ಅಭಿಮಾನದ ಭುವನೇಶ್ವರಿ ಮೇಡಂ


Team Udayavani, Oct 6, 2017, 12:21 PM IST

06-SAP-11.jpg

ಆಗಷ್ಟೇ ನನ್ನ ಮೇಡಂನ ಪ್ರಾಧ್ಯಾಪಕ ಜೀವನದ ಬೀಳ್ಕೊಡುಗೆ ಸಮಾರಂಭ ಕಳೆದು ಒಂದು ದಿನವಷ್ಟೇ ಮಾಸಿತ್ತು. ಹೀಗೆ ವಾಟ್ಸಾಪ್‌ನಲ್ಲಿ ಆ ಕಾರ್ಯಕ್ರಮದ ಫೊಟೋಗಳನ್ನು ಹಾಕಿ ಕಾಲಹರಣ ಮಾಡುತ್ತಿ¨ªಾಗ ಥಟ್ಟನೆ ನನ್ನ ಪಿಯುಸಿ ಗೆಳತಿಯು, “”ಇವರಿಗೆ ಅಷ್ಟು ಬೇಗ ಬೀಳ್ಕೊಡುಗೆಯೇ?” ಎಂದು ಸಂದೇಶ ಕಳುಹಿಸಿದ್ದನ್ನು ನೋಡಿ ನನಗೆ ಆಶ್ಚರ್ಯ ತಂದಿತ್ತು ! ಈ ಮಾತು ಪ್ರಸ್ತಾಪಿಸಲೊಂದು ಕಾರಣವಿದೆ. ನಾನೊಂದು ಕಾಲೇಜು, ಆಕೆ ಇನ್ನೊಂದು ಕಾಲೇಜು, ಪುತ್ತೂರಿನ ನಿವಾಸಿ, ಹೆಚ್ಚೆಂದರೆ ಪುತ್ತೂರಿನ ಶಿಕ್ಷಕ ವೃಂದದ ಚಚ್ಚೌಕದೊಳಗೆ ಎಲ್ಲಾ ಶಿಕ್ಷಕರ ಮುಖ ಪರಿಚಯವಿರುವುದು ಮಾಮೂಲು. ಆದರೆ ಈ ಶಿಕ್ಷಕಿ ಅದ್ಯಾವುದೋ ಕಾಲೇಜಿನ ವಿದ್ಯಾರ್ಥಿಗೆ ಹೇಗೆ ಪರಿಚಿತ? ಸಂಬಂಧವಿದೆ ಎಂದಾದರೆ ಆ ಬಂಧ ಮೂಡಿಸಿರಬಹುದಾದ ವಸ್ತು ಯಾವುದಾಗಿರಬಹುದು? ಎಂದು ಯೋಚಿಸಿದಾಗ ಸಿಕ್ಕ ಉತ್ತರ ಸಾಹಿತ್ಯದ ಸಂಬಂಧ. ಹೌದು, ಅವರೆಲ್ಲ ಅನತಿ ದೂರದಲ್ಲಿದ್ದರೂ ಇವರ ಬರವಣಿಗೆಗೋ, ಹಾಸ್ಯ ಲೇಖನಕ್ಕೋ ಮರುಳಾಗಿ ಅವರನ್ನೇ ಜೀವನದ ಹಾದಿಗೆ ಸಾಹಿತ್ಯದ ಮುಂದಾಳುವಾಗಿ ಸೂಚಿಸಿಕೊಂಡಿದ್ದರೆ, ನಾನು ಆ ಸಾಹಿತ್ಯದ ಹಾದಿಯ ಹೆದ್ದಾರಿಯೊಂದಿಗೆ ಪದವಿ ಜೀವನವನ್ನು ಜೊತೆಜೊತೆಗೇ ಅನುಭವಿಸಿದ್ದು ನನ್ನ ಪಾಲಿನ ಅದೃಷ್ಟ. ಇಷ್ಟೆಲ್ಲ ಸುಳಿವು ನೀಡುವಾಗಲೇ ಗೊತ್ತಾದೀತು ಆ ವ್ಯಕ್ತಿ ಯಾರೂಂತಾ? ಅವರೇ ಕನ್ನಡದ ಕುವರಿ, ಕನ್ನಡದ ಪ್ರಖ್ಯಾತ ಹಾಸ್ಯ ಲೇಖಕಿ, ಅರ್ಥಶಾಸ್ತ್ರ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು.

ಅವರನ್ನ ಕಂಡಾಗ ಏನೋ ಸಂತೋಷ. ಒಂಥರ ಆತ್ಮೀಯತೆ ಉಕ್ಕಿ ಹರಿಯುತ್ತದೆ. ಅಷ್ಟೊಂದು ಮುಗ್ಧತೆ-ವಿನಯತೆ ಎಲ್ಲವೂ ಒಂದಾಗಿ ಅವೆಲ್ಲವೂ ಪದಗಳಾಗಿ ಅವರ ನಾಲಿಗೆಯಿಂದ ಸದಾ ಚಿಮ್ಮುತ್ತಿರುತ್ತದೆ. ಪದವಿ ಶಿಕ್ಷಣದ ಆವರಣಕ್ಕೆ ಒಳಹೊಕ್ಕೊಡನೆ ಪ್ರವೇಶಾತಿಯಲ್ಲಿ ಆದ ಎಡವಟ್ಟಿನಿಂದಾಗಿ ಮೊದಲಾಗಿ ಪರಿಚಯವಾದವರೇ ಇವರು. ಅಂದಿನ ಸ್ನೇಹಪರತೆ ವಿಸ್ತಾರಗೊಂಡಿತೇ ಹೊರತು ಇಂದಿಗೂ ಒಂದಿಂಚೂ ಕಳೆಗುಂದಿಲ್ಲ. ಹೀಗೆ ಅವರನ್ನ ಅರಸಿ ಹೋಗಿ ಮಾತನಾಡಿದೆ. ಅವರೂ ಬಹಳ ಆತ್ಮೀಯರಾಗಿ ಮಾತನಾಡಿದರು. ಸಂಬಂಧ ಬರೀ ನಿಮಿಷ¨ªಾದರೂ ಅವರ ಮಾತುಗಾರಿಕೆ ಸುದೀರ್ಘ‌ ಸಂಬಂಧಗಳ ಪುರಾವೆಗಳಂತಿತ್ತು. ಎಲ್ಲವೂ ಆಯಿತು, ಕಾಲೇಜು ಪ್ರಾರಂಭವಾಯಿತು. ಪೀರಿಯೆಡ್‌ ಸಾಗಿ ಮುಂದೆ ಹೋಗುತ್ತಿರಲು ಅರ್ಥಶಾಸ್ತ್ರ ವಿಷಯದ ಅವಧಿ ಬಂದಾಗ ತರಗತಿಗೆ ಇವರ ಆಗಮನ. ಎಲ್ಲರೊಂದಿಗೆ ನನ್ನ ಕುಶಲ ಸಮಾಚಾರ ವಿಚಾರಿಸಿದರು. ತರಗತಿಯ ಅವಧಿ ಕಳೆದೊಡನೆ ನಡೆದೇ ಬಿಟ್ಟರು ಹೊರಕ್ಕೆ. ಹಮ್ಮು ಬಿಮ್ಮಿಲ್ಲದ ನಡಿಗೆ ! ಪ್ರವೇಶಾತಿಯ ಆರಂಭದಲ್ಲೆ ಅವರು ಹೇಳಿದಂತೆ ಪ್ರಥಮ ಸೆಮಿಸ್ಟರ್‌ನ ಪಠ್ಯಪುಸ್ತಕವನ್ನು ಉಚಿತವಾಗಿಯೇ ನೀಡಿದರು. ಕಾಲೇಜಿನ ಅಲಿಖೀತ ಶಾಸನದಂತೆ ತರಗತಿಗೆ ಆಗಮಿಸುವ ಎಲ್ಲಾ ಶಿಕ್ಷಕರಿಗೂ ಅವರವರ ಪ್ರವಚನ, ಹಾವಭಾವದ ಅನುಸಾರವಾಗಿ ಅಡ್ಡ ನಾಮವ ಸೂಚಿಸುವ ಪರಿ ಇದ್ದದ್ದೇ. ನಮ್ಮ ಮೇಡಂ ವಯಸ್ಸಿನಲ್ಲಿ ಹಿರಿಯರಾಗಿದ್ದು , ಅವರ ಮಾತಿನ ಮುಗ್ಧತೆಯನ್ನು ಕಂಡುಕೊಂಡ ಗೆಳೆಯರೆಲ್ಲರೂ ಎಲ್ಲರಂತೆ ಇವರಿಗೂ ಒಂದು ಹೆಸರನ್ನು ನಮ್ಮ ಕಡೆಯಿಂದ ನೇತುಬೀಳಿಸಿದರು. ಆದರೆ ನಾ ಅದರ ಕಡೆ ವಾಲಿದವನೇ ಅಲ್ಲ. ಅದಲ್ಲದೇ ಆ ಯೋಚನೆಯ ಗುಂಗಿಗೆ ಇಳಿದವನೇ ಅಲ್ಲ. ಏಕೆಂದರೆ, ಅವರನ್ನು ಕಂಡಾಗಲೆಲ್ಲ ಗೌರವದ ಭಾವನೆ ನನ್ನ ಮನದಿಂದ ಹೊರಸೂಸುತ್ತಿತ್ತು.

ಇಷ್ಟೆಲ್ಲ ವಿಚಾರಗಳೆಲ್ಲವೂ ಕಳೆದಿದ್ದರೂ ಅವರ ಸಾಹಿತ್ಯದ ಸಾಧನೆಯ ಬಗ್ಗೆ ನನ್ನ ಮಂಕುಬುದ್ಧಿಗೆ ಜ್ಞಾನವಾಗುವಷ್ಟರಲ್ಲಿ ತಡವಾಗಿತ್ತು. ಅವರು ಬರೆದ ಒಂದೊಂದು ಗ್ರಂಥವೂ ಅಪೂರ್ವ ಪರಿಣಾಮ ಬೀರುವಂತಾದ್ದು. ಎಂಥದು ಮಾರಾಯೆ, ನಕ್ಕು ಹಗುರಾಗಿ, ವಲಲ ಪ್ರತಾಪ, ಹಾಸಾ ಭಾಸಾ, ಬೆಟ್ಟದ ಭಾಗೀರಥಿ, ಮುಗುಳು, ಕೈಗುಣ ಬಾಯಿಗುಣ, ಪುಟ್ಟಿಯ ಪಟ್ಟೆ ಹುಲಿ, ಮಾತಾನಾಡಲು ಮಾತೇ ಬೇಕು- ಇವೆಲ್ಲವೂ ಪುಸ್ತಕ ರೂಪದಲ್ಲಿದ್ದರೆ, ಅನೇಕ ಪತ್ರಿಕೆಗಳಿಗೆ ಅಂಕಣಕಾರ್ತಿಯಾಗಿಯೂ ಸೇವೆ ಸಲ್ಲಿಸಿದವರಿವರು. ಅದಲ್ಲದೆ ಇವರ ಅನೇಕ ಪ್ರಬಂಧಗಳು ಶಾಲಾ ಪಠ್ಯಗಳಲ್ಲಿ ಕಾಣಬಹುದಾಗಿದೆ. ಇನ್ನು ಅವರ ಸಾಧನೆಗಳ ಮೈಲಿಗಳನ್ನೇ ಗುರುತಿಸಿಕೊಂಡು ಶ್ರೀಧರ ಪ್ರಶಸ್ತಿ, ಬಿಗ್‌ ಎಫ್ ಎಮ್‌ನ ಬಿಗ್‌ ಕನ್ನಡತಿ ಪ್ರಶಸ್ತಿ, ಹುಬ್ಬಳ್ಳಿಯ ಅವ್ವ ಪ್ರತಿಷ್ಠಾನದ ಅವ್ವ ಪ್ರಶಸ್ತಿಗಳು ಮುಡಿಗೇರಿವೆ. ಹಲವಾರು ಕ್ಷೇತ್ರದಲ್ಲಿ ತೊಡಗುವವರಾಗಿದ್ದರಿಂದ ಗುರುತಿಸಿ ಹೆಸರಿಸಿದ ರೀತಿಯೇ ಬೇರೆ. ಅದೆಷ್ಟೋ ಸಾಧನಾ ಕಿರೀಟಗಳು, ಸನ್ಮಾನ ಪತ್ರಗಳು ಅವರ ಮನೆಯ ಗಾಜಿನ ಕಪಾಟುಗಳಲ್ಲಿ ತುಂಬಿಹೋಗಿವೆ.ಆಳ್ವಾಸ್‌ ನುಡಿಸಿರಿಯ ವೇದಿಕೆಯಲ್ಲಿನ ಭಾಷಣದಿಂದ ತೊಡಗಿ ಆಕಾಶವಾಣಿಯ ನೇರಪ್ರಸಾರದ ಕಾರ್ಯಕ್ರಮದ ವರೆಗೂ ಹೊನಲು ಹರಿಸುತ್ತಿದ್ದಾರೆ. ತಮ್ಮ ಹಾಸ್ಯ ಬಿತ್ತರಗೊಳಿಸಲು ಅವೆಷ್ಟೋ ಘನ ವೇದಿಕೆಯ ಪಾಂಡಿತ್ಯ ವಹಿಸಿದ ಇವರು ಕೇವಲ ಈ ನಾಡಿಗೆ ಸೀಮಿತವಾಗಿರಿಸದೇ ವಿದೇಶಗಳಲ್ಲಿಯೂ ತಮ್ಮ ಸಾಹಿತ್ಯ ಪ್ರಪಂಚದ ಡೇರೆಯನ್ನ ತೆರೆದಿಟ್ಟವರು. ಕೇವಲ ಬಾಯಿಮಾತಿನಲ್ಲೇ ಕಲ್ಪನಾಧಾರಿತವಾಗಿ ಕಾಣುತ್ತಿದ್ದ- ಕೇಳುತ್ತಿದ್ದ ಖ್ಯಾತ ಸಾಹಿತಿಯಾದ ವೈದೇಹಿಯವರು ಹಾಗೂ ಹನಿಗವನಗಳ ಒಡೆಯ ಡುಂಡಿರಾಜ್‌ರವರನ್ನು ಕಾಲೇಜಿನ ಕಾರ್ಯಕ್ರಮಕ್ಕೆ ಆಮಂತ್ರಿಸುವ ಮೂಲಕ ಆ ಮಹಾನ್‌ ವ್ಯಕ್ತಿಗಳ ನೇರ ದರ್ಶನ ಮಾಡಿಸಿದವರು ಇವರೇ. ಹೀಗೇ ಒಂದೇ ಎರಡೆ? ಹತ್ತಾರು ಹಾಸ್ಯ ಲೇಖನಗಳ ಒಡತಿ, ಹಾಸ್ಯ ಭಾಷಣಕ್ಕೆಂದೇ ಹೆಸರಾದವರು, ಸಾಹಿತ್ಯ ಲೋಕವನ್ನು ಆಕ್ರಮಣಗೈದವರು. ಅವರೇ ನಮ್ಮ ಭುವನೇಶ್ವರಿ ಮೇಡಂ.

ಅವರ ಹಾಸ್ಯ ಬರವಣಿಗೆ ಮೂಲಕವೇ ತನ್ನ ಓದುಗರ ಬಳಗವನ್ನೇ ಕಟ್ಟಿಕೊಂಡ ಇವರಿಗೆ ಅಭಿಮಾನಿಗಳ ಸಹಯೋಗದಲ್ಲಿ ಊರ ಮಹಾಜನರ ಮಧ್ಯದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಲ್ಲದೇ ಮೇಡಂ ಈ ಹಿಂದೆ ಕಳೆದ ಸಾಹಿತ್ಯ ಜೀವನದಲ್ಲಿ ಇತರರು ತಮ್ಮ ಬಗ್ಗೆ ಆಡುವ ಮಾತ ತಿಳಿಯಲು ಬನಸಿರಿ ಅಭಿನಂದನಾ ಗ್ರಂಥದ ಬಿಡುಗಡೆಯೂ ಅಂದೇ ಆಗಿತ್ತು. ಒಟ್ಟಿನಲ್ಲಿ ಎಲ್ಲರೂ ಕಾತರರಾದ ಆ ಶುಭಗಳಿಗೆ ಬಂದೇ ಬಿಟ್ಟಿತು. ಕಾರ್ಯಕ್ರಮ ಆರಂಭವಾಗಿತ್ತು. ನನ್ನನ್ನೂ ಸೇರಿ ಅವರ ಓದುಗರ ಬಳಗ- ಶಿಷ್ಯ ಬಳಗ ಒಂದೇ ಮಂಟಪದಡಿ ನೆರೆದಿತ್ತು. ಅಭಿನಂದನಾ ಗ್ರಂಥವಾದ ಬನಸಿರಿಯನ್ನು ಅನಾವರಣಗೊಳಿಸಲು ಅದನ್ನು ಪಲ್ಲಕ್ಕಿಯಲ್ಲಿ ವೇದಿಕೆಯತ್ತ ಹೊತ್ತೂಯ್ಯವ ವಿಶೇಷ ಸಾಹಸಕ್ಕೆ ನಾನೂ ಕೂಡ ಕೈಜೋಡಿಸಿದೆ. 

ಗಣೇಶ ಕುಮಾರ್‌
ಪತ್ರಿಕೋದ್ಯಮ ವಿಭಾಗ ವಿ. ವಿ. ಕಾಲೇಜು, ಮಂಗಳೂರು

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.