ಟ್ವಿಟ್ಟರ್ ‘ವೇರಿಫಿಕೇಶನ್ ಬ್ಯಾಡ್ಜ್’ ಪುನರಾರಂಭ; ಯಾರೆಲ್ಲಾ ಅರ್ಹರು ? ಮಾರ್ಗಸೂಚಿಗಳೇನು ?
Team Udayavani, May 21, 2021, 9:28 AM IST
ನವದೆಹಲಿ: 2017ರ ನಂತರ ಸ್ಥಗಿತಗೊಂಡಿದ್ದ ಟ್ವಿಟ್ಟರ್ ಬ್ಲೂ ಬ್ಯಾಡ್ಜ್ ಆಯ್ಕೆ ಮತ್ತೆ ಪುನಾರಾರಂಭಗೊಂಡಿದೆ. ಮೈಕ್ರೋ ಬ್ಲಾಗಿಂಗ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಒಂದಾದ ಟ್ವಿಟ್ಟರ್ ಪರಿಷ್ಕರಿಸಿದ ನೀತಿಗಳೊಂದಿಗೆ ವೇರಿಫಿಕೇಶನ್ ಬ್ಯಾಡ್ಜ್ ಅನ್ನು ಪರಿಚಯಿಸಿದೆ.
ಈ ಕುರಿತು ಟ್ವಿಟ್ಟರ್ ಸಂಸ್ಥೆ ಆಧೀಕೃತವಾಗಿ ಮಾಹಿತಿ ನೀಡಿದ್ದು, ಮುಂದಿನ ಕೆಲವು ವಾರಗಳಲ್ಲಿ ಹೊಸ ಧೃಡೀಕರಣ ಆಯ್ಕೆಯನ್ನು ಕಲ್ಪಿಸುತ್ತಿದ್ದೇವೆ. ಮಾತ್ರವಲ್ಲದೆ ಸಾಮಾನ್ಯ ಬಳಕೆದಾರರು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದಿದೆ.
ಟ್ವಿಟ್ಟರ್ ಖಾತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಏಕೈಕ ಮಾರ್ಗ ಎಂದರೇ ಬ್ಲೂ ಟಿಕ್ . ಯಾವುದೇ ಖಾತೆಗಳು ವೇರಿಫೈಡ್ ಅಥವಾ ಪರಿಶೀಲಿಸಲ್ಪಟ್ಟಿದ್ದರೆ, ಅವರ ಹೆಸರಿನ ಮುಂದೆ ಬ್ಲೂ ಟಿಕ್ ಕಾಣಿಸಿಕೊಳ್ಳುತ್ತದೆ. ಇದೀಗ ಜಾರಿಗೆ ಬಂದಿರುವ ಹೊಸ ಬ್ಲೂ ಬ್ಯಾಡ್ಜ್ ಆಯ್ಕೆಗಾಗಿ ಹಲವು ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ಜ್ಯೂನಿಯರ್ ಎನ್ ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ
ವೇರಿಫೈಡ್ ಬ್ಯಾಡ್ಜ್ ಗಾಗಿ ಅರ್ಜಿ ಸಲ್ಲಿಸುವವರು ಕಳೆದ 12 ತಿಂಗಳಿಂದ ಟ್ವಿಟ್ಟರ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರಬಾರದು. ಅನಧಿಕೃತ ಫ್ಯಾನ್ ಅಕೌಂಟ್, ಕಮೆಂಟರಿ ಅಕೌಂಟ್, ನ್ಯೂಸ್ ಫೀಡ್, ವಿಡಂಬನಾತ್ಮಕ ಮಾಹಿತಿ ಪೋಸ್ಟ್ ಮಾಡುವ ಅಕೌಂಟ್, ದ್ವೇಷಪೂರಿತ ಮಾಹಿತಿ ನೀಡುವ ಅಕೌಂಟ್ ಗಳು, ಟ್ವಟ್ಟರ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಅಕೌಂಟ್ ಗಳು ಬ್ಲೂ ಬ್ಯಾಡ್ಜ್ ಗೆ ಅರ್ಹತೆ ಪಡೆಯುವುದಿಲ್ಲ.
ಮಾತ್ರವಲ್ಲದೆ ಕಳೆದ 6 ತಿಂಗಳಿಂದ ಸಕ್ರಿಯವಾಗಿರದ ಅಕೌಂಟ್ ಗಳು ಬ್ಲೂ ಬ್ಯಾಡ್ಜ್ ಪಡೆಯಲು ಅರ್ಹತೆ ಇರುವುದಿಲ್ಲ. ಪ್ರೊಫೈಲ್ ಹೆಸರು, ಫೋಟೋ, ಇಮೇಲ್ ಮತ್ತು ಪೋನ್ ನಂಬರ್ ಇರದ ಖಾತೆಗಳು ಕೂಡ ಈ ಆಯ್ಕೆಗೆ ಪರಿಗಣಿಸಲ್ಪಡುವುದಿಲ್ಲ.
ಯಾರು ಬ್ಲೂ ಬ್ಯಾಡ್ಜ್ ಪಡೆಯಲು ಅರ್ಹರು ?
ಸರ್ಕಾರ, ಸಂಸ್ಥೆಗಳು, ಸುದ್ದಿಸಂಸ್ಥೆಗಳು, ಪತ್ರಕರ್ತರು, ಸಿನಿಮಾ ಕ್ಷೇತ್ರದಲ್ಲಿರುವವರು, ಕ್ರೀಡಾ ಕ್ಷೇತ್ರದ ಸಾಧಕರು, ಜನಪ್ರಿಯ ವ್ಯಕ್ತಿಗಳು ಮತ್ತು ಇತರೆ
ಇದನ್ನೂ ಓದಿ: ಮರೆಯುವುದಾದರೂ ಹೇಗೆ ಆ ಕರಾಳ ದಿನವನ್ನು…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ