ಏರ್ಪಡಿಸಿದ್ದರು ವಾಗ್ಮಿ. ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು, “ಘ್ರಾಣ’ ಹಿಂದೆ ನಿಂತ ವಾಗ್ಮಿ, ಆ ಬಗ್ಗೆ ಒಂದಷ್ಟು ಹೇಳಿಕೊಂಡರು. 

“ಈಗಿನ ಸಮಾಜದಲ್ಲಿ ಯುವಕರೇ ಹೆಚ್ಚು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದಕ್ಕೆ ಪೋಷಕರೂ ಕಾರಣ. ಯಾಕೆಂದರೆ, ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೋರಿಸದಿರುವುದು, ಅವರ ಕುರಿತು ಗಮನಹರಿಸದಿರುವುದು ಇಂತಹ ಸಾಮಾಜಿಕ ಸಮಸ್ಯೆಗೆ ಮಕ್ಕಳು ಸಿಲುಕಲು ಕಾರಣವಾಗಿದೆ. ಎಷ್ಟೋ ಮಕ್ಕಳು, ಪೋಷಕರ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಪೋಷಕರು ತಮ್ಮ ಕೆಲಸಗಳ ಒತ್ತಡದ ನಡುವೆ ಇಂದು ಮಕ್ಕಳ ಮೇಲೆ ನಿಗಾ ಇಡುತ್ತಿಲ್ಲ. ಹೀಗಾಗಿ, ಮಕ್ಕಳು ಸುಲಭವಾಗಿ, ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅಂತಹ ವಿಷಯ ಇಟ್ಟುಕೊಂಡು ಕಿರುಚಿತ್ರ ಮಾಡಿದ್ದೇನೆ. ಈ ಮೂಲಕ ಸಾಮಾಜಿಕ ಸಮಸ್ಯೆಯತ್ತ ಚಿತ್ತ ಹರಿಸಿದ್ದೇನಷ್ಟೇ. ಸುಮಾರು 20 ದಿನಗಳ ಕಾಲ, ಮೋಹನ್‌ ಬಿ.ಕೆರೆ ಸ್ಟುಡಿಯೋದಲ್ಲಿ ಮತ್ತು ಉಳಿದಂತೆ ಸೆಟ್‌ ಹಾಕಿಸಿ ಚಿತ್ರೀಕರಿಸಲಾಗಿದೆ. ಈ ಕಿರುಚಿತ್ರ ಮೂಲಕ ಪೋಷಕರು, ತಮ್ಮ ಮಕ್ಕಳ ಜತೆ ಹೆಚ್ಚು ಕಾಲ ಕಳೆಯಬೇಕು, ಅವರ ಮೇಲೆ ಪ್ರೀತಿ ತೋರಬೇಕು ಎಂಬುದನ್ನು ಹೇಳಹೊರಟಿದ್ದೇನೆ’ ಅಂದರು ವಾಗ್ಮಿ.

ಈ ಚಿತ್ರದಲ್ಲಿ ಪ್ರೌಢ ವಯಸ್ಕ ಮಕ್ಕಳ ತಜ್ಞ ಡಾ.ಸೋಮಶೇಖರ್‌ ವೈದ್ಯರಾಗಿ ನಟಿಸಿದ್ದಾರೆ. 
“ಪ್ರೌಢವಯಸ್ಕ ಮಕ್ಕಳು ಹೆಚ್ಚಾಗಿ ಇಂತಹ ದುಶ್ಚಟಗಳಿಗೆ ಬಿದ್ದಿದ್ದಾರೆ. “ಉಡ್ತಾ ಪಂಜಾಬ್‌’ನಂತೆ “ಉಡ್ತಾ ಬೆಂಗಳೂರು’ ಆಗಿದೆ. ಬೆಂಗಳೂರಲ್ಲಿ ನಾನು ಸ್ಟಡಿ ಮಾಡಿದಂತೆ ಸಾಕಷ್ಟು ಮಾದಕ ವ್ಯಸನಗಳಿಗೆ ದಾಸರಾಗಿದ್ದಾರೆ. ವಾಗ್ಮಿ ಹೇಳಿದಂತೆ, ಪೋಷಕರ ಬೇಜವಾಬ್ದಾರಿತನದಿಂದಾಗಿ ಮಕ್ಕಳು ಇಂತಹ ಹಾದಿ ಹಿಡಿಯುತ್ತಿದ್ದಾರೆ. ಮನೆಯಲ್ಲೇ ಸಿಗುವ ವೈಟ್ನರ್‌, ನೈಲ್‌ ಪಾಲಿಷ್‌, ಪೇಂಟ್‌ ಇತರೆ ವಸ್ತುಗಳು ಅಪಾಯಕಾರಿ. ಮಕ್ಕಳು ಸುಲಭವಾಗಿ ಅವುಗಳಿಗೆ ಮಾರುಹೋಗಿ ವ್ಯಸನಿಗಳಾಗುತ್ತಿದ್ದಾರೆ. ಈ ಕಿರುಚಿತ್ರ ಸಾಮಾಜಿಕ ಸಮಸ್ಯೆಯನ್ನು ಎತ್ತಿತೋರಿಸುವಂತಿದೆ. ಇದೊಂದು ಸಂದೇಶವುಳ್ಳ ಕಿರುಚಿತ್ರ ಅಂದರು ಸೋಮಶೇಖರ್‌.

ಇನ್ನು, ಈ ಕಿರುಚಿತ್ರಕ್ಕೆ ಸಹಕರಿಸಿದ್ದು, ವಾಗ್ಮಿ ಅವರ ತಾಯಿ ವಾಣಿ. ಅವರು ಮಗನ ತುಡಿತ ಮತ್ತು ಪ್ರತಿಭೆ ನೋಡಿ, ಸಹಕಾರ ನೀಡಿದ್ದಾರೆ. ನಿರ್ಮಾಪಕ ರಘುನಾಥ್‌ ಅವರಿಗೆ ಎಲ್ಲವೂ ಮುಗಿದ ಮೇಲಷ್ಟೇ ಗೊತ್ತಾಯ್ತಂತೆ. ಕೊನೆಗೆ ಮಗನ ಪ್ರತಿಭೆ ಮೆಚ್ಚಿಕೊಂಡ ಅವರು, ಕೆಲ ಸಣ್ಣಪುಟ್ಟ ಬದಲಾವಣೆ ಹೇಳಿ, ಕಿರುಚಿತ್ರ ಮೂಡಿಬರಲು ಕಾರಣರಾಗಿದ್ದಾರೆ. ಚಿತ್ರಕ್ಕೆ ಚಿಂತನ್‌ ಜೋಯಿಸ್‌ ಕ್ಯಾಮೆರಾ ಹಿಡಿದಿದ್ದು, ನಂದಿನಿ ನಂಜಪ್ಪ ಕಥೆ, ಸಂಭಾಷಣೆ ಬರೆದಿದ್ದಾರೆ. ವಿನು ಮನಸು ಸಂಗೀತ ನೀಡಿದ್ದಾರೆ.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.