ಈಗ ಹೊಟ್ಟೆಗೇನ್ರಿ ತಿಂತೀರಾ?


Team Udayavani, Aug 26, 2020, 8:49 PM IST

aVALU-TDY-4

“ಏನ್‌ ಮಾಡ್ತಾ ಇದ್ದೀಯ?’- ಲ್ಯಾಪ್‌ ಟಾಪ್‌ ಮುಂದೆ ಕೂತಿದ್ದವಳನ್ನು ಅಮ್ಮ ಕೇಳಿದಳು. “ಆಫೀಸ್‌ ಕೆಲಸಾ… ಪೆಂಡಿಂಗ್‌ ಉಳಿದುಬಿಟ್ಟಿದೆಯಮ್ಮಾ ‘ ಅಂದೆ ಲ್ಯಾಪ್‌ ಟಾಪ್‌ನಿಂದ ಕಣ್ಣು ಕೀಳದೆ. “ಐದು ನಿಮಿಷ ಬಿಟ್ಟು ಸ್ಟೌ ಮೇಲಿರೋ ಸಾಂಬಾರು ಇಳಿಸಿಡ್ತೀಯಾ?’ “ಐದು ನಿಮಿಷ ಬಿಟ್ಟಾ, ಹೂ ಸರಿ ಸರಿ…’ “ಹಂಗಾರೆ ನಾನು ಸ್ನಾನಕ್ಕೆ ಹೋಗ್ಲಾ?’ “ಹೂ ಕಣಮ್ಮಾ… ಆಯ್ತು ಹೋಗು…’ ಹತ್ತು ನಿಮಿಷದ ನಂತರ ಟೀಮ್‌ ಮೀಟಿಂಗ್‌ ಫಿಕ್ಸ್‌ ಆಗಿತ್ತು. ಅಷ್ಟರೊಳಗೆ ಈ ಕೆಲಸ ಮುಗಿಸಿ, ಎರಡು ನಿಮಿಷ ರೆಸ್ಟ್‌ ತಗೊಂಡು, ಆ ಬಿಡುವಿನ ಮಧ್ಯೆಯೇ ಸಾಂಬಾರು ಇಳಿಸಿಬಿಡಬೇಕು ಅಂದುಕೊಂಡು ಕೆಲಸ ಮಾಡುತ್ತಿದ್ದೆ. ನನ್ನ ಮಾತಿನ ಮೇಲೆ ನಂಬಿಕೆ ಇಟ್ಟಿದ್ದ ಅಮ್ಮ, ನಿರಾತಂಕವಾಗಿ ಸ್ನಾನಕ್ಕೆ ಹೋದಳು. ಆದರೆ, ಕೆಲಸದ ಗಡಿಬಿಡಿಯಲ್ಲಿ ಮೈ ಮರೆತ ನನಗೆ, ಅಮ್ಮ ಹೇಳಿದ್ದು ಮರೆತೇ ಹೋಗಿಬಿಡ್ತು.

ಹತ್ತು ನಿಮಿಷ ಕಳೆದ ನಂತರ ಮೀಟಿಂಗ್‌ ಶುರುವಾಯ್ತು. ನಿನ್ನೆ ಟೈಮಿಗೆ ಸರಿಯಾಗಿ ಕೆಲಸ ಮುಗಿಸಿಲ್ಲ ಅಂತ ಮ್ಯಾನೇಜರ್‌ ನನ್ನ ಮೇಲೆ ಗರಂ ಆಗಿದ್ದರು. ಅವರಿಂದ ಬೈಸಿಕೊಳ್ಳುತ್ತಿರುವಾಗ, ಅಡುಗೆ ಮನೆಯಿಂದ ಅಮ್ಮನ ಏರು ದನಿ ಕೇಳಿಸಿತು! “ಏನೇ, ನೀನು ಹೇಳಿದ ಒಂದು ಕೆಲಸಾನೂ ಸರಿಯಾಗಿ ಮಾಡಲ್ಲವಲ್ಲ? ಸಾಂಬಾರ್‌ ಎಲ್ಲಾ ಸುಟ್ಟುಹೋಯ್ತಲ್ಲ ಈಗ. ಅಡುಗೆ ಮಾಡೋದು ಬಿಡು, ಪಾತ್ರೆ ಇಳಿಸೋಕೂ ಆಗಲ್ವಾ ನಿಂಗೆ? ಮೂರು ಹೊತ್ತೂ ಸುಡುಗಾಡು ಕಂಪ್ಯೂಟರ್‌ ಮುಂದೆ ಕೂತಿರ್ತೀಯ. ಅದೇನ್‌ ಎಲ್ಲರ ಕೆಲಸವನ್ನೂ ನೀನೇ ಮಾಡ್ತೀಯೋ ಹೇಗೆ? ನಿನ್ನದು ಅದೇನು ಕೆಲಸಾನೋ ಏನೋ..’ ಅಂತ ರೂಮಿನ ಬಾಗಿಲಲ್ಲಿ ನಿಂತು ದಬಾಯಿಸತೊಡಗಿದಳು. ಅಯ್ಯೋ ದೇವರೇ, ಆ ಕಡೆಯಿಂದ ಬಾಸು, ಈ ಕಡೆಯಿಂದ ಅಮ್ಮ… ಇಬ್ಬರು ಹೇಳಿದ ಕೆಲಸವನ್ನೂ ನಾನು ಸರಿಯಾಗಿ ಮಾಡಿರಲಿಲ್ಲ. ಯಾರಿಗೆ ಏನು ಉತ್ತರಿಸುವುದು ಅಂತ ತೋಚದೆ ತಬ್ಬಿಬ್ಟಾಗಿ – “ಅಮ್ಮಾ, ಮೀಟಿಂಗ್‌ ನಡೀತಿದೆ ಹೋಗಮ್ಮ…’ ಅಂತ ಅವಳನ್ನು ಸಾಗಹಾಕಿದೆ. ಅಮ್ಮ ದುಸುಮುಸು ಅನ್ನುತ್ತಲೇ ಅಡುಗೆ ಮನೆಗೆ ಹೋದಳು. ಅಮ್ಮನ ಬೈಗುಳಗಳು ಕಾಲ್‌ನಲ್ಲಿದ್ದ ಎಲ್ಲರಿಗೂ ಕೇಳಿಸಿದೆ ಅನ್ನುವುದರಲ್ಲಿ ಸಂಶಯವಿರಲಿಲ್ಲ. ಆ ಕಡೆಯಿಂದ ಮ್ಯಾನೇಜರ್‌- “ಸಂಧ್ಯಾ, ಈಗ ಹೊಟ್ಟೆಗೇನ್ರಿ ತಿಂತೀರಾ?’ ಅಂದರು. ಅವರು ಯಾವತ್ತೂ ಹೀಗೆಲ್ಲಾ ಬೈದಿರಲಿಲ್ಲ, ಅದೂ ಕನ್ನಡದಲ್ಲಿ… “ಸಾರಿ ಸರ್‌, ಐ ವಿಲ್‌ ಡು ಇಟ್‌ ನೌ. ಗಿವ್‌ ಮೀ ಫೈವ್‌ ಮಿನಿಟ್ಸ…..’ ಅಂದೆ. “ನಾನು ಕೇಳಿದ್ದು ಕೆಲಸದ ವಿಷಯ ಅಲ್ಲಾರೀ, ಸಾಂಬಾರು ಸುಟ್ಟು ಹೋಯ್ತಲ್ಲ, ಈಗ ಊಟಕ್ಕೇನು ಮಾಡ್ತೀರಾ ಅಂತ ಕೇಳಿದೆ’ ಎಂದು ನಕ್ಕರು! ನಾನು ಪೆಚ್ಚಾಗಿ ನಗುತ್ತಾ, “ಅದನ್ನೆಲ್ಲಾ ಅಮ್ಮ ನೋಡ್ಕೊàತಾರೆ ಸಾರ್‌’ ಅಂದೆ. ಮೀಟಿಂಗ್‌ ಲಿ ಅಟೆಂಡ್‌ ಆಗಿದ್ದವರೆಲ್ಲಾ ಈ ಮಾತು ಕೇಳಿಸಿಕೊಂಡು ನಗುತ್ತಿ ರುವುದು ಕೇಳಿಸಿತು. ನಮ್ಮಮ್ಮ ಬೈದಿದ್ದನ್ನು ಕೇಳಿಸಿ ಕೊಂಡಿದ್ದ ಬಾಸ್‌ ಹೆಚ್ಚು ಬೈಯದೇ ಮೀಟಿಂಗ್‌ ಮುಗಿಸಿ ದರು. ಇಲ್ಲದಿದ್ದರೆ ಅವ ರಿಂದ ಇನ್ನೂ ಬೈಸಿಕೊಳ್ಳ ಬೇಕಾ ಗಿತ್ತೇನೋ!­

 

–  ಸಂಧ್ಯಾ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.