ಬಾಯಿಯ ಆರೋಗ್ಯಕ್ಕೆ ಇಲ್ಲಿದೆ ಸರಳ ಮಾರ್ಗ


ಆದರ್ಶ ಕೊಡಚಾದ್ರಿ, Jun 28, 2021, 2:02 PM IST

health tips

ಆರೋಗ್ಯಕರವಾದ ಜೀವನ ಪ್ರತಿಯೊಬ್ಬ ವ್ಯಕ್ತಿಯ ಬಹುದೊಡ್ಡ ಗುರಿಯಾಗಿರುತ್ತದೆ. ಈ ಕಾರಣದಿಂದ ಜನರು ತಮ್ಮ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಪ್ರಯತ್ನ ನಡೆಸುತ್ತಾರೆ. ಆದರೆ ಹಲವರು ತಮ್ಮ ದೇಹದ ಆರೋಗ್ಯವನ್ನು  ಉತ್ತಮಗೊಳಿಸಿಕೊಳ್ಳಲು ವ್ಯಾಯಾಮ, ಯೋಗದಂತಹ ಹಲವಾರು ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೂ ಕೂಡಾ ದೇಹದ ಕೆಲವು ಭಾಗಗಳ ಆರೋಗ್ಯದ ಕುರಿತಾಗಿ ಅಷ್ಟು ಗಮನವನ್ನು ನೀಡುವುದಿಲ್ಲ. ಈ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಗಮನಹರಿಸದಿರುವ ದೇಹದ ಭಾಗಗಳಲ್ಲಿ ಬಾಯಿಯ ಆರೋಗ್ಯವೂ ಕೂಡಾ ಒಂದು.

ದೇಹದ ಆರೋಗ್ಯದಲ್ಲಿ ಬಾಯಿಯ ಆರೋಗ್ಯ  ಅತ್ಯಂತ ಮುಖ್ಯವಾದದ್ದು. ನಮ್ಮ ಲಾಲಾರಸದ ಹೊರತಾಗಿ ಹಲವಾರು ಸೂಕ್ಷ್ಮಜೀವಿಗಳಿವೆ. ಯಾವಾಗ ಬಾಯಿಯಲ್ಲಿ ಸಂಗ್ರಹವಾದ ಆಹಾರ ಕಣ ಕೊಳೆದು ಈ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಾಗುವುದೋ ಆಗ ದುರ್ವಾಸನೆ ಪ್ರಾರಂಭವಾಗುತ್ತದೆ. ಇಲ್ಲಿಂದ ಸೋಂಕು ನರವ್ಯೂಹದ ಮೂಲಕ ದೇಹದ ಹಲವಾರು ಅಂಗಗಳಿಗೆ ದಾಟಿಕೊಳ್ಳಬಹುದು. ಇದೇ ಕಾರಣಕ್ಕೆ, ಬಾಯಿಯ ಸ್ವಚ್ಛತೆ ಕುರಿತಾಗಿ ಆಯುರ್ವೇದ ಸದಾ ಮಹತ್ವವನ್ನು ನೀಡುತ್ತಾ ಬಂದಿದೆ.

ಮುಂಜಾನೆಯ ಹಲ್ಲುಜ್ಜುವಿಕೆಯಿಂದ, ಊಟದ ಬಳಿಕ ಬಾಯಿ ಮುಕ್ಕಳಿಸುವುದು, ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಮೊದಲಾದ ಕ್ರಮಗಳನ್ನು ನಿತ್ಯವೂ ಅನುಸರಿಸುವುದು ಮುಖ್ಯ. ಬಾಯಿಯಲ್ಲಿ ಕೆಟ್ಟ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಿದರೆ ದುರ್ವಾಸನೆಯ ಜೊತೆಗೆ ಒಸಡುಗಳು ಸಡಿಲವಾಗಿ ಹಲ್ಲುಗಳು ಅಲ್ಲಾಡುವುದು, ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಕೂಳೆ ತುಂಬಿಕೊಳ್ಳುವುದು, ಹಲ್ಲುಗಳು ಕೊಳೆಯುವುದು , ಒಸಡುಗಳು ಬಿರಿದು ರಕ್ತ ಹರಿಯುವುದು, ಹಲ್ಲುಗಳಲ್ಲಿ ಕುಳಿ ಮತ್ತು ಹಲ್ಲುಗಳು ಅತಿಯಾದ ಸೂಕ್ಷ್ಮ ಸಂವೇದನೆಯನ್ನು ಪಡೆದು ತಣ್ಣಗಿನ ಅಥವಾ ಬಿಸಿ ಅಥವಾ ಖಾರದ ಏನನ್ನೂ ಬಾಯಿಗೆ ಹಾಕಿಕೊಳ್ಳದಂತೆ ಆಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಬಾಯಿಯ ಆರೋಗ್ಯ ಕಾಪಾಡದ ವ್ಯಕ್ತಿಗಳಿಗೆ ಈ ತೊಂದರೆಗಳು ಅಪಾರವಾಗಿ ಬಾಧಿಸುತ್ತವೆ.

ಈ ಎಲ್ಲಾ ವಿಧವಾದ ಸಮಸ್ಯೆಯಿಂದ ಪರಿಹಾರವನ್ನು ನಾವು ನಮ್ಮ ಸುತ್ತಮುತ್ತಲಿನ ಹಲವಾರು ನೈಸರ್ಗಿಕ ಅಂಶಗಳಿಂದ ಪಡೆದುಕೊಳ್ಳಬಹುದಾಗಿದೆ.

ನೀರಿನ ಬಳಕೆ

ದೇಹದ ಇತರೆ ಅಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಎಷ್ಟು ಮುಖ್ಯವಾದ ಪಾತ್ರವನ್ನು ವಹಿಸುತ್ತದೆಯೋ ಅದೇ ರೀತಿ ಬಾಯಿಯ ಆರೋಗ್ಯಕ್ಕೂ ಇದು ತುಂಬಾ ಮುಖ್ಯ. ಪ್ರತಿನಿತ್ಯ ಬೆಳಿಗ್ಗೆ ಹಾಗೂ ರಾತ್ರಿಯ ವೇಳೆ ಹಲ್ಲುಗಳನ್ನು ಉಜ್ಜುವುದರ ಜೊತೆ ಜೊತೆಗೆ ಆಗಾಗ ಶುದ್ಧವಾದ ನೀರಿನಲ್ಲಿ ಬಾಯನ್ನು ಮುಕ್ಕಳಿಸುವುದರಿಂದ ಹಲ್ಲುಗಳು ಹುಳುಕಾಗುವುದನ್ನು ತಡೆಯುವ ಜೊತೆ ಜೊತೆಗೆ ಬಾಯಿಯಿಂದ ದುರ್ವಾಸನೆ ಬರುವುದನ್ನು ತಡೆಯಬಹುದಾಗಿದೆ. ಯಾವುದೇ ಆಹಾರ ಪದಾರ್ಥವನ್ನು ತಿಂದ ಬಳಿಕ ನೀರಿನಿಂದ ಬಾಯನ್ನು ತೊಳೆಯುವುದರಿಂದಾಗಿ ತಿಂದ ಆಹಾರ ಪದಾರ್ಥಗಳು ಬಾಯಿಯಲ್ಲಿಯೇ ಉಳಿಯುವುದನ್ನು ತಡೆಯಬಹುದಾಗಿದೆ. ಅಲ್ಲದೆ ದಿನದಲ್ಲಿ ಎರಡರಿಂದ ಮೂರು ಬಾರಿ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ.

ಲೋಳೆರಸ ಬಳಕೆ

ಸಾಮಾನ್ಯವಾಗಿ ಲೋಳೆ ರಸದಲ್ಲಿ ದೇಹದ ಹಲವು ವಿಧವಾದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇದ್ದು, ಒಂದು ವೇಳೆ ಹಲ್ಲುಗಳಲ್ಲಿ ಹುಳುಕು ಕಾಣಿಸಿಕೊಳ್ಳತೊಡಗಿದರೆ ಆಲೋವೆರಾ ಅಥವಾ ಲೋಳೆಸರ ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ. ಒಸಡುಗಳ ಸಂಧುಗಳಲ್ಲಿರುವ ಕೂಳೆ, ದಂತಕುಳಿ ಮೊದಲಾದವನ್ನು ತಡೆಯಲೂ ಇವು ಸೂಕ್ತವಾಗಿವೆ. ಇದಕ್ಕಾಗಿ, ತಾಜಾ ಲೋಳೆಸರದ ಕೋಡೊಂದನ್ನು ಮುರಿದು ಒಳಗಿನ ತಿರುಳನ್ನು ಸಂಗ್ರಹಿಸಿ ಸಮಪ್ರಮಾಣದಲ್ಲಿ ಅಡುಗೆ ಸೋಡಾ ಮತ್ತು ಚಿಟಿಕೆಯಷ್ಟು ಅರಿಶಿನಯ ಪುಡಿಯನ್ನು ಬೆರೆಸಿ ನಯವಾದ ಲೇಪ ತಯಾರಿಸಿ.ಈ ಲೇಪವನ್ನು ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಆವರಿಸುವಂತೆ ದಪ್ಪನಾಗಿ ಹಚ್ಚಿ. ಕೊಂಚ ಹೊತ್ತು ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೊಳೆಗಳು ಬುಡಸಹಿತ ಇಲ್ಲವಾಗುತ್ತವೆ ಹಾಗೂ ಹಲ್ಲುಗಳು ಮತ್ತು ಒಸಡುಗಳು ಇನ್ನಷ್ಟು ದೃಢಗೊಳ್ಳುತ್ತವೆ.

ಲವಂಗ

ಲವಂಗದಲ್ಲಿ ಹಲವಾರು ಆರೋಗ್ಯಕರ ಅಂಶಗಳಿದ್ದು, ಇದು ಬಾಯಿಯ ಆರೋಗ್ಯಕ್ಕೂ ಅತ್ಯಂತ ಮುಖ್ಯವಾದದ್ದು. ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ನೋವಿರುವ ಜಾಗಕ್ಕೆ ಲವಂಗವನ್ನು ಇಟ್ಟುಕೊಳ್ಳುವುದರಿಂದಾಗಿ ಸಮಸ್ಯೆಯಿಂದ ಬಹುಬೇಗ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅಲ್ಲದೆ ಬಾಯಿಯಲ್ಲಿ ದುರ್ವಾಸನೆ ಇದ್ದರೆ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಲವಂಗವನ್ನು ಅಗಿದು ಮಲಗುವುದರಿಂದಾಗಿ ಬಾಯಿಯಿಂದ ಬರುವ ವಾಸನೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.