ಹಾಸ್ಟೆಲ್‌ ಜೀವನ


Team Udayavani, Mar 15, 2019, 12:30 AM IST

x-51.jpg

ಚಿಕ್ಕಂದಿನಿಂದಲೂ ಕೂಡು ಕುಟುಂಬದಲ್ಲಿ ಬೆಳೆದ ನನಗೆ ಹಾಸ್ಟೆಲ್‌ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಆದರೂ ಒಲ್ಲದ ಮನಸ್ಸಿನಿಂದ ಮನೆಬಿಟ್ಟ ನನಗೆ ಎಡಬಿಡದೆ ಕಾಡಿದ್ದು ಅಮ್ಮನ ನೆನಪು. ಮನೆಗೆ ಕಾಲ್‌ ಮಾಡಿ ಮಾತಾಡೋಣವೆಂದರೆ ಮೊಬೈಲೂ ಇರಲಿಲ್ಲ! ಓದಿನ ಸಮಯ ಮುಗಿಯುವುದನ್ನೇ ಕಾದು ಕುಳಿತಿರುತ್ತಿದ್ದ ನಾನು ಹಾಸ್ಟೆಲ್‌ನಲ್ಲಿ ಬೆಲ್‌ ರಿಂಗಣಿಸುತ್ತಿದ್ದಂತೆ ಕಾಲ್‌ ಮಾಡಲು ಓಡುತ್ತಿದ್ದೆ. ಆದರೆ, ನನ್ನ ಕೊಠಡಿಯಿಂದ ಕಾಯಿನ್‌ ಬಾಕ್ಸ್‌ ಇರುವಲ್ಲಿ ಬರುವಷ್ಟರಲ್ಲಾಗಲೇ  ಹತ್ತು ಜನ ನಿಂತಿರುತ್ತಿದ್ದರು. ಪ್ರತಿಯೊಬ್ಬರೂ ಐದು ನಿಮಿಷ ಮಾತನಾಡಿದರೂ ಐವತ್ತು ನಿಮಿಷವಾಗುತ್ತದೆ ;ಅಷ್ಟರಲ್ಲಿ ಸ್ನಾನ ಮುಗಿಸಿ ಬರೋಣವೆಂದುಕೊಂಡರೆ ಅಲ್ಲೂ ಮಾರುದ್ದ ಲೈನ್‌ ಇರುತ್ತಿತ್ತು.

ಆರಂಭದಲ್ಲಿ ಯಾವ ರೀತಿ ಸಮಯ ನಿರ್ವಹಿಸಬೇಕೆಂಬುದೇ ತಿಳಿಯುತ್ತಿರಲಿಲ್ಲ. ಆದರೆ, ಕ್ರಮೇಣ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡುವುದನ್ನು ರೂಢಿಸಿಕೊಂಡೆ. ಮೊದ ಮೊದಲು ಅಲರಾಂ ಆಫ್ ಮಾಡಿ ಮಲಗುತ್ತಿದ್ದ ನಾನು ನಂತರದ ದಿನಗಳಲ್ಲಿ ಅಲಾರಂ ಇಲ್ಲದೇ ಏಳುವುದನ್ನೂ ಕಲಿತಿದ್ದೆ. ನಾನು ಬೆಳಗ್ಗಿನ ಓದುವ ವೇಳೆಯಲ್ಲಿ ಓದುವುದೇ ಅಪರೂಪವಾಗಿತ್ತು, ಅಂತಹದ್ದರಲ್ಲಿಯೂ ಏನಾದರೂ ಓದೋಣವೆಂಬ ಇಚ್ಛೆಯಿಂದ ಓದಲು ಕುಳಿತರೆ ಅದೆಲ್ಲಿರುತ್ತಿದ್ದಳೊ ಆ ನಿದ್ರಾದೇವಿ! ಕಣ್ತೆರೆಯಲಾರದಷ್ಟು ನಿದ್ರೆಭರಿಸುತ್ತಿದ್ದಳು. ಅಂತೂ ಇಂತೂ ಒಂದು ವಾರ ಕಳೆದು ಭಾನುವಾರ ಬಂತೆಂದರೆ ಎಲ್ಲಿಲ್ಲದ ಸಂತೋಷವಿರುತ್ತಿತ್ತು. ಆದರೆ ಭಾನುವಾರದ ಬೆಳಗಿನ ತಿಂಡಿ ಮಸಾಲೆದೋಸೆ. ನಾವು ಎಂಟು ಗಂಟೆಯಿಂದಲೇ ಸಾಲಿನಲ್ಲಿ ನಿಂತರೆ ಒಂಬತ್ತು ಗಂಟೆಗಾದರೂ ದೋಸೆ ಸಿಗುತ್ತಿತ್ತು!

ಇದೀಗ ನಾನು ಹಾಸ್ಟೆಲ್ ಸೇರಿ ತಿಂಗಳುಗಳೇ ಕಳೆದಿದೆ. ಹಾಸ್ಟೆಲ್‌ ನನಗೆ ಸಾಕಷ್ಟು ಒಳ್ಳೆಯ ವಿಚಾರಗಳನ್ನು ಕಲಿಸಿದೆ. ಬೆಳಗ್ಗೆ ಬೇಗ ಏಳುವ ಅಭ್ಯಾಸವಾದದ್ದು , ಕಾಲ್ ಮಾಡುವುದಕ್ಕಾಗಿ, ಕೆಲವೊಮ್ಮೆ ಸ್ನಾನಕ್ಕಾಗಿ, ತಿಂಡಿಗಾಗಿ ದೇವರ ದರ್ಶನಕ್ಕೆ ನಿಂತಂತೆ ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಲ್ಲುವುದೂ ಅಭ್ಯಾಸವಾಗಿದೆ !        

ಸಿಂಧೂ ಹೆಗಡೆ
ಪ್ರಥಮ ಬಿಎ ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.