ಮಾರುಕಟ್ಟೆಯ ಸೌಧವೆಂಬ ಅದ್ಭುತ


Team Udayavani, Sep 29, 2019, 4:33 AM IST

t-2

ವಿವಿಧ ವಿನ್ಯಾಸಗಳ ಆಧುನಿಕ ಕಟ್ಟಡಗಳಿಗೆ ಹೆಸರುವಾಸಿಯಾದ ನೆದರ್ಲೆಂಡ್ಸ್‌ನ ರೋಟರ್‌ ಡಾಮ್‌ ನಗರದ ಪ್ರಮುಖ ಆಕರ್ಷಣೆ ಅಲ್ಲಿನ ಮಾರುಕಟ್ಟೆಯ ಸೌಧ ಅಥವಾ ಮಾರ್ಕ್ಟ್ ಹಾಲ್ ಕೇಂದ್ರ ಭಾಗದಲ್ಲಿ ಗಿಜಿಗುಡುವ ಸಂತೆ ಮತ್ತು ಹೋಟೆಲ್‌ಗ‌ಳಾದರೆ ಬದಿಗಳಲ್ಲಿ ಹಾಗೂ ಮೇಲ್ಛಾವಣಿಯಲ್ಲಿ ವಾಸದ ವಿಶಿಷ್ಟ ಮನೆಗಳು, ನೆಲಮಾಳಿಗೆಯಲ್ಲಿ ನಾಲ್ಕು ಅಂತಸ್ತಿನ ವಾಹನ ನಿಲುಗಡೆಯ ಸ್ಥಳ, ಮಾರುಕಟ್ಟೆಯ ಜಾಗದ ಒಳಛಾವಣಿಯಲ್ಲಿ ಸುಂದರವಾದ ಚಿತ್ರಕಲಾಕೃತಿಯಿದೆ. ವಾಸ, ವ್ಯಾಪಾರ, ಆಹಾರ, ವಾಹನ ನಿಲುಗಡೆ, ಕಲೆ ಎಲ್ಲದರ ಸಂಗಮವೂ ಒಂದೇ ನಿರ್ಮಿತಿಯಲ್ಲಿರುವುದು ಇದರ ವಿಶೇಷ.

2009ರ ಅಕ್ಟೋಬರ್‌ನಲ್ಲಿ ಇದರ ನಿರ್ಮಾಣ ಶುರುವಾಯಿತು. ನಿರ್ಮಾಣ ಪೂರ್ಣಗೊಂಡು 2014ರ ಅಕ್ಟೋಬರ್‌ನಲ್ಲಿ ನೆದರ್ಲೆಂಡ್ಸ್‌ ನ ರಾಣಿ ಮಾಕ್ಸಿಮಾರಿಂದ ಉದ್ಘಾಟಿಸಲ್ಪಟ್ಟಿತು. 178 ಮಿಲಿಯ ಯೂರೋಗಳ ಖರ್ಚಿನಲ್ಲಿ ನಿರ್ಮಿತವಾದ ಈ ಸೌಧ ಪೂರ್ತಿಯಾಗುವ ಮೊದಲೇ ತನ್ನ ವಿಶೇಷತೆಗಳಿಂದಾಗಿ ಪ್ರಖ್ಯಾತವಾಯಿತು. ಇದನ್ನು ವಿನ್ಯಾಸಗೊಳಿಸಿದ್ದು MVDRV ಎಂಬ ಡಚ್‌ ಸಂಸ್ಥೆ.

ಇಡೀ ಸೌಧದ ಉದ್ದ 120 ಮೀ. ಗಳು, ಅಗಲ 70 ಮೀ. ಗಳು ಹಾಗೂ ಎತ್ತರ 40 ಮೀ. ಗಳು. ಮಾರುಕಟ್ಟೆಯನ್ನು ಪ್ರವೇಶಿಸುವ ಸ್ಥಳದಿಂದ ನೋಡಿದಾಗ ಇದು ಕುದುರೆಲಾಳದ ಆಕೃತಿಯಂತಿದೆ.

ಹೊರನೋಟಕ್ಕೆ ಸಮ್ಮಿತೀಯವಾದ ಈ ಸೌಧದ ಎರಡು ಬದಿಯಲ್ಲಿ ಗಾಜಿನ ಗೋಡೆಗಳಿವೆ. ಈ ಗೋಡೆಗಳ ಕೆಳ ಭಾಗಗಳಿಂದ ಮಾರುಕಟ್ಟೆಗೆ ಪ್ರವೇಶ. ಈ ಗೋಡೆಗಳನ್ನು ಉಕ್ಕಿನ ಸರಳುಗಳ ಮೇಲೆ ಆಧರಿಸಿರುವ ಚೌಕಾಕಾರದ ಗಾಜಿನ ತುಂಡುಗಳಿಂದ ನಿರ್ಮಿಸಲಾಗಿದೆ. ಪ್ರತಿಗೋಡೆಯಲ್ಲಿ ಗಾಜಿನ ತುಣುಕುಗಳನ್ನು ಹಿಡಿದಿಡಲು ಉಪಯೋಗಿಸಿ ದ್ದು 26 ಲಂಬವಾದ ಸರಳುಗಳು, 22 ಅಡ್ಡವಾದ ಸರಳುಗಳು.

ಮಾರುಕಟ್ಟೆಯ ಒಳಭಾಗದ ಛಾವಣಿಪೂರ್ತಿ ಆನೊì ಕೊನೆನ್‌ ಎಂಬ ಕಲಾವಿದನ ಕೃತಿ ಇದೆ. 3 ಈ ತಂತ್ರಜ್ಞಾನ ಉಪಯೋಗಿಸಿ 4000 ಅಲ್ಯುಮಿನಿಯಮ್‌ ಹಾಳೆಗಳ ಮೇಲೆ ಮುದ್ರಿಸಿ ಅವುಗಳನ್ನು ಛಾವಣಿಯಲ್ಲಿ ಅಳವಡಿಸಲಾಯಿತು. ಇದನ್ನು ಹಾರ್ನ್ ಆಫ್ ಪ್ಲೆಂಟಿ ಎನ್ನುತ್ತಾರೆ. ಹಣ್ಣು, ತರಕಾರಿ, ಹೂವು, ಮೀನು, ಕೀಟಗಳ ಚಿತ್ರಗಳು ಇಡೀ ಜಾಗದ ಸೌಂದರ್ಯವನ್ನು ವೃದ್ಧಿಸಿವೆ. ಇದರ ಒಟ್ಟು ವಿಸ್ತಾರ 11, 000 ಚದರ ಮೀ. ಗಳು. ಇದನ್ನು ವೀಕ್ಷಿಸಿದ ಹಲವರು ಜಗತ್ತಿನ ಅತ್ಯಂತ ದೊಡ್ಡ ಕಲಾಕೃತಿ ಎಂದು ವರ್ಣಿಸಿದ್ದಾರೆ.

ನಾಲ್ಕು ಅಂತಸ್ತುಗಳ ನೆಲಮಾಳಿಗೆಯಲ್ಲಿ 1200ರಷ್ಟು ವಾಹನಗಳನ್ನು ನಿಲುಗಡೆ ಮಾಡುವಷ್ಟು ಅವಕಾಶವಿದೆ.

ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.