ಶಿಲ್ಪವನದಲ್ಲಿ ಕವನ ವಾಚನ
Team Udayavani, Jan 20, 2018, 3:35 PM IST
ಮರದ ನೆರಳು, ಕಲಾಕೃತಿಗಳು, ಕಲಾಸಕ್ತರು, ರಸವತ್ತಾದ ಕವನಗಳು… ಆಹಾ ಎಂಥ ಚೆಂದ ಅನಿಸುವುದಿಲ್ಲವೇ? ಇಂಥ ಒಂದು ಚೆಂದದ ಕಾರ್ಯಕ್ರಮ ನಿಮಗಾಗಿ ನಡೆಯುತ್ತಿದೆ. ಶಿಲ್ಪವನದಲ್ಲಿ ನಡೆಯುವ ತಿಂಗಳ ಕಾರ್ಯಕ್ರಮದಲ್ಲಿ ಶಶಾಂಕ್ ಜೊಹ್ರಿ ಅವರಿಂದ ಸ್ವರಚಿತ ಕವನ ವಾಚನ ನಡೆಯಲಿದೆ. ಎಲ್ಲ ಜಂಜಾಟಗಳನ್ನು ದಿನದ ಮಟ್ಟಿಗಾದರೂ ಮರೆಯೋಣ ಎನ್ನುವವರು ಇಲ್ಲಿಗೆ ಬರಬಹುದು. ಕಾರ್ಯಕ್ರಮದಲ್ಲಿ ಶಿಲ್ಪವನದ ಕಲಾವಿದರೂ ಭಾಗವಹಿಸಲಿದ್ದಾರೆ.
ಎಲ್ಲಿ?: ಶಿಲ್ಪವನ, ರವೀಂದ್ರ ಕಲಾಕ್ಷೇತ್ರದ ಎದುರು
ಯಾವಾಗ?: ಜ.21, ಭಾನುವಾರ ಬೆ.11-5