ಕನಸ ಕಂಡೆನು!
Team Udayavani, Nov 9, 2018, 6:00 AM IST
ಎಲ್ಲರೂ ಜೀವನದಲ್ಲಿ ಕನಸು ಕಾಣುತ್ತಾರೆ ಹಾಗೂ ಅದನ್ನು ನನಸಾಗಿಸುತ್ತಾರೆ. ಒಬ್ಬ ಬಡ ಹುಡುಗನಿದ್ದನು. ಅವರಿಗೆ ಸರಿಯಾದ ಮನೆಯಿಲ್ಲ, ಬಟ್ಟೆಯಿಲ್ಲ. ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ತಂದೆ ದುಡಿದ ಹಣದಿಂದ ಕುಡಿದು ಬರುತ್ತಿದ್ದರು. ತಾಯಿ ಮನೆಗೆಲಸಕ್ಕೆ ಹೋಗುತ್ತಿದ್ದರು. ಅವನು ಏಳನೆಯ ತರಗತಿಯಲ್ಲಿ ಓದುತ್ತಿದ್ದನು. ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದನು. ಮರುದಿನ ಬೆಳಗ್ಗೆ ಎದ್ದಾಗ ಒಂದು ಒಳ್ಳೆಯ ರೂಮಿನಲ್ಲಿರುವ ಹಾಸಿಗೆಯಿಂದ ಎದ್ದನು. ಅಮ್ಮ ಅಡುಗೆ ಮನೆಯಲ್ಲಿ ಇದ್ದರು. ಅಪ್ಪ ಆಫೀಸಿಗೆ ಹೊರಡಲು ಸಿದ್ಧರಾಗುತ್ತಿದ್ದರು. ಹೊರಗಡೆ ಎರಡು ಕಾರುಗಳು ನಿಂತಿದ್ದವು. ಹಾಗೂ ಅವನಿಗೆ ಬೇಕಾದ ತಿಂಡಿ-ತಿನಿಸು ಮತ್ತು ಬಟ್ಟೆಗಳನ್ನು ತಂದಿಟ್ಟಿದ್ದರು. ಅಮ್ಮ ಅವನನ್ನು ಶಾಲೆಗೆ ಹೊರಡಿಸಿದರು. ಇದೆಲ್ಲ ಹೇಗಾಯಿತು ಎಂದುಕೊಳ್ಳಲು ಅವನಿಗೆ ಮನಸ್ಸು ಬರಲಿಲ್ಲ. ನಾನು ಶಾಲೆಗೆ ಹಾಗೂ ಅಪ್ಪ ಆಫೀಸಿಗೆ ಕಾರಿನಲ್ಲಿ ಹೋದೆವು. ಅಮ್ಮ ಮೊದಲಿಗಿಂತ ತುಂಬಾ ಬದಲಾವಣೆ ಆಗಿದ್ದರು. ಹಿಂದಿನಿಂದ ಎರಡು-ಮೂರು ಕಾರುಗಳು ಬರುತ್ತಿದ್ದವು. ಆ ಬಡ ಹುಡುಗ ಇಷ್ಟು ಬೇಗ ಶ್ರೀಮಂತನಾಗಲು ಸಾಧ್ಯವೆ? ಆದರೆ ಅದು ಅವನ ಕನಸಾಗಿತ್ತು. ಸ್ವಲ್ಪ ಹಿಂದಕ್ಕೆ ಜ್ಞಾಪಿಸಿಕೊಳ್ಳಿ. ಆ ಹುಡುಗ ಮರುದಿನ ಬೆಳಿಗ್ಗೆ ಎದ್ದು ಶಾಲೆಗೆ ಹೋದನು. ಮುಂದೆ ಹಿಂದೆ ನೆನೆಸಿದ್ದ ಕನಸುಗಳನ್ನು ನನಸಾಗಿಸಿದನು!
ಮಂಜುನಾಥ
ಪ್ರಥಮ ಪಿಯುಸಿ
ಪದವಿಪೂರ್ವ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು