UV Fusion: ಅರಿತು ಬಾಳಲು… ಬದುಕು ಬಂಗಾರ…


Team Udayavani, May 9, 2024, 3:42 PM IST

13

ಮನುಷ್ಯ ಸಂಘಜೀವಿ, ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡಗಳ ನಡುವೆ ನಾವು ಒಂಟಿತನವನ್ನೇ ಇಷ್ಟಪಡುತ್ತೇವೆ. ಭಾವನಾತ್ಮಕವಾಗಿ ಬೆಸೆದ ಸಂಬಂಧಗಳು ಕ್ರಮೇಣ ಹದಗೆಡುತ್ತಿದೆ. ಇಂದಿನ ಯುವ ಪೀಳಿಗೆ ಬಹುತೇಕ ಏಕಾಂಗಿತನವನ್ನೇ ಬಯಸುತ್ತದೆ. ನಮ್ಮ ಹಿರಿಯರು ಪರಂಪರಾನುಗತವಾಗಿ ಬೆಳೆದು ಬಂದ ರೀತಿ – ನೀತಿ ಇಂದು ಮರೆಯಾಗುತ್ತಿದೆ.

ಈ ಭೂಮಿಯ ಮೇಲೆ ಯಾರು, ಯಾರಿಗೆ ಅಂತ ಮೇಲಿರುವ ಭಗವಂತ ಮೊದಲೇ ನಿರ್ಧರಿಸಿ ಬಿಡುತ್ತಾನೆ. ನಾವೇನಿದ್ದರೂ ಅವನ ಆಣತಿಯಂತೆ ನಡೆಯುತ್ತಿರುವುದು.

ಹೆಣ್ಣಿಗೆ ಬಾಲ್ಯದಲ್ಲಿ ತಂದೆ ಆಸರೆಯಲ್ಲಿ, ಯೌವ್ವನದಲ್ಲಿ ಗಂಡನ ಆಶ್ರಯದಲ್ಲಿ, ವೃದ್ಧಾಪ್ಯದಲ್ಲಿ ಮಕ್ಕಳ ಆವಶ್ಯಕತೆ ಬೇಕು. ಗಂಡಿಗೆ ಹೆಣ್ಣಿನ, ಹೆಣ್ಣಿಗೆ ಗಂಡಿನ ಅವಶ್ಯಕತೆ ಬೇಕು. ಯಾರಧ್ದೋ ಒತ್ತಾಯಕ್ಕೆ, ಇನ್ಯಾರಧ್ದೋ ಬಲವಂತಕ್ಕೆ ನಾವು ಕೆಲವೊಮ್ಮೆ ಮದುವೆ ಆಗಿ ಬಿಡುತ್ತೇವೆ. ಮದುವೆಯಾದ ಮೇಲೆ ಒಂದೆರಡು ಸಲ ಜಗಳವಾಡಿ ಮೂರನೇ ಸಲ ಆ ಜಗಳ ವಿಚ್ಚೇದನದಲ್ಲಿ ಅಂತ್ಯವಾಗುದಾದರೆ ಮದುವೆಗೆ ಅರ್ಥ ಎಲ್ಲಿದೆ?

ಪ್ರತಿದಿನ  ಗಂಡ- ಹೆಂಡತಿಯ ನಡುವಿನ ಜಗಳವೇನು ಸರಳ ಎನಿಸಬಹುದು, ಆದರೆ ಈ ಜಗಳದ ಮಧ್ಯೆ ಮಕ್ಕಳ ಸ್ಥಿತಿಯೇನು? ಹೊಸತನವನ್ನು ಕಲಿಯುವ ಹೊಸ್ತಿಲಲ್ಲಿ ಈ ರೀತಿಯಾದ ಜಗಳ ಅವರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.

ಇಚ್ಚೆ ಅರಿತ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹೆಚ್ಚೆಂದ ಎಂಬ ಮಾತಿನಂತೆ ಇಬ್ಬರು ಒಬ್ಬರನ್ನೊಬ್ಬರು ಅರಿತಾಗ ಸಂಸಾರವೆಂಬ ನೌಕೆ  ಸುಗಮವಾಗಿ ಸಾಗಲು ಸಾಧ್ಯ.

ಕೆಲವೊಮ್ಮೆ ಹೆಣ್ಣು ಮದುವೆಯಾದ ಮೇಲೆ ಸಣ್ಣ ಜಗಳಕ್ಕೂ ಒಂಟಿಯಾಗಿ ಬದುಕುವ ನಿರ್ಧಾರ ಮಾಡಿಬಿಡುತ್ತಾಳೆ. ಆದರೆ ಇದರ ಮಧ್ಯೆ ತಂದೆಯ ಪ್ರೀತಿಯಿಂದ ಮಕ್ಕಳು ವಂಚಿತರಾಗುದಿಲ್ಲವೇ ?

ಹಾಡಿನಲ್ಲಿ ಹೇಳಿರುವಂತೆ ಬಂಧು ಕೋಡಿಸೋ ಸೀರೆ ಬಣ್ಣ ಹೋಗೋ ವರೆಗೆ, ತಂದೆ ಕೋಡಿಸೋ ಸೀರೆ ಮದುವೆ ಆಗೋವರೆಗೆ, ಆದರೆ ಗಂಡ  ಕೊಡಿಸೋ ಸೀರೆ ಹೆಣ್ಣಿನ ಕುಂಕುಮ ಇರುವ ವರೆಗೆ. ಧರಿಸುವ ಕಾಲುಂಗುರ, ಕರಿಮಣೆ ಉಂಗುರ ಇದೆಲ್ಲವೂ ಮದುವೆ ಆಗಿದೆ ಎನ್ನುವ ಸಂಕೇತವಾದರೆ, ಈ ಸಂಕೇತಗಳೆಲ್ಲವೂ ನಿನಗೆ ಬೇಕು ಆದರೆ ಈ ಸಂಕೇತಗಳಿಗೆ ಕಾರಣನಾದವನು ಮಾತ್ರ ಬೇಡವೆ?

ಗಂಡಿನ ಅವಶ್ಯಕತೆ ಇಲ್ಲದ ಬದುಕು ಹಿತ ಅನ್ನಿಸಬಹುದು ಕ್ರಮೇಣ ಅದು ಹೆಚ್ಚು ಪ್ರಿಯವಾಗಬಹುದು. ಆದರೆ ನೀನು ಜೀವನದಲ್ಲಿ ಕುಸಿದಾಗ ಧೈರ್ಯ ತುಂಬಿ ನಿನ್ನನ್ನು ಮೇಲೆತ್ತಲು ಗಂಡಿನ ಹೆಗಲು ಅಗತ್ಯ. ಯಾವುದೋ ಒಂದು ಸಣ್ಣ ವಿಚಾರದ ಜಗಳ ಗಂಡ ಹೆಂಡತಿಯ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಒಬ್ಬರನ್ನೊಬ್ಬರು ಅರಿಯದ ಕಾರಣವೂ ಇರಬಹುದು.

ನಾನು ನೋಡಿದ ಮಟ್ಟಿಗೆ ಬಹುತೇಕರು ಮದುವೆ ಆಗಿಯೂ ಆಗದಂತೆ ಇರುತ್ತಾರೆ. ಗಂಡಿನ ಆಸರೆ ಇಲ್ಲದೆ ನಾನೊಬ್ಬಳೇ ಬದುಕುತ್ತೇನೆ, ಹೆಣ್ಣಿನ ಆಸರೆಯಿಲ್ಲದೇ ನಾನೊಬ್ಬನೇ ಬುದಕುತ್ತೇನೆ ಎನ್ನುವುದು ನಿನ್ನ ಆತ್ಮಸ್ಥೈರ್ಯವಾದರೆ, ಪರಂಪರಾನುಗತವಾಗಿ ಬಂದ ಸಂಸ್ಕೃತಿ ಏನು ಹೇಳುತ್ತದೆ?

ಒಟ್ಟಿನಲ್ಲಿ ಯಾವುದೇ ಹೆಣ್ಣಿಗೆ ಗಂಡನ, ಯಾವುದೇ ಗಂಡಿಗೆ ಹೆಂಡತಿಯ ಆಸರೆ ಮತ್ತು ಆಶ್ರಯ ಅವಶ್ಯಕ. ಹೆಂಡತಿ ಅರ್ಧಾಂಗಿ ಅಲ್ಲಾ, ಅವಳು ಪೂರ್ಣಾಂಗಿ ಎನ್ನುವಂತೆ, ಬದುಕಿನಲ್ಲಿ ಸಿಹಿ ಕಹಿ ಏನಾದರೂ ಪ್ರತಿ ಕ್ಷಣ ಜತೆಯಾಗಿರುವೆ ಎಂದಾಗ ಬದುಕು ಸುಂದರ.

 -ಸುಜಯ ಶೆಟ್ಟಿ  ಹಳ್ನಾಡು

ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

HD Revanna granted bail in domestic worker abuse case

HD Revanna; ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

ರಾಮಲಿಂಗಾರೆಡ್ಡಿ

Chitradurga; ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ:ರಾಮಲಿಂಗಾರೆಡ್ಡಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-wewewqe

Madikeri; ಕಾಡುಕೋಣ ಬೇಟೆ: 549 ಕೆ.ಜಿ ಮಾಂಸ ಸೇರಿ ಓರ್ವನ ಬಂಧನ

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

sambhavami yuge yuge kannada movie

Kannada Cinema; ರಿಲೀಸ್‌ ಅಖಾಡಕ್ಕೆ ಸಂಭವಾಮಿ ಯುಗೇ ಯುಗೇ..

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.