ದಂಗು ಪಡಿಸುವ ದಂಗಲ್‌ ನಟಿ


Team Udayavani, Feb 17, 2017, 3:45 AM IST

Zaira.jpg

ನಟಿಸಿದ ಒಂದೇ ಒಂದು ಚಿತ್ರದಿಂದಾಗಿ ರಾತ್ರಿ ಬೆಳಗಾಗುವುದರೊಳಗೆ ಜನಪ್ರಿಯರಾಗುವವರನ್ನು ಒನ್‌ ಫಿಲ್ಮ್ ವಂಡರ್‌ ಎಂದೆನ್ನುತ್ತಾರೆ. ಈ ಮಾತಿಗೆ ತಾಜಾ ಉದಾಹರಣೆಯೆಂದರೆ ಜೈರಾ ವಾಸಿಮ್‌. ದಂಗಲ್‌ ಚಿತ್ರದಲ್ಲಿ ಅಮೀರ್‌ ಖಾನ್‌ ಮಗಳಾಗಿ ನಟಿಸಿದ ಜೈರಾ ಈಗ ಇಡೀ ದೇಶದಲ್ಲಿ ಭಾರೀ ಜನಪ್ರಿಯ ತಾರೆ. ಹಾಗೆಂದು ಇದು ದಂಗಲ್‌ ನಲ್ಲಿ ಅವಳ ಅಮೋಘ ನಟನೆಗೆ ಸಂದ ಮನ್ನಣೆಯಲ್ಲ. ಜೈರಾ ಜನಪ್ರಿಯಳಾಗಿರುವುದು ವಿವಾದಗಳಿಂದ. 

ಇನ್ನೂ 16ರ ಹರೆಯದ ಜೈರಾ ಕಾಶ್ಮೀರದವಳು. ಕಾಶ್ಮೀರ ಸೇಬಿನಷ್ಟೇ ಸುಂದರವಾಗಿರುವ ಮುಗ್ಧ ಚೆಲುವೆ. ದಂಗಲ್‌ ನಲ್ಲಿ ಜೈರಾ ನಿರ್ವಹಿಸಿದ ಕಿರಿಯ ಗೀತಾ ಫೋಗಟ್‌ ಪಾತ್ರ ಅಷ್ಟೇನೂ ಗಮನ ಸೆಳೆಯುವಂಥದ್ದಾಗಿರಲಿಲ್ಲ. ಗೀತಾ ಫೋಗಟ್‌ ಬಾಲ್ಯದ ಪಾತ್ರಕ್ಕಷ್ಟೇ ಜೈರಾಳ ಉಪಸ್ಥಿತಿ ಸೀಮಿತವಾಗಿತ್ತು. ತನ್ನ ಮಂತ್ರಮುಗ್ಧಗೊಳಿಸುವ ಸ್ನಿಗ್ಧ ಚೆಲುವಿನಿಂದ ಗಮನ ಸೆಳೆದ ಜೈರಾಳಿಗೆ ಮಾಧ್ಯಮಗಳು ತುಸು ಹೆಚ್ಚಿಗೆ ಪ್ರಚಾರ ನೀಡಿದವು. ಇದರಿಂದಾಗಿ ಜೈರಾ ಗಮನ ಸೆಳೆದಳು. ಸಮಸ್ಯೆಗಳು ಪ್ರಾರಂಭವಾದದ್ದೇ ಆ ಬಳಿಕ. ದಂಗಲ್‌ ನಟಿ ಎಂದು ಗುರುತಿಸಲ್ಪಟ್ಟ ಬಳಿಕ ಜೈರಾ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದಳು. ಇದು ಕಾಶ್ಮೀರದ ಕೆಲವು ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಯಿತು. ಮರುದಿನ ಜೈರಾ ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಬಹಿರಂಗ ಪತ್ರವೊಂದನ್ನು ಪೋಸ್ಟ್‌ ಮಾಡಿದಳು. 

ಆ ಬಳಿಕ ನಡೆದ ಘಟನಾವಳಿಗಳೆಲ್ಲ ಜೈರಾಳ ನಿಯಂತ್ರಣದಾಚೆಗಿದ್ದವು. ಹಠಾತ್‌ ಆಗಿ ಸಿನೆಮಾ ಲೋಕದಿಂದ ಆಕೆ ರಾಜಕೀಯ ಲೋಕಕ್ಕೆ ಎತ್ತಂಗಡಿಯಾದಳು. ಜೈರಾಳನ್ನು ಸಮರ್ಥಿಸಿ ಮತ್ತು ವಿರೋಧಿಸಿ ರಾಜಕೀಯ ಪಕ್ಷಗಳು ಹೇಳಿಕೆಗಳ ಸುರಿಮಳೆಗರೆದುವು. ನೋಡನೋಡುತ್ತಿದ್ದಂತೆ ಜೈರಾ ದೇಶದ ಅತಿ ದೊಡ್ಡ ಸಮಸ್ಯೆ ಎಂಬಂತೆ ಚರ್ಚೆಗೊಳಗಾದಳು. ಕೆಲವು ದಿನ ಮಾಧ್ಯಮಗಳಲ್ಲಿ ಜೈರಾಳದ್ದೇ ಸುದ್ದಿ. ಆಕೆಯ ಎಳೆಯ ಮನಸ್ಸು ಈ ಕಚ್ಚಾಟವನ್ನು ನೋಡಿ ಆಘಾತಕ್ಕೊಳಗಾಗಿರಬಹುದು. 

ಇದೀಗ ಎಲ್ಲ ವಿವಾದಗಳು ತಣ್ಣಗಾಗಿವೆ. ಜೈರಾ ಹೊಸ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾಳೆ. ಇದೀಗ ಜೈರಾಳ ಕುರಿತು ನಿಜವಾದ ಚರ್ಚೆ ಶುರುವಾಗಿದೆ. ಆಕೆಯ ತಂದೆ ಬ್ಯಾಂಕ್‌ ಅಧಿಕಾರಿ. ತೀರಾ ಸಂಪ್ರದಾಯಸ್ಥ ಕುಟುಂಬದಲ್ಲಿ ಅದೂ ಕಾಶ್ಮೀರದಲ್ಲಿ ಹುಟ್ಟಿದ ಜೈರಾ ಸಿನೆಮಾ ರಂಗಕ್ಕೆ ಬಂದದ್ದೇ ಒಂದು ವಿಚಿತ್ರ. ಬಾಲನಟಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಜೈರಾ ಅದನ್ನೇ ಸೋಪಾನವಾಗಿ ಮಾಡಿಕೊಂಡು ಹಿರಿತೆರೆಗೆ ದೊಡ್ಡದಾಗಿ ಕಾಲಿಟ್ಟಿದ್ದಾಳೆ. ಮೊದಲ ಯತ್ನದಲ್ಲೇ ಅಮೀರ್‌ ಖಾನ್‌ ಜತೆಗೆ ನಟಿಸುವ ಅದೃಷ್ಟವೂ ಸಿಕ್ಕಿದೆ.  ರೂಪ ಲಾವಣ್ಯದಲ್ಲಿ ಸಾಟಿಯಿಲ್ಲ. ಪ್ರತಿಭೆಯೂ ಇದೆ ಎಂದು ಮೊದಲ ಚಿತ್ರದಲ್ಲೇ ಸಾಬೀತುಪಡಿಸಿದ್ದಾಳೆ. ಅವಕಾಶ ಸಿಕ್ಕಿದರೆ ಉತ್ತಮ ನಟಿಯಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದಾಳೆ. 

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.