60 ಅಡಿ ವಿಶಾಲ ಚತುಷ್ಪಥ ಕನಸು ಭಗ್ನ


Team Udayavani, Apr 13, 2021, 12:38 PM IST

60 ಅಡಿ ವಿಶಾಲ ಚತುಷ್ಪಥ ಕನಸು ಭಗ್ನ

ಹೊನ್ನಾವರ: ಚತುಷ್ಪಥ ನಿರ್ಮಾಣದ ಆರಂಭದಲ್ಲಿ ಹಲವು ಜಿಲ್ಲಾ ಕೇಂದ್ರಗಳನ್ನು ಜೋಡಿಸುವ ಭಟ್ಕಳ-ಹೊನ್ನಾವರ-ಕುಮಟಾದಲ್ಲಿ 60 ಅಡಿ ವಿಸ್ತಾರದ ಚತುಷ್ಪಥ ನಿರ್ಮಾಣವಾಗುತ್ತದೆ, ಮೇಲ್ಸೇತುವೆ ಬರುತ್ತದೆ, ವಿವಿಧ ಭಾಗಗಳಿಂದ ತಾಲೂಕು ಕೇಂದ್ರಕ್ಕೆ ಬಂದು-ಹೋಗುವವರಿಗೆ ಸುರಕ್ಷಿತ ಓಡಾಟ ಸಾಧ್ಯವಾಗುತ್ತದೆ ಎಂದು ಮೂರೂ ತಾಲೂಕಿನ ಜನ ಕನಸು ಕಂಡಿದ್ದರು. ಅದು ಈಗ ಭಗ್ನವಾಗಿದೆ.

ನಮಗೆ ಎಲ್ಲಿ 60 ಅಡಿ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯಸರ್ಕಾರ ಭೂಮಿ ಕೊಟ್ಟಿದೆಯೋ ಅಲ್ಲೆಲ್ಲಚತುಷ್ಪಥ ಮಾಡಿ ಮುಗಿಸಿದ್ದೇವೆ. ಇನ್ನೂ ಕೆಲವೆಡೆ40 ಅಡಿ ನಿರ್ಮಾಣವಾದರೆ ಅದಕ್ಕೆ ಐಆರ್‌ಬಿಕಂಪನಿ ಜವಾಬ್ದಾರರಲ್ಲ. ರಾಜ್ಯ ಸರ್ಕಾರ ಭೂಮಿ ಮಂಜೂರು ಮಾಡಿದರೆ ಕೇಂದ್ರ ಸರ್ಕಾರ ಮತ್ತುಭೂಸಾರಿಗೆ ಮಂತ್ರಾಲಯ ಒಪ್ಪಿದರೆ ಈಗಲೂ ಜನಬಯಸಿದಂತೆ ರಸ್ತೆ ವಿಸ್ತರಿಸಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 60 ಅಡಿ ರಸ್ತೆಗೆ ಸಮೀಕ್ಷೆಯಾಗಿತ್ತು. ಮೂರೂ ತಾಲೂಕುಗಳಲ್ಲಿ ಮತ್ತು ಮಧ್ಯದ ಕೆಲವು ಹಳ್ಳಿಗಳಲ್ಲಿ ಬೇಕಾದ ಎಲ್ಲ ಸಮೀಕ್ಷೆ ಮಾಡಲಾಗಿತ್ತು. ನಂತರ 40 ಅಡಿಗೆ ಇಳಿಸುವ ಆದೇಶ ಬಂದ ಕಾರಣಇದ್ದುದರಲ್ಲಿಯೇ ಮುಗಿಸಿದ್ದೇವೆ ಎನ್ನುತ್ತಾರೆ ಐಆರ್‌ಬಿ ಅಧಿಕಾರಿಗಳು.

ಜಿಲ್ಲೆಯ ಎಲ್ಲ ನದಿಗಳಿಗೆ ಎರಡು ಸೇತುವೆಗಳಾಗಿದ್ದರೆ ಶರಾವತಿ ಹಳೆಯ ಸೇತುವೆ ಹಾಗೆಯೇ ಇದೆ. ರಸ್ತೆಯ ಬದಿಗೆ ಬಿದ್ದ ಮಣ್ಣು, ಅರ್ಧ ಕುಸಿದ ಧರೆ, ಎಲ್ಲೆಡೆ ಕಾಣುತ್ತದೆ. ಅಧಿಕಾರವಿರುವಾಗತಪ್ಪು ಮಾಡುವವರು ಕೆಲವರು, ಅಧಿಕಾರ ಇದ್ದರೂ ಸುಮ್ಮನಿರುವವರು ಇನ್ನೂ ಕೆಲವರು. ಎರಡೂ ಒಂದೇ. ಸುಲಭವಾಗಿ ಸಾಧ್ಯವಿದ್ದಾಗ ಮಾಡದ ಕೆಲಸವನ್ನುರಾಜಕಾರಣಿಗಳು ಈಗ ಮಾಡುತ್ತಾರೆಯೇ? ಜಿಲ್ಲೆಯ ಎಲ್ಲ ದೊಡ್ಡ ಯೋಜನೆಗಳ ಗತಿ ಹೀಗೇ ಆಗಿದೆ. ಅಮೂಲ್ಯ ಜಮೀನು, ಅಂಗಡಿ, ಮನೆ ಕಳೆದುಕೊಳ್ಳಲು ಎಲ್ಲರೂ ಸುಲಭವಾಗಿ ಒಪ್ಪುವುದಿಲ್ಲ. ಹಣ ಇದ್ದವರು ರಾಜಕಾರಣಿಗಳನ್ನು ಹಿಡಿದು ತಮ್ಮ ಹಿತ ಸಾಧಿಸಿಕೊಳ್ಳುತ್ತಾರೆ. ಇಡೀ ಸಮಾಜದ ಹಿತವನ್ನು ಗಮನಿಸುವವರು ಯಾರೂ ಇಲ್ಲ.

ತಾಕತ್ತಿಲ್ಲದವರು ಭೂಮಿ ಬಿಟ್ಟುಕೊಟ್ಟು ಸಿಕ್ಕ ಪರಿಹಾರದಲ್ಲಿ ತೃಪ್ತರಾಗಿದ್ದಾರೆ. ವಸ್ತುಸ್ಥಿತಿಯನ್ನು ಅರಿಯದೆ ಅಂದು ಅಧಿಕಾರಸ್ಥ ರಾಜಕಾರಣಿಗಳು ಕೆಲವರ ಒತ್ತಡಕ್ಕೆ ಮಣಿದು 40 ಅಡಿಗೆ ಮಿತಿಗೊಳಿಸುವ ಆದೇಶ ಹೊರಡಿಸುವಂತೆ ಮಾಡಿದರು. ಇದು ಜನಕ್ಕೆ ಗೊತ್ತಾಗಲೇ ಇಲ್ಲ. ಇಲ್ಲಿ ಹಲವು ಹೋರಾಟ ನಡೆಸಿದರು. ಕುಮಟಾದಲ್ಲಿ ಬೈಪಾಸ್‌ ಬೇಕು-ಬೇಡರಾಜಕೀಯ ನಡೆದು ಹೋಯಿತು. ಹೊನ್ನಾವರದಲ್ಲಿಮೇಲ್ಸೇತುವೆ ಸಮೀಕ್ಷೆ ಮುಗಿದು ಮಂಜೂರಾತಿಹಂತದಲ್ಲಿ ರಸ್ತೆ 40 ಅಡಿಗೆ ಮಿತಿಗೊಂಡಿತು. ಆಗಬೇರೆ ಪಕ್ಷ ಅಧಿಕಾರದಲ್ಲಿತ್ತು. ಈಗ ಆಡಳಿತದಲ್ಲಿದ್ದವರುಇದಕ್ಕೆ ಅಂದು ಅಧಿಕಾರದಲ್ಲಿದ್ದವರು ಕಾರಣ ಎಂದು ಆರೋಪ ಹೊರಿಸುತ್ತಿದ್ದಾರೆ.

ಆರೋಪ ಅಲ್ಲಗಳೆಯುತ್ತ ಅವರ ಶಿಷ್ಯರು ಅಧಿಕಾರ ಇದ್ದಾಗ ಅರ್ಜಿ ಕೊಡುತ್ತಾರೆ, ಹಾಗೆ ಕೊಟ್ಟಿರ ಬಹುದು,ಶಿಫಾರಸ್ಸು ಮಾಡಿರಬಹುದು ಅನ್ನುತ್ತಾರೆ. ಸರಿ ಈಗಆರೋಪ ಮಾಡುವವರು ಅಧಿಕಾರಕ್ಕೆ ಬಂದುಎರಡು ವರ್ಷಗಳಾದವು. ಸಂಸದರು, ಬಹುಪಾಲುಶಾಸಕರು ಈಗ ಒಂದೇ ಪಕ್ಷದಲ್ಲಿದ್ದಾರೆ. ಜನ ಇವರಎದುರು ಹಲವು ಬಾರಿ ಹೋರಾಡಿದರು, ಬಂದ್‌ಆಚರಿಸಲಾಯಿತು. ಮನವಿಗಳನ್ನು ಸ್ವೀಕರಿಸಿ ಭರವಸೆ ಕೊಟ್ಟಿದ್ದರ ಹೊರತಾಗಿ ಮೇಲಿನ ಮಟ್ಟದಲ್ಲಿ ಪತ್ರವ್ಯವಹಾರ ನಡೆಸಿ, ಅಗತ್ಯಬಿದ್ದರೆ ಕೇಂದ್ರ ಭೂಸಾರಿಗೆಸಚಿವ ನಿತಿನ್‌ ಗಡ್ಕರಿಯವರನ್ನು ಕಂಡು ಅವರತಪ್ಪನ್ನು ಇವರು ಸರಿಪಡಿಸಬಹುದಿತ್ತು. ಈಗ ಪರಸ್ಪರಆಪಾದನೆಯ ಪರ್ವ ನಡೆದಿದೆ.

ಮುಂದಿನ ದಿನಗಳಲ್ಲಿಅಪಾಯ ಎದುರಿಸುವವರು ಶ್ರೀಸಾಮಾನ್ಯರು ಮಾತ್ರ. ಮಂಗಳೂರಿನಿಂದ ಸುರತ್ಕಲ್‌, ಉಡುಪಿ, ಕುಂದಾಪುರ ಸಹಿತ ಎಲ್ಲ ತಾಲೂಕು ಕೇಂದ್ರ ಹಾಯ್ದು ಹೋಗುವಲ್ಲಿ,ಬೇಕಾದಲ್ಲಿ ಮೇಲ್ಸೇತುವೆಗಳಿವೆ. ಎಲ್ಲೆಡೆ ಸರ್ವಿಸ್‌ರಸ್ತೆಗಳಿವೆ. 60 ಅಡಿ ಹೆದ್ದಾರಿ ನಿರ್ಮಾಣವಾಗಿದೆ.ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಹೆದ್ದಾರಿಯ ಬದಿಗೆ ಹೇರಳ ಅಮೂಲ್ಯ ಆಸ್ತಿಗಳಿದ್ದವು, ದೇವಸ್ಥಾನ, ಚರ್ಚ್‌, ಮಸೀದಿಗಳಿದ್ದವು. ಚತುಷ್ಪಥಕ್ಕೆ ಬೈಪಾಸ್‌ ಮಾಡಿ ಎಂಬ ಬೇಡಿಕೆಯೂ ಇತ್ತು.

ಕೆಲವರು ತಮ್ಮಆಸ್ತಿ ಉಳಿಸಿಕೊಳ್ಳಲು ಅಲ್ಲಿಂದ ದಿಲ್ಲಿಯತನಕ ಓಡಾಡಿ ಕಾಂಗ್ರೆಸ್‌ನ ಆಸ್ಕರ್‌ ಫರ್ನಾಂಡೀಸ್‌, ಬಿಜೆಪಿಯ ವಿ.ಎಸ್‌. ಆಚಾರ್ಯ ಸಹಿತ ಎಲ್ಲ ಮುಖಂಡರುವ ಶೀಲಿಯನ್ನು ಕಳೆದುಕೊಳ್ಳುವವರೂ ಮಾಡಿದರು, ಕಳೆದುಕೊಳ್ಳದವರೂ ಮಾಡಿದರು. ಅಲ್ಲಿಯ ರಾಜಕಾರಣಿಗಳೆಲ್ಲ ಒಂದೇ ನಿಲುವಿಗೆ ಬದ್ಧರಾದಕಾರಣ ಅಲ್ಲಿ ಚತುಷ್ಪಥ ಯೋಜನೆಯಂತೆ ಮುಗಿದಿದೆ.  ಊರು ಸೂರೆಹೋದ ಮೇಲೆ ದಿಡ್ಡಿಬಾಗಿಲುಹಾಕಿದಂತೆ ಈಗ ರೋದಿಸಿ ಪ್ರಯೋಜನವಿಲ್ಲ,ಆರೋಪ ಪ್ರತ್ಯಾರೋಪಗಳಿಗೆ ಅರ್ಥವಿಲ್ಲ. ಒಟ್ಟಾರೆ ಜನ ಅನುಭವಿಸುವುದು ತಪ್ಪುವ ಕಾಲ ಬಂದಿಲ್ಲ

 

-ಜೀಯು

ಟಾಪ್ ನ್ಯೂಸ್

akhilesh

Kyoto wale ಸೀಟ್ ಸೇರಿ ಯುಪಿಯ ಎಲ್ಲಾ ಕಡೆ ಬಿಜೆಪಿಗೆ ಸೋಲು: ಅಖಿಲೇಶ್

Kaamya Karthikeyan

Kaamya; ನೇಪಾಳ ಭಾಗದಿಂದ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಎಂಬ ಸಾಧನೆ ಮಾಡಿ 16ರ ಬಾಲಕಿ

2

STAR ಸಿನಿಮಾಗಳು ರಿಲೀಸ್‌ಗೆ ರೆಡಿ.. ದ್ವಿತೀಯಾರ್ಧದಲ್ಲಿ ಪುಟಿದೇಳುವುದೇ ಸ್ಯಾಂಡಲ್‌ ವುಡ್?

1-asasa

Bengaluru ನಗರದ ರಸ್ತೆಗಳಲ್ಲಿ 5500 ಗುಂಡಿಗಳು!: ಕೂಡಲೇ ಮುಚ್ಚುವಂತೆ ಆದೇಶ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

Dombivli: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ, ಭಾರೀ ಅಗ್ನಿ ಅವಘಡ

Dombivli: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ, ಭಾರೀ ಅಗ್ನಿ ಅವಘಡ

HDD LARGE

Warning!; ತಾಳ್ಮೆ ಪರೀಕ್ಷಿಸಬೇಡ..ಎಲ್ಲಿದ್ದರೂ ಬಾ: ಪ್ರಜ್ವಲ್ ಗೆ ದೇವೇಗೌಡರ ವಾರ್ನಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ

Dudhsagar: ದೂದ್ ಸಾಗರ ಜಲಪಾತದಲ್ಲಿ ಮುಳುಗುತ್ತಿದ್ದ 3 ವರ್ಷದ ಬಾಲಕಿಯ ರಕ್ಷಣೆ

Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೆ ಮೃತ್ಯು

Yellapura: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ… ಗೃಹ ಸಚಿವರು ಅಸಹಾಯಕರಾಗಿದ್ದಾರೆ; ಕಾಗೇರಿ

2-kumta

Kumta: ಯುವತಿಯ ಪ್ರಿಯಕರನಿಗೆ ಚಾಕು ಇರಿದು ಹಲ್ಲೆ ಮಾಡಿದ ಮಾಜಿ ಪ್ರಿಯಕರ

2-sirsi

Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

‘ಅನರ್ಥ’ ನಂಬಿ ಬಂದ ಹೊಸಬರು; ಹಾಡು-ಟೀಸರ್‌ ರಿಲೀಸ್‌

‘ಅನರ್ಥ’ ನಂಬಿ ಬಂದ ಹೊಸಬರು; ಹಾಡು-ಟೀಸರ್‌ ರಿಲೀಸ್‌

ಮಜೀರ್ಪಳ್ಳ ನಿವಾಸಿ ನಿಗೂಢ ಸಾವು: ದಫನಗೈದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

ಮಜೀರ್ಪಳ್ಳ ನಿವಾಸಿ ನಿಗೂಢ ಸಾವು: ದಫನಗೈದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

akhilesh

Kyoto wale ಸೀಟ್ ಸೇರಿ ಯುಪಿಯ ಎಲ್ಲಾ ಕಡೆ ಬಿಜೆಪಿಗೆ ಸೋಲು: ಅಖಿಲೇಶ್

Kaamya Karthikeyan

Kaamya; ನೇಪಾಳ ಭಾಗದಿಂದ ಮೌಂಟ್ ಎವರೆಸ್ಟ್ ಏರಿದ ಕಿರಿಯ ಭಾರತೀಯ ಎಂಬ ಸಾಧನೆ ಮಾಡಿ 16ರ ಬಾಲಕಿ

3

Kasaragod: ಹೊಸದುರ್ಗ; ಟ್ಯಾಂಕರ್‌ನಿಂದ ಅನಿಲ ಸೋರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.