ನಾಳೆಯ ಕನಸು


Team Udayavani, Apr 28, 2017, 3:45 AM IST

dream.jpg

ಕನಸು ಎಂಬ ಸಂಕಲ್ಪ
ತಿರುಕನೋರ್ವನೂರ ಮುಂದೆ
ಮುರುಕು ಧರ್ಮ ಶಾಲೆಯಲ್ಲಿ 
ಒರಗಿರುತ್ತಲೊಂದು ಕನಸಾ ಕಂಡನೆಂತೆನೆ…
ಇದು ಬಹುಶಃ ನಾವೆಲ್ಲರೂ ಸಣ್ಣವರಿದ್ದಾಗ ಹಾಡಿದ ಪದ್ಯ. ಈ ಪದ್ಯದೊಂದಿಗೆ ನಮ್ಮ ಎಷ್ಟೋ ನೆನಪುಗಳು ಮರುಕಳಿಸಲೂ ಸಾಕು. ನಮಗೆಲ್ಲರಿಗೆ ಕನಸು ಕಾಣಲು ಅಥವಾ ಕನಸಿನೆಡೆಗೆ ನಮ್ಮ ಆಲೋಚನೆಯನ್ನು ವಿಸ್ತರಿಸಿದ ಪದ್ಯ ಎಂದರೂ ತಪ್ಪಾಗಲಾರದು. 

ತಿರುಕ ಕನಸು ಕಾಣುತ್ತಾನೆ, ಅದು ರಾಜನಾಗುವ ಕನಸು. ಸ್ವಾರಸ್ಯವೆಂದರೆ ರಾಜನಾಗುವುದಕ್ಕೆ ಕಾರಣಗಳನ್ನು ಸೃಷ್ಟಿ ಮಾಡಿಕೊಳ್ಳುತ್ತ ಬಾರದ ಅದೃಷ್ಟವನ್ನು ತವಕಿಸುತ್ತ ಸಾಗುವ ಪದ್ಯ ಬಹಳ ಕುತೂಹಲಕಾರಿಯಾದದ್ದು. ಇವೆಲ್ಲವೂ ಆಗಲಾರದು ಎಂಬ ಎಚ್ಚರ ತಿರುಕನಲ್ಲಿ ಇದ್ದರೂ ಸಹ ಕನಸು ಕಾಣುವಾಗ  ಮುದಗೊಳ್ಳುವ ಪ್ರಕ್ರಿಯೆ ಆಕರ್ಷಕವಾದದ್ದು ಎನಿಸುತ್ತದೆ. ಬಹುಶ‌ಃ ಇಂತಹ ಕನಸುಗಳೇ ನಮ್ಮ ನಾಳೆಗಳ ಕತೃì ಮತ್ತು ಇಂತಹ ಕನಸುಗಳೇ ನಮ್ಮ ಬದುಕಿನ ಆಧಾರ ಸ್ತಂಭಗಳು. 

“ಒಳ್ಳೆಯ ನಾಳೆಗಳು’ ಈಗ ಸವಕಲು ಪದ. ಅದೇನೆ ಇದ್ದರೂ ಆ ನಾಳೆಗಳೇ ನಮ್ಮ ಬದುಕು. ವಿಚಿತ್ರವೆಂದರೆ, ನಾಳೆಗಳ ಒಳಿತಿಗೆ, ಇಂದು ನಾವು ಕಷ್ಟಪಡುತ್ತೇವೆ. ಆದರೆ, ಮರುದಿನ ಮತ್ತೆ ನಾಳೆಗಳ ಕನಸಲ್ಲಿ ಕಷ್ಟಪಡುತ್ತೇವೆ. ಒಟ್ಟಿನಲ್ಲಿ ನಮ್ಮ ನಾಳೆಗಳು ಎನ್ನುವುದು ಕನಸಿನ ಗಂಟು. ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ನಮ್ಮಿಂದ ಗಾವುದ ದೂರ ಓಡುತ್ತದೆ, ಮರೆಯಾಗುತ್ತದೆ. 

ನಮ್ಮ ಕನಸಿನ ಸಮಾಜ ಎಂಥದ್ದು, ಅದು ಕೋಮುದಳ್ಳುರಿಯ, ಅಶಾಂತತೆಯ ಕಿಡಿ ಹಬ್ಬಿಸುವ, ಕೆಟ್ಟ ರಾಜಕಾರಣದ, ಉಗ್ರವಾದದ ಭ್ರಷ್ಟ ಸಮಾಜವೋ ಅಥವಾ ಶಾಂತಿಯ, ಸಹಬಾಳ್ವೆಯ, ಪ್ರೀತಿ ಕರುಣೆ ಪರಸ್ಪರ ಗೌರವಾದರಗಳ ಸಮಾಜವೋ? ಉತ್ತರ ಸ್ಪಷ್ಟ. ನಮಗೆ ಬೇಕಾಗಿರುವುದು ಶಾಂತಿಯ ಸಮಾಜ, ನಮ್ಮೆಲ್ಲಾ ಹಿರಿಯರು ಬಯಸಿದ ಸಮಾಜ. ಈ ನಾಳೆಗಳನ್ನು ನಮ್ಮದಾಗಿಸುವ ಪ್ರಯತ್ನ ನಮ್ಮದಾಗಬೇಕು. ಹಾಗಾಗಿ ನಮ್ಮ ಸಂಕಲ್ಪ ಕೇವಲ ಸ್ವಾರ್ಥದ ಸೆಲೆಯಾಗದೆ ಅದು ಸಮಷ್ಟಿ ಪ್ರಜ್ಞೆಯೊಂದಿಗಿನ ನಾಳೆಗಳ ಕನಸಾಗಬೇಕು. 

ಸುಕೃತ್‌
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.