ಹೆಸರಿಲ್ಲದ ಹೋಟೆಲಿನ ಹಬೆಯಾಡುವ ಕಾಫಿ!
Team Udayavani, Feb 25, 2017, 3:55 PM IST
ಈ ಫುಟ್ಟ ಹೋಟೆಲ್ಲಿಗೆ ಸದ್ಯಕ್ಕೊಂದು ಹೆಸರಿಲ್ಲ. ಆದ್ರೆ ಇಲ್ಲಿ ಸಿಗುವ ರುಚಿಯಾದ ಕಾಫಿ, ಟೀ ಅಕ್ಕ ಪಕ್ಕದ ಬಡಾವಣೆಗಳಾದ ಶ್ರೀರಾಮಪುರ, ದೇವಯ್ಯ ಪಾರ್ಕ್, ಮಾರುತಿ ಬಡಾವಣೆ, ಪ್ರಕಾಶನಗರ ಎಲ್ಲೂ ಸಿಗುವುದಿಲ್ಲ. ಅಂದ ಹಾಗೆ, ಈ ಪುಟ್ಟ ಹೋಟೆಲ್ ಇರುವುದು ಶ್ರೀರಾಮಪುರ ಮೆಟ್ರೋ ರೈಲು ನಿಲ್ದಾಣದ ಬಳಿ ಇರುವ ಲಕ್ಷ್ಮೀನಾರಾಯಣಪುರದಲ್ಲಿ. ಸಂಪಿಗೆ ರಸ್ತೆಯ ಎಡಕ್ಕೆ ತಿರುಗಿ ರೈಲ್ವೆ ಬ್ರಿಡ್ಜ್ ಕೆಳಗೆ ಸಾಗಿ ಹಾಗೇ ನೇರ ಶ್ರೀರಾಮಪುರದೊಳಗೆ ಬಂದು ಬಲಕ್ಕೆ ಶ್ರೀರಾಮಪುರ ಮೆಟ್ರೋ ರೈಲು ನಿಲ್ದಾಣಕ್ಕೆ ಹೋಗಲು ಬಲಕ್ಕೆ ತಿರುಗಿದರೆ ಮೊದಲು ಸಿಗುವುದೇ ಈ ಕಾಫಿ- ಟೀ ಹೋಟೆಲ್ ಈ ಹೋಟೆಲ್ಲಿನ ಕಾಫಿ ಕುಡಿಯುವಾಗ ಸಿಗುವ ಆನಂದವೇ ಬೇರೆ. ಕಾಫಿ ಕುಡಿದ ಮೇಲೆ ಅದರ ಸವಿರುಚಿ ನಾಲಗೆಯಲ್ಲಿ ಮತ್ತು ಮನಸ್ಸಿನಲ್ಲಿ ಸುಮಾರು ಹೊತ್ತು ಇರಬೇಕೆಂದು ಬಯಸುವವನು ನಾನು. ಆ ಸವಿರುಚಿಯನ್ನು ಈ ಪುಟ್ಟ ಹೋಟೆಲ್ಲಿನಲ್ಲಿ ಕಂಡುಕೊಂಡಿರುವುದರಿಂದ ಮುಂಜಾನೆ ಅದೆಷ್ಟೇ ಚಳಿ ಇದ್ದರೂ ಬೇರೆಲ್ಲೂ ಕಾಫಿ ಕುಡಿಯದೇ ಇಲ್ಲಿಗೆ ಬಂದು ಕಾಫಿ ಕುಡಿಯುತ್ತೇನೆ.
ಅಂದಹಾಗೆ ಈ ಹೋಟೆಲ್ಲಿಗೊಂದು ಪುಟ್ಟ ಇತಿಹಾಸವಿದೆ. ಇದು ಪ್ರಾರಂಭವಾಗಿದ್ದು 1952ರಲ್ಲಿ. ಆಗ ಇದರ ಹೆಸರು ರಾಜಲಕ್ಷ್ಮೀ ವಿಲಾಸ ಎಂದು. ಆಗ ಮಣ್ಣಿನ ರಸ್ತೆ ಇತ್ತಂತೆ. ಮಾಲೀಕರ ಮೂಲ ಊರು ಉಡುಪಿಯ ಸಾಲಿಗ್ರಾಮ. ಮುಂಜಾನೆ ಆರು ಗಂಟೆಗೆ ತೆರೆಯುವ ಈ ಹೋಟೆಲ್ಲಿನ ಕಾಫಿ ಕುಡಿಯಲು ಜನ ಕಾಯುತ್ತಿರುತ್ತಾರೆ. ನಿಮಗೇಕೆ ಇಲ್ಲಿನ ಕಾಫಿ ಇಷ್ಟ? ಅಂತ ಕೇಳಿದರೆ, ನೀವು ಯಾವತ್ತು ಬಂದು ಕಾಫಿ ಕುಡಿದರೂ ರುಚಿ ಬದಲಾಗುವುದಿಲ್ಲ, ಏಕೆಂದರೆ ಕಾಫಿಗೆ ಸರಿಯಾಗಿ ಡಿಕಾಕ್ಷನ್, ಹಾಲು ಸಕ್ಕರೆಗಳನ್ನೆÇÉಾ ಸರಿಯಾದ ಅಳತೆಯಲ್ಲಿ ಹಾಕಿ ಮಾಡುವವರು ಒಬ್ಬರೇ ಇರುತ್ತಾರೆ. ಇಲ್ಲಿ ಸ್ವಚ್ಚತೆಯಿದೆ. ನಾವು ಎಷ್ಟೇ ದೂರವಿದ್ದರೂ ಕಾಫಿ ಕುಡಿಯಬೇಕೆನಿಸಿದರೆ ಇಲ್ಲಿಗೇ ಬರುತ್ತೇವೆ… ಇದು ನಿತ್ಯ ಇಲ್ಲಿಯೇ ಕಾಫಿ ಕುಡಿಯವ ಗ್ರಾಹಕರ ಅಭಿಪ್ರಾಯ. ಅಂದಹಾಗೆ ಇಷ್ಟು ರುಚಿಯಾದ ಕಾಫಿಗೆ ಬೆಲೆಯೂ ಹೆಚ್ಚಿಲ್ಲ. ಕೇವಲ 10 ರುಪಾಯಿಗಳು ಮಾತ್ರ. ಇತ್ತ ಬಂದಾಗ ನೀವೊಮ್ಮೆ ಕಾಫಿ ರುಚಿನೋಡಿ.
– ಶಿವು ಕೆ., ಛಾಯಾಗ್ರಾಹಕಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ