ದೇಹವೇ ಗಂಧದಗುಡಿ


Team Udayavani, Jul 4, 2018, 6:00 AM IST

p-1.jpg

ಅನೇಕರಿಗೆ ಸುಗಂಧದ್ರವ್ಯವೇ ಬ್ಯೂಟಿಯ ಬಂಡವಾಳ. ಪರ್ಫ್ಯೂಮ್‌ ಪೂಸಿಕೊಳ್ಳದೇ, ಹೊರಗೆ ಕಾಲೇ ಇಡುವುದಿಲ್ಲ. ಹೋದಲ್ಲಿ, ಬಂದಲ್ಲಿ ನಮ್ಮದೇ ಹವಾ ಎನ್ನುವಂತೆ, ತಮ್ಮ ಓಡಾಟಕ್ಕೊಂದು ಸಿಗ್ನೇಚರ್‌ ರೀತಿ ಪರ್ಫ್ಯೂಮ್‌ ಅನ್ನು ಬಳಸುವ “ಬಳ್ಳಿ’ಗಳೇ ಎಲ್ಲೆಡೆ ಕಾಣಸಿಗುತ್ತಾರೆ. ಒಮ್ಮೆ ಸುಳಿದಾಡಿದರೆ ಸಾಕು; ಪಕ್ಕದಲ್ಲಿದ್ದವರ ತಲೆ ಗಿರ್ರೆನ್ನುವಂತೆ ಮಾಡುವ ಈ ಸುಗಂಧದ್ರವ್ಯಗಳ ಮೋಹಕ ಪರಿಮಳವೂ ಅನೇಕ ಸಲ ಕಿರಿಕಿರಿ ಸೃಷ್ಟಿಸುವುದಿದೆ. ಆ ಪರ್ಫ್ಯೂಮ್‌, ತಮ್ಮ ಚರ್ಮಕ್ಕೆ ಎಷ್ಟೆಲ್ಲ ಹಾನಿ ಮಾಡುತ್ತಿದೆ ಎನ್ನುವ ಸಂಗತಿಯನ್ನೂ ಮರೆತು, ಅವರು ಮಿಂಚುತ್ತಿರುತ್ತಾರೆ.

ಅಷ್ಟಕ್ಕೂ, ಲಲನೆಯರಿಗೆ ಘಮ್ಮೆನ್ನಲು ಪರ್ಫ್ಯೂಮೇ ಬೇಕಂತಲೂ ಇಲ್ಲ. “ಪರ್ಫ್ಯೂಮ್‌ ಫ್ರೀ’ ಎನ್ನುವ ಪರಿಕಲ್ಪನೆಯಲ್ಲೂ ಮಿಂಚಬಹುದು ಎಂಬುದು ನಿಮ್ಗೆ ಗೊತ್ತೇ? ಪರ್ಫ್ಯೂಮ್‌ ಪೂಸಿಕೊಂಡರೆ ಹೆಚ್ಚೆಂದರೆ, ನಾಲ್ಕೈದು ತಾಸು ಮಾತ್ರ ಅದರ ಪರಿಮಳವಷ್ಟೇ. ಆದರೆ, ಅದನ್ನು ಪೂಸಿಕೊಳ್ಳದೆಯೂ ದಿನಪೂರ್ತಿ ಪರಿಮಳಯುಕ್ತವಾಗಿರಬಹುದು. ಅದು ಹೇಗೆ ಗೊತ್ತೇ?

1. ಸೋಪ್‌ ಮತ್ತು ಗುಲಾಬಿದಳ
ಸ್ನಾನಕ್ಕೆ 30 ನಿಮಿಷ ಮೊದಲು ನೀರಿನಲ್ಲಿ ಗುಲಾಬಿ ದಳಗಳನ್ನು ನೆನೆಹಾಕಿ, ನಂತರ ಆ ನೀರಿನಿಂದ ಸ್ನಾನ ಮಾಡಿ. ಮಾಮೂಲಿ ಮೈಸೋಪ್‌ಗಿಂತ, ಗಾಢ ಪರಿಮಳಯುಕ್ತ ಸೋಪ್‌ ಅನ್ನು ಬಳಸಿ. ಇವೆರಡರ ಕಾಂಬಿನೇಷನ್‌ ನಿಮ್ಮ ದೇಹವನ್ನು ಹೆಚ್ಚು ಹೊತ್ತು ಸುಗಂಧದಲ್ಲಿ ಮೀಯುವಂತೆ ಮಾಡುತ್ತದೆ.

2. ಲೋಶನ್‌ ಅಥವಾ ಮಾಯಿಶ್ಚರೈಸರ್‌
ಲೋಶನ್‌ ಇಲ್ಲವೇ ಮಾಯಿಶ್ಚರೈಸರ್‌ ಕೂಡ ಸುಗಂಧದ್ರವ್ಯಕ್ಕೆ ಪರ್ಯಾಯ ವಸ್ತುಗಳೇ ಆಗಿವೆ. ಆದರೆ, ಹಾಗೆ ಪರಿಮಳ ನೀಡುವ ಎಲ್ಲ ಲೋಶನ್‌ಗಳೂ ನಿಮ್ಮ ಚರ್ಮಕ್ಕೆ ಆಗಿಬರುತ್ತವೆ ಎಂದು ಹೇಳಲಾಗದು. ನಿಮ್ಮ ಚರ್ಮದ ಗುಣಕ್ಕೆ ಹೊಂದಿಕೊಳ್ಳುವಂಥ ಪರಿಮಳಯುಕ್ತ ಲೋಶನ್‌ಗೆ ಆದ್ಯತೆ ನೀಡಿ.

3. ನೈಲ್‌ ಪಾಲಿಶ್‌ 
ಕೈ ಬೆರಳಲ್ಲೂ ಹೂವಿನ ಪರಿಮಳವನ್ನು ಹುದುಗಿಸಬಹುದು. ಇಂಥ ಪರಿಮಳದ ಮ್ಯಾಜಿಕ್‌ ಅನ್ನು ಸೃಷ್ಟಿಸಬಲ್ಲಂಥ ಸುಗಂಧಯುಕ್ತ ನೈಲ್‌ ಪಾಲಿಶ್‌ಗಳು ಈಗ ಟ್ರೆಂಡ್‌ ಆಗಿವೆ. ಮೈಗೆ ಸುಗಂಧ ಪೂಸಿಕೊಂಡಂತೆ ಅನುಮಾನ ಹುಟ್ಟಿಸಬಲ್ಲ ಇವು 20ಕ್ಕೂ ಅಧಿಕ ಪರಿಮಳಗಳಲ್ಲಿ ಲಭ್ಯ. 

4. ಟೋನರ್‌ಗಳು
ಟೋನರ್‌ಗಳನ್ನು ಮುಖಕ್ಕೆ ಮಾತ್ರವೇ ಹಚ್ಚಿಕೊಳ್ಳಬಹುದಾದರೂ, ಪರ್ಫ್ಯೂಮ್‌ಗಿಂತ ಇವು ಉತ್ತಮ. ಇವುಗಳ ಪರಿಮಳವು ಮೂಗಿಗೆ ರಾಚುವುದೂ ಇಲ್ಲ. ನಿತ್ಯವೂ ಕಚೇರಿಯಲ್ಲಿ ದುಡಿಯುವವರು, ದಿನಕ್ಕೊಂದು ಟೋನರ್‌ಗಳನ್ನು ಹಚ್ಚಿಕೊಂಡು ಸಂಭ್ರಮಿಸಬಹುದು. ಈಗ ಬಗೆಬಗೆಯ ಟೋನರ್‌ಗಳೂ ಮಾರುಕಟ್ಟೆಯಲ್ಲಿವೆ. 

5. ಹೇರ್‌ ಸ್ಪ್ರೆ
ಶಾಂಪೂ ಇಲ್ಲವೇ ಕಂಡೀಶನರ್‌ಗಳನ್ನೂ ಪರ್ಫ್ಯೂಮ್‌ ಬದಲಿಗೆ ಬಳಸಬಹುದು. ಆದರೆ, ಇವನ್ನು ನಿತ್ಯವೂ ಬಳಸಲಾಗುವುದಿಲ್ಲ ಎಂಬುದೇ ಒಂದು ಚಿಂತೆ. ಇವುಗಳ ಬದಲಿಗೆ ತಲೆಕೂದಲಿಗೆ ಪರಿಮಳಯುಕ್ತ ಹೇರ್‌ಸ್ಪ್ರೆàಗಳನ್ನು ಉಪಯೋಗಿಸಬಹುದು. ಇವುಗಳ ಪರಿಮಳವು ಅತ್ಯಂತ ಮಧುರ.

6. ಬಾಡಿ ಬಟರ್‌
ಚರ್ಮಕ್ಕೆ ಮೃದುತ್ವ ನೀಡಲು ನೆರವಾಗುವ ಬಾಡಿ ಬಟರ್‌ಗಳು ಕೂಡ ಪರ್ಫ್ಯೂಮ್‌ನಂತೆಯೇ ಕೆಲಸ ಮಾಡುತ್ತವೆ. ಯೋಗ್ಯ ಬ್ರ್ಯಾಂಡ್‌ಗಳಿಗೆ ಹೋದರಷ್ಟೇ ನೀವು ಈ ಬಟರ್‌ಗಳಿಂದ ಪರಿಮಳವನ್ನು ನಿರೀಕ್ಷಿಸಬಹುದು. ಶರೀರವನ್ನು ಮಲ್ಲಿಗೆ ಹೂವಿನಂತೆ ಕಾಪಿಡಲು ಇವೂ ಉತ್ತಮ.

 -ಸುವಾಸಿನಿ

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.