ಕಾರಿಡಾರ್‌ನಲ್ಲಿ ಲವ್ವು ಗಿವ್ವು


Team Udayavani, Jan 10, 2020, 4:43 AM IST

1

ಕಾರಿಡಾರ್‌ ಎಂದರೆ ಅದು ಕಾಲೇಜಿನ ಅದ್ಭುತ ಜಾಗಗಳಲ್ಲಿ ಒಂದು. ಅದೆಷ್ಟೋ ಸ್ನೇಹ-ಸಂಬಂಧಗಳು, ಹೊಸ ಪರಿಚಯಗಳು, ಕೆಲವೊಂದು ವೈರತ್ವಗಳು ಮತ್ತು ಹಲವಾರು ಪ್ರೇಮ ಸಲ್ಲಾಪಗಳು… ಹೀಗೆ ಕಾರಿಡಾರ್‌ ಎಂಬುದೇ ಒಂದು ಸುಂದರ ಜಗತ್ತು.

ಕಾಲೇಜಿಗೆ ಸೇರಿದ ಹೊಸದರಲ್ಲಿ ಎಲ್ಲಾ ಅಂತಸ್ತುಗಳು ಒಂದೇ ರೀತಿ ಇರುವಂತೆ ಕಾಣುತ್ತದೆ. ಯಾವ ದಾರಿಯಲ್ಲಿ ಹೋದರೆ ಎಲ್ಲಿಗೆ ತಲುಪುತ್ತದೆ ಎಂಬುದೇ ದೊಡ್ಡ ಗೊಂದಲ. ಒಬ್ಬೊಬ್ಬರೇ ಹೋದರಂತೂ ಬಹಳ ಯೋಚಿಸಿ ಹೋಗಬೇಕಾಗುತ್ತದೆ. ದಿನಗಳು ಉರುಳಿದಂತೆ ಕಾಲೇಜಿನ ಎಲ್ಲ ಮೂಲೆಗಳೂ ಪರಿಚಯವಾಗುತ್ತವೆ.

ಕ್ಯಾಂಟೀನ್‌ನಲ್ಲಿ ಯಾರು ಪಟ್ಟಾಂಗ ಹೊಡೆಯುತ್ತಾರೆ, ಕಾರಿಡಾರ್‌ನಲ್ಲಿ ಯಾರು ಮಸ್ತಿ ಮಾಡುತ್ತಾರೆ, ಯಾವ ಡೆಸ್ಕ್ನಲ್ಲಿ ಯಾರು ಸದಾ ನೋಟ್ಸ್‌ ಬರೆಯುತ್ತಲೇ ಇರುತ್ತಾರೆ ಎಂಬುದೆಲ್ಲ ಅರಿವಾಗುತ್ತ ಹೋಗುತ್ತದೆ. ಪ್ರೇಮಿ ಗಳಿಬ್ಬರು ಮಾತಾಡಿಕೊಳ್ಳುವ ಮಾಮೂಲಿ ಜಾಗವನ್ನು ಇತರ ವಿದ್ಯಾರ್ಥಿಗಳು ಅವರಿಗೆಂದೇ ಬಿಟ್ಟು ಕೊಡುವುದುಂಟು.
ಅಧ್ಯಾಪಕರು ಯಾವ ಹೊತ್ತಿಗೆ ಯಾವ ದಾರಿಯಾಗಿ ಬರುತ್ತಾರೆ, ಯಾವ ತರಗತಿಗೆ ಹೋಗುತ್ತಾರೆ ಎಲ್ಲವೂ ತಿಳಿದುಬಿಡುತ್ತದೆ.

ಕೊನೆಯ ವರ್ಷ ತಲುಪಿದ ಮೇಲೆ ಹೊಸದಾಗಿ ಸೇರಿಕೊಂಡ ವಿದ್ಯಾರ್ಥಿ ಗಳನ್ನು ಮತ್ತು ಅವರು ಕಾರಿಡಾರ್‌ನಲ್ಲಿ ನಡೆಯುವಾಗ ಗೊಂದಲದಲ್ಲಿ ಹೆಜ್ಜೆ ಇಡುವುದನ್ನು ನೋಡಿ ಸೀನಿಯರ್ ನಗುವುದುಂಟು. ಕೆಲವೊಂದು ಬಾರಿ ಸೀನಿಯರ್ಗಳನ್ನು ಮೀರಿ ಜೂನಿಯರ್ ಕಾರಿಡಾರ್‌ ಹೀರೋಗಳಾಗಿ ಬಿಡುತ್ತಾರೆ.

ಬೇರೆ ತರಗತಿಯಲ್ಲಿರುವ ನಮ್ಮ ಸ್ನೇಹಿತರಿಗೆ ಕ್ಲಾಸ್‌ಗಳು ನಡೆಯುತ್ತಿರುವಾಗ ನಮಗೆ ಫ್ರೀ ಇದ್ದರೆ ಅವರು ನಮ್ಮನ್ನು ನೋಡಲಿ ಎಂದು ಅವರ ತರಗತಿಯ ಎದುರು ಕಾರಿಡಾರ್‌ನಲ್ಲಿ ಅದೆಷ್ಟು ಸಲ “ಹೋಗುವುದು ಬರುವುದು’ ಮಾಡುತ್ತೇವೆ. ಅದರಲ್ಲೂ ಏನೋ ಒಂದು ಖುಷಿ. ಕಾಲೇಜು ಕಾರಿಡಾರ್‌ಗೆ ಒಂದು ಸುತ್ತು ಬಂದರೆ ಎಷ್ಟೋ ಟೆನ್ಶನ್‌ ಕಡಿಮೆಯಾಗುತ್ತದೆ. ಪರೀಕ್ಷೆಯ ಸಮಯದಲ್ಲಂತೂ ಕಾರಿಡಾರ್‌ ಒಂದು ರೀತಿಯ ಸ್ಟಡಿ ಸೆಂಟರ್‌ ಇದ್ದ ಹಾಗೆ. ಎಲ್ಲ ಸಂದಿಗಳಲ್ಲಿಯೂ, ಪ್ರತೀ ಮೆಟ್ಟಿಲಲ್ಲೂ ಓದುಗರು. ಎಲ್ಲರೂ ತಮ್ಮ ಪಾಡಿಗೆ ತಾವು ತಮಗೆ ಇಷ್ಟ ಬಂದಂತೆ ಓದುತ್ತಿರುತ್ತಾರೆ. ಯಾರೊಬ್ಬರೂ ಯಾರ ತಂಟೆಗೂ ಹೋಗುವುದಿಲ್ಲ. ಪ್ರತೀ ಬ್ರೇಕ್‌ನಲ್ಲಿಯೂ ಕಾರಿಡಾರ್‌ನಲ್ಲಿ ಬಂದು ನಿಲ್ಲದಿದ್ದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಮಾಧಾನವೇ ಇಲ್ಲ. ಕಾರಿಡಾರ್‌ ಎಂದರೆ ಹಾಗೆ, ಅದೊಂದು ರೀತಿಯ ರೀಫ್ರೆಶಿಂಗ್‌ ಇದ್ದ ಹಾಗೆ.

ಸ್ವಾತಿ ಬಿ. ಶೆಟ್ಟಿ
ತೃತೀಯ ಬಿ.ಎಸ್‌ಸಿ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.