10 ವರ್ಷದಿಂದ ಸೆಕ್ಸ್‌ ನಡೆಸದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದಳು!


Team Udayavani, Mar 12, 2017, 6:31 AM IST

image.jpg

ಗಾಜಿಯಾಬಾದ್‌: 10 ವರ್ಷಗಳಿಂದ ಮೈ ಮುಟ್ಟದೇ ಇದ್ದ ಕಾರಣಕ್ಕೆ ಕುಪಿತಳಾದ ಪತ್ನಿಯೊಬ್ಬಳು ಪತಿಯ ಗುಪ್ತಾಂಗವನ್ನೇ ಕತ್ತರಿಸಿದ ವಿಲಕ್ಷಣ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನ ಖೋರಾ ಕಾಲೋನಿಯಲ್ಲಿ  ಶನಿವಾರ ಬೆಳಗ್ಗೆ ನಡೆದಿದೆ.  ಒಂದೆಡೆ ವಿಧಾನಸಭಾ ಚುನಾವಣೆಯ ಫ‌ಲಿತಾಂಶದ ಕುರಿತಾಗಿ ಉತ್ತರಪ್ರದೇಶ ಸುದ್ದಿಯಲ್ಲಿದ್ದರೆ ಇದೀಗ ಈ ಸುದ್ದಿ ವೈರಲ್‌ ಆಗಿದೆ. 

ರಿಟಾ ಯಾದವ್‌ ಎನ್ನುವ 28 ವರ್ಷದ ಮಹಿಳೆ  ವೇದ್‌ಪ್ರಕಾಶ್‌ (31) ಎಂಬಾತನನ್ನು 11 ವರ್ಷಗಳ ಹಿಂದೆವರಿಸಿದ್ದಳು. ವಿವಾಹವಾದ 1 ವರ್ಷ ದಾಂಪತ್ಯ ನಡೆಸಿದ್ದನಾದರೂ ಆ ಬಳಿಕ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದ ವೇದ್‌ಪ್ರಕಾಶ್‌ 10 ವರ್ಷಗಳಿಂದ ಪತ್ನಿಯ ಮೈಯನ್ನೇ ಮುಟ್ಟಿಲ್ಲವಂತೆ. 

ವಿವಾಹವಾಗಿ 11 ವರ್ಷಗಳು ಕಳೆದರು ಮಗುವೊಂದನ್ನು ಹಡೆಯಲು ವಿಫ‌ಲವಾದ ಹತಾಶೆ ಒಂದೆಡೆಯಾದರೆ ಇನ್ನೊಂದೆಡೆ ಪತಿಗೆ ಪರಸ್ತ್ರೀಯ ಸಂಗವಿದೆ ಎಂದು ಅನುಮಾನಗೊಂಡು ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ. 

ಸುದ್ದಿಗಾರರ ಮುಂದೆಯೇ ವಿಷಯವನ್ನು ತೋಡಿಕೊಂಡಿರುವ ರೀಟಾ ನಾನು ಎಷ್ಟು ಕೇಳಿಕೊಂಡರು ನನ್ನೊಡನೆ ದಾಂಪತ್ಯ ನಡೆಸುತ್ತಿರಲಿಲ್ಲ. ಕಳೆದ 10 ವರ್ಷಗಳಿಂದಲೂ ನಿರಂತರ ಜಗಳ ಮಾಡಿಕೊಳ್ಳುತ್ತಿದ್ದೆವು. ನಿನ್ನ ಮುಖ ನೋಡಿದರೆ ನನಗೆ ಅಸಹ್ಯವಾಗುತ್ತದೆ, ನಾನು ಬೇರೊಬ್ಬಳನ್ನು ನೋಡಿಕೊಳ್ಳುತ್ತೇನೆ ಎಂದಿದ್ದ ಎಂದಿದ್ದಾಳೆ. 

ನೈಟ್‌ ಶಿಫ್ಟ್ ಟ್ಯಾಕ್ಸಿ ಡ್ರೈವರ್‌ ಆಗಿರುವ ವೇದ್‌ ಪ್ರಕಾಶ್‌ ಶನಿವಾರ ಬೆಳಗ್ಗೆ ಮನೆಗೆ ಬರುತ್ತಿದ್ದಂತೆ ಸ್ನಾನಕ್ಕೆ ತೆರಳಿದ್ದು ಈ ವೇಳೆ ಪತ್ನಿ ರೀಟಾ ಗ್ರೇಂಡರ್‌ನ ಕಲ್ಲಿನಿಂದ ತಲೆಗೆ ಹೊಡೆದಿದ್ದಾಳೆ. ಪ್ರಜ್ಞೆ ತಪ್ಪಿ ಬಿದ್ದ ಕೂಡಲೇ ಆತನ ಗುಪ್ತಾಂಗವನ್ನು ಬುಡ ಸಮೇತ ಕತ್ತರಿಸಿ ಹಾಕಿದ್ದಾಳೆ. 

ಚಿಂತಾಜನಕ ಸ್ಥಿತಿಯಲ್ಲಿದ್ದ ವೇದ್‌ಪ್ರಕಾಶ್‌ ನನ್ನು ಸ್ನೇಹಿತನೊಬ್ಬ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ತಂಡ ಆತನನ್ನು ಬದುಕಿಸಲು 5 ಗಂಟೆಗಳ ಕಾಲ ಶ್ರಮವಹಿಸಿದರು. 

ಇದೀಗ ಮರಳಿ ಗುಪ್ತಾಂಗವನ್ನು ಕಸಿಮಾಡಲಾಗಿದ್ದು ಮರಳಿ ಲೈಂಗಿಕ ಶಕ್ತಿ ಪಡೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. 

ರೀಟಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಸೆಕ್ಷನ್‌ 326 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.