ಶಿವಾಜಿ ಸುರತ್ಕಲ್ 2020 :  ಕಥೆಯ ಒಳಗೆ ಕಥೆಯು ಮೂಡಿ ಬಂದಾಗ…


Team Udayavani, Jun 13, 2021, 3:05 PM IST

Udayavani, College Campus

ಕೆಲವು ಸಿನೆಮಾಗಳೇ ಹಾಗೆ ನಮಗೆ ಅತ್ಯಂತ  ಆಪ್ತವಾಗಿ ಬಿಡುತ್ತವೆ. ಸಿನೆಮಾದ ಕಥೆಯೊಳಗೆ ಮತ್ತೊಂದು ಕಥೆ ಮೂಡಿ ಬರುವಾಗ ಅದರ ಅನುಭೂತಿಯೇ ಬೇರೆ. ಅಂತಹ ಸಿನೆಮಾಗಳಲ್ಲಿ ನನಗೆ ಇಷ್ಟವಾದ ಸಿನೆಮಾಗಳಲ್ಲಿ ಶಿವಾಜಿ ಸುರತ್ಕಲ್ 2020 ಕೂಡ ಒಂದು.

ಶಿವಾಜಿ ಸುರತ್ಕಲ್ 2020 ಒಂದು ಅದ್ಭುತ ಥ್ರಿಲ್ಲರ್ ಸಿನಿಮಾ. ಯಾವುದೇ ರೀತಿ ಆಡಂಬರವನ್ನು ಹೊಂದಿಲ್ಲ.

ಶಿವಾಜಿ ಎಂಬ ಪೋಲಿಸ್, ಮಂತ್ರಿಯೊಬ್ಬನ ಮಗನ ಹತ್ಯೆಯ ತನಿಖೆ ನಡೆಸಲು ಹೊರಡುತ್ತಾನೆ,  ಆದರೆ ಆ ಪ್ರಕರಣದ ಹಿಂದೆ ಬಿದ್ದಾಗ ಶಿವಾಜಿ ಆತನ ಹೆಂಡತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೂ ಆತ ವೃತ್ತಿಧರ್ಮವನ್ನು ಮೆರೆದು ಕಾರ್ಯಚರಣೆಗೆ ಮುಂದಾಗುತ್ತಾನೆ ಎನ್ನುವುದು ಸಿನೆಮಾದಲ್ಲಿ ವಿಶೇಷ.

ಇದನ್ನೂ ಓದಿ : ಅಪ್ಪನ ಕನಸು ನನಸು ಮಾಡಿದ ರಕ್ಷಕ: ಚಂದನವನಕ್ಕೆ ಕಾಲಿಟ್ಟ ದಿ.ಬುಲೆಟ್ ಪ್ರಕಾಶ್ ಪುತ್ರ

ಕನ್ನಡ ಚಿತ್ರರಂಗದಲ್ಲಿ  ಶಿವಾಜಿ ಸುರತ್ಕಲ್ ಚಿತ್ರವು ಹೊಸ ಆಯಾಮವನ್ನೇ ಸೃಷ್ಟಿಸಿದೆ. ತನ್ನ ಸಿನೆಮಾದ ಕಥೆಯ ಗಟ್ಟಿತನದೊಂದಿಗೆ ಸಿಣೆಮಾ ವೀಕ್ಷಕರನ್ನು ಸೆಳೆದುಕೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರದ  ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಈ ಚಿತ್ರಕ್ಕಾಗಿ ಉತ್ತಮ ಮತ್ತು ಆಸಕ್ತಿದಾಯಕ ಚಿತ್ರಕಥೆ ಮತ್ತು ಸೂಕ್ತ ತಾರಾಗಣವನ್ನು ಆಯ್ಕೆ ಮಾಡಿದ್ದಕ್ಕಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಕನ್ನಡ ಚಿತ್ರ ರಂಗದ ಮೇರು ನಟ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಯರನ್ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ.

ಸಿನೆಮಾದ ಕಥೆಯಲ್ಲಿ ಆಳ ವಿಸ್ತಾರ ವಿದ್ದರೂ ಅದನ್ನು ಪ್ರಸ್ತತ ಪಡಿಸಿದ ರೀತಿ ಅದ್ಭುತ. ಸರಳ ಸುಂದರ ಕಥೆ. ಸಿನೆಮಾ ಹತ್ತಿರವಾಗುವುದು ಅದರ ದೃಶ್ಯಕಾವ್ಯಗಳಲ್ಲಿ. ಸಿನೆಮಾದಲ್ಲಿ ಬರುವ ಪ್ರತಿಯೊಂದು ದೃಶ್ಯವೂ ಕೂಡ ಮನೋಹರವಾಗಿದೆ. ಈ ಕಥೆಯು ಮಡಿಕೇರಿ ಸಮೀಪದ ರಣಗಿರಿಯ ರೆಸಾರ್ಟಲ್ಲಿ ಜನರ ಗುಂಪಿನ ಸುತ್ತ ಸುತ್ತುತ್ತದೆ, ರೆಸಾರ್ಟ್ ನಲ್ಲಿ ದೃಶ್ಯಗಳನ್ನು ವೀಕ್ಷಿಸಲು  ಸ್ವಲ್ಪ ಹೆಚ್ಚು ಧೈರ್ಯ ಬೇಕಾಗುತ್ತದೆ. ಕ್ರೈಮ್ ಬೇಸ್ ಸಿನೆಮಾ ಆಗಿರುವುರಿಂದ ಈ ಸಿನೆಮಾದ ಸಖತ್ ಥ್ರಿಲ್ ಕೊಡುವುದರೊಂದಿಗೆ, ಪ್ರಕರಣಗಳನ್ನು ಭೇಧಿಸುವ ಮುಳ್ಳನ್ನು ಮುಳ್ಳಿನಿಂಧಲೇ ತೆಗೆಯಬೇಕು ಎಂಬ ನೀತಿಯೊಂದಿಗೆ ನಡೆಯುವ ಕಥಾ ನಾಯಕನ ಪಾತ್ರ ಮತ್ತದರ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ.

ಚಿತ್ರಕಥೆ ಸಹಜವಾಗಿ ಹಾಗೂ ಸಹಜತೆಯಲ್ಲಿಯೂ ವಿಶೇಷತೆ ಇರುವುದರಿಂದ ನೋಡುಗರನ್ನು ಹಿಡಿದಿಟ್ಟುಕೊಳ್ಳೂವ ಶಕ್ತಿ ಈ ಸಿನೆಮಾಕ್ಕಿದೆ.  ಪ್ರತಿಯೊಂದು ಪಾತ್ರವೂ ತನ್ನ ಪಾತ್ರವನ್ನು ಪರಿಪೂರ್ಣವಾಗಿ ವಹಿಸಿದೆ ಎಂದೆನಿಸುತ್ತದೆ ಹಾಗೂ ಹಿನ್ನೆಲೆ ಸಂಗೀತವೂ ವೀಕ್ಷಕರನ್ನು ಅಷ್ಟೇ ಆಕರ್ಷಿಸುತ್ತದೆ. ಚಿತ್ರದಲ್ಲಿ ಎಲ್ಲರ ನಟನೆಯ ಮನೋಜ್ಞವಾಗಿ ಮೂಡಿ ಬಂದಿದೆ. ಚಿತ್ರದ ಆರಂಭದಿಂದ ಕೊನೆಯ ತನಕ ಮುಂದೇನಾಗುವುದೋ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿಸುತ್ತದೆ. ಇದು ಕುಟುಂಬ ಸದಸ್ಯರು ಮತ್ತು ಸಸ್ಪೆನ್ಸ್ ಥ್ರಿಲ್ಲರ್‌ ಗಳನ್ನು ಈ ಚಿತ್ರವನ್ನು ಇಷ್ಟಪಡುವವರು ನೋಡಲೇಬೇಕು.

ಆಕರ್ಷ ಆರಿಗ

ಎಸ್ ಡಿ ಎಮ್ ಕಾಲೇಜು, ಉಜಿರೆ

ಇದನ್ನೂ ಓದಿ : ಚಾರ್ಮಾಡಿ ಘಾಟಿಯಲ್ಲಿ ವಾನರ ಪಡೆಗೆ ಬಾಳೆಹಣ್ಣು ನೀಡಿದ ನಳಿನ್ ಕುಮಾರ್ ಕಟೀಲ್

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.