ಡಿಗ್ರೀ ಆಯ್ತು… ವಾಟ್‌ ನೆಕ್ಸ್ಟ್? ಈಗಷ್ಟೇ ಪದವಿ ಮುಗಿಸಿದವರಿಗೆ…


Team Udayavani, Jul 18, 2017, 3:55 AM IST

filler-AFTER-DIGREE.gif

ಪದವಿಯ ಕೊನೆಯ ಹಂತಕ್ಕೆ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ಉದ್ಯೋಗ ತಲೆಬಿಸಿ ಶುರುವಾಗುತ್ತದೆ. ಕೆಲವರು ತಮ್ಮ ಪದವಿಯ ಅವಧಿಯಲ್ಲೇ ಕ್ಯಾಂಪಸ್‌ ಇಂಟರ್‌ವ್ಯೂನಲ್ಲಿ ಯಶಸ್ಸು ಕಂಡು, ಕಂಪನಿಗೆ ಹಾರುವ ಅವಕಾಶ ಪಡೆದಿರುತ್ತಾರೆ. ಮತ್ತೆ ಕೆಲವರು ಉನ್ನತ ಶಿಕ್ಷಣದ ಕನಸಿನಲ್ಲಿರುತ್ತಾರೆ. ಉಳಿದ ಬಹುತೇಕರಿಗೆ ಕೆಲಸ ಹುಡುಕುವುದೇ ಕಾಯಕ. ಇಂಥವರಿಗೆ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿ ಕೆಲವು ಸಲಹೆಗಳಿವೆ…

1. ವಿಷಯಜ್ಞಾನ ಬೆಳೆಸಿಕೊಳ್ಳಿ…
ಪರೀಕ್ಷೆ ಮುಗಿದ ಮೇಲೆ, ವಿದ್ಯಾರ್ಥಿಗಳು ಪುಸ್ತಕದ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗಾಗಿ, ಕಲಿತ ವಿಷಯಗಳೆಲ್ಲ ಕಾಲಕ್ರಮೇಣ ಮರೆತುಹೋಗುವ ಸಾಧ್ಯತೆಗಳಿರುತ್ತವೆ. ಆದ ಕಾರಣ, ವಿಷಯಗಳ ಮರುಜ್ಞಾನವನ್ನು ಸದಾ ಕಾಪಿಟ್ಟುಕೊಂಡಿರಬೇಕು. ನೆನಪಿರಲಿ, ಸಂದರ್ಶನದ ವೇಳೆ ನಿಮ್ಮನ್ನು ಕೈಹಿಡಿಯುವುದೇ ಈ ಸಂಗತಿ.

2. ಮುಂದಿನ ಪರೀಕ್ಷೆಗೆ ತಯಾರಿ
ಪದವಿ ನಂತರ ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಹಂಬಲದಲ್ಲಿರುತ್ತಾರೆ. ಅಂಥ ವಿದ್ಯಾರ್ಥಿಗಳು, ಮುಂದಿನ ಪರೀಕ್ಷೆಗಾಗಿ ತಮಗೆ ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು. ಈ ರೀತಿಯ ತಯಾರಿಯಿಂದ ನಿಮಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವ ಸಾಧ್ಯತೆಗಳಿರುತ್ತವೆ. ಸೀನಿಯರ್ಗಳ ಮಾರ್ಗದರ್ಶನ ಪಡೆದು, ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ ಎಂಬ ಮಾಹಿತಿ ಕಲೆಹಾಕಿ. 

3. ಸ್ಪರ್ಧಾತ್ಮಕ ಪರೀಕ್ಷೆ ಮೇಲೆ ಕಣ್ಣಿಡಿ
ಪದವಿ ನಂತರ ಅನೇಕ ವಿದ್ಯಾರ್ಥಿಗಳು ಕೆಎಎಸ್‌, ಐಎಎಸ್‌ ಬ್ಯಾಂಕಿಂಗ್‌ ಸೇರಿದಂತೆ, ಇನ್ನೂ ಅನೇಕ ರೀತಿಯ ಉದ್ಯಮಗಳಲ್ಲಿ ಕೆಲಸಪಡೆಯಲು ಇಚ್ಛಿಸುತ್ತಾರೆ. ಆದರೆ, ಇದು ಸ್ಪರ್ಧಾತ್ಮಕ ಜಗತ್ತು. ಜವಾನನಿಂದ ಹಿಡಿದು ದಿವಾನನ ಪೋಸ್ಟ್‌ವರೆಗೂ “ಪರೀಕ್ಷೆ’ ಎಂಬ ಹರ್ಡಲ್ಸ್‌ ಅನ್ನು ಜಿಗಿಯಲೇಬೇಕು. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಂದು ಕಣ್ಣಿಡಿ. ಅದಕ್ಕೆ ಸಂಬಂಧಿಸಿದ ಸಾಕಷ್ಟು ಪುಸ್ತಕಗಳನ್ನು ಓದಿ. ಕೋಚಿಂಗ್‌ ಪಡೆದು, ಉತ್ತಮ ಅಭ್ಯಾಸ ನಡೆಸಿದರೆ, ಯಶಸ್ಸು ನಿಮ್ಮ ಕೈಯಲ್ಲಿ.

4. ಕೋರ್ಸ್‌ ಆಯ್ಕೆ ಬಗ್ಗೆ ಮಾಹಿತಿ
ನೀವು ಸ್ನಾತಕೋತ್ತರ ಪದವಿಯನ್ನು ಮಾಡಲು ಇಚ್ಛಿಸಿದರೆ, ಆ ಕೋರ್ಸ್‌ಗೆ ತಗಲುವ ವೆಚ್ಚ, ಕೋರ್ಸ್‌ನ ಅವಧಿ, ಕಾಲೇಜಿನಲ್ಲಿ ಲಭ್ಯವಿರುವ ಸೌಕರ್ಯಗಳು, ಕೋರ್ಸ್‌ನ ಲಭ್ಯತೆ, ಭವಿಷ್ಯದ ದಿನಗಳಲ್ಲಿ ಕೋರ್ಸ್‌ನಿಂದ ದೊರೆಯಬಹುದಾದ ಉದ್ಯೋಗದ ಬಗ್ಗೆ ಗೊತ್ತಿದ್ದವರ ಬಳಿ ಮಾಹಿತಿಯನ್ನು ಕಲೆಹಾಕಿರಿ. ಈ ವಿಚಾರದಲ್ಲಿ ಕೆಲವು ವೆಬ್‌ಸೈಟ್‌ಗಳು ನಿಮಗೆ ನೆರವಾಗುತ್ತವೆ.

5. ಕೌಶಲ್ಯ ಬೆಳೆಸಿಕೊಳ್ಳಿರಿ…
ಭಾಷೆಯ ಮೇಲಿನ ಹಿಡಿತ, ಭಾಷಾ ಜ್ಞಾನದ ಕೊರತೆ, ಸಂವಹನ ಕೌಶಲ್ಯದ ಕೊರತೆ, ವಿಷಯ ಜ್ಞಾನದ ಅಪೂರ್ಣ ಮಾಹಿತಿ ಸೇರಿದಂತೆ ಇನ್ನೂ ಹಲವಾರು ಕೊರತೆಗಳ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಕೆಲಸ ಪಡೆಯುವಲ್ಲಿ ವಿಫ‌ಲರಾಗಿರುತ್ತಾರೆ. ಇಂಥ ಸ್ಕಿಲ್ಸ್‌ಗಳನ್ನು ಬೆಳೆಸಲೆಂದೇ ನಾನಾ ಕೇಂದ್ರಗಳಿವೆ. ಅಲ್ಲಿಗೆ ಸೇರಿಕೊಂಡು, ಪಫೆìಕ್ಟ್ ಆಗಿ.

6. ಜಾಲತಾಣ ಸದುಪಯೋಗ
ಸಾಮಾಜಿಕ ಜಾಲತಾಣಗಳನ್ನು ಯೋಗ್ಯ ಉದ್ದೇಶಕ್ಕೆ ಬಳಸಿಕೊಳ್ಳಿ. ಒಂದೇ ಪರೀಕ್ಷೆಗೆ ಅಣಿಗೊಳ್ಳುತ್ತಿರುವ ಗೆಳೆಯರ ಗ್ರೂಪ್‌ಗ್ಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ನಿರ್ಮಿಸಿಕೊಳ್ಳಿ. ಇದರಿಂದ ವಿಚಾರ ಹಂಚಿಕೆಯಾಗುತ್ತದೆ. ಅಲ್ಲದೆ, ನಿಮ್ಮ ಪರೀಕ್ಷಾ ತಯಾರಿಗೆ ಇನ್ನಷ್ಟು ಜ್ಞಾನ ಬಲ ಬರುತ್ತದೆ.

7. ಉತ್ತಮ ರೆಸ್ಯೂಮ್‌ ಸಿದ್ಧಪಡಿಸಿಕೊಳ್ಳಿ…
ನೀವು ಎಲ್ಲಿಗೇ ಉದ್ಯೋಗ ಬಯಸಿ ಹೋದರೂ, ಅಲ್ಲಿನ ಬಾಸ್‌ ಮೊದಲು ನಿಮ್ಮನ್ನು ಕೇಳುವುದು ರೆಸ್ಯೂಮ್‌. ಹಾಗಾಗಿ, ಒಳ್ಳೆಯ ರೆಸ್ಯೂಮ್‌ ಅನ್ನು ಸಿದ್ಧಪಡಿಸಿಕೊಳ್ಳಿ. ಅದರಲ್ಲಿ ನಿಮ್ಮ ಕುರಿತು ಎಲ್ಲ ಮಾಹಿತಿಗಳು ಇರಲಿ. ನಿಮ್ಮ ರೆಸ್ಯೂಮ್‌, ಸಂದರ್ಶಕರನ್ನು ಇಂಪ್ರಸ್‌ ಮಾಡುವ ಹಾಗಿರಲಿ.

ಟಾಪ್ ನ್ಯೂಸ್

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

ಜರ್ಮನಿ ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್‌ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

German ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್‌ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Lawsuit to stop auction of Maradona’s golden ball

Diego Maradona ಚಿನ್ನದ ಚೆಂಡಿನ ಹರಾಜು ತಡೆಯಲು ದಾವೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.