ಜನರ ಹಿತಕ್ಕಾಗಿ ಮತದಾನ ಮಾಡೋಣ: ನಾವು ಯಾಕೆ ಮತ ಹಾಕಬೇಕು


Team Udayavani, Mar 26, 2019, 11:24 AM IST

vote

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ. ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

ದೇಶದ ಜನರ ಹಿತಕ್ಕಾಗಿ ಮತದಾನ ಮಾಡೋಣ
ದೇಶದಲ್ಲಿ ರಾಜಕೀಯಕ್ಕೆ ಅಂಟಿಕೊಂಡಿರುವ ಹೊಲಸು ನೀತಿಗಳನ್ನು ಹೋಗಲಾಡಿಸಿ, ಜನರ ಹಿತಕ್ಕಾಗಿ ಶ್ರಮಿಸುವ ಪ್ರಬಲ ನಾಯಕನ ಆಯ್ಕೆಗಾಗಿ ನಾವು ಮತ ಹಾಕಬೇಕು. ಇಂದಿನ ಯುವಜನತೆಯನ್ನು ಜಾತಿ-ಧರ್ಮದ
ಆಧಾರದಲ್ಲಿ ಒಡೆಯುವ, ತಮ್ಮ ಏಳ್ಗೆಗಾಗಿ ಮುಗ್ಧರನ್ನು ಬಳಸಿಕೊಳ್ಳುವಂತಹ ಪಕ್ಷ, ನಾಯಕರನ್ನು ತಿರಸ್ಕರಿಸಿ ದೇಶದ ಹಿತಕ್ಕಾಗಿ ದುಡಿಯುವವರನ್ನು ಗದ್ದುಗೆಗೆ ಏರಿಸಬೇಕಾದುದು ನಾಗರಿಕರ ಕರ್ತವ್ಯ.
ಅರ್ಪಿತಾ, ತೃತೀಯ ಬಿ.ಎ., ವಿವಿ ಕಾಲೇಜು ಹಂಪನಕಟ್ಟೆ, ಮಂಗಳೂರು

ಮತ ಒಂದಾದರೂ ರಾಜಕಾರಣದಲ್ಲಿ ಪರಿಣಾಮ
ಚುನಾವಣೆ ಪ್ರಜಾಸತ್ತಾತ್ಮಕ ದೇಶಗಳಿಗೆ ಮಾತ್ರ ನೀಡಲಾಗಿರುವ ಅಮೂಲ್ಯ ಕೊಡುಗೆ . ನಮ್ಮ ಮತ ಒಂದು ಆಗಿದ್ದರೂ ಅದು ರಾಜಕಾರಣದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ದೇಶಕ್ಕಾಗಿ ಮಿಡಿಯುವ ಮನಸ್ಸು ಹೊಂದಿರುವ ನಾಯಕರ ಆಯ್ಕೆ ಮಾಡೋಣ. ಮತ ಹಾಕಿದರೆ ಮಾತ್ರ ಟೀಕಿಸಲು ನೈತಿಕ ಹಕ್ಕು ಇರುತ್ತದೆ.
 ಅನ್ವಿಕಾ ಯು.ಜೆ., ದ್ವಿ. ಬಿಬಿಎ, ಎಸ್‌ ಡಿಎಂ ಕಾಲೇಜು ಮಂಗಳೂರು

ಮತದಾನದಿಂದ ಪ್ರಶಿಸುವ ಅಧಿಕಾರ ಪಡೆಯುತ್ತೇವೆ
ಮತದಾನದ ಮೂಲಕ ಉತ್ತಮ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಈ ದೇಶ ನನಗೆ ಕಲ್ಪಸಿಕೊಟ್ಟಿದೆ. ಇದರಿಂದ ನಾವು ಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಪಡೆಯುತ್ತೇವೆ. ಅಲ್ಲದೆ, ನಾನು ಮತದಾನ ಮಾಡಿದರೆ ಸರಕಾರದ ರಚನೆಯಲ್ಲಿ ಭಾಗವಹಿಸಿದಂತೆಯೇ ಆಗುತ್ತದೆ. ಮತದಾನ ಮಾಡುವಾಗ ಯಾವುದೇ ಭೇದಭಾವ ಇಲ್ಲದೆ, ದುರಾಸೆಗೆ ಬಲಿಯಾಗದೆ ಸರಿಯಾದ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಹಿಸುವುದು ನನ್ನ ಕರ್ತವ್ಯ, ಜವಾಬ್ದಾರಿ.
 -ಕೀರ್ತಿಕಾ ಎಂ., ದ್ವೀತಿಯ ಬಿ.ಎ. ಸೈಂಟ್‌ ಆ್ಯಗ್ನೆಸ್‌ ಕಾಲೇಜು, ಮಂಗಳೂರು

ದೇಶದ ಏಳಿಗೆಗಾಗಿ ಹಕ್ಕು ಚಲಾಯಿಸೋಣ
ನಾವು ಮತ ಹಾಕಿ ಜನಪ್ರತಿನಿಧಿಗಳನ್ನು ಆರಿಸಿದ ಅನಂತರ ಮುಂದಿನ ಐದು ವರ್ಷಗಳ ಕಾಲ ನಮ್ಮ ಗ್ರಾಮ, ರಾಜ್ಯ, ದೇಶಗಳಲ್ಲಿ ಅಭಿವೃದ್ಧಿ ಮಾಡುವ ಹೊಣೆ ಅವರ ಮೇಲೆ ಇರುತ್ತದೆ. ಸುಭದ್ರ, ಅಭಿವೃದ್ಧಿಶೀಲ ದೇಶವನ್ನಾಗಿ ಮಾಡುವ ಜನಪ್ರತಿನಿಧಿಗಳ ಆಯ್ಕೆ ಮಾಡುವ ಅಮೂಲ್ಯ ಅವಕಾಶ ನಮ್ಮ ಕೈಯಲ್ಲಿದೆ. ದೇಶದ ಏಳಿಗೆಗಾಗಿ ಹಕ್ಕು ಚಲಾಯಿಸೋಣ.
-ಸೌಮ್ಯಾ ಎನ್‌., ಪ್ರಥಮ ಬಿ.ಕಾಂ., ಡಾ| ಶಿವರಾಮ ಕಾರಂತ ಕಾಲೇಜು, ಪೆರುವಾಜೆ

ನಿರಾಶಾಭಾವ ಸಲ್ಲದು ಎಲ್ಲರ ಮತವೂ ಮುಖ್ಯ
ದೇಶ ಅಭಿವೃದ್ಧಿ ಹೊಂದಲು ನಾಗರಿಕರೆಲ್ಲ ಮತದಾನ ಮಾಡಬೇಕು. ನಾವು ಸರಕಾರದಿಂದ ಒಳ್ಳೆಯ ರೀತಿಯ ಸೌಲಭ್ಯವನ್ನು ಪಡೆಯಲು ಮತದಾನ ಮಾಡುವುದು ಅವಶ್ಯ. ಪ್ರಜಾಸತ್ತಾತ್ಮಕವಾದ ಸರಕಾರ ರಚನೆಯಾಗಬೇಕು. ನನ್ನ ಒಂದು ಮತದಿಂದ ಏನಾಗುತ್ತದೆ? ಎನ್ನುವ ನಿರಾಶಾಭಾವ ಸಲ್ಲದು. ಪ್ರತಿಯೊಬ್ಬರ ಮತವೂ ಮುಖ್ಯ.
ಗುರುನಾಥ್‌ ಚವ್ಹಾಣ್‌, ಪ್ರಥಮ ವಾಣಿಜ್ಯ ವಿಭಾಗ, ಸರಕಾರಿ ಪ್ರಥದರ್ಜೆ ಕಾಲೇಜು, ಹಳೆಯಂಗಡಿ

ದೇಶಕ್ಕೆ ಒಳಿತು ಮಾಡುವ ನಾಯಕನನ್ನು ಆರಿಸೋಣ
ಮತದಾನ ಮಾಡುವುದರ ಮೂಲಕ ಪ್ರಜೆಗಳಾದ ನಾವು ತಮ್ಮನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು
ಬಳಸಿಕೊಂಡತ್ತಾಗುತ್ತದೆ. ಪ್ರಜಾತಂತ್ರದಲ್ಲಿ ಪ್ರಜೆಗಳಾದ ನಮ್ಮ ಪ್ರಮುಖ ಹಕ್ಕು ಮತದಾನ. ಇದರಿಂದ ದೇಶಕ್ಕೆ ಒಳಿತು ಮಾಡುವ mನಾಯಕನನು ° ಆಯ್ಕೆ ಮಾಡುವ ಅವಕಾಶವನ್ನು ಬಳಸಿಕೊಂಡಂತಾಗುತ್ತದೆ.
ಬೃಂದಾ ಪಿ. ಮುಕ್ಕೂರು, ಪತ್ರಿಕೋದ್ಯಮ ವಿದ್ಯಾರ್ಥಿ, ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

ವಿಡಂಬಿಸುವ ಮೊದಲು ಸಾಂವಿಧಾನಿಕ ಹಕ್ಕು ಚಲಾಯಿಸಿ
ನಾವು ಮತ ಚಲಾಯಿಸದಿದ್ದರೆ ಸರಕಾರದ ಆಡಳಿತ ಕ್ರಮವನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡತೆ. ಒಬ್ಬ ವಿವೇಕವುಳ್ಳ ವಿದ್ಯಾರ್ಥಿನಿಯಾಗಿ ನಾನು ಮತದಾನ ಮಾಡುವೆ. ನೀವೂ ಮಾಡಿ. ನಮಗೆ ಸರಕಾರ ಏನು ಸೌಲಭ್ಯ ಕೊಟ್ಟಿದೆ? ಎನ್ನುವುದನ್ನು ವಿಡಂಬಿಸುವ ಬದಲು ನಮಗೆ ನೀಡಿರುವ ಹಕ್ಕನ್ನು ಉಪಯೋಗಿಸಬೇಕು.
 ಸ್ವಾತಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ.

ಪ್ರಬುದ್ಧ ಆಡಳಿತ ವ್ಯವಸ್ಥೆಗಾಗಿ ಮತದಾನ ಅಗತ್ಯ
ಭಾರತದ ಪ್ರಜೆಯಾಗಿರುವ ನಮಗೆ ನಮ್ಮನ್ನು ಆಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕಿದೆ. ಭಾರತ ಅಭಿವೃದ್ಧಿಯನ್ನು ಸಾಧಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಪ್ರಬುದ್ಧ ರಾಜಕೀಯ, ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಹಾಗಾಗಿ ನಾವು ಮತ ಚಲಾಯಿಸುವ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ನಿರ್ವಹಿಸಬೇಕಿದೆ.
ರಂಜಿತಾ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VOTE1

ನಮ್ಮ ಮತ ಉತ್ತಮ ನಾಯಕನಿಗೆ; ಪಕ್ಷಕ್ಕಲ್ಲ

vote

ಮತದಾನಕ್ಕೆ ಹಿಂದೇಟು ಹಾಕದಿರಿ

vote-1

ಮತ ಚಲಾಯಿಸಿ, ದೇಶ ಬದಲಿಸಿ;ನಾವು ಯಾಕೆ ಮತ ಹಾಕಬೇಕು?

vote

ನಮ್ಮ ಆಡಳಿತವನ್ನು ನಾವೇ ರೂಪಿಸೋಣ

vote

ಸದೃಢ ಭಾರತ, ರಾಷ್ಟ್ರ ರಕ್ಷಣೆಗಾಗಿ ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.