ದೇಶದ ಮೂರನೇ ಅತಿದೊಡ್ಡ ಸರೋವರ ನಾಗಾರ್ಜುನ ಸಾಗರ್‌


Team Udayavani, Sep 24, 2020, 6:21 PM IST

Nagararjuna

ತೆಲಂಗಾಣದ ನಲ್ಗೊಂಡ ಮತ್ತು ಖಮ್ಮಮ್‌ ಜಿಲ್ಲೆಗಳಿಗೆ ನೀರು ಸರಬರಾಜು ಮತ್ತು ನೀರಾವರಿ ಉದ್ದೇಶಕ್ಕಾಗಿ ಬೃಹತ್‌ ಅಣೆಕಟ್ಟು ನಿರ್ಮಿಸಲಾಗಿದೆ. ಈ ಯೋಜನೆಯು ಸುಮಾರು 215000 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ಭಾರತದ ಅತಿದೊಡ್ಡ ಕಾಲುವೆ ವ್ಯವಸ್ಥೆ ಜಾಲವನ್ನು ಈ ಯೋಜನೆ ಹೊಂದಿದೆ.

ಮೂರನೇ ಅತಿದೊಡ್ಡ ಸರೋವರ
ಅಣೆಕಟ್ಟಿನಲ್ಲಿ ಎರಡು ಕಾಲುವೆಗಳಿವೆ, ಎಡ ಮತ್ತು ಬಲ ಕಾಲುವೆಗಳು ಜಲಾಶಯದಿಂದ ನೀರನ್ನು ಪೂರೈಸುತ್ತವೆ. ನೀರಾವರಿ ಮತ್ತು ಜಲ ವಿದ್ಯುತ್‌ ಉತ್ಪಾದನೆಗಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಿರ್ಮಿಸಲಾದ ಆರಂಭಿಕ ಯೋಜನೆಗಳಲ್ಲಿ ಅಣೆಕಟ್ಟು ಕೂಡ ಒಂದು. ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ, ಅಣೆಕಟ್ಟಿನ ಹಿಂದೆ ಒಂದು ಸರೋವರವನ್ನು ಅಭಿವೃದ್ಧಿಪಡಿಸಲಾಗಿದೆ, ಇದು ವಿಶ್ವದ ಎಲ್ಲೆ ಡೆಯೂ ಮಾನವ ನಿರ್ಮಿತ ಮೂರನೇ ಅತಿದೊಡ್ಡ ಸರೋವರವಾಗಿದೆ.

ವಿಜಯಪುರಿ
ಪ್ರಾಚೀನ ಇತಿಹಾಸದಲ್ಲಿ ನಾಗಾರ್ಜುನ ಸಾಗರ್‌ ಅನ್ನು ವಿಜಯಪುರಿ ಎಂದು ಕರೆಯಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ನಾಗಾರ್ಜುನ ಸಾಗರ್‌ ಎಂದು ಮರುನಾಮಕರಣಗೊಂಡಿದ್ದು, 2ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ನಾಗಾರ್ಜುನರ ಸ್ಮರಣಾರ್ಥವಾಗಿ ನಾಗಾರ್ಜುನ ಸಾಗರ್‌ ಎಂಬ ಹೆಸರಿಡಲಾಗಿದೆ. ಅತ್ಯಂತ ಗೌರವಾನ್ವಿತ ಬೌದ್ಧ ಸನ್ಯಾಸಿಗಳಲ್ಲಿ ನಾಗಾರ್ಜುನ ಓರ್ವರಾಗಿದ್ದು, ನಾಗಾರ್ಜುನ ಸಾಗರ್‌ ಈ ಹಿಂದೆ ಬೌದ್ಧ ಬೋಧನೆ ಮತ್ತು ಪ್ರಚಾರಕ್ಕಾಗಿ ಒಂದು ಪ್ರಮುಖ ತಾಣವಾಗಿತ್ತು.

ಐತಿಹಾಸಿಕ ತಾಣಗಳ
ನಾಗಾರ್ಜುನ ಸಾಗರ್‌ ಪ್ರವಾಸದ ಸಮಯದಲ್ಲಿ ಭೇಟಿ ನೀಡಬೇಕಾದ ಕೆಲವು ಪ್ರವಾಸಿ ಆಕರ್ಷಣೆಗಳೆಂದರೆ ನಾಗಾರ್ಜುನ ಸಾಗರ್‌ ಅಣೆಕಟ್ಟು, ಇದು 1966 ರಲ್ಲಿ ಪೂರ್ಣಗೊಂಡಿತು ಮತ್ತು 124 ಮೀಟರ್‌ ಎತ್ತರ ಮತ್ತು 1 ಕಿಲೋಮೀಟರ್‌ ಉದ್ದವನ್ನು ಹೊಂದಿದೆ. ಅಣೆಕಟ್ಟಿನಲ್ಲಿ 26 ಗೇಟ್‌ಳಿವೆ.ಅಣೆಕಟ್ಟಿನ ಸುತ್ತಲೂ 3ನೇ ಶತಮಾನದ ಬೌದ್ಧ ಉತ್ಖನನದ ಅವಶೇಷಗಳು ಕಂಡುಬಂದ ಐತಿಹಾಸಿಕ ತಾಣಗಳಿವೆ.

ಅತಿ ಎತ್ತರದ ಕಲ್ಲಿನ ಅಣೆಕಟ್ಟು
ಇದು ವಿಶ್ವದ ಅತಿ ಎತ್ತರದ ಕಲ್ಲಿನ ಅಣೆಕಟ್ಟು. ಅಣೆಕಟ್ಟು ಜಲವಿದ್ಯುತ್ನ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಈ ಮೊದಲು ನಂದಕೊಂಡ ಯೋಜನೆ ಎಂದು ಕರೆಯಲಾಗುತ್ತಿದ್ದ ಈ ಅಣೆಕಟ್ಟನ್ನು ಕೃಷ್ಣ ನದಿಯಲ್ಲಿ ನಿರ್ಮಿಸಲಾಗಿದ್ದು, ಇದು ಸುಂದರವಾದ ಸೌಂದರ್ಯವನ್ನು ನೀಡುತ್ತದೆ.

ಆಕರ್ಷಣೆ ದ್ವೀಪ
ನಾಗಾರ್ಜುನಕೊಂಡವು ನಾಗಾರ್ಜುನ ಸಾಗರ್‌ ಸರೋವರದ ಮಧ್ಯದಲ್ಲಿರುವ ಒಂದು ಆಕರ್ಷಣೆ ದ್ವೀಪ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಕಲೆಯ ಗಮನಾರ್ಹ ಅವಶೇಷಗಳಿವೆ, ಇನ್ನು ಟಿಎಸ್‌ಟಿಡಿಸಿ ನಿರ್ವಹಿಸುವ ಬೋಟಿಂಗ್‌ ಪಾಯಿಂಟ್‌ನಿಂದ ದೋಣಿ ವಿಹಾರವನ್ನು ಮಾಡೋದನ್ನು ಮರೆಯದಿರಿ. ಇದು ನಾಗಾರ್ಜುನ ಸಾಗರ್‌ ಪ್ರವಾಸದ ಸಮಯದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳವಾಗಿದೆ. ವಸ್ತುಸಂಗ್ರಹಾಲಯದ ಮುಖ್ಯ ಸ್ತೂಪವಾದ ಮಹಾಚೈತ್ಯ ಬುದ್ಧನ ಅವಶೇಷಗಳನ್ನು ಇದು ಒಳಗೊಂಡಿದೆ.

ಇನ್ನು ನಾಗಾರ್ಜುನ ಸಾಗರ್‌ ಅಣೆಕಟ್ಟು ಹೈದರಾಬಾದ್‌ನಿಂದ ಬರುವ ವಾರಾಂತ್ಯದ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ (ಸೆಪ್ಟಂಬರ್‌ / ಅಕ್ಟೋಬರ್‌ನಲ್ಲಿ) ಅಣೆಕಟ್ಟು ದ್ವಾರಗಳು ತೆರೆದಾಗ ಸಾವಿರಾರು ಪ್ರವಾಸಿಗರು ನಾಗಾರ್ಜುನಸಾಗರ್‌ಗೆ ಭೇಟಿ ನೀಡುತ್ತಾರೆ.

 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.