ಕಪ್ಪು-ಬಿಳುಪು ಪ್ರಪಂಚ


Team Udayavani, Oct 13, 2017, 6:30 AM IST

Made-Me-Do-It_knowledge_sta.jpg

ಇಪ್ಪತ್ತೂಂದನೆಯ ಶತಮಾನದಲ್ಲಿರುವ ನಾವು ಪಠ್ಯಪುಸ್ತಕಗಳಲ್ಲಿ ವರ್ಣಭೇದ ನೀತಿಯ ಬಗ್ಗೆ ಓದಿ ತಿಳಿದಿರುತ್ತೇವೆ. ಆದರೆ, ಅದೇ ರೀತಿಯ ಇನ್ನೊಂದು ಮುಖವನ್ನು ದಿನನಿತ್ಯ ನಮ್ಮ ಸಮಾಜದಲ್ಲಿ ನೋಡುತ್ತಿರುತ್ತೇವೆ.

ಬಣ್ಣ ಕೇವಲ ಬಾಹ್ಯ ಸೌಂದರ್ಯವೇ  ಹೊರತು ಅಂತರಂಗದ್ದಲ್ಲ. ನಮ್ಮ ಸಮಾಜ ಎಷ್ಟು ಮುಂದುವರಿದ್ದಿದ್ದರೂ ಬಣ್ಣದ ಮೂಲಕ ವ್ಯಕ್ತಿಯನ್ನು ಅಳೆಯುವುದು ನಿಲ್ಲಿಸಿಲ್ಲ. ಬಣ್ಣ ಇಂದಲ್ಲ ನಾಳೆ ಮಾಸಿ ಹೋಗುತ್ತದೆ. ಆದರೆ ಅಂತರಂಗ ಸೌಂದರ್ಯ ಮನುಷ್ಯ ಸತ್ತಮೇಲೂ ಅವನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ನಮ್ಮ ಜನರು ಈ ವಿಷಯದಲ್ಲಿ ಎಳೆ ಕಂದಮ್ಮಗಳನ್ನೂ ಬಿಟ್ಟಿಲ್ಲ. ಒಬ್ಬ ತಾಯಿ ಮಗುವಿಗೆ ಜನ್ಮಕೊಟ್ಟ ವಿಷಯ ತಿಳಿದ ತಕ್ಷಣ, ಮಗು ಗಂಡಾ ಹೆಣ್ಣಾ ಅನ್ನೋದು ಮೊದಲ ಪ್ರಶ್ನೆಯಾದ್ರೆ, ಮಗು ಬಿಳೀನಾ ಕಪ್ಪಾ ಅನ್ನೋದು ಎರಡನೆಯದು.ಮಗು ಹೆಣ್ಣಾಗಿದ್ದು ಬಣ್ಣ ಏನಾದ್ರೂ ಕಪ್ಪಾಗಿದ್ರೆ ಕೇಳ್ಳೋದೆ ಬೇಡ, ಮಗುವನ್ನು ನೋಡೋಕೆ ಬಂದವರದ್ದೆಲ್ಲ ಒಂದೇ ರಾಗ, “ಅಯ್ಯೋ ನಿಮ್ಮ ಮಗಳು ಕಪ್ಪು , ಮುಂದೆ ಮದ್ವೆ ಯಾರಾಗುತ್ತಾರೆ?’ ಈ ಮಾತನ್ನು ಕೇಳಿ ಆ ಹೆತ್ತತಾಯಿ ಎಷ್ಟು ನೊಂದುಕೊಳ್ಳಬಹುದು! ಆ ಕಂದಮ್ಮ ಈಗತಾನೆ ಈ ಪ್ರಪಂಚಕ್ಕೆ ಕಾಲಿಟ್ಟಿದೆ. ಅದನ್ನು ಬಣ್ಣದ ವಿಷಯದಲ್ಲಿ ನಿಂದಿಸುತ್ತಾರೆ, ಈ ಮೂರ್ಖ ಜನರನ್ನು ನೋಡಿದ ಮಗು ಮನದಲ್ಲೇ ಅಂದುಕೊಳ್ಳಬಹುದು, “ನಾನು ಜನಿಸಿದ್ದು ಬಿಳಿ ಬಣ್ಣವ ಬಯಸುವ ಕಪ್ಪು ಪ್ರಪಂಚದಲ್ಲಿ’ ಅಂತ.

ಇನ್ನು ಮದುವೆ ವಿಷಯಕ್ಕೆ ಬಂದರೆ ಕೇಳ್ಳೋದೆ ಬೇಡ, ಗುಣ ನೋಡೋದಕ್ಕಿಂತ ಬಣ್ಣ ನೋಡಿ ಮದ್ವೆ ಆಗೋರೆ ಜಾಸ್ತಿ. ಮುಖದ ಬಣ್ಣದಿಂದ ಸುಖ ಸಂಸಾರ ಸಿಗೋಲ್ಲ ಅನ್ನೋದು ಗೊತ್ತಿಲ್ಲ. ಜೀವನ ನಡೆಸೋಕೆ ಬಾಹ್ಯ ಸೌಂದರ್ಯ ಮುಖ್ಯವಲ್ಲ  ಒಳ್ಳೆಯ ಗುಣನಡತೆ, ಹೊಂದಾಣಿಕೆ ಮುಖ್ಯ. ನಮ್ಮ ಜನಗಳಿಗೆ ಮುಖ ಬಿಳಿ ಬೇಕು ಅದೇ ತಲೆಕೂದಲು ಬಿಳಿಯಾದ್ರೆ ಕಪ್ಪು ಬಣ್ಣ ಹಚ್ಚುತ್ತಾರೆ. ಇನ್ನೂ ಕೆಲವರ ಮೂಢನಂಬಿಕೆಗಳು ಶುಭ ಸಮಾರಂಭಗಳಿಗೆ ಕಪ್ಪು ಬಣ್ಣದ ವಸ್ತ್ರ ಧರಿಸಬಾರದು, ಒಳ್ಳೆ ಕೆಲಸಕ್ಕೆ ಹೋಗುವಾಗ ಕಪ್ಪು ಬಣ್ಣದ ಬೆಕ್ಕು ಅಡ್ಡ ಬರಬಾರದು! ಈ ಜನಗಳಿಗೆ ಕಪ್ಪು ಬಣ್ಣದ ಮಹತ್ವ ಗೊತ್ತಿಲ್ಲ. ಕಪ್ಪು ಮೋಡಗಳಿಂದ ಮಾತ್ರ ಮಳೆ ಸುರಿಸಲು ಸಾಧ್ಯ, ಕಪ್ಪು ಭೂಮಿಯಲ್ಲಿ ಮಾತ್ರ ಫ‌ಲವತ್ತತೆ ಇರುವುದು. ಇದಕ್ಕೆ ಒಂದು ಉದಾಹರಣೆ, ಪಿ. ಲಂಕೇಶ್‌ ಅವರು  ತಮ್ಮ ಕವನ ನನ್ನವ್ವ ದಲ್ಲಿ ಅವರು ನನ್ನವ್ವ ಫ‌ಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ  ಎಂದು ಹೆತ್ತವ್ವನನ್ನು ಕಪ್ಪು ಭೂಮಿಗೆ ಹೋಲಿಸಿದ್ದಾರೆಯೇ ಹೊರತು ಬಿಳಿ ಭೂಮಿಗಲ್ಲ. ನಮ್ಮ ಜಗದೋದ್ಧಾರ ಶ್ರೀಕೃಷ್ಣ ಕೂಡ ನೀಲ ವರ್ಣದವನೇ ಅಲ್ಲವೆ?

ಇನ್ನಾದರೂ ನಮ್ಮ ಸಮಾಜ ಕಪ್ಪು-ಬಿಳುಪು ಅನ್ನೋ ಭೇದ‌-ಭಾವ ಬಿಟ್ಟು ಬದುಕು ನಡೆಸಬೇಕು.  

ಭಾಗ್ಯಶ್ರೀ ಬಿ.
ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.