ಆನ್‌ ಲೈನ್‌ ಪಾಠಕೆ ಮೊಬೈಲೇ ಆಟಿಕೆ!


Team Udayavani, Sep 23, 2020, 7:59 PM IST

avalu-tdy-2

ಸಾಂದರ್ಭಿಕ ಚಿತ್ರ

ಆನ್‌ಲೈನ್‌ ಪಾಠದಿಂದಾಗಿ ಒಳಿತಾಯಿತೇ? ಕೆಡುಕಾಯಿತೇ? ಮಕ್ಕಳಿಗೆ ಹೊಂದಿಕೊಳ್ಳಲು ಕಷ್ಟವಾಯ್ತೆ? ಇಷ್ಟವಾಯ್ತೆ? ಟೀಚರ್‌ಗಳಿಗೆ ಆನ್‌ಲೈನ್‌ ಪಾಠ ಮಾಡುವುದು ಹೇಗನ್ನಿಸಿತು? ಎದುರಿನಲ್ಲಿ ಮಕ್ಕಳಿಲ್ಲದೆ ಪಾಠ ಮಾಡಲು ಉತ್ಸಾಹ ಬರಲಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಆನ್‌ಲೈನ್‌ ತರಗತಿ ಆರಂಭವಾದಾಗಲಿಂದಲೂ ಕೇಳಿಬರುತ್ತಿದೆ. ಲಾಕ್‌ಡೌನ್‌ ಶುರುವಾದಾಗ ಹಲವು ತರಗತಿ ಗಳಿಗೆ ಪರೀಕ್ಷೆಗಳು ಬಾಕಿ ಉಳಿದಿದ್ದವು. ಪರೀಕ್ಷಾ ತಯಾರಿಗಾಗಿ ಮಕ್ಕಳಿಗೆ ಮೊಬೈಲ್‌ನ ಅವಶ್ಯ ಕತೆ ತಲೆದೋರಿತು.

ಸುಲಭದ ಪರ್ಯಾಯವೇನು? ಅಮ್ಮನ ಮೊಬೈಲ್‌ ಮಕ್ಕಳಕೈ ಸೇರಿತು. ಸಣ್ಣಪುಟ್ಟ ಲೇಖನಗಳನ್ನು ವಾಟ್ಸ್ಯಾಪ್‌, ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದ ನನ್ನ ಸ್ನೇಹಿತೆಯರ ವಲಯದಲ್ಲಿ ಇದ್ದಕ್ಕಿದ್ದಂತೆ ಹಲವರು ನಾಪತ್ತೆಯಾದರು!

ಅಂತೂ ಇಂತೂ ಪರೀಕ್ಷೆಗಳು ಮುಗಿದು, ಮೊಬೈಲ್‌ ಅಮ್ಮಂದಿರ ಕೈಸೇರಿತು ಎಂದು ಸಂತೋಷ ಪಟ್ಟದ್ದೇ ಬಂತು. ಬೇಕೋ? ಬೇಡವೋ? ಎಂದೆಲ್ಲಾ ಚರ್ಚೆ ಮುಗಿದು, ಆನ್‌ಲೈನ್‌ನಲ್ಲೇ ಪಾಠ ಆರಂಭವಾಯ್ತು. ಸ್ವಲ್ಪ ಅನುಕೂಲ ಇದ್ದವರು ಮಕ್ಕಳಿಗೆ ಹೊಸ ಮೊಬೈಲ್‌ಕೊಡಿಸಿದರು. ಆದರೆ ಹೆಚ್ಚಿನ ಜನರಿಗೆ ಇದು ಹೇಗೆ ಸಾಧ್ಯವಾದೀತು? ಮೊದಲೇ ಲಾಕ್‌ ಡೌನ್‌ನಿಂದಾದ ಆರ್ಥಿಕಕುಸಿತ. ಮತ್ತೆ ಅಮ್ಮಂದಿರ ಮೊಬೈಲ್‌ ಮಕ್ಕಳ ಕೈ ಸೇರಿತು.

ಆನ್‌ಲೈನ್‌ ಪಾಠದಿಂದ ಸಮಸ್ಯೆ ಆದದ್ದು ಪೋಷಕರಿಗೆ. ಅದರಲ್ಲಿಯೂ ಅಮ್ಮಂದಿರಿಗೆ. ಅಮ್ಮನ ಪ್ರೀತಿಯ ಮೊಬೈಲ್‌ ಈಗ ಮಕ್ಕಳಕೈಯ್ಯಲ್ಲಿದೆ. ಇಷ್ಟು ದಿನ ಮಕ್ಕಳನ್ನು ಶಾಲೆಗೆಕಳುಹಿಸಿ, ನಿರಾಳವಾಗಿ ಬಂಧು ಬಾಂಧವರೊಡನೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ ಅಮ್ಮನಿಗೆ ಈಗ ಅದ್ಯಾವುದೂ ಇಲ್ಲ. ಪಾಠ ಮುಗಿದ ಮೇಲಾದರೂ ಮೊಬೈಲ್‌ ಅವಳಕೈ ಸೇರುವುದಿಲ್ಲ. ಕಾರಣ, ಟೀಚರ್‌ಗಳು ಮೊಬೈಲ್‌ ನಲ್ಲಿಯೇ ನೋಟ್ಸ್ ಕೊಡುವುದು. ಅದೆಲ್ಲವನ್ನೂ ಮುಗಿಸಿದ ಮೇಲೂ ಮಕ್ಕಳಿಗೆ ಆ ಮೊಬೈಲ್‌ ಬೇಕು. ಅವರ ಮೆಚ್ಚಿನ ಯುಟ್ಯೂಬ್‌ ವಿಡಿಯೋ ನೋಡಬೇಕಲ್ಲ! ಹಾಗೂ ಹೀಗೂ ಕಡೆಗೊಮ್ಮೆ ಮೊಬೈಲ್‌ ಮರಳಿ ಸಿಗುವಷ್ಟರಹೊತ್ತಿಗೆ, ಇನ್ನೊಬ್ಬರೊಂದಿಗೆ ಬೆರೆಯುವ, ಮಾತಾಡುವ ಮೂಡ್‌ ಹೋಗಿಬಿಟ್ಟಿರುತ್ತದೆ.

ಒಂದಿಷ್ಟು ದಿನಕೆಲವು ಮಕ್ಕಳು ಆನ್‌ಲೈನ್‌ಕ್ಲಾಸನ್ನು ಸಿಕ್ಕಾಪಟ್ಟೆ ಎಂಜಾಯ್‌ ಮಾಡಿದರು ಎಂಬುದು ನಿಜ. ಮುಕ್ಕಾಲು ಗಂಟೆ ಪಾಠ, ಮತ್ತೆ ಹದಿನೈದು ನಿಮಿಷ ರೆಸ್ಟ್ ಈ ರೀತಿಯಲ್ಲಿ ದಿನಕ್ಕೆ ನಾಲ್ಕು/ ಐದು ಪೀರಿಯಡ್‌ ಪಾಠ ಕೇಳಿದರೆ ಮುಗಿಯಿತು. ಪ್ರತಿ ಪೀರಿಯಡ್‌ ಮುಗಿದ ಮೇಲೆ ಕಾಲುಗಂಟೆ ಸೋಫಾದಲ್ಲಿ ಅಡ್ಡಡ್ಡ ಮಲಗಿ, ಬೇಕುಬೇಕಾದ ವಿಡಿಯೋ ನೋಡಿ ಕೊಂಡು,

ಮುಂದಿನ ತರಗತಿಗೆ ಸಿದ್ಧರಾ ಗುತ್ತಿದ್ದರು. ತನ್ನಕಡೆಯ ವಿಡಿಯೊ ಆಫ್ ಮಾಡಿಟ್ಟು ಕೊಂಡು, ಮಂಗಾಟ ವಾಡುತ್ತಾ ಪಾಠ ಕೇಳಿಸಿಕೊಳ್ಳುತ್ತಿದ್ದರು. ಶಾಲೆಗೆ/ಕಾಲೇಜಿಗೆ ಹೋಗುವುದಕ್ಕಿಂತ “ಆನ್‌ಲೈನ್‌ ಪಾಠವೇ ವಾಸಿ’ ಎನ್ನುತ್ತಿ ದ್ದರು. ಇದರ ಮಧ್ಯದಲ್ಲಿ – ಹೇಯ್, ನನ್ನ ಮೊಬೈಲ್‌ ಎಲ್ಲಿ ಐತ್ರಿ? ಮೊಬೈಲ್‌ಕೊಡ್ರೋ ಎನ್ನುವಅಮ್ಮಂದಿರ ಧ್ವನಿ ಕ್ಷೀಣವಾಗಿ ಕೇಳತೊಡಗಿದೆ. ಆನ್‌ಲೈನ್‌ ಪಾಠಕ್ಕೆ ಅಮ್ಮಂದಿರ ಮೊಬೈಲ್‌ ಆಟಿಕೆಯಂತೆ ಬಳಕೆ ಆಗತೊಡಗಿದೆ..

 

– ಸುರೇಖಾ ಭೀಮಗುಳಿ

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.