ವಿಟ್ಲ ನ್ಯಾಯಬೆಲೆ ಅಂಗಡಿ ಗೋಧಿಯಲ್ಲಿ ಇರುವೆ, ಹಿಕ್ಕೆ


Team Udayavani, Jan 21, 2017, 12:56 AM IST

Godhi-20-1.jpg

ವಿಟ್ಲ: ವಿಟ್ಲದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ದೊರೆತ ಗೋಧಿಯಲ್ಲಿ ಇರುವೆ ಕಂಡುಬಂದಿದೆ  ಹಾಗೂ ಪಕ್ಷಿ, ಹೆಗ್ಗಣಗಳ ಹಿಕ್ಕೆ ಲಭಿಸಿದೆ. ಇದರಿಂದ ತೀವ್ರ ಅಸಮಾಧಾನಗೊಂಡ ಪಡಿತರ ಚೀಟಿದಾರರು ಸರಕಾರದ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಸಂಭವಿಸಿದೆ.

ವಿಟ್ಲದ ಪುರಭವನ ಬಳಿಯಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರು ಖರೀದಿಸಿದ ಗೋಧಿಯಲ್ಲಿ ಪಾರಿವಾಳಗಳ ಹಿಕ್ಕೆ ಹಾಗೂ ಇರುವೆಗಳು ಪತ್ತೆಯಾದವು. ಕಳೆದ ಕೆಲವು ದಿನಗಳ ಹಿಂದೆ 40 ಚೀಲ ಗೋಧಿ ಇಲ್ಲಿಗೆ ಬಂದಿದ್ದು, ಅವು ಕಳಪೆಯಾಗಿವೆ. ಪಡಿತರ ಚೀಟಿದಾರರು ಗೋಧಿ, ಅಕ್ಕಿಯನ್ನು ಮೂರು ನಾಲ್ಕು ಕಿ.ಮೀ. ದೂರದಿಂದ ಒಯ್ಯುತ್ತಿದ್ದಾರೆ. ಇದರಲ್ಲಿ ಹೆಗ್ಗಣ ಹಿಕ್ಕೆ, ಕಸಕಡ್ಡಿಗಳು, ದೂಳುಗಳು ಸೇರಿವೆ. ಉಚಿತವಾಗಿ ಸಿಗುವ ಆಹಾರದಿಂದ ಬಡಪಾಯಿ ಜನರು ಆಸ್ಪತ್ರೆ ಸೇರುವ ದುಃಸ್ಥಿತಿಯಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಅಲ್ಲದೇ ಸಿಗುವ ಉಪ್ಪು ಪ್ಯಾಕೆಟ್‌ಗಳ ಬಾಯಿ ಬಿಚ್ಚಿಕೊಂಡು ನಷ್ಟವಾಗುತ್ತಿದೆ. ಇದನ್ನು ಮನೆಗೆ ಒಯ್ಯುವುದು ಹೇಗೆ ಎಂದವ‌ರು ಪ್ರಶ್ನಿಸಿದ್ದಾರೆ. ಸರಕಾರ ಕೂಪನ್‌ ವ್ಯವಸ್ಥೆ ಜಾರಿಗೆ ತಂದಿದ್ದು, ಮೂರು ನಾಲ್ಕು ದಿನಗಳ ಕಾಲ ನ್ಯಾಯಬೆಲೆ ಅಂಗಡಿಯಲ್ಲಿ ಅಲೆದಾಡುವ ಪರಿಸ್ಥಿತಿ ಬಂದಿದೆ. ವ್ಯವಸ್ಥೆಯ ತಾಂತ್ರಿಕ ದೋಷದಿಂದ ಈ ರೀತಿಯ ತೊಂದರೆ ಆಗುತ್ತಿದೆ. ಕೆಲವು ಪಡಿತರ ಚೀಟಿದಾರರ ಕುಟುಂಬದಲ್ಲಿರುವ ಹೆಸರುಗಳು ನಾಪತ್ತೆಯಾಗಿವೆ ಎಂದು ನಾಗರಿಕರು ತಿಳಿಸಿದರು.

ಪತ್ನಿ, ಮಗನ ಹೆಸರಿಲ್ಲ 
ವಿಟ್ಲಕಸಬಾ ಗ್ರಾಮದ ಕೆದುವಡ್ಕ ವಿಕ್ಟರ್‌ ತಿಮೋತಿ ವೇಗಸ್‌ ಅವರ ಪಡಿತರ ಚೀಟಿಯಲ್ಲಿ ಹಿಂದೆ ಪತ್ನಿ ಲೆತೀಶ್‌ ವೇಗಸ್‌ ಮತ್ತು ಪುತ್ರ ಲ್ಯಾನ್ಸಿ ವೇಗಸ್‌ ಅವರ ಹೆಸರಿತ್ತು. ಇದೀಗ ಪರಿಷ್ಕೃತಗೊಂಡಾಗ ಅವರ ಪತ್ನಿ ಮತ್ತು ಮಗನ ಹೆಸರಿಲ್ಲ. ಇಡೀ ಕುಟುಂಬದಲ್ಲಿ ಯಜಮಾನನ ಹೆಸರು ಮಾತ್ರ ನಮೂದಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಇರುವ ಹೆಸರಿಗೆ ಮಾತ್ರ ಸಾಮಗ್ರಿ ನೀಡುತ್ತಾರೆ. ಆಧಾರ್‌ ಕಾರ್ಡ್‌ ನೀಡಬೇಕು ಎಂದು ತಿಳಿಸಿದ ಪ್ರಕಾರ ಒದಗಿಸಲಾಗಿದೆ. ಆದರೂ ಹೆಸರು ನಾಪತ್ತೆಯಾಗಿದೆ. ಸರಕಾರದ ವ್ಯವಸ್ಥೆಯಲ್ಲಿರುವ ಲೋಪದೋಷಗಳಿಂದ ನಮಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.